AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ ಸಾಂಕ್ರಾಮಿಕದ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ; ತರಕಾರಿ ಪ್ಯಾನ್​ಕೇಕ್​ ತಯಾರಿಸುವ ವಿಧಾನ ಇಲ್ಲಿದೆ

ತರಕಾರಿ ಪ್ಯಾನ್​ಕೇಕ್​ಅನ್ನು ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ಸಮಯದಲ್ಲಿ ಸೇವಿಸಬಹುದು. ಅಡುಗೆ ಮನೆಯಲ್ಲಿ ಲಭ್ಯವಿರುವ ಸಾಮಗ್ರಿಗಳಲ್ಲಿಯೇ ತಯಾರಿಸಬಹುದಾದ್ದರಿಂದ ಇದು ಸುಲಭ ಮತ್ತು ರುಚಿಕರವಾಗಿಯೂ ಇರುತ್ತದೆ.

ಕೊವಿಡ್​ ಸಾಂಕ್ರಾಮಿಕದ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ; ತರಕಾರಿ ಪ್ಯಾನ್​ಕೇಕ್​ ತಯಾರಿಸುವ ವಿಧಾನ ಇಲ್ಲಿದೆ
ತರಕಾರಿ ಪ್ಯಾನ್​ಕೇಕ್​
Follow us
TV9 Web
| Updated By: ಆಯೇಷಾ ಬಾನು

Updated on: Jul 01, 2021 | 8:26 AM

ಕೊರೊನಾ ವೈರಸ್​ ಹಾವಳಿ ಜನರಿಗೆ ಆತಂಕ ತಂದೊಡ್ಡಿದೆ. ಜತೆಗೆ ಹೊಸ ಹೊಸ ಹೆಸರಿನ ರೂಪಾಂತರಿ ವೈರಸ್​ಗಳು ಬೇರೆ! ಇವುಗಳ ವಿರುದ್ಧ ಹೋರಾಡಲು ನೀವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲೇಬೇಕು. ಹಾಗಿದ್ದಾಗ ಪೌಷ್ಠಿಕಾಂಶಯುಕ್ತ ಆಹಾರವೇ ನಿಮ್ಮದಾಗಿರಬೇಕು. ಪ್ರೋಟೀನ್​ಯುಕ್ತ ಆಗಾರವನ್ನೇ ಸೇವಿಸಿ ನಿಮ್ಮ ಆರೋಗ್ಯದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ತರಕಾರಿಗಳಿಂದ ರುಚಿಕರವಾದ ತರಕಾರಿ ಪ್ಯಾನ್​ಕೇಕ್​ ತಯಾರಿಸುವ ವಿಧಾನ ತಿಳಿಯೋಣ.

ಕ್ಯಾರೆಟ್​, ಈರುಳ್ಳಿ ಮುಂತಾದ ತರಕಾರಿಗಳನ್ನು ಬಳಸಿ ತಯಾರಿಸುವ ತರಕಾರಿ ಪ್ಯಾನ್​ಕೇಕ್​ ನಿಮ್ಮ ಆರೋಗ್ಯವನ್ನು ಸುಧಾರಿಸುವುದಲ್ಲದೇ ತಿನ್ನಲು ರುಚಿಕರವಾಗಿಯೂ ಇರುತ್ತದೆ. ನೀವು ಪೌಷ್ಠಿಕಾಂಶಯುಕ್ತ ಆಹಾರವನ್ನೇ ಸೇವಿಸುತ್ತಿದ್ದರೆ ನಿಮ್ಮ ಆರೋಗ್ಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದರೆ ಖಂಡಿತವಾಗಿಯೂ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸಹಾಯವಾಗುತ್ತದೆ. ಜತೆಗೆ ಇನ್ನಿತರ ರೋಗಗಳ ಅಪಾಯದಿಂದಲೂ ಸಹ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.

ತರಕಾರಿ ಪ್ಯಾನ್​ಕೇಕ್​ ತಯಾರಿಸಲು ಬೇಕಾಗುವ ಸಾಮಗ್ರಿಗಳು ಕ್ಯಾರೆಟ್ – ¼ ಕಪ್​ ಪಾಲಾಕ್​ ಸೊಪ್ಪು – ¼ ಕಪ್​ ಎಲೆಕೋಸು- ¼ ಕಪ್​ ಈರುಳ್ಳಿ- ¼ ಕಪ್​ ಕೊತ್ತಂಬರಿ ಸೊಪ್ಪು- ¼ ಕಪ್ ಹಸಿರು ಮೆಣಸಿನಕಾಯಿ- 2 ಶುಂಠಿ-1

ಧಾನ್ಯದ ಹಿಟ್ಟು ಬೆಸಾನ್​ ಹಿಟ್ಟು 25 ಗ್ರಾಂ ಓಟ್ಸ್​ 25 ಗ್ರಾಂ ಹಾಲು 1ಕಪ್​ ಸಂಸ್ಕರಿಸಿದ ಎಣ್ಣೆ 2 ಚಮಚ ಅಡಿಗೆ ಸೋಡಾ ½ ಚಮಚ ಅರಿಶಿಣ ½ ಚಮಚ ಕರಿಮೆಣಸು ½ ಜೀರಾ ಪುಡಿ ½ ಚಮಚ ಬಿಳಿ ಎಳ್ಳು 1 ಚಮಚ ಉಪ್ಪು- ರುಚಿಗೆ ತಕ್ಕಷ್ಟು

ಚಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿ ಕುಂಬಳಕಾಯಿ ಬೀಜ 1 ಚಮಚ ಎಳ್ಳು ಬೀಜ 1 ಚಮಚ ಒಂದು ಕಪ್​ ಪುದೀನ ಮೊಸರು 2 ಚಮಚ ಕರಿ ಮೆಣಸು- 2 ಬೆಳ್ಳುಳ್ಳಿ- 2 ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ ಧಾನ್ಯದ ಹಿಟ್ಟು, ಬೆಸಾನ್​ ಹಿಟ್ಟು, ಓಟ್ಸ್​, ಉಪ್ಪು, ಅರಿಶಿಣ, ಬೇಕಿಂಗ್​ ಪೌಡರ್​, ಜೀರಾ ಪುಡಿ, ಮತ್ತು ಮುಣಸು ಎಲ್ಕಾ ಸೇರಿಸಿ ಒಟ್ಟಿಗೆ ಮಿಶ್ರಣ ಮಾಡಿ. ನಂತರ ಎಲೆಕೋಸು, ಈರುಳ್ಳಿ, ಪಾಲಾಕ್​, ಹಸಿ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಅದಕ್ಕೆ ಕ್ಯಾರೆಟ್​ ಮತ್ತು ಶುಂಠಿಯನ್ನು ತುರಿದು ಸೇರಿಸಿ. ಹಿಟ್ಟು ಮಿಶ್ರಣ ಮತ್ತು ತರಕಾರಿ ಮಿಶ್ರಣವನ್ನು ಒಟ್ಟಿಗೆ ಸೇರಿಸಿ ಹಾಲು ಮತ್ತು ಮೊಟ್ಟೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 10 ನಿಮಿಷಗಳ ಕಾಲ ಮಿಶ್ರಣ ಮಾಡಿದ ಹಿಟ್ಟನ್ನು ಹಾಗೆಯೇ ಇಡಿ. ನಂತರ ನಾನ್​-ಸ್ಟಿಕ್​ ಪ್ಯಾನ್​ ಅನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆಯಿಂದ ಸವರಿ. ತಯಾರಿಸಿದ ಹಿಟ್ಟನ್ನು ವೃತ್ತಾಕಾರದಲ್ಲಿ ತಟ್ಟಿ ಪ್ಯಾನ್ ಮೇಲೆ ಬೇಯಿಸಿ. ಗೋಲ್ಡನ್​ ಬ್ರೌನ್​ ಬಣ್ಣ ಬರುವವರೆಗೆ ಚೆನ್ನಾಗಿ ಎರಡೂ ಕಡೆಗಳಲ್ಲಿ ಬೇಯಿಸಿ. ತಯಾರಿಸಿಕೊಂಡ ಚಟ್ನಿ ಜತೆ ಇದನ್ನು ಸವಿಯಬಹುದು.

ತರಕಾರಿ ಪ್ಯಾನ್​ಕೇಕ್​ಅನ್ನು ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ಸಮಯದಲ್ಲಿ ಸೇವಿಸಬಹುದು. ಅಡುಗೆ ಮನೆಯಲ್ಲಿ ಲಭ್ಯವಿರುವ ಸಾಮಗ್ರಿಗಳಲ್ಲಿಯೇ ತಯಾರಿಸಬಹುದಾದ್ದರಿಂದ ಇದು ಸುಲಭ ಮತ್ತು ರುಚಿಕರವಾಗಿಯೂ ಇರುತ್ತದೆ.

ಪ್ರಯೋಜನಗಳು ತರಕಾರಿ ಪ್ಯಾನ್​ಕೇಕ್​ನಲ್ಲಿ ಪ್ರೋಟೀನ್​, ಖನಿಜಗಳು, ಜೀವಸತ್ವಗಳು ಮತ್ತು ಕಾರ್ಬೋಹೈಡ್ರೇಟ್​ಗಳು ಸೇರಿದಂತೆ ಎಲ್ಲಾ ಪೋಷಕಾಂಶಗಳಿರುತ್ತದೆ. ಇದು ಪ್ರೋಬಯಾಟಿಕ್​ ಮತ್ತು ಪೈಬರ್​ಗಳನ್ನು ಸಹ ಹೊಂದಿದೆ. ಹಾಗಿರುವಾಗ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ಸಹಾಯಕವಾಗಿದೆ. ಇದರಲ್ಲಿರುವ ಮೊಟ್ಟೆ, ಮೊಸರು ಮತ್ತು ಬೆಸಾನ್​ ಹಿಟ್ಟಿನಲ್ಲಿ ಸಾಕಷ್ಟು ಪ್ರೋಟೀನ್​ ಅಂಶವಿದೆ, ಮಸಾಲೆ ಮತ್ತು ಗಿಡಮೂಲಿಕೆಗಳಾದ ಕರಿಮೆಣಸು, ಅರಿಶಿಣ, ಎಳ್ಳು, ಬೆಳ್ಳುಳ್ಳಿಯಲ್ಲಿರುವ ಅಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮೊಸರಿನಲ್ಲಿ ಪ್ರೋಬಯಾಟಿಕ್​ಗಳು ಹೆಚ್ಚಾಗಿರುವುದರಿಂದ ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

ಇದನ್ನೂ ಓದಿ:

ಬಳ್ಳಾರಿ ಸ್ಪೇಷಲ್ ಮಸಾಲೆ ರೊಟ್ಟಿ; ಸರಳ ವಿಧಾನದ ಜತೆ ಮಾಡಿ ಸವಿಯಿರಿ

ಕೊಡಗು ಶೈಲಿಯ ಅಕ್ಕಿ ರೊಟ್ಟಿ; ಸರಳ ವಿಧಾನದ ಜತೆ ಮಾಡಿ ಸವಿಯಿರಿ

ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