AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಡಿ ಟು ಈಟ್ ಆಹಾರ ಸೇವಿಸುವ ಮುನ್ನ ಡಾ. ಸುಹಾಸ್ ಹೇಳಿರುವ ಈ ವಿಷಯಗಳನ್ನು ತಿಳಿದುಕೊಳ್ಳಿ!

ಇತ್ತೀಚಿನ ದಿನಗಳಲ್ಲಿ ರೆಡಿ-ಟು-ಈಟ್ ಆಹಾರಗಳ ಬಳಕೆ ಹೆಚ್ಚಾಗುತ್ತಿದೆ. ಸಮಯ ಉಳಿಸುವ ಈ ಆಹಾರಗಳು ದೀರ್ಘಾವಧಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಯಾವ ರೀತಿ ಪ್ರತಿಕೂಲ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಶೃಂಗೇರಿ ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸುಹಾಸ್ ಹೆಚ್. ಡಿ ತಿಳಿಸಿದ್ದಾರೆ. ಜೊತೆಗೆ ನಾವು ಸೇವನೆ ಮಾಡುವ ಆಹಾರ ಮತ್ತು ಆಹಾರ ಸೇವನೆ ಕ್ರಮ ಹೇಗಿರಬೇಕು ಎಂಬುದರ ಕುರಿತು ವಿವರವಾಗಿ ಮಾಹಿತಿ ನೀಡಿದ್ದಾರೆ.

ರೆಡಿ ಟು ಈಟ್ ಆಹಾರ ಸೇವಿಸುವ ಮುನ್ನ ಡಾ. ಸುಹಾಸ್ ಹೇಳಿರುವ ಈ ವಿಷಯಗಳನ್ನು ತಿಳಿದುಕೊಳ್ಳಿ!
Hidden Dangers of Ready-to-Eat Foods: Expert Health TipsImage Credit source: Tv9 kannada
ಪ್ರೀತಿ ಭಟ್​, ಗುಣವಂತೆ
|

Updated on: Jul 07, 2026 | 10:17 PM

Share

ಮುಖ್ಯಾಂಶಗಳು

  • ರೆಡಿ ಟು ಈಟ್ ಆಹಾರ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು
  • ಆಹಾರ ಸೇವನೆ ಮಾಡುವ ಕ್ರಮ ಹೇಗಿರಬೇಕು ಎಂಬುದರ ಬಗ್ಗೆ ಆಯುರ್ವೇದ ತಜ್ಞರ ಸಲಹೆ
  • ಫಾಸ್ಟ್ ಲೈಫ್‌ಸ್ಟೈಲ್‌ನಲ್ಲಿ ಆಹಾರ ಸೇವನೆ ಮಾಡುವಾಗ ಅನುಸರಿಸುವ ಅಭ್ಯಾಸಗಳು

ಇತ್ತೀಚಿನ ದಿನಗಳಲ್ಲಿ ರೆಡಿ ಟು ಈಟ್ ಆಹಾರ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಎಂದಾದರೂ ಇದು ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಯೋಚಿಸಿದ್ದೀರಾ… ಇದು ನಮ್ಮ ಸಮಯ ಉಳಿಸಬಹುದು ಆದರೆ ಆರೋಗ್ಯವನ್ನು ಕಾಪಾಡುತ್ತದೆಯೇ? ಆದಷ್ಟು ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಶೃಂಗೇರಿ ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸುಹಾಸ್ ಹೆಚ್. ಡಿ ಅವರು ಟಿವಿ9 ಕನ್ನಡಕ್ಕೆ ನೀಡಿದ್ದು ರೆಡಿ ಟು ಈಟ್ ಆಹಾರ ಸೇವನೆಯಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಪರಿಣಾಮಗಳ ಬಗ್ಗೆ ತಿಳಿಸಿದ್ದಾರೆ. ಅಷ್ಟೇಅಲ್ಲ, ನಾವು ಸೇವನೆ ಮಾಡುವ ಆಹಾರ ಮತ್ತು ಆಹಾರ ಸೇವನೆ ಕ್ರಮ ಹೇಗಿರಬೇಕು ಎಂಬುದರ ಕುರಿತು ವಿವರವಾಗಿ ಮಾಹಿತಿ ನೀಡಿದ್ದಾರೆ.

ಡಾ. ಸುಹಾಸ್ ಹೇಳುವ ಪ್ರಕಾರ, ಈ ರೆಡಿ ಟು ಈಟ್ ಆಹಾರಗಳು ಸಾಮಾನ್ಯ ಮಲಬದ್ಧತೆ, ಅಜೀರ್ಣದಿಂದ ಹಿಡಿದು ಅತಿ ಗಂಭೀರವಾದ ಕ್ಯಾನ್ಸರ್ ನಂತಹ ಕಾಯಿಲೆಗಳಿಗೂ ಕಾರಣವಾಗಬಹುದು. ಇಂತಹ ಆಹಾರಗಳು ಹೆಚ್ಚಾಗಿ ಸಂರಕ್ಷಕ (preservative) ಗಳಿಂದ ಅಲ್ಲದೇ ಆಸಿಡ್ ನ್ಯೂಟ್ರಿಲೈಜರ್ (acid neutralisers) ನಂತಹ ಹಲವು ರಾಸಾಯನಿಕ ವಸ್ತುಗಳಿಂದ ಕೂಡಿರುತ್ತದೆ ಹಾಗಾಗಿ ಇವು ರಕ್ತವನ್ನು ಕಲುಷಿತಗೊಳಿಸಿ ಚರ್ಮ ರೋಗ, ಆರ್ಥ್ರೈಟಿಸ್, ಸಣ್ಣ ವಯಸ್ಸಿನಲ್ಲೇ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಮಾನಸಿಕ ಪರಿಣಾಮಗಳು:

ನಿರಂತರವಾಗಿ ರೇಡಿ ಟು ಈಟ್ ಆಹಾರಗಳನ್ನು ಸೇವಿಸಿದರೆ ಉದಾಸೀನ, ಖಿನ್ನತೆ, ಬೇಗನೆ ಕೋಪಗೊಳ್ಳುವುದು ಇಂತಹ ಅಡ್ಡ ಪರಿಣಾಮಗಳನ್ನು ಬೀರುತ್ತವೆ.

ಇದನ್ನೂ ಓದಿ: ಸ್ವೀಟ್ ಸೇವನೆ ಮಾಡುವುದಕ್ಕೆ ಸರಿಯಾದ ಸಮಯ ಯಾವುದು ಗೊತ್ತಾ?

ಆಹಾರ ಹೇಗಿರಬೇಕು?

“ಆಹಾರ ಶುದ್ಧೋ ಸತ್ವ ಶುದ್ಧಿಃ” ಅಂದರೆ, ನಾವು ತಿನ್ನುವ ಆಹಾರವು ಶರೀರದಲ್ಲಿ ಸ್ಥೂಲ ಸೂಕ್ಷ್ಮ ಹಾಗೂ ಅತಿಸೂಕ್ಷ್ಮವಾಗಿ ಪರಿಣಾಮ ಹೊಂದುತ್ತವೆ. ಸ್ಥೂಲ ಭಾಗ ಮಲ ರೂಪವಾಗಿ ಹೊರಹಾಕಲ್ಪಡುತ್ತದೆ ಸೂಕ್ಷ್ಮ ಭಾಗ ಶರೀರದ ನಾನಾ ಭಾಗಗಳಿಗೆ ಸೇರಿ ಪೋಷಣೆಯನ್ನು ಬೇಕಾದ ಶಕ್ತಿಯನ್ನು ನೀಡುತ್ತದೆ ಆದರೆ ಅತಿಸೂಕ್ಷ್ಮ ಭಾಗ ನಮ್ಮ ಮನಸ್ಸನ್ನು ಬುದ್ಧಿಯನ್ನು ಪೋಷಿಸುತ್ತದೆ ಇದೇ ಕಾರಣದಿಂದ ಕೃಷ್ಣ ಪರಮಾತ್ಮನು ಮೇಲೆ ಹೇಳಿದ ವಾಕ್ಯವನ್ನು ಉಪದೇಶಿಸಿದ್ದಾನೆ. ತಿನ್ನುವ ಆಹಾರವು ಆಗಷ್ಟೇ ತಯಾರಿಸಿದ್ದಾಗಿರಬೇಕು, ಬಿಸಿ ಬಿಸಿಯಾಗಿ ಸೇವಿಸಬೇಕು, ಅಡಿಗೆಗೆ ಬಳಸಿದ ಪದಾರ್ಥಗಳು ಶುದ್ಧವಾಗಿರಬೇಕು (ಕಲಬೆರಕೆ ಇಲ್ಲದ) ಶರೀರಕ್ಕೆ ಪುಷ್ಟಿ ನೀಡುವ ಪದಾರ್ಥಗಳನ್ನು ಬಳಸಿರಬೇಕು, ಆಹಾರವು ಆರೂ ರಸಗಳಿಂದ ಕೂಡಿರಬೇಕು

ಆಹಾರ ಸೇವನೆ ಕ್ರಮ:

