AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chickpeas Benefits: ಕಡಲೆ ತಿನ್ನುವುದರಿಂದಾಗುವ ಅಧ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?

ಮಹಾಗಣಪತಿಗೆ ನೈವೇದ್ಯ ಮಾಡುವ ವಸ್ತುಗಳಲ್ಲಿ ಅತ್ಯಂತ ಮುಖ್ಯವಾದ ಅಂತಹ ಶ್ರೀ ಮಹಾಗಣಪತಿಯ ಅತ್ಯಂತ ಪ್ರಿಯವಾದಂತಹ ವಸ್ತು ಕಡ್ಲೆ .

Chickpeas Benefits: ಕಡಲೆ ತಿನ್ನುವುದರಿಂದಾಗುವ ಅಧ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?
Chickpeas
TV9 Web
| Edited By: |

Updated on: Sep 05, 2022 | 9:50 AM

Share

ಮಹಾಗಣಪತಿಗೆ ನೈವೇದ್ಯ ಮಾಡುವ ವಸ್ತುಗಳಲ್ಲಿ ಅತ್ಯಂತ ಮುಖ್ಯವಾದ ಅಂತಹ ಶ್ರೀ ಮಹಾಗಣಪತಿಯ ಅತ್ಯಂತ ಪ್ರಿಯವಾದಂತಹ ವಸ್ತು ಕಡ್ಲೆ . ಮಹಾಗಣಪತಿ ಹೇಗೆ ಶಕ್ತಿ ಮತ್ತು ಸಾಮರ್ಥ್ಯದ ಪ್ರತಿಕವಾದ ಅಂತಹ ದೇವರು ಅದೇ ಈ ದೇವರಿಗೆ ಪ್ರಿಯವಾದಂತ ವಸ್ತು ಕಡ್ಲೆ ಅಂದರೆ ಅದನ್ನು ಕೂಡ ಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಿಸಲು ಖಂಡಿತವಾಗಿಯೂ ಉಪಯೋಗಕ್ಕೆ ಬರುತ್ತದೆ.

ಹಲವು ಗಣಪತಿ ದೇವಾಲಯಗಳಲ್ಲಿ ತೀರ್ಥ ಮತ್ತು ಹೂವಿನ ಪ್ರಸಾದ ಕೊಟ್ಟ ನಂತರ ನಾಲ್ಕು ಕಡಲೆಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ಅಲ್ಲದೆ ಪಂಚಕಾಧ್ಯದಲ್ಲಿ ಪ್ರಮುಖವಾದಂತಹ ಘಟಕ ಕಡ್ಲೇನೆ ಆಗಿದೆ. ಆದರೆ ಕಡ್ಲೆ ಇರುವಂತ ಪದಾರ್ಥಗಳನ್ನ ಪ್ರಸಾದವೆಂದು ಕೊಟ್ಟಾಗ ಈಗಿನ ಮಕ್ಕಳು ಸೇವಿಸಲು ಹಿಂಜರಿರುವ ಸಂಗತಿ ಕಂಡು ಬಂದಿದೆ.

ಏಷ್ಯನ್ ಗೇಮ್ಸ್ ಅಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಅನೇಕ ಭಾರತೀಯರು ಕ್ರೀಡಾಪಟುಗಳು ಪದಕ ಗಳಿಸಿದ್ದಾರೆ. ಇವರ ಅದ್ಭುತ ಗೆಲುವಿನ ನಂತರ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿಂದ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದೇನೆ ಎಂಬ ಮಾತು ಕೆಲವು ಕ್ರೀಡಾಪಟುಗಳದ್ದು.

ಅಂದ್ರೆ ಪೇಟೆಯಲ್ಲಿ ಸಿಗುವ ಉತ್ಪನ್ನಗಳನ್ನು ತಿಂದು ಸಾಮರ್ಥ್ಯ ಹೆಚ್ಚಿಸಿಲ್ಲ. ಅಂತ ಉತ್ತರಭಾರತದ ಹಲವು ಕ್ರೀಡಾಪಟುಗಳು ತಮ್ಮ ಸಂದರ್ಶನಗಳಲ್ಲಿ ಹೇಳಿದ್ದಾರೆ. ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಗುಡಚನಾ ಸೇವಿಸಿದ್ದಾರೆ. ಗುಡ ಅಂದರೆ ಬೆಲ್ಲ ಚನಾ ಕಡ್ಲೆ. ಬೆಲ್ಲ ತಕ್ಷಣ ಶಕ್ತಿ ಬರುವಂತೆ ಮಾಡುತ್ತದೆ.

ಕಡ್ಲೆಯಲ್ಲಿಯ ಪ್ರೋಟೀನ್ ಸ್ನಾಯುಗಳಿಗೆ ,ಮಾಂಸಖಂಡಗಳಿಗೆ ಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಿಸಲು ಉತ್ತಮ, ಕಡ್ಲೆಯ ಪದಾರ್ಥಗಳನ್ನು ತಿನ್ನುವಾಗ ತುಪ್ಪದ ಜೊತೆಗೆ ತಿನ್ನುವುದು ವಾಡಿಕೆ.

ಈ ವಾಡಿಕೆ ಯಾಕೆ ಮುಂದುವರಿದು ಬಂದಿದೆ ಎಂದು ಯೋಚಿಸಿದರೆ ಕಡ್ಲೆ ಜೀರ್ಣ ಆಗ್ಲಿಕ್ಕೆ ಜೊತೆಗೆ ನಯ ವಸ್ತು ಬೇಕು ಅದರಲ್ಲಿ ಈ ತುಪ್ಪ ಕಡಲೆ ಜೀರ್ಣ ಆಗಲಿಕ್ಕೆ ಹೆಚ್ಚಿನ ಸಹಾಯ ಮಾಡುತ್ತದೆ ಅಲ್ಲದೆ ಕಡಲೆಯಿಂದ ಆಗುವಂಥ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಆ ಕಾರಣಕ್ಕೆ ಹೋಳಿಗೆ ತುಪ್ಪ , ಕಡ್ಲೆ ಮಡ್ಡಿ ತುಪ್ಪ, ಪಂಚಕಖಾಧ್ಯವನ್ನು ತುಪ್ಪದ ಜೊತೆಗೆ ತಿನ್ನುವುದು.

ಬರಹ: ಡಾ. ರವಿಕಿರಣ ಪಟವರ್ಧನ್, ಶಿರಸಿ, ಆಯುರ್ವೇದ ವೈದ್ಯರು

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್