AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kidney Stone: ಕಿಡ್ನಿ ಸ್ಟೋನ್ ಸಮಸ್ಯೆ ಏಕೆ ಕಂಡುಬರುತ್ತದೆ? ಅದರಿಂದ ರಕ್ಷಣೆ ಹೇಗೆ? ಇಲ್ಲಿದೆ ವಿವರ

ಬಹುತೇಕ ಕಿಡ್ನಿ ಸ್ಟೋನ್ ಸಮಸ್ಯೆ ಕಳಪೆ ಜೀವನಶೈಲಿಯಿಂದ ಉಂಟಾಗುತ್ತದೆ. ಅಂದರೆ, ಕಡಿಮೆ ನೀರು ಕುಡಿಯುವುದು, ಸರಿಯಾಗಿ ಬಹಿರ್ದೆಸೆಗೆ ತೆರಳದಿರುವುದು ಇತ್ಯಾದಿ ಕಾರಣವಾಗಿ ಕಾಣುತ್ತದೆ.

Kidney Stone: ಕಿಡ್ನಿ ಸ್ಟೋನ್ ಸಮಸ್ಯೆ ಏಕೆ ಕಂಡುಬರುತ್ತದೆ? ಅದರಿಂದ ರಕ್ಷಣೆ ಹೇಗೆ? ಇಲ್ಲಿದೆ ವಿವರ
ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ
TV9 Web
| Updated By: Skanda|

Updated on: Jun 30, 2021 | 6:55 AM

Share

ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳಲ್ಲಿ ಕಿಡ್ನಿ ಸ್ಟೋನ್ ಕೂಡ ಇತ್ತೀಚೆಗೆ ಪ್ರಮುಖ ಸಮಸ್ಯೆಯಾಗಿದೆ. ಕಿಡ್ನಿ ಸ್ಟೋನ್ ಸಮಸ್ಯೆಗೆ ಇಂಥದ್ದೇ ಎಂಬ ಕಾರಣವೇನು ಇಲ್ಲದಿದ್ದರೂ ಬಹುತೇಕ ಕಿಡ್ನಿ ಸ್ಟೋನ್ ಸಮಸ್ಯೆ ಕಳಪೆ ಜೀವನಶೈಲಿಯಿಂದ ಉಂಟಾಗುತ್ತದೆ. ಅಂದರೆ, ಕಡಿಮೆ ನೀರು ಕುಡಿಯುವುದು, ಸರಿಯಾಗಿ ಬಹಿರ್ದೆಸೆಗೆ ತೆರಳದಿರುವುದು ಇತ್ಯಾದಿ ಕಾರಣವಾಗಿ ಕಾಣುತ್ತದೆ. ಯೂರಿಕ್ ಆಸಿಡ್ ಸರಿಯಾದ ಪ್ರಮಾಣದಲ್ಲಿ ಇಡಲು ಅಥವಾ ಅದು ಕರಗಲು ಸೂಕ್ತ ನೀರು ದೇಹಕ್ಕೆ ಬೇಕಾಗುತ್ತದೆ. ಹೀಗೆ ನೀರು ಬೇಕಾದಷ್ಟು ಪ್ರಮಾಣದಲ್ಲಿ ದೇಹಕ್ಕೆ ಸಿಗದೇ ಹೋದಾಗ ಕಿಡ್ನಿ ಸ್ಟೋನ್ ಕಂಡುಬರಬಹುದು. 

ಕಿಡ್ನಿ ಸ್ಟೋನ್ ಸಮಸ್ಯೆಯು ಜನರಿಗೆ ಯಾವುದೇ ವಯಸ್ಸಿನಲ್ಲಿ ಕಂಡುಬರಬಹುದು. ಹಾಗೂ ಒಂದು ಬಾರಿ ಕಿಡ್ನಿ ಸ್ಟೋನ್ ಉಂಟಾದವರಿಗೆ ಸಮಸ್ಯೆ ಮತ್ತೆ ಮರುಕಳಿಸಬಹುದು. ಯೂರಿಕ್ ಆಸಿಡ್ ಅಥವಾ ಫಾಸ್ಪೇಟ್ ಸ್ಟೋನ್​ಗಳಿಂದ ಹೀಗಾಗಬಹುದು. ಅತಿಯಾದ ಪ್ರೊಟೀನ್​ಯುಕ್ತ ಆಹಾರ ಸ್ವೀಕರಿಸುವುದು ಅಥವಾ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅತಿ ಎನಿಸುವಷ್ಟು ಸೇವಿಸುವುದು ಈ ಎರಡು ಸ್ಟೋನ್ ರೂಪಗೊಳ್ಳಲು ಕಾರಣ ಆಗಬಹುದು.

ಇದರಿಂದ ಯಾರಿಗೆ ಹೆಚ್ಚು ಆತಂಕ? ಸಕ್ಕರೆ ಖಾಯಿಲೆ ಇರುವವರಿಗೆ, ಅತಿಯಾದ ತೂಕದ ದೇಹ ಹೊಂದಿರುವವರಿಗೆ, ಹೈಪರ್ ಥೈರಾಯಿಡ್ ಸಮಸ್ಯೆ ಇರುವವರಿಗೆ, ಕಿಡ್ನಿ ಬ್ಲಾಕೇಜ್ ಇರುವವರಿಗೆ, ಅತಿಯಾದ ರಕ್ತದೊತ್ತಡ ಇರುವವರಿಗೆ ಅಥವಾ ಕಿಡ್ನಿ ಸ್ಟೋನ್​ನ ಸಮಸ್ಯೆ ಈ ಮೊದಲು ಕೌಟುಂಬಿಕ ಹಿನ್ನೆಲೆಯಲ್ಲಿ ಯಾರಿಗಾದರೂ ಕಂಡುಬಂದಿದ್ದರೆ ಅಂಥವರು ಈ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಒಳ್ಳೆಯದೇ ಆಗಿದೆ. ಹಾಗೆಂದು ಗಾಬರಿ ಪಡುವ ಅವಶ್ಯಕತೆ ಖಂಡಿತಾ ಇಲ್ಲ.

ಈ ಸಮಸ್ಯೆಗೆ ಚಿಕಿತ್ಸೆ ಏನು? ಕೆಲವು ಪ್ರಕರಣಗಳಲ್ಲಿ ಕಿಡ್ನಿ ಸ್ಟೋನ್ ಬಹಳ ಸಣ್ಣದಾಗಿರುತ್ತದೆ. ಔಷಧ ಸೇವನೆಯಿಂದಲೇ ಕಿಡ್ನಿ ಸ್ಟೋನ್ ನಿವಾರಿಸಬಹುದು. ಹೆಚ್ಚಿನ ಪ್ರಮಾಣದ ಅಥವಾ ದೊಡ್ಡ ಕಿಡ್ನಿ ಸ್ಟೋನ್ ಕಂಡುಬಂದರೆ ವೈದ್ಯರ ಸೂಚನೆಯಂತೆ ಲಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಬಹುದು. 5 ಎಮ್​ಎಮ್​ಗಿಂತ ಸಣ್ಣ ಅಳತೆಯ ಸ್ಟೋನ್​ನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಗುಣಪಡಿಸಬಹುದು ಎಂದು ಹೇಳಲಾಗುತ್ತದೆ.

ಕಿಡ್ನಿ ಸ್ಟೋನ್​ನಿಂದ ರಕ್ಷಣೆ ಪಡೆದುಕೊಳ್ಳುವುದು ಹೇಗೆ? ಕಿಡ್ನಿ ಸ್ಟೋನ್ ಕಂಡುಬಂದರೆ ಪ್ರತಿ ದಿನ ಸುಮಾರು ಮೂರು ಲೀಟರ್​ಗಳಷ್ಟು ಅಥವಾ 8ರಿಂದ 9 ಗ್ಲಾಸ್​ಗಳಷ್ಟು ನೀರು ಕುಡಿಯಬೇಕು. ದಿನವೂ ಕನಿಷ್ಠ 40 ನಿಮಿಷಗಳಷ್ಟು ಕಾಲ ದೈಹಿಕ ವ್ಯಾಯಾಮ ನಡೆಸಬೇಕು. ಸೊಪ್ಪು, ಟೊಮ್ಯಾಟೋ, ಬದನೆಕಾಯಿಯಂತಹ ತರಕಾರಿ ಸೇವನೆ ಕಡಿಮೆ ಮಾಡಬೇಕು. ಹೀಗೆ ಮಾಡುವುದರಿಂದ ಕಿಡ್ನಿ ಸ್ಟೋನ್​ನಿಂದ ರಕ್ಷಣೆಯನ್ನೂ ಪಡೆಯಬಹುದು.

ಇದನ್ನೂ ಓದಿ: Health Tips: ಒಣ ಕೆಮ್ಮಿನಿಂದ ಸುಸ್ತಾಗಿದ್ದೀರಾ? ಜೇಷ್ಠ ಮಧುವಿನ ಸೇವನೆ ಉತ್ತಮ ಔಷಧ

Health Tips: ಮಾವಿನ ಹಣ್ಣಿನ ಸಿಪ್ಪೆಯಲ್ಲಿದೆ ಹಲವು ಪ್ರಯೋಜನಗಳು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!