AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Leech: ಉಂಬಳ ಕಚ್ಚಿದಾಗ ಆಗುವ ರಕ್ತಸ್ರಾವ ತಡೆಯಲು ಏನು ಮಾಡಬೇಕು?

ಮಳೆಗಾಲ ಅಂದರೆ ಸಾಕು, ನೆನಪಿಗೆ ಬರುವುದು ಮಲೆನಾಡಿನ ಉಂಬಳಗಳು, ಮಲೆನಾಡಿನ ಬೆಟ್ಟ, ಗುಡ್ಡ ಮುಂತಾದ ಪ್ರದೇಶಗಳಲ್ಲಿ,ವಿವಿಧ ಜಲಪಾತ ನೋಡಲು ಓಡಾಡುವ ಜನರ ರಕ್ತ ಹೀರಲು ಆರಂಭಿಸಿಬಿಡುತ್ತವೆ.

Leech: ಉಂಬಳ ಕಚ್ಚಿದಾಗ ಆಗುವ ರಕ್ತಸ್ರಾವ ತಡೆಯಲು ಏನು ಮಾಡಬೇಕು?
Leech
Follow us
TV9 Web
| Updated By: ನಯನಾ ರಾಜೀವ್

Updated on:Jul 18, 2022 | 11:13 AM

ಮಳೆಗಾಲ ಅಂದರೆ ಸಾಕು, ನೆನಪಿಗೆ ಬರುವುದು ಮಲೆನಾಡಿನ ಉಂಬಳಗಳು, ಮಲೆನಾಡಿನ ಬೆಟ್ಟ, ಗುಡ್ಡ ಮುಂತಾದ ಪ್ರದೇಶಗಳಲ್ಲಿ,ವಿವಿಧ ಜಲಪಾತ ನೋಡಲು ಓಡಾಡುವ ಜನರ ರಕ್ತ ಹೀರಲು ಆರಂಭಿಸಿಬಿಡುತ್ತವೆ. ಉಂಬಳಗಳು ಮನುಷ್ಯನ ವಾಸನೆಯನ್ನು ಗ್ರಹಿಸಿ , ಹುಡುಕಿ ಕಚ್ಚುತ್ತವೆ. ಈ ಸಮಯದಲ್ಲೆಲ್ಲ ಬೆಟ್ಟ, ಗುಡ್ಡಗಳಲ್ಲಿ ಓಡಾಡಿದರಂತೂ ಮುಗಿದೇ ಹೋಯಿತು. ಒಂದಲ್ಲ ಎರಡಲ್ಲ ನಾಲ್ಕಾರು ಉಂಬಳಗಳು ಕಚ್ಚಿ ರಕ್ತಹೀರುತ್ತವೆ.

ಕೆಲವೊಮ್ಮೆ ಅವು ಕಚ್ಚಿದ್ದು ಗೊತ್ತಾಗದೇ ಹೊಟ್ಟೆತುಂಬಾ ಕುಡಿದು ಅವೇ ಉದುರಿ ಬೀಳುತ್ತವೆ. ಪ್ರವಾಸಿ ಸ್ಥಳಗಳಿಗೆ ಬರುವ ಪ್ರವಾಸಿಗರಿಗೆ ಉಂಬಳ ಕಚ್ಚಿದರೆ ಅವರ ಸ್ಥಿತಿಯಂತೂ ಯಾರಿಗೂ ಬೇಡ ಇನ್ನೂ ಅವರು ಮಲೆನಾಡಿನ ಕಡೆ ಮುಖಮಾಡುವದಿಲ್ಲ.

ಚಿಕ್ಕಗಾತ್ರದ ರಬ್ಬರ್ ನಂತಹ ದೇಹದ ಜೀವಿ ಕೇವಲ 2-4 ಇಂಚು ಉದ್ದ ಇರುವ ಈ ಜೀವಿಯು ತನ್ನ ದೇಹದ ತುದಿಭಾಗದ ಬಾಯಿಯಿಂದ ಮನುಷ್ಯರ ಅಥವಾ ಪ್ರಾಣಿಗಳ ಕಾಲುಗಳನ್ನು ಹಿಡಿದು ದೇಹಕ್ಕೆ ಅಂಟಿಕೊಂಡು ಬಿಡುತ್ತದೆ. ಈ ಜೀವಿ ದೇಹಕ್ಕೆ ಅಂಟಿಕೊಂಡಿರುವುದು ಗೊತ್ತಾಗುವುದೇ ಇಲ್ಲ.

ಸ್ವಲ್ಪವೂ ನೋವಾಗದಂತೆ ರಕ್ತ ಹೀರುವ ಈ ಜೀವಿಗಿರುವ ವೈಶಿಷ್ಟ್ಯತೆ ಇನ್ಯಾವ ಜೀವಿಗೂ ಇಲ್ಲ,. ಆದರೆ ಈ ಜೀವ ರಕ್ತ ಹೀರಿದ್ದರಿಂದ ಸ್ವಲ್ಪ ರಕ್ತ ನಷ್ಟವಾಗುತ್ತದೆಂಬುದನ್ನು ಬಿಟ್ಟರೆ ಕಚ್ಚಿಸಿಕೊಂಡವರಿಗೆ ಬೇರೆ ಯಾವ ಅಪಾಯವೂ ಇಲ್ಲ. ಆದರೆ ಈ ಜೀವಿ ರಕ್ತ ಹೀರಿ ಬಿದ್ದು ಹೋದ ಮೇಲೆ ರಕ್ತಸ್ರಾವ ಆಗುತ್ತದೆ.

