AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇ ತಿಂಗಳಿನಿಂದ ಈ ರಾಶಿಗೆ ಗುರುವಿನ ಅನುಗ್ರಹವಿದ್ದರು, ಶನಿ ನಿಮ್ಮನ್ನು ಬಿಡುವುದಿಲ್ಲ

ಮೇ 2026 ಧನು ರಾಶಿ ಭವಿಷ್ಯ: ಗುರು ಮತ್ತು ಶನಿಯ ಪ್ರಬಲ ಪ್ರಭಾವದಿಂದ ಈ ತಿಂಗಳು ನಿಮಗೆ ಅದೃಷ್ಟ, ವೃತ್ತಿ ಪ್ರಗತಿ, ಪ್ರೇಮ ಸಂಬಂಧಗಳಲ್ಲಿ ಬಲವರ್ಧನೆ ತರಲಿದೆ. ಹೊಸ ಉದ್ಯಮಗಳಿಗೆ, ಹೂಡಿಕೆಗೆ ಇದು ಸೂಕ್ತ ಸಮಯ. ಕೃಷಿ, ವ್ಯಾಪಾರದಲ್ಲಿ ಲಾಭದ ಸಾಧ್ಯತೆ ಇದೆ. ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಚಾಕಚಕ್ಯತೆ ಬೆಳೆಯಲಿದೆ. ಆರೋಗ