AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ಕಟ್ಟಿದ ಮೂಗು, ಕಫ ಹೆಚ್ಚಾಗಿದೆಯೇ? ಅಜ್ವೈನ್, ಬೆಳ್ಳುಳ್ಳಿಯ ಸಾಂಪ್ರದಾಯಿಕ ಪೊಟ್ಟಣದ ಬಗ್ಗೆ ತಜ್ಞರ ಸಲಹೆ

ಶೀತದ ಸಮಯದಲ್ಲಿ ಮೂಗು ಕಟ್ಟಿಕೊಳ್ಳುವುದು ದೊಡ್ಡ ಸಮಸ್ಯೆ. ತಲೆನೋವು ಮತ್ತು ಎದೆನೋವಿನಂತಹ ಲಕ್ಷಣಗಳು ಸಹ ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ಒಂದು ಮನೆಮದ್ದು ಸಹಾಯ ಮಾಡಬಹುದು. ಇದು ವಯಸ್ಕರು ಮತ್ತು ಮಕ್ಕಳು ಇಬ್ಬರಿಗೂ ಪ್ರಯೋಜನಕಾರಿಯಾಗಿದೆ. ಈ ಬಗ್ಗೆ ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ಶ್ವೇತಾ ಶಾ ಅವರು ಮಾಹಿತಿ ನೀಡಿದ್ದು ಅಜ್ವೈನ್, ಬೆಳ್ಳುಳ್ಳಿ ಮತ್ತು ಕರ್ಪೂರ ಬಳಸಿ ತಯಾರಿಸುವ ಪೊಟ್ಟಣದ ಬಗ್ಗೆ ಮತ್ತು ಅದರ ಪ್ರಯೋಜನದ ಬಗ್ಗೆ ಹೇಳಿದ್ದಾರೆ.

ಮಳೆಗಾಲದಲ್ಲಿ ಕಟ್ಟಿದ ಮೂಗು, ಕಫ ಹೆಚ್ಚಾಗಿದೆಯೇ? ಅಜ್ವೈನ್, ಬೆಳ್ಳುಳ್ಳಿಯ ಸಾಂಪ್ರದಾಯಿಕ ಪೊಟ್ಟಣದ ಬಗ್ಗೆ ತಜ್ಞರ ಸಲಹೆ
Stuffy Nose ReliefImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Aug 22, 2026 | 7:00 PM

Share

ಮುಖ್ಯಾಂಶಗಳು

  • ಅಜ್ವೈನ್, ಬೆಳ್ಳುಳ್ಳಿ, ಕರ್ಪೂರ ಬಳಸಿ ಪೊಟ್ಟಣವನ್ನು ಹೇಗೆ ತಯಾರಿಸಬೇಕು?
  • ಅಜ್ವೈನ್, ಬೆಳ್ಳುಳ್ಳಿ, ಕರ್ಪೂರ.. ಮೂಗು ಕಟ್ಟಿದಾಗ ಬಳಸುವ ಈ ಪೊಟ್ಟಣ ಎಷ್ಟು ಸುರಕ್ಷಿತ?
  • ಕಟ್ಟಿದ ಮೂಗು, ಕಫ ಕಡಿಮೆ ಮಾಡಲು ಈ ಅಜ್ವೈನ್-ಬೆಳ್ಳುಳ್ಳಿ ಪೊಟ್ಟಣ ಹೇಗೆ ಸಹಕಾರಿ

ಮಳೆಗಾಲದಲ್ಲಿ ಹವಾಮಾನದಲ್ಲಾಗುವ ಬದಲಾವಣೆ, ತೇವಾಂಶ ಮತ್ತು ವೈರಲ್ ಸೋಂಕುಗಳ ಕಾರಣದಿಂದ ಜ್ವರ, ಶೀತ, ಕೆಮ್ಮು ಮತ್ತು ಮೂಗು ಕಟ್ಟುವ ಸಮಸ್ಯೆ ಹೆಚ್ಚಾಗಬಹುದು. ವಿಶೇಷವಾಗಿ ಮೂಗು ಕಟ್ಟಿಕೊಳ್ಳುವುದು, ಕಫ, ಎದೆ ಬಿಗಿತ ಮತ್ತು ಸೈನಸ್ ಭಾಗದಲ್ಲಿ ಭಾರವಾಗಿರುವ ಅನುಭವ ರಾತ್ರಿ ನಿದ್ರೆಗೆ ತೊಂದರೆ ಉಂಟುಮಾಡಬಹುದು. ಇಂತಹ ಸಂದರ್ಭಗಳಲ್ಲಿ ಮನೆಯಲ್ಲಿರುವ ಕೆಲವು ವಸ್ತು ಅಥವಾ ಪದಾರ್ಥಗಳಿಂದ ತಯಾರಿಸುವ ಸಾಂಪ್ರದಾಯಿಕ ಪೊಟ್ಟಣದ ಬಗ್ಗೆ ನೀವು ತಿಳಿಯಲೇಬೇಕು. ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ಶ್ವೇತಾ ಶಾ ಅವರು ಅಜ್ವೈನ್, ಬೆಳ್ಳುಳ್ಳಿ ಮತ್ತು ಕರ್ಪೂರ ಬಳಸಿ ತಯಾರಿಸುವ ಪೊಟ್ಟಣದ ಬಗ್ಗೆ ತಿಳಿಸಿಕೊಟ್ಟಿದ್ದು ಮಕ್ಕಳು ಬಳಸುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ ಎಂದಿದ್ದಾರೆ.

ಪೊಟ್ಟಣ ಹೇಗೆ ತಯಾರಿಸಲಾಗುತ್ತದೆ?

ಈ ಸಾಂಪ್ರದಾಯಿಕ ವಿಧಾನಕ್ಕೆ ಬೇಕಾಗುವ ವಸ್ತುಗಳು:

  • 50 ಗ್ರಾಂ ಅಜ್ವೈನ್
  • 2 ಬೆಳ್ಳುಳ್ಳಿ ಎಸಳು
  • ಕರ್ಪೂರದ ಒಂದು ಸಣ್ಣ ತುಂಡು
  • ಚಿಕ್ಕ ಹತ್ತಿ ಬಟ್ಟೆ

ಅಜ್ವೈನ್, ಬೆಳ್ಳುಳ್ಳಿ ಮತ್ತು ಕರ್ಪೂರವನ್ನು ಹತ್ತಿ ಬಟ್ಟೆಯಲ್ಲಿ ಹಾಕಿ ಸಣ್ಣ ಪೊಟ್ಟಣದಂತೆ ಕಟ್ಟಲಾಗುತ್ತದೆ.

ಪೊಟ್ಟಣವನ್ನು ಬಿಸಿ ಮಾಡುವುದು ಹೇಗೆ?

ಸಾಮಾನ್ಯವಾಗಿ ಪೊಟ್ಟಣವನ್ನು ಸುಮಾರು 2 ನಿಮಿಷಗಳ ಕಾಲ ಮೈಕ್ರೋವೇವ್‌ನಲ್ಲಿ ಬಿಸಿ ಮಾಡಬಹುದು. ಮೈಕ್ರೋವೇವ್ ಇಲ್ಲದಿದ್ದರೆ ತವೆಯ ಮೇಲೆ ಸ್ವಲ್ಪ ಬಿಸಿ ಮಾಡಬಹುದು. ಆದರೆ ಕರ್ಪೂರವನ್ನು ಬಿಸಿ ಮಾಡುವ ವಿಧಾನದಲ್ಲಿ ವಿಶೇಷ ಎಚ್ಚರಿಕೆ ಅಗತ್ಯ. ಕರ್ಪೂರ ಸುಲಭವಾಗಿ ಹೊತ್ತಿಕೊಳ್ಳುವ ವಸ್ತುವಾಗಿರುವುದರಿಂದ ಮೈಕ್ರೋವೇವ್ ಅಥವಾ ನೇರ ಬೆಂಕಿಯಲ್ಲಿ ಬಿಸಿ ಮಾಡುವುದು ಸುರಕ್ಷಿತವಲ್ಲ. ಆದ್ದರಿಂದ ಕರ್ಪೂರ ಇರುವ ಪೊಟ್ಟಣವನ್ನು ಬಿಸಿ ಮಾಡುವ ಮೊದಲು ಸುರಕ್ಷತೆ ವಹಿಸುವುದು ಬಹಳ ಮುಖ್ಯ.

ಮೂಗು ಕಟ್ಟಿದಾಗ ಇದನ್ನು ಹೇಗೆ ಬಳಸುತ್ತಾರೆ?

ಸಾಂಪ್ರದಾಯಿಕವಾಗಿ ಬಿಸಿ ಪೊಟ್ಟಣದಿಂದ ಮೂಗಿನ ಸುತ್ತಲಿನ ಸೈನಸ್ ಪ್ರದೇಶ, ಕಿವಿಯ ಸುತ್ತಮುತ್ತ, ತಲೆಯ ಮೇಲ್ಭಾಗ ಮತ್ತು ಎದೆಯ ಭಾಗಕ್ಕೆ ಸೌಮ್ಯವಾಗಿ ಬಿಸಿಯ ಶಾಖ ನೀಡಲಾಗುತ್ತದೆ. ಇದರಿಂದ ಬಿಸಿಯ ಅನುಭವ ಸಿಗುವುದರಿಂದ ತಾತ್ಕಾಲಿಕವಾಗಿ ಮೂಗಿನ ಕಟ್ಟುವಿಕೆ ಅಥವಾ ಸ್ನಾಯುಗಳ ಅಸ್ವಸ್ಥತೆಯಲ್ಲಿ ಆರಾಮವಾಗಬಹುದು. ಆದರೆ ಇದು ಮೂಗಿನ ಸೋಂಕು ಅಥವಾ ಕಫಕ್ಕೆ ಚಿಕಿತ್ಸೆ ನೀಡುತ್ತದೆ ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಸಾಕ್ಷ್ಯವಿಲ್ಲ. ಪೊಟ್ಟಣವನ್ನು ಚರ್ಮಕ್ಕೆ ಇಡುವ ಮೊದಲು ಅದರ ತಾಪಮಾನವನ್ನು ಕೈಯಿಂದ ಪರೀಕ್ಷಿಸಬೇಕು. ತುಂಬಾ ಬಿಸಿಯಾಗಿದ್ದರೆ ಸುಟ್ಟ ಗಾಯ ಉಂಟಾಗಬಹುದು.