  • ಆಹಾರ ಸೇವಿಸುವ ಮೊದಲು ಹಸಿವಿರಬೇಕು, ಮಲ ಮೂತ್ರಗಳ ವಿಸರ್ಜನೆ ಆಗಿರಬೇಕು
  • ಆಹಾರದ ಇಚ್ಛೆ ಇರಬೇಕು
  • ಒಂದೆಡೆ ಆರಾಮವಾಗಿ ಕುಳಿತು ಆಹಾರ ಸೇವಿಸಬೇಕು
  • ಕೈ ಕಾಲು, ಬಾಯಿಯನ್ನು ತೊಳೆದು ಆಹಾರ ಸೇವಿಸಬೇಕು
  • ಅಡಿಗೆಯನ್ನು ನಿಂದಿಸದೇ ಖುಷಿಯಿಂದ ಸೇವಿಸಬೇಕು
  • ಹಿತವಾಗಿಯೂ ಮಿತವಾಗಿಯೂ ಆಹಾರವನ್ನು ಸೇವಿಸಬೇಕು
  • ಹೀಗೆ ಸೇವಿಸದ ಆಹಾರ ಶರೀರದ ಸಮತೋಲನವನ್ನು ಕಾಪಾಡುತ್ತದೆ ಹಾಗು ಬೇಕಾದ ಪುಷ್ಟಿಯನ್ನು ನೀಡುತ್ತದೆ

ಬದಲಾದ ಕಾಲಮಾನದಲ್ಲಿ ವೇಗದ ಜೀವನದಲ್ಲಿ ಆಹಾರ ಸೇವನೆಗೆ ಸಮಯ ತೆಗೆದಿಡಲು ಸಮಯವಿಲ್ಲದೆ ಓಡಾಡುತ್ತಾ, ವಾಹನದಲ್ಲೇ ಪ್ರಯಾಣಿಸುವಾಗ ಆಹಾರವನ್ನು ತಿನ್ನುವುದರಿಂದ ತಿಂದ ಆಹಾರವು ಸರಿಯಾಗಿ ಪರಿಣಾಮವಾಗದೆ ಹಲವು ರೀತಿಯ ಅನಾರೋಗ್ಯಗಳನ್ನು ಉಂಟುಮಾಡುತ್ತವೆ. ಇಂದು ನಾವು ತಿನ್ನುವ ಆಹಾರವೇ ನಾಳೆ ನಮ್ಮ ಆರೋಗ್ಯದ ಭಾಗವಾಗುವುದು ಎಂಬುದೇ ಸತ್ಯ ಹಾಗಾಗಿ ಆಹಾರದಲ್ಲಿ ಶುಚಿ, ರುಚಿ, ಶ್ರದ್ಧೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ಪ್ರಜ್ವಲ್​ಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ; ಬಾಕಿ ಹಣಕ್ಕಾಗಿ ವಿವಾದ?
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ರಾಮಾಯಣ, ಮಹಾಭಾರತ ಇಂಡೋನೇಷ್ಯಾ- ಭಾರತದ ಬಾಂಧವ್ಯದ ಸ್ತಂಭಗಳು; ಪ್ರಧಾನಿ ಮೋದಿ
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ವಯನಾಡಿನಲ್ಲಿ ಮತ್ತೊಮ್ಮೆ ಪ್ರಕೃತಿ ವಿಕೋಪ; ಭೂಕುಸಿತದಿಂದ ಮೂವರು ಸಾವು
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮುಸ್ಲಿಂ ಹೆಸರನ್ನ ಡಿಲೀಟ್ ಮಾಡದಂತೆ ಡಿಸಿಗೆ ನಿರ್ದೇಶನ
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಮಂಜು ಮುಸುಕಿದ ಹಾದಿ, ಬೆಟ್ಟ-ಗುಡ್ಡಗಳ ಅದ್ಭುತ ಸೌಂದರ್ಯ:ಆಗುಂಬೆಯ ಸೊಬಗು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
ಗದಗನಲ್ಲಿ ಮನಕಲಕುವ ದೃಶ್ಯ: ಮಳೆಗಾಗಿ ಮಂಡಿಯೂರಿ ಕಣ್ಣೀರಿಟ್ಟ ರೈತರು
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
‘ಕರಾವಳಿ’ ಕಿರಿಕ್; ನಟ ಪ್ರಜ್ವಲ್, ನಿರ್ದೇಶಕ ಗುರುದತ್ ನಡುವೆ ಆಗಿದ್ದೇನು?
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
ಹಾಸನದಲ್ಲಿ ಮಳೆ ಆರ್ಭಟಕ್ಕೆ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಭೂಕುಸಿತ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು: ಫಾರ್ಮ್​ ತುಂಬಲು ಶಾಲಾ ಮಕ್ಕಳ ಬಳಕೆ
ಅಯೋಧ್ಯೆ ರಾಮಮಂದಿರ ದೇಣಿಗೆ ಲೆಕ್ಕ ಬಹಿರಂಗ
ಅಯೋಧ್ಯೆ ರಾಮಮಂದಿರ ದೇಣಿಗೆ ಲೆಕ್ಕ ಬಹಿರಂಗ