Sign In

By signing in or creating an account, you agree with Associated Broadcasting Company's Terms & Conditions and Privacy Policy.

Diabetes Diet: ಬೇಸಿಗೆಯಲ್ಲಿ ಮಧುಮೇಹಿಗಳಿಗಾಗಿ ಈ ಪಾನೀಯಗಳು

ಮಧುಮೇಹ ರೋಗಿಗಳು ತಮ್ಮ ಸಕ್ಕರೆಯ ಮಟ್ಟವನ್ನು ಹೆಚ್ಚಿಸದೆಯೇ ಮನೆಯಲ್ಲಿಯೇ ಕೆಲವು ನೈಸರ್ಗಿಕ, ಆರೋಗ್ಯಕರ ತಂಪಾದ ಪಾನೀಯಗಳನ್ನು ಸುಲಭವಾಗಿ ತಯಾರಿಸಬಹುದು " ಎಂದು ದೆಹಲಿ ಮೂಲದ ಪೌಷ್ಟಿಕತಜ್ಞ ಕವಿತಾ ದೇವಗನ್ ಸೂಚಿಸುತ್ತಾರೆ.

Diabetes Diet: ಬೇಸಿಗೆಯಲ್ಲಿ ಮಧುಮೇಹಿಗಳಿಗಾಗಿ ಈ ಪಾನೀಯಗಳು
Summer drinks for diabeticsImage Credit source: NDTV
Follow us
ಅಕ್ಷತಾ ವರ್ಕಾಡಿ
|

Updated on: May 29, 2023 | 6:46 AM

ಮಧುಮೇಹ ರೋಗಿಗಳು ತಮ್ಮ ಸಕ್ಕರೆಯ ಮಟ್ಟವನ್ನು ಹೆಚ್ಚಿಸದೆಯೇ ಮನೆಯಲ್ಲಿಯೇ ಕೆಲವು ನೈಸರ್ಗಿಕ, ಆರೋಗ್ಯಕರ ತಂಪಾದ ಪಾನೀಯಗಳನ್ನು ಸುಲಭವಾಗಿ ತಯಾರಿಸಬಹುದು ” ಎಂದು ದೆಹಲಿ ಮೂಲದ ಪೌಷ್ಟಿಕತಜ್ಞ ಕವಿತಾ ದೇವಗನ್ ಸೂಚಿಸುತ್ತಾರೆ. ದೇವಗನ್ ಪ್ರಕಾರ, ಈ ಬೇಸಿಗೆ ಪಾನೀಯಗಳನ್ನು ಸೇವಿಸಲು ಉತ್ತಮ ಸಮಯವೆಂದರೆ ಊಟದ ನಡುವೆ , ಸುಮಾರು 11 ರಿಂದ 12 ರವರೆಗೆ ಅಥವಾ ಸಂಜೆ 4 ರಿಂದ 4:30 ರವರೆಗೆ ಎಂದು ಸಲಹೆ ನೀಡುತ್ತಾರೆ. ಮಧುಮೇಹಿಗಳಿಗೆ ಕೆಲವು ತ್ವರಿತ ಮತ್ತು ಸುಲಭವಾದ ಪೌಷ್ಟಿಕತಜ್ಞರು ಶಿಫಾರಸು ಮಾಡಿರುವ ಬೇಸಿಗೆ ಪಾನೀಯಗಳ ಪಟ್ಟಿ ಇಲ್ಲಿದೆ:

ತುಳಸಿ ಬೀಜಗಳೊಂದಿನ ಎಳನೀರು:

ಎಳನೀರು ದೇಹವನ್ನು ತಂಪಾಗಿಸುತ್ತದೆ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ ಎಂದು ಪೌಷ್ಟಿಕತಜ್ಞ ನಿಗಮ್ ವಿವರಿಸುತ್ತಾರೆ . ಇದನ್ನು ಸಬ್ಜಾ ಬೀಜಗಳೊಂದಿಗೆ (ತುಳಸಿ ಬೀಜಗಳು) ಸಂಯೋಜಿಸಬಹುದು, ಇದು ಬಿಸಿಲಿನ ಶಾಖದಿಂದ ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ ಇದು ಅತ್ಯುತ್ತಮ ಬೇಸಿಗೆ ಪಾನೀಯಗಳಲ್ಲಿ ಒಂದಾಗಿದೆ. ಸಬ್ಜಾ ಬೀಜಗಳಲ್ಲಿನ ನಾರಿನಂಶವು ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಿಗಮ್ ವಿವರಿಸುತ್ತಾರೆ.

ಕಾಮಕಸ್ತೂರಿ ಬೀಜದ ಪಾನೀಯ:

ದೇವಗನ್ ಅವರ ಪ್ರಕಾರ, ಮಧುಮೇಹಿಗಳು ಒಮೆಗಾ 3 ಸಮೃದ್ಧವಾಗಿರುವ ಚಿಯಾ ಬೀಜದ ನೀರನ್ನು ಕುಡಿಯುವುದು ಅತ್ಯಂತ ಉಪಯುಕ್ತವಾಗಿದೆ. 1 ಲೀ ನೀರಿನಲ್ಲಿ 2 ಚಮಚ ಚಿಯಾ ಬೀಜಗಳನ್ನು ನೆನೆಸಿ ಮತ್ತು ದಿನವಿಡೀ ಕುಡಿಯಿರಿ.

