AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಕಾಲು ಊದಿಕೊಳ್ಳುತ್ತದೆಯೇ? ಈ ಸಮಸ್ಯೆಗಳಿಗೆ ಇಲ್ಲಿದೆ ನೋಡಿ ಪರಿಹಾರ

ಕಾಲು ಸೆಳೆತ ಸಮಸ್ಯೆ ವೃದ್ಧರಿಗೆ ಮಾತ್ರವಲ್ಲ ವಯಸ್ಸಿಗೆ ಬಂದ ಯುವಕರಿಗೂ ಕೂಡ ಕಾಡುತ್ತಿದೆ. ಅದರಲ್ಲೂ ರಾತ್ರಿ ವೇಳೆ ಸೆಳೆತದ ಸಮಸ್ಯೆಗಳು ಅನೇಕರಿಗೆ ದೊಡ್ಡ ತಲೆನೋವಾಗಿದೆ. ಇದಕ್ಕೆ ಆಯುರ್ವೇದಾಚಾರ್ಯ ಡಾ. ಪ್ರತಾಪ್ ಚೌಹಾಣ್ ಅವರು ಕೆಲವೊಂದು ಮನೆಮದ್ದುಗಳನ್ನು ಹಾಗೂ ಸುಲಭ ವಿಧಾನಗಳನ್ನು ಹೇಳಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ.

ರಾತ್ರಿ ಕಾಲು ಊದಿಕೊಳ್ಳುತ್ತದೆಯೇ? ಈ ಸಮಸ್ಯೆಗಳಿಗೆ ಇಲ್ಲಿದೆ ನೋಡಿ ಪರಿಹಾರ
ಸಾಂದರ್ಭಿಕ ಚಿತ್ರ
ಸಾಯಿನಂದಾ
|

Updated on: Aug 19, 2025 | 3:00 PM

Share

ರಾತ್ರಿ ವೇಳೆ ಉಂಟಾಗುವ ಕಾಲು ಸೆಳೆತದ (cramps in legs) ಸಮಸ್ಯೆಗಳು ವಯಸ್ಸಿನ ಮಿತಿ ಇಲ್ಲದೆ, ಎಲ್ಲರನ್ನೂ ಕಾಡುತ್ತಿದೆ. ಗಾಢ ನಿದ್ರೆಯ ಮಧ್ಯೆ, ಇದ್ದಕ್ಕಿದ್ದಂತೆ ಕಾಲಿನಲ್ಲಿ ಬಲವಾದ ಸೆಳೆತ ಉಂಟಾಗಿ ನಿದ್ರೆ ಹಾಳು ಮಾಡುತ್ತದೆ. ಕೆಲವೊಮ್ಮೆ ಈ ನೋವು ಹೆಚ್ಚಾದಾಗ ನಡೆಯಲು ಕೂಡ ಸಾಧ್ಯವಾಗುದಿಲ್ಲ. ಈ ಸಮಸ್ಯೆ ಆಗ್ಗಾಗೆ ಎದುರಿಸಬೇಕಾದ ಅನಿವಾರ್ಯಗಳು ಬರುತ್ತದೆ. ಹಾಗಾಗಿ ಅದಕ್ಕೆ ಕೆಲವೊಂದು ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ. ರಾತ್ರಿ ಮಲಗುವಾಗ ಕಾಲುಗಳ ರಕ್ತನಾಳಗಳು ಏಕೆ ಊದಿಕೊಳ್ಳುತ್ತವೆ ಮತ್ತು ಅದನ್ನು ಪರಿಹಾರ ಮಾಡಲು ಆಯುರ್ವೇದ ತಜ್ಞ ಕೆಲವೊಂದು ಮನೆಮದ್ದುಗಳನ್ನು ಹೇಳಿದ್ದಾರೆ. ಜೀವ ಆಯುರ್ವೇದದ ನಿರ್ದೇಶಕ ಮತ್ತು ಪ್ರಸಿದ್ಧ ಆಯುರ್ವೇದಾಚಾರ್ಯ ಡಾ. ಪ್ರತಾಪ್ ಚೌಹಾಣ್ (Dr. Prathap Chauhan) ಈ ಬಗ್ಗೆ ಎನ್​​​ಡಿಟಿವಿ ಜತೆಗೆ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಜನರು ಇದನ್ನು ಆಯಾಸದಿಂದ ಉಂಟಾಗಿದೆ ಎಂದುಕೊಳ್ಳುತ್ತಾರೆ. ಆದರೆ ಆಯುರ್ವೇದದ ದೃಷ್ಟಿಕೋನದಿಂದ ನೋಡಿದ್ರೆ, ಇದು ದೇಹದಲ್ಲಿ ವಾತ ದೋಷ ಹೆಚ್ಚುತ್ತಿದೆ ಮತ್ತು ನರಗಳು ಸಾಕಷ್ಟು ಪೋಷಣೆಯನ್ನು ಪಡೆಯುತ್ತಿಲ್ಲ ಎಂಬುದರ ಸಂಕೇತವಾಗಿದೆ ಎಂದು ಡಾ. ಪ್ರತಾಪ್ ಚೌಹಾಣ್ ಹೇಳುತ್ತಾರೆ. ಪ್ರತಿದಿನ ಅನೇಕ ರೋಗಿಗಳು ಈ ಸಮಸ್ಯೆಯೊಂದಿಗೆ ನನ್ನ ಬಳಿಗೆ ಬರುತ್ತಾರೆ. ನಾನು ಇದರ ಬಗ್ಗೆ ಅವರೊಂದಿಗೆ ಮಾತನಾಡುವಾಗ, ಅವರ ಜೀವನಶೈಲಿಯಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಕಂಡು ಬರುತ್ತದೆ. ಕೆಲವರು ತಡರಾತ್ರಿಯವರೆಗೆ ಮೊಬೈಲ್ ಫೋನ್ ಬಳಸುತ್ತಾರೆ,  ಸರಿಯಾದ ನಿದ್ರೆ ಬರುವುದಿಲ್ಲ, ಆದರೆ ಕೆಲವರು ದಿನವಿಡೀ ನಿಂತು ಕೆಲಸ ಮಾಡುತ್ತಾರೆ. ಈ ಎಲ್ಲಾ ಕಾರಣಗಳು ಕ್ರಮೇಣ ನರಗಳು ಮತ್ತು ಸ್ನಾಯುಗಳನ್ನು ದುರ್ಬಲಗೊಳಿಸುತ್ತವೆ. ಇದರಿಂದ ರಾತ್ರಿಯಲ್ಲಿ ಹಠಾತ್ ಒತ್ತಡ, ಜುಲ್ಟ್ಸ್ ಅಥವಾ ನರ ನೋವಿನಂತಹ ಸಮಸ್ಯೆಗಳು ಉಂಟಾಗುತ್ತದೆ.

