AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Leech: ಉಂಬಳ ಕಚ್ಚಿದಾಗ ಆಗುವ ರಕ್ತಸ್ರಾವ ತಡೆಯಲು ಏನು ಮಾಡಬೇಕು?

ಮಳೆಗಾಲ ಅಂದರೆ ಸಾಕು, ನೆನಪಿಗೆ ಬರುವುದು ಮಲೆನಾಡಿನ ಉಂಬಳಗಳು, ಮಲೆನಾಡಿನ ಬೆಟ್ಟ, ಗುಡ್ಡ ಮುಂತಾದ ಪ್ರದೇಶಗಳಲ್ಲಿ,ವಿವಿಧ ಜಲಪಾತ ನೋಡಲು ಓಡಾಡುವ ಜನರ ರಕ್ತ ಹೀರಲು ಆರಂಭಿಸಿಬಿಡುತ್ತವೆ.

Leech: ಉಂಬಳ ಕಚ್ಚಿದಾಗ ಆಗುವ ರಕ್ತಸ್ರಾವ ತಡೆಯಲು ಏನು ಮಾಡಬೇಕು?
Leech
TV9 Web
| Edited By: |

Updated on:Jul 18, 2022 | 11:13 AM

Share

ಮಳೆಗಾಲ ಅಂದರೆ ಸಾಕು, ನೆನಪಿಗೆ ಬರುವುದು ಮಲೆನಾಡಿನ ಉಂಬಳಗಳು, ಮಲೆನಾಡಿನ ಬೆಟ್ಟ, ಗುಡ್ಡ ಮುಂತಾದ ಪ್ರದೇಶಗಳಲ್ಲಿ,ವಿವಿಧ ಜಲಪಾತ ನೋಡಲು ಓಡಾಡುವ ಜನರ ರಕ್ತ ಹೀರಲು ಆರಂಭಿಸಿಬಿಡುತ್ತವೆ. ಉಂಬಳಗಳು ಮನುಷ್ಯನ ವಾಸನೆಯನ್ನು ಗ್ರಹಿಸಿ , ಹುಡುಕಿ ಕಚ್ಚುತ್ತವೆ. ಈ ಸಮಯದಲ್ಲೆಲ್ಲ ಬೆಟ್ಟ, ಗುಡ್ಡಗಳಲ್ಲಿ ಓಡಾಡಿದರಂತೂ ಮುಗಿದೇ ಹೋಯಿತು. ಒಂದಲ್ಲ ಎರಡಲ್ಲ ನಾಲ್ಕಾರು ಉಂಬಳಗಳು ಕಚ್ಚಿ ರಕ್ತಹೀರುತ್ತವೆ.

ಕೆಲವೊಮ್ಮೆ ಅವು ಕಚ್ಚಿದ್ದು ಗೊತ್ತಾಗದೇ ಹೊಟ್ಟೆತುಂಬಾ ಕುಡಿದು ಅವೇ ಉದುರಿ ಬೀಳುತ್ತವೆ. ಪ್ರವಾಸಿ ಸ್ಥಳಗಳಿಗೆ ಬರುವ ಪ್ರವಾಸಿಗರಿಗೆ ಉಂಬಳ ಕಚ್ಚಿದರೆ ಅವರ ಸ್ಥಿತಿಯಂತೂ ಯಾರಿಗೂ ಬೇಡ ಇನ್ನೂ ಅವರು ಮಲೆನಾಡಿನ ಕಡೆ ಮುಖಮಾಡುವದಿಲ್ಲ.

ಚಿಕ್ಕಗಾತ್ರದ ರಬ್ಬರ್ ನಂತಹ ದೇಹದ ಜೀವಿ ಕೇವಲ 2-4 ಇಂಚು ಉದ್ದ ಇರುವ ಈ ಜೀವಿಯು ತನ್ನ ದೇಹದ ತುದಿಭಾಗದ ಬಾಯಿಯಿಂದ ಮನುಷ್ಯರ ಅಥವಾ ಪ್ರಾಣಿಗಳ ಕಾಲುಗಳನ್ನು ಹಿಡಿದು ದೇಹಕ್ಕೆ ಅಂಟಿಕೊಂಡು ಬಿಡುತ್ತದೆ. ಈ ಜೀವಿ ದೇಹಕ್ಕೆ ಅಂಟಿಕೊಂಡಿರುವುದು ಗೊತ್ತಾಗುವುದೇ ಇಲ್ಲ.

