Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲ್ಕತ್ತಾದ ವ್ಯಕ್ತಿಗೆ ಕಿಲ್ಲರ್ ಪ್ಲಾಂಟ್ ಫಂಗಸ್‌ನಿಂದ ಸೋಂಕು; ವಿಶ್ವದಲ್ಲೇ ಮೊದಲ ಪ್ರಕರಣ!

ಈ ರೋಗಿ ಸಸ್ಯ ಮೈಕೊಲೊಜಿಸ್ಟ್ ಆಗಿದ್ದರು, ಹಾಗಾಗಿ ಕೊಳೆಯುತ್ತಿರುವ ವಸ್ತುಗಳು, ಅಣಬೆಗಳು ಮತ್ತು ವಿವಿಧ ಸಸ್ಯ ಶಿಲೀಂಧ್ರಗಳೊಂದಿಗೆ ಸಾಕಷ್ಟು ಸಮಯ ಕೆಲಸ ಮಾಡಿದ್ದಾರೆ.

ಕೊಲ್ಕತ್ತಾದ ವ್ಯಕ್ತಿಗೆ ಕಿಲ್ಲರ್ ಪ್ಲಾಂಟ್ ಫಂಗಸ್‌ನಿಂದ ಸೋಂಕು; ವಿಶ್ವದಲ್ಲೇ ಮೊದಲ ಪ್ರಕರಣ!
Kolkata Man Infected By Killer Plant Fungus In World's First Case
Follow us
ನಯನಾ ಎಸ್​ಪಿ
|

Updated on: Apr 01, 2023 | 5:11 PM

ಸಾಮಾನ್ಯವಾಗಿ ಸಸ್ಯಗಳ (Plants) ಮೇಲೆ ಪರಿಣಾಮ ಬೀರುವ ಫಂಗಸ್ ರೋಗವು ಇದೀಗ ಕೊಲ್ಕತ್ತಾದ (Kolkata) ಸಸ್ಯ ಮೈಕೊಲೊಜಿಸ್ಟ್​ನಲ್ಲಿ (Plant Microbiologist) ಪತ್ತೆಯಾಗಿದೆ. ಸಂಶೋಧಕರ ಪ್ರಕಾರ, ಫಂಗಸ್ (Fungus) ಜೊತೆಗೆ ನಿಕಟ ಸಂಪರ್ಕದಲ್ಲಿರುವಾಗ ಸಸ್ಯ ಸೋಂಕುಗಳು ಮನುಷ್ಯರಿಗೆ ಹೇಗೆ ಹರಡಬಹುದು ಎಂಬುದನ್ನು ಇದು ತೋರಿಸುತ್ತದೆ. ಈ ಕೇಸ್ ಸ್ಟಡಿಯನ್ನು ಅನುಸರಿಸುತ್ತಿರುವ ವೈದ್ಯರು ವೈದ್ಯಕೀಯ ಮೈಕಾಲಜಿ ಕೇಸ್ ರಿಪೋರ್ಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಸೋಂಕಿತ ವ್ಯಕ್ತಿಗೆ 61 ವರ್ಷ ಎಂದು ಬರೆದಿದ್ದಾರೆ. ಈ ವ್ಯಕ್ತಿ ಮೂರೂ ತಿಂಗಳಿನಿಂದ ಕರ್ಕಶ ಧ್ವನಿ, ಕೆಮ್ಮು, ಆಯಾಸ, ಮತ್ತು ನುಂವ ತೊಂದರೆಗಳಿಂದ ಬಳಲುತ್ತಿದ್ದರು. ಇದರ ಚಿಕಿತ್ಸೆಗೆಂದು ನಂತರ ಕೋಲ್ಕತ್ತಾದ ಆಸ್ಪತ್ರೆಗೆ ಹೋಗಿದ್ದಾರೆ.

ಈ ಕೇಸ್ ಸ್ಟಡಿಯನ್ನು ಅನುಸರಿಸುತ್ತಿರುವ ವೈದ್ಯರು, “ರೋಗಿಯು ಕಳೆದ ಮೂರು ತಿಂಗಳುಗಳಿಂದ ನುಂಗಲು ಮತ್ತು ಅನೋರೆಕ್ಸಿಯಾವನ್ನು ಎದುರಿಸುತ್ತಿದ್ದಾರೆ. ಅವರಿಗೆ ಮಧುಮೇಹ, ಎಚ್‌ಐವಿ ಸೋಂಕು, ಮೂತ್ರಪಿಂಡದ ಕಾಯಿಲೆ, ಯಾವುದೇ ದೀರ್ಘಕಾಲದ ಕಾಯಿಲೆ, ರೋಗನಿರೋಧಕ ಔಷಧ ಸೇವನೆ ಅಥವಾ ಆಘಾತದ ಇತಿಹಾಸವಿರಲಿಲ್ಲ. ರೋಗಿ, ವೃತ್ತಿಯಲ್ಲಿ ಸಸ್ಯ ಮೈಕೋಲಾಜಿಸ್ಟ್, ಕೊಳೆಯುತ್ತಿರುವ ವಸ್ತುಗಳು, ಅಣಬೆಗಳು ಮತ್ತು ವಿವಿಧ ಸಸ್ಯ ಶಿಲೀಂಧ್ರಗಳೊಂದಿಗೆ ದೀರ್ಘಕಾಲ ಕೆಲಸ ಮಾಡುತ್ತಿದ್ದರು.” ಎಂದು ತಿಳಿಸಿದ್ದಾರೆ.

ಸಂಶೋಧಕರಾದ ಡಾ. ಸೋಮಾ ದತ್ತಾ ಮತ್ತು ಕೋಲ್ಕತ್ತಾದ ಅಪೊಲೊ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ಸ್‌ನ ಡಾ. ಉಜ್ವಾಯಿನಿ ರೇ ಅವರು ವರದಿಯಲ್ಲಿ ಮತ್ತಷ್ಟು ವಿವರಿಸಿದರು, “ಕೊಂಡ್ರೊಸ್ಟೀರಿಯಮ್ ಪರ್ಪ್ಯೂರಿಯಮ್ ಒಂದು ಸಸ್ಯ ಫಂಗಸ್ ಆಗಿದ್ದು, ಅದು ಸಸ್ಯಗಳಲ್ಲಿ, ವಿಶೇಷವಾಗಿ ಗುಲಾಬಿ ಕುಟುಂಬದಲ್ಲಿ ಬಿಳಿ ಎಲೆ ರೋಗವನ್ನು ಉಂಟುಮಾಡುತ್ತದೆ. ಮಾನವರಲ್ಲಿ ರೋಗವನ್ನು ಉಂಟುಮಾಡುವ ಸಸ್ಯ ಫಂಗಸ್​ನ ಮೊದಲ ನಿದರ್ಶನವಿದು. ಸಾಂಪ್ರದಾಯಿಕ ತಂತ್ರಗಳು (ಸೂಕ್ಷ್ಮದರ್ಶಕ ಮತ್ತು ಸಂಸ್ಕೃತಿ) ಈ ಶಿಲೀಂಧ್ರ ಅಥವ ಪಂಗಸ್​ ಅನ್ನು ಗುರುತಿಸಲು ವಿಫಲವಾಗಿದೆ.”

“ಕೇವಲ ಅನುಕ್ರಮದ ಮೂಲಕ ಈ ಅಸಾಮಾನ್ಯ ರೋಗಕಾರಕದ ಗುರುತನ್ನು ಬಹಿರಂಗಪಡಿಸಬಹುದು. ಈ ಪ್ರಕರಣವು ಮಾನವರಲ್ಲಿ ರೋಗವನ್ನು ಉಂಟುಮಾಡುವ ಪರಿಸರ ಸಸ್ಯ ಶಿಲೀಂಧ್ರಗಳ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ ಮತ್ತು ಕಾರಣವಾದ ಶಿಲೀಂಧ್ರ ಜಾತಿಗಳನ್ನು ಗುರುತಿಸಲು ಆಣ್ವಿಕ ತಂತ್ರಗಳ (molecular techniques) ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.”

“ಕೊಳೆಯುತ್ತಿರುವ ವಸ್ತುಗಳ ಜೊತೆ ಹೆಚ್ಚು ಸಮಯವಿರುವುದು ಈ ಅಪರೂಪದ ಸೋಂಕಿಗೆ ಕಾರಣವಾಗಬಹುದು. ಶಿಲೀಂಧ್ರಗಳ ಸೋಂಕು ಮ್ಯಾಕ್ರೋಸ್ಕೋಪಿಕ್ ಮತ್ತು ಮೈಕ್ರೋಸ್ಕೋಪಿಕ್ ರೂಪವಿಜ್ಞಾನದಿಂದ ಸ್ಪಷ್ಟವಾಗಿದೆ, ಆದರೆ ಸೋಂಕಿನ ಸ್ವರೂಪ, ಪ್ರಸಾರ ಮಾಡುವ ಸಾಮರ್ಥ್ಯ ಇತ್ಯಾದಿಗಳನ್ನು ಕಂಡುಹಿಡಿಯಲಾಗಲಿಲ್ಲ.”

ಇದನ್ನೂ ಓದಿ: ನೀವು ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಹಾಸಿಗೆಯ ವಸ್ತ್ರದಂತೆ ಟೂತ್​ ಬ್ರಷ್​ ಕೂಡ ಬದಲಾಯಿಸಬೇಕು

ವೈದ್ಯರ ಪ್ರಕಾರ, ವ್ಯಕ್ತಿಯ ಕುತ್ತಿಗೆಯ ಬಾವು ಪತ್ತೆ ಮಾಡಿ ಅದನ್ನು ಹೊರಹಾಕಲು ಶಸ್ತ್ರಚಿಕಿತ್ಸಕ ಚಿಕಿತ್ಸೆ ನೀಡಲಾಯಿತು. ಇದರ ನಂತರ, ಎಕ್ಸ್-ರೇ ಅಸಹಜವಾಗಿ ಏನನ್ನೂ ಬಹಿರಂಗಪಡಿಸಲಿಲ್ಲ, ಮತ್ತು ರೋಗಿಯು ಆಂಟಿಫಂಗಲ್ ಔಷಧಿಗಳ ಕೋರ್ಸ್ ಅನ್ನು ಪಡೆದರು.

“ಎರಡು ವರ್ಷಗಳ ಅನುಸರಣೆಯ ನಂತರ, ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಮತ್ತು ಮರುಕಳಿಸುವಿಕೆಯ ಯಾವುದೇ ಪುರಾವೆಗಳಿಲ್ಲ” ಎಂದು ಸಂಶೋಧಕರು ಬರೆದಿದ್ದಾರೆ.

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