ಇದಕ್ಕೆ ಪರಿಹಾರ ಏನು?

ಇದರಿಂದ ಮುಕ್ತಿ ಪಡೆಯಲು ಜೀವನಶೈಲಿಯನ್ನು ಸುಧಾರಿಸಿಕೊಳ್ಳುವುದು ಅಗತ್ಯ. ಉತ್ತಮ ನಿದ್ರೆ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ. ಇದರ ಹೊರತಾಗಿ, ಅಶ್ವಗಂಧ, ಶತಾವರಿ ಮತ್ತು ಮಿಶ್ರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಈ ಮೂರು ವಸ್ತುಗಳನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣಗೆ ಪುಡಿಮಾಡಿ. ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ, ತಲಾ ಒಂದು ಚಮಚ ಉಗುರು ಬೆಚ್ಚಗಿನ ಹಾಲಿನೊಂದಿಗೆ ಮಿಶ್ರಣ ಮಾಡಿ ಕುಡಿಯಿರಿ ಎಂದು ಡಾ. ಪ್ರತಾಪ್ ಚೌಹಾಣ್ ಸಲಹೆ ನೀಡುತ್ತಾರೆ.

ಇದನ್ನೂ ಓದಿ
Image
ಪ್ರತಿದಿನ ಬೆಳಗ್ಗೆ ಈ ಪಾನಿಯಗಳನ್ನು ಕುಡಿದರೆ, ಸುಲಭವಾಗಿ ತೂಕ ಇಳಿಸಬಹುದು
Image
ತೂಕ ಕಡಿಮೆ ಮಾಡಿಕೊಳ್ಳಲು ಬೆಳಿಗ್ಗೆ ಈ ಹುಲ್ಲಿನ ಚಹಾ ಮಾಡಿ ಕುಡಿಯಿರಿ
Image
ಕಾರ್ಡಿಯೋಟಾಕ್ಸಿಸಿಟಿಗೆ ಆಯುರ್ವೇದ ಪರಿಹಾರ: ಪತಂಜಲಿ
Image
ಯಾವ ಕೆಲಸ ಮಾಡದಿದ್ರೂ ಸುಸ್ತಾಗುತ್ತಿದ್ದರೆ ಈ ರೋಗ ಬಂದಿದೆ ಎಂದರ್ಥ!

ಇದನ್ನೂ ಓದಿ: ಯಾವ ಕೆಲಸ ಮಾಡದಿದ್ರೂ ಸುಸ್ತಾಗುತ್ತಿದ್ದರೆ ಈ ರೋಗ ಬಂದಿದೆ ಎಂದರ್ಥ!

ಏನಿದರ ಉಪಯೋಗ ?

  • ಅಶ್ವಗಂಧವು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ವಾತ ದೋಷವನ್ನು ಶಾಂತಗೊಳಿಸುತ್ತದೆ.
  • ಶತಾವರಿ ನರಗಳನ್ನು ಪೋಷಿಸುತ್ತದೆ, ದೇಹವನ್ನು ತಂಪಾಗಿಡುತ್ತದೆ.
  • ಸಕ್ಕರೆ ಕ್ಯಾಂಡಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಔಷಧದ ಪರಿಣಾಮವನ್ನು ಸಮತೋಲನಗೊಳಿಸುತ್ತದೆ.
  • ನೀರಿನ ಕೊರತೆಯಿಂದಾಗಿ ರಕ್ತನಾಳಗಳು ಊದಿಕೊಳ್ಳಲು ಪ್ರಾರಂಭಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಸಾಕಷ್ಟು ನೀರು ಕುಡಿಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು