AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಕೈ ಬೆರಳುಗಳಲ್ಲಿ ಊತ ಉಂಟಾಗಿದೆಯೇ? ಈ ಮನೆಮದ್ದುಗಳು ನಿಮ್ಮ ನೆರವಿಗೆ ಇದೆ ಪರಿಶೀಲಿಸಿ

ಊತದ ಸಮಯದಲ್ಲಿ ಬೆರಳುಗಳಲ್ಲಿ ಕೆಂಪಾಗುವುದು ಮತ್ತು ಸಾಕಷ್ಟು ನೋವು ಇರುತ್ತದೆ. ನೀವು ಪ್ರತಿ ಬಾರಿ ಚಳಿಗಾಲದಲ್ಲಿ ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ ಈ ಕೆಲವು ಮನೆಮದ್ದುಗಳನ್ನು ಬಳಸಿ.

Health Tips: ಕೈ ಬೆರಳುಗಳಲ್ಲಿ ಊತ ಉಂಟಾಗಿದೆಯೇ? ಈ ಮನೆಮದ್ದುಗಳು ನಿಮ್ಮ ನೆರವಿಗೆ ಇದೆ ಪರಿಶೀಲಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Jan 22, 2022 | 7:33 AM

ತಣ್ಣನೆಯ ಗಾಳಿಯಿಂದಾಗಿ ಜನರು ಕಂಗಾಲಾಗಿದ್ದಾರೆ. ಶೀತದ ಪ್ರಭಾವದಿಂದಾಗಿ, ಅನೇಕರಿಗೆ ಕೈ(Finger) ಮತ್ತು ಕಾಲುಗಳ ಬೆರಳುಗಳಲ್ಲಿ ಊತದ ಸಮಸ್ಯೆ ಇರುತ್ತದೆ. ವಾಸ್ತವವಾಗಿ, ಶೀತದ (Cold) ಪ್ರಭಾವದಿಂದಾಗಿ ದೇಹದ ಕೆಲವು ನರಗಳು ಕುಗ್ಗುತ್ತವೆ. ಇದರ ನೇರ ಪರಿಣಾಮವು ರಕ್ತ ಪರಿಚಲನೆಯ(Blood Circulation) ಮೇಲೆ ಬೀಳುತ್ತದೆ. ಇದರಿಂದಾಗಿ ಬೆರಳುಗಳು ಮತ್ತು ಕಾಲ್ಬೆರಳುಗಳಲ್ಲಿ ಊತ ಉಂಟಾಗುತ್ತದೆ. ಊತದ ಸಮಯದಲ್ಲಿ ಬೆರಳುಗಳಲ್ಲಿ ಕೆಂಪಾಗುವುದು ಮತ್ತು ಸಾಕಷ್ಟು ನೋವು ಇರುತ್ತದೆ. ನೀವು ಪ್ರತಿ ಬಾರಿ ಚಳಿಗಾಲದಲ್ಲಿ ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ ಈ ಕೆಲವು ಮನೆಮದ್ದುಗಳನ್ನು ಬಳಸಿ.

ಸಾಸಿವೆ ಎಣ್ಣೆ

ಉರಿಯೂತದ ಸಮಸ್ಯೆಯನ್ನು ಹೋಗಲಾಡಿಸಲು ಸಾಸಿವೆ ಎಣ್ಣೆಯಲ್ಲಿ ಸುಮಾರು ಒಂದು ಚಮಚ ಕಲ್ಲು ಉಪ್ಪು ಮತ್ತು ಕೆಲವು ಬೆಳ್ಳುಳ್ಳಿ ಎಸಳುಗಳನ್ನು ಹಾಕಿ. ನಂತರ ಈ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿ. ರಾತ್ರಿ ಮಲಗುವಾಗ ಇದನ್ನು ಕಾಲ್ಬೆರಳುಗಳಿಗೆ ಹಚ್ಚಿ ಸಾಕ್ಸ್ ಧರಿಸಿ ಕೈ ಬೆರಳುಗಳಿಗೆ ಗ್ಲೌಸ್ ಹಾಕಿಕೊಳ್ಳಿ. ಹೀಗೆ ಎರಡರಿಂದ ಮೂರು ದಿನಗಳ ಕಾಲ ನಿರಂತರವಾಗಿ ಮಾಡುವುದರಿಂದ ಊತ ಕಡಿಮೆಯಾಗುತ್ತದೆ.