ಇದು ಕಾಲಿಗೆ ಏರದಂತೆ ಮಾಡಿಕೊಳ್ಳುವುದು ಹೆಚ್ಚು ಜಾಣತನ. ಇನ್ನು ಕೆಲವು ಹಳ್ಳಿಗರು ತೋಟದ ಗದ್ದೆಯ ಕೆಲಸಕ್ಕೆ ಹೋಗುವಾಗ ತಂಬಾಕಿನ ಎಲೆಯಿಂದ ಮಾಡಿದಂತಹ ಎಣ್ಣೆ ಹಚ್ಚಿಕೊಂಡು ಹೋಗುವ ವಾಡಿಕೆ ಇದೆ. ಇನ್ನು ಕೆಲವರು ತಂಬಾಕು ಎಸಳನ್ನ ನೆನೆಸಿಕೊಂಡು ಕಾಲಿಗೆ ಹಚ್ಚುತ್ತಾ ಹೋಗುವುದು ಇದೆ.

ಇದು ಕಚ್ಚಿದಾಗ ಹಿರುಡಿನ್ ಎಂಬ ರಾಸಾಯನಿಕವನ್ನು ಉಂಬಳ ಮನುಷ್ಯನ ದೇಹದಲ್ಲಿ ಸ್ರವಿಸುತ್ತದೆ ಇದರಿಂದ ರಕ್ತಸ್ರಾವ ಕೂಡಲೇ ನಿಲ್ಲುವುದಿಲ್ಲ. ಇದು ಕಚ್ಚಿದ ಸ್ಥಳದಲ್ಲಿ ಸಾಮಾನ್ಯವಾಗಿ ಸುಣ್ಣವನ್ನು ಹಚ್ಚುತ್ತಾರೆ.

ಉಂಬಳ ಕಚ್ಚಿದಾಗ ಆಗುವ ರಕ್ತಸ್ರಾವ ನಿಲ್ಲದಂತೆ ಕಂಡರೆ ರಕ್ತಸ್ರಾವ ನಿಲ್ಲಲು ಅತ್ಯಂತ ಸುಲಭ ಉಪಾಯ ಎಂದರೆ ಪಟಕದ ಪುಡಿಯನ್ನು ಹಾಕುವುದು. ಪಟಕ ಎಂದರೆ ಪೊಟ್ಯಾಷ್ ಆಲಮ್ ಇದನ್ನು ಸಾಮಾನ್ಯವಾಗಿ ಗಣಕು ನೀರನ್ನ ಶುದ್ಧ ಮಾಡಲು ಉಪಯೋಗಿಸುತ್ತಾರೆ. (ಡಾ. ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು)

Published On - 10:25 am, Mon, 18 July 22

ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ನನ್ನನ್ನು ರಾಜನಾಗಿ ಮೆರೆಸಿದ್ದು ಹಂಸಲೇಖ: ರವಿಚಂದ್ರನ್
ನನ್ನನ್ನು ರಾಜನಾಗಿ ಮೆರೆಸಿದ್ದು ಹಂಸಲೇಖ: ರವಿಚಂದ್ರನ್
ಜಮೀರ್ ಅಹ್ಮದ್ ಕರೆದರೆ ಹೋಗಿ ಮಾತಾಡುತ್ತೇನೆ: ಬಿಆರ್ ಪಾಟೀಲ್
ಜಮೀರ್ ಅಹ್ಮದ್ ಕರೆದರೆ ಹೋಗಿ ಮಾತಾಡುತ್ತೇನೆ: ಬಿಆರ್ ಪಾಟೀಲ್
ಪಕ್ಷದ ಸಾರಥ್ಯ ನನ್ನ ಕೈಗೆ ಕೊಟ್ಟರೆ 150 ಸೀಟು ಗೆಲ್ಲುತ್ತೇನೆ: ಯತ್ನಾಳ್
ಪಕ್ಷದ ಸಾರಥ್ಯ ನನ್ನ ಕೈಗೆ ಕೊಟ್ಟರೆ 150 ಸೀಟು ಗೆಲ್ಲುತ್ತೇನೆ: ಯತ್ನಾಳ್
ರೈಲಿನಲ್ಲಿ ಅಂಗಿ, ಪ್ಯಾಂಟ್ ಬಿಚ್ಚಿ ನಿಂತ ಪ್ರಯಾಣಿಕ: ಮುಂದೇನಾಯ್ತು?
ರೈಲಿನಲ್ಲಿ ಅಂಗಿ, ಪ್ಯಾಂಟ್ ಬಿಚ್ಚಿ ನಿಂತ ಪ್ರಯಾಣಿಕ: ಮುಂದೇನಾಯ್ತು?
ದೆಹಲಿ: ಸಿದ್ದರಾಮಯ್ಯ ವರ್ತನೆ ಒತ್ತಡದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ
ದೆಹಲಿ: ಸಿದ್ದರಾಮಯ್ಯ ವರ್ತನೆ ಒತ್ತಡದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