ಸ್ವಲ್ಪವೂ ನೋವಾಗದಂತೆ ರಕ್ತ ಹೀರುವ ಈ ಜೀವಿಗಿರುವ ವೈಶಿಷ್ಟ್ಯತೆ ಇನ್ಯಾವ ಜೀವಿಗೂ ಇಲ್ಲ,. ಆದರೆ ಈ ಜೀವ ರಕ್ತ ಹೀರಿದ್ದರಿಂದ ಸ್ವಲ್ಪ ರಕ್ತ ನಷ್ಟವಾಗುತ್ತದೆಂಬುದನ್ನು ಬಿಟ್ಟರೆ ಕಚ್ಚಿಸಿಕೊಂಡವರಿಗೆ ಬೇರೆ ಯಾವ ಅಪಾಯವೂ ಇಲ್ಲ. ಆದರೆ ಈ ಜೀವಿ ರಕ್ತ ಹೀರಿ ಬಿದ್ದು ಹೋದ ಮೇಲೆ ರಕ್ತಸ್ರಾವ ಆಗುತ್ತದೆ.

ಇದು ಕಾಲಿಗೆ ಏರದಂತೆ ಮಾಡಿಕೊಳ್ಳುವುದು ಹೆಚ್ಚು ಜಾಣತನ. ಇನ್ನು ಕೆಲವು ಹಳ್ಳಿಗರು ತೋಟದ ಗದ್ದೆಯ ಕೆಲಸಕ್ಕೆ ಹೋಗುವಾಗ ತಂಬಾಕಿನ ಎಲೆಯಿಂದ ಮಾಡಿದಂತಹ ಎಣ್ಣೆ ಹಚ್ಚಿಕೊಂಡು ಹೋಗುವ ವಾಡಿಕೆ ಇದೆ. ಇನ್ನು ಕೆಲವರು ತಂಬಾಕು ಎಸಳನ್ನ ನೆನೆಸಿಕೊಂಡು ಕಾಲಿಗೆ ಹಚ್ಚುತ್ತಾ ಹೋಗುವುದು ಇದೆ.

ಇದು ಕಚ್ಚಿದಾಗ ಹಿರುಡಿನ್ ಎಂಬ ರಾಸಾಯನಿಕವನ್ನು ಉಂಬಳ ಮನುಷ್ಯನ ದೇಹದಲ್ಲಿ ಸ್ರವಿಸುತ್ತದೆ ಇದರಿಂದ ರಕ್ತಸ್ರಾವ ಕೂಡಲೇ ನಿಲ್ಲುವುದಿಲ್ಲ. ಇದು ಕಚ್ಚಿದ ಸ್ಥಳದಲ್ಲಿ ಸಾಮಾನ್ಯವಾಗಿ ಸುಣ್ಣವನ್ನು ಹಚ್ಚುತ್ತಾರೆ.

ಉಂಬಳ ಕಚ್ಚಿದಾಗ ಆಗುವ ರಕ್ತಸ್ರಾವ ನಿಲ್ಲದಂತೆ ಕಂಡರೆ ರಕ್ತಸ್ರಾವ ನಿಲ್ಲಲು ಅತ್ಯಂತ ಸುಲಭ ಉಪಾಯ ಎಂದರೆ ಪಟಕದ ಪುಡಿಯನ್ನು ಹಾಕುವುದು. ಪಟಕ ಎಂದರೆ ಪೊಟ್ಯಾಷ್ ಆಲಮ್ ಇದನ್ನು ಸಾಮಾನ್ಯವಾಗಿ ಗಣಕು ನೀರನ್ನ ಶುದ್ಧ ಮಾಡಲು ಉಪಯೋಗಿಸುತ್ತಾರೆ. (ಡಾ. ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು)

Published On - 10:25 am, Mon, 18 July 22

ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?