ಈರುಳ್ಳಿ ಕೂಡ ಪ್ರಯೋಜನಕಾರಿಯಾಗಿದೆ

ಉರಿಯೂತದ ಸಮಸ್ಯೆಯನ್ನು ತೆಗೆದುಹಾಕಲು ಈರುಳ್ಳಿ ಸಹ ಉಪಯುಕ್ತವಾಗಿದೆ. ಈರುಳ್ಳಿಯಲ್ಲಿ ನಂಜುನಿರೋಧಕ ಮತ್ತು ಆ್ಯಂಟಿಬಯೋಟಿಕ್ ಗುಣವಿದ್ದು, ಇದು ದೇಹದ ಉರಿಯೂತವನ್ನು ಕಡಿಮೆ ಮಾಡುವುದರ ಜೊತೆಗೆ ತುರಿಕೆ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ನೀವು ಈರುಳ್ಳಿಯ ರಸವನ್ನು ತೆಗೆದುಕೊಂಡು ಅದನ್ನು ಬೆರಳುಗಳ ಮೇಲೆ ಹಚ್ಚಿ. ಸುಮಾರು ಅರ್ಧ ಗಂಟೆಯ ನಂತರ ಉಗುರುಬೆಚ್ಚಗಿನ ನೀರಿನಿಂದ ನಿಮ್ಮ ಕೈಕಾಲುಗಳನ್ನು ತೊಳೆಯಿರಿ.

ನಿಂಬೆ ರಸ

ನಿಂಬೆಯನ್ನು ಕತ್ತರಿಸಿ ಸ್ವಲ್ಪ ಬಿಸಿ ಮಾಡಿ ಮತ್ತು ಅದರ ರಸವನ್ನು ಬೆರಳುಗಳ ಮೇಲೆ ಹಚ್ಚಿ. ನಿಂಬೆ ರಸವು ಉರಿಯೂತವನ್ನು ತೆಗೆದುಹಾಕಲು ಕೆಲಸ ಮಾಡುತ್ತದೆ.

ಆಲಿವ್ ಎಣ್ಣೆ ಮತ್ತು ಅರಿಶಿಣ

ಉರಿಯೂತದ ಸಮಸ್ಯೆಯನ್ನು ತೆಗೆದುಹಾಕಲು ಆಲಿವ್ ಎಣ್ಣೆಯು ತುಂಬಾ ಉಪಯುಕ್ತವಾಗಿದೆ. ಇದನ್ನು ಬೆಚ್ಚಗಾಗಿಸಿ ಮತ್ತು ಅದರಲ್ಲಿ ಅರಿಶಿಣವನ್ನು ಮಿಶ್ರಣ ಮಾಡಿ ಮತ್ತು ಪೀಡಿತ ಪ್ರದೇಶಕ್ಕೆ ಅನ್ವಯಿಸಿ. ಈ ಕಾರಣದಿಂದಾಗಿ ಉರಿಯೂತವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಬಿಡಿ

ಈ ಸಮಸ್ಯೆಯು ನಿಮ್ಮನ್ನು ತುಂಬಾ ಕಾಡುತ್ತಿದ್ದರೆ, ಪ್ರತಿದಿನ ರಾತ್ರಿಯಲ್ಲಿ ನಿಮ್ಮ ಕೈ ಮತ್ತು ಕಾಲ್ಬೆರಳುಗಳನ್ನು ನೀರಿನಲ್ಲಿ ಸ್ವಲ್ಪಹೊತ್ತು ಹಾಗೆಯೇ ಇರಿಸಿ. ನಂತರ ನಿಮ್ಮ ಪಾದಗಳಿಗೆ ಸಾಕ್ಸ್ ಮತ್ತು ನಿಮ್ಮ ಕೈಯಲ್ಲಿ ಕೈಗವಸುಗಳನ್ನು ಧರಿಸಿ ಮಲಗಿಕೊಳ್ಳಿ. ಇದರಿಂದ ಸಾಕಷ್ಟು ಸಮಾಧಾನವೂ ಸಿಗಲಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ನಿಮ್ಮ ತ್ವಚೆಯ ಕಾಳಜಿಗೆ ಹೆಚ್ಚಿನ ಗಮನ ನೀಡಿ; ಸರಿಯಾದ ಆಯ್ಕೆ ಬಗ್ಗೆ ಇಲ್ಲಿದೆ ಮಾಹಿತಿ

ಜ್ವರ ಮತ್ತು ಸ್ನಾಯು ದೌರ್ಬಲ್ಯ ಕೊವಿಡ್ ಮೂರನೇ ಅಲೆಯಲ್ಲಿ ಕಂಡು ಬರುವ ಸಾಮಾನ್ಯ ರೋಗ ಲಕ್ಷಣಗಳು: ಕೇಂದ್ರ

ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ರಾಕೇಶ್ ಪೂಜಾರಿ ಸಾವಿನ ಬಗ್ಗೆ ಸಾಕಷ್ಟು ವದಂತಿ; ರೂಮ್​ಮೇಟ್ ಹೇಳಿದ್ದೇನು?
ರಾಕೇಶ್ ಪೂಜಾರಿ ಸಾವಿನ ಬಗ್ಗೆ ಸಾಕಷ್ಟು ವದಂತಿ; ರೂಮ್​ಮೇಟ್ ಹೇಳಿದ್ದೇನು?
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪ್ರಧಾನಿ ಮೋದಿಗಾಗಿ ಸುಳ್ಯದಲ್ಲಿ ಕೊರಗಜ್ಜನಿಗೆ ಹರಕೆ ತೀರಿಸಿದ ವಿಜಯೇಂದ್ರ
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