ಮೂಗು ಕಟ್ಟುವಿಕೆ ಮತ್ತು ಕಫ ಕಡಿಮೆ ಮಾಡಲು ಇನ್ನೇನು ಮಾಡಬಹುದು?

ಸಾಮಾನ್ಯ ಶೀತ ಅಥವಾ ವೈರಲ್ ಸೋಂಕಿನ ಸಂದರ್ಭದಲ್ಲಿ:

  • ಸಾಕಷ್ಟು ನೀರು ಮತ್ತು ಬೆಚ್ಚಗಿನ ದ್ರವಗಳನ್ನು ಸೇವಿಸಿ.
  • ವಿಶ್ರಾಂತಿ ಪಡೆಯಿರಿ.
  • ಕೋಣೆಯಲ್ಲಿ ತೇವಾಂಶ ಸಮತೋಲನದಲ್ಲಿರುವಂತೆ ನೋಡಿಕೊಳ್ಳಿ.
  • ಮೂಗಿಗೆ (saline) ಸ್ಪ್ರೇ ಅಥವಾ ಡ್ರಾಪ್ಸ್ ವೈದ್ಯರ ಸಲಹೆಯಂತೆ ಬಳಸಬಹುದು.
  • ಹೊಗೆ, ಧೂಳು ಮತ್ತು ಇತರ ಕಿರಿಕಿರಿಯುಂಟುಮಾಡುವ ವಸ್ತುಗಳಿಂದ ದೂರವಿರಿ.
  • ಮಕ್ಕಳಿಗೆ ಕರ್ಪೂರ ಬಳಸುವಾಗ ಎಚ್ಚರಿಕೆ ವಹಿಸಿ.

ಮಕ್ಕಳ ಮೂಗು ಅಥವಾ ಎದೆಯ ಮೇಲೆ ಕರ್ಪೂರವನ್ನು ನೇರವಾಗಿ ಹಚ್ಚಬೇಡಿ. ಕರ್ಪೂರವನ್ನು ನುಂಗಿದರೆ ಅಥವಾ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಸೇರಿದರೆ ವಿಷಕಾರಿ ಪರಿಣಾಮ ಉಂಟಾಗಬಹುದು. ಚಿಕ್ಕ ಮಕ್ಕಳಿಗೆ ಬಿಸಿ ಪೊಟ್ಟಣದಿಂದಲೂ ಸುಟ್ಟ ಗಾಯವಾಗುವ ಅಪಾಯವಿದೆ. ಆದ್ದರಿಂದ ಮಕ್ಕಳಿಗೆ ಇಂತಹ ಮನೆಮದ್ದು ಮಾಡುವ ಮೊದಲು ಮಕ್ಕಳ ವೈದ್ಯರ ಸಲಹೆ ಪಡೆಯುವುದು ಸುರಕ್ಷಿತ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಮೂಗು ಕಟ್ಟುವುದು ಅಥವಾ ಕಫ ಸಾಮಾನ್ಯ ಶೀತದ ಭಾಗವಾಗಿರಬಹುದು. ಆದರೆ ಉಸಿರಾಟಕ್ಕೆ ತೊಂದರೆ, ಎದೆ ನೋವು, ನಿರಂತರ ಅಥವಾ ಹೆಚ್ಚುತ್ತಿರುವ ಜ್ವರ, ತೀವ್ರ ಮುಖದ ನೋವು, ರಕ್ತ ಮಿಶ್ರಿತ ಕಫ ಅಥವಾ ಹಲವು ದಿನಗಳಾದರೂ ಲಕ್ಷಣಗಳು ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಮನೆಮದ್ದುಗಳು ತಾತ್ಕಾಲಿಕ ಆರಾಮ ನೀಡಬಹುದು; ಆದರೆ ಸೋಂಕು ಅಥವಾ ಇತರ ಆರೋಗ್ಯ ಸಮಸ್ಯೆಗೆ ಅಗತ್ಯವಿರುವ ವೈದ್ಯರ ಸಲಹೆ ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?