‘ರಣವಿಕ್ರಮ’ ನಟಿ ಅಂಜಲಿ ಗುಟ್ಟಾಗಿ ಮದುವೆ ಆಗ್ತಾರಾ? ಜೋರಾಗಿ ಹಬ್ಬಿದೆ ಗುಸುಗುಸು

ಸದ್ಯಕ್ಕಂತೂ ಲಾಕ್​ಡೌನ್​ ಕಾರಣದಿಂದ ಎಲ್ಲ ಸಿನಿಮಾ ಕೆಲಸಗಳು ಸ್ಥಗಿತಗೊಂಡಿವೆ. ಶೂಟಿಂಗ್​ಗೆ ಬಹುತೇಕ ಕಡೆಗಳಲ್ಲಿ ಅನುಮತಿ ಇಲ್ಲ. ಹಾಗಾಗಿ ಈ ಬಿಡುವಿನ ಸಂದರ್ಭದಲ್ಲಿ ನಟಿ ಅಂಜಲಿ ಹಸೆಮಣೆ ಏರುತ್ತಾರೆ ಎಂಬ ಗಾಳಿ ಸುದ್ದಿ ಹಬ್ಬಿದೆ.

‘ರಣವಿಕ್ರಮ’ ನಟಿ ಅಂಜಲಿ ಗುಟ್ಟಾಗಿ ಮದುವೆ ಆಗ್ತಾರಾ? ಜೋರಾಗಿ ಹಬ್ಬಿದೆ ಗುಸುಗುಸು
ಅಂಜಲಿ
Edited By:

Updated on: Jun 06, 2021 | 3:07 PM

ಈ ಲಾಕ್​ಡೌನ್​ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ಗುಟ್ಟಾಗಿ ಹಸೆಮಣೆ ಏರುತ್ತಿದ್ದಾರೆ. ಕನ್ನಡದ ನಟಿ ಪ್ರಣಿತಾ ಸುಭಾಷ್​, ಬಾಲಿವುಡ್​ ಬೆಡಗಿ ಯಾಮಿ ಗೌತಮ್​ ಇತ್ತೀಚೆಗಷ್ಟೇ ಸೀಕ್ರೆಟ್​ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಫೋಟೋ ವೈರಲ್​ ಆದ ಬಳಿಕವೇ ಆ ವಿಷಯ ಬಹಿರಂಗ ಆಯಿತು. ಈಗ ಬಹುಭಾಷಾ ನಟಿ ಅಂಜಲಿ ಬಗ್ಗೆಯೂ ಅನುಮಾನ ಕಾಡಲಾರಂಭಿಸಿದೆ. ಕನ್ನಡದಲ್ಲಿ ಪುನೀತ್​ ರಾಜ್​ಕುಮಾರ್​ ಜೊತೆ ‘ರಣವಿಕ್ರಮ’ ಸಿನಿಮಾದಲ್ಲಿ ನಟಿಸಿದ್ದ ಅಂಜಲಿ ಮದುವೆ ಬಗ್ಗೆ ಗಾಸಿಪ್​ ಹಬ್ಬಿದೆ.