ಮರ ಸೇಬು ಪಾನೀಯ:

ಮರದ ಸೇಬು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಇದರಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದೆ. ಈ ಬೇಸಿಗೆಯ ಪಾನೀಯವು ತಯಾರಿಸಲು ಸರಳವಾದ ಪಾನೀಯವಾಗಿದೆ ಎಂದು ನಿಗಮ್ ವಿವರಿಸುತ್ತಾರೆ. ಕೇವಲ ತಿರುಳನ್ನು ಸ್ಕೂಪ್ ಮಾಡಿ ಮತ್ತು ಅದನ್ನು ನೀರಿನಿಂದ ಮಿಶ್ರಣ ಮಾಡಿ . “ಹೆಚ್ಚಿನ ಜನರು ಇದನ್ನು ಸಕ್ಕರೆಯೊಂದಿಗೆ ಬೆರೆಸಿದ ಬೇಸಿಗೆ ಪಾನೀಯವಾಗಿ ಸೇವಿಸಿದರೆ , ಮಧುಮೇಹಿಗಳು ಅದನ್ನು ಜೀರಿಗೆ ಪುಡಿ ಮತ್ತು ಚಾಟ್ ಮಸಾಲಾದೊಂದಿಗೆ ಬೆರೆಸುವ ಮೂಲಕ ಆರೋಗ್ಯಕರವಾಗಿ ಕುಡಿಯಬಹುದು ಎಂದು ಅವರು ಸೂಚಿಸುತ್ತಾರೆ.

ಇದನ್ನೂ ಓದಿ: ಉಬ್ಬಿರುವ ರಕ್ತನಾಳಗಳನ್ನು ನಿವಾರಿಸುವ ಚಿಕಿತ್ಸೆ ಕುರಿತು ಇಲ್ಲಿದೆ ಮಾಹಿತಿ

ಪುನರ್ಪುಳಿ ಶರ್ಬತ್:

ಪುನರ್ಪುಳಿ ಒಂದು ಸಣ್ಣ, ದುಂಡಗಿನ ಹಣ್ಣು, ಇದು ಬಹುತೇಕ ಚೆರ್ರಿ ಟೊಮ್ಯಾಟೊ ಗಾತ್ರದಲ್ಲಿದೆ. ಬೇಸಿಗೆಯಲ್ಲಿ ದೇಹವನ್ನು ತೇವಾಂಶದಿಂದಿರಿಸಲು ಸಕ್ಕರೆ ಮತ್ತು ನೀರನ್ನು ಬೆರೆಸಿ ಈ ಹಣ್ಣಿನ ರಸದಿಂದ ಜ್ಯೂಸ್​​ ತಯಾರಿಸಲಾಗುತ್ತದೆ. ಮಧುಮೇಹಿಗಳಿಗೆ, ಸಕ್ಕರೆ ಇಲ್ಲದೆ ಈ ಹಣ್ಣಿನ ರಸವನ್ನು ಕುಡಿಯಲು ಸೂಚಿಸಲಾಗುತ್ತದೆ. ಹುಳಿ ಕಡಿಮೆ ಮಾಡಲು ತೆಂಗಿನಕಾಯಿ ಹಾಲಿನೊಂದಿಗೆ ಮಿಶ್ರಣ ಮಾಡಲು ಅವರಿಗೆ ಸಲಹೆ ನೀಡುತ್ತಾರೆ. ಅಲ್ಲದೇ ಸ್ವಲ್ಪ ಬೆಲ್ಲವನ್ನು ಸೇರಿಸಬಹುದು.

ಮಜ್ಜಿಗೆ:

ಮನೆಯಲ್ಲಿ ಮಜ್ಜಿಗೆ ಮಾಡಲು ಸುಲಭವಾದ ಮಾರ್ಗವೆಂದರೆ ಮೊಸರಿನೊಂದಿಗೆ ನೀರನ್ನು ಬೆರೆಸಿ ಮತ್ತು ಉಪ್ಪು ಮತ್ತು ಮಸಾಲೆಗಳೊಂದಿಗೆ ಮಸಾಲೆ ಹಾಕಿ ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ. ಮಜ್ಜಿಗೆಯು ಉತ್ತಮ ಪ್ರೋಬಯಾಟಿಕ್ ಆಗಿದ್ದು ಅದು ನಿಮ್ಮ ಕರುಳಿನ ಆರೋಗ್ಯ, ಜೀರ್ಣಕ್ರಿಯೆ ಮತ್ತು ನಿಮ್ಮನ್ನು ತೇವಾಂಶದಿಂದಿರಿಸುತ್ತದೆ ಎಂದು ದೇವಗನ್ ಹೇಳುತ್ತಾರೆ .

ತರಕಾರಿಗಳ ರಸ:

ದೇವಗನ್ ಪ್ರಕಾರ, ಬೇಸಿಗೆಯ ಪಾನೀಯವನ್ನು ಆಯ್ಕೆಮಾಡುವಾಗ ಮಧುಮೇಹಿಗಳಿಗೆ ತರಕಾರಿ ರಸಗಳು ಆರೋಗ್ಯಕರ ಆಯ್ಕೆಯಾಗಿದೆ. ಸೌತೆಕಾಯಿ ರಸವನ್ನು ಶುಂಠಿ ಮತ್ತು ನಿಂಬೆಹಣ್ಣಿನ ಜೊತೆಗೆ ಸೇವಿಸಬಹುದು. ಮಧುಮೇಹ ರೋಗಿಗಳು ಹಾಗಲಕಾಯಿಯನ್ನು ಬೀಟ್ರೂಟ್ ರಸದೊಂದಿಗೆ ಬೆರೆಸಬಹುದು, ಇದು ಹಾಗಲಕಾಯಿಯ ಕಹಿಯನ್ನು ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ದೇವಗನ್ ವಿವರಿಸುತ್ತಾರೆ .

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿಎಂ ಯೋಗಿ ಆದಿತ್ಯನಾಥ್ ಧನ್ಯವಾದ