ತಮಿಳು ನಟ ಜೈ ಜೊತೆ ಅಂಜಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಮಾತಿದೆ. ಎರಡು ವರ್ಷಗಳ ಕಾಲ ಅವರು ಲಿವ್​ ಇನ್​ ರಿಲೇಶನ್​ಶಿಪ್​ನಲ್ಲಿ ಇದ್ದ ಬಗ್ಗೆಯೂ ಸುದ್ದಿ ಹರಡಿತ್ತು. ಸದ್ಯಕ್ಕಂತೂ ಲಾಕ್​ಡೌನ್​ ಕಾರಣದಿಂದ ಎಲ್ಲ ಸಿನಿಮಾ ಕೆಲಸಗಳು ಸ್ಥಗಿತಗೊಂಡಿವೆ. ಶೂಟಿಂಗ್​ಗೆ ಬಹುತೇಕ ಕಡೆಗಳಲ್ಲಿ ಅನುಮತಿ ಇಲ್ಲ. ಹಾಗಾಗಿ ಈ ಬಿಡುವಿನ ಸಂದರ್ಭದಲ್ಲಿ ಅಂಜಲಿ ಕೂಡ ಹಸೆಮಣೆ ಏರುತ್ತಾರೆ ಎಂಬ ಗಾಳಿ ಸುದ್ದಿ ಹಬ್ಬಿದೆ. ಆದರೆ ಈ ಮಾತಿನಲ್ಲಿ ಹುರುಳಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಆದರೂ ಸ್ವತಃ ಅಂಜಲಿ ಸ್ಪಷ್ಟನೆ ನೀಡುವವರೆಗೆ ಯಾವುದನ್ನೂ ನಂಬುವಂತಿಲ್ಲ.

ಈ ವರ್ಷ ತೆರೆಕಂಡ ‘ವಕೀಲ್​ ಸಾಬ್’​ ಸಿನಿಮಾದಲ್ಲಿ ಅಂಜಲಿ ನಟಿಸಿದ್ದರು. ಪವನ್​ ಕಲ್ಯಾಣ್​ ಜೊತೆ ತೆರೆಹಂಚಿಕೊಳ್ಳುವ ಅವಕಾಶವನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡಿದ್ದರು. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಈ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ತಮ್ಮ ಮದುವೆ ಗಾಸಿಪ್​ ಬಗ್ಗೆ ಮಾತನಾಡಿದ್ದರು. ‘ಈಗ ನಾನು ಕೆಲಸದ ಮೇಲೆ ಗಮನ ಹರಿಸಿದ್ದೇನೆ. ಮದುವೆ ಪ್ಲ್ಯಾನ್​ ಸದ್ಯಕ್ಕಂತೂ ಇಲ್ಲ. ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರುವಂತಹ ಸಿನಿಮಾಗಳಲ್ಲಿ ನಟಿಸಬೇಕು ಎಂದುಕೊಂಡಿದ್ದೇನೆ’ ಅಂತ ಅವರು ಹೇಳಿದ್ದರು. ಅಷ್ಟರ ನಂತರವೂ ಪದೇಪದೇ ಅವರ ಮದುವೆ ಗಾಸಿಪ್​ ಯಾಕೆ ಹಬ್ಬುತ್ತಿದೆಯೋ ಗೊತ್ತಿಲ್ಲ.

ಕಳೆದ ವರ್ಷ ತೆರೆಕಂಡ ‘ಪಾವ ಕಥೈಗಳ್​’ ಸಿನಿಮಾದಲ್ಲಿ ಅಂಜಲಿ ಬೋಲ್ಡ್​ ಆಗಿ ಕಾಣಿಸಿಕೊಂಡು ಸುದ್ದಿ ಆಗಿದ್ದರು. ನೆಟ್​ಫ್ಲಿಕ್ಸ್​ನಲ್ಲಿ ನೇರವಾಗಿ ಈ ಸಿನಿಮಾ ತೆರೆಕಂಡಿತ್ತು.

ಇದನ್ನೂ ಓದಿ:

ಮದುವೆಯಾದ ಪ್ರಣಿತಾಗೆ ಶುಭಕೋರಿದ ಶಿಲ್ಪಾ ಶೆಟ್ಟಿ; ಇಬ್ಬರ ನಡುವೆ ಗೆಳೆತನ ಬೆಳೆದಿದ್ದು ಹೇಗೆ?

Pranitha Marriage: ಪ್ರಣಿತಾ ಮದುವೆ ಬಳಿಕ ರಮ್ಯಾ ಕಡೆಗೆ ಪ್ರಶ್ನೆ ಎಸೆದ ಅಭಿಮಾನಿಗಳು​; ಏನಿದು ಲಿಂಕ್​?

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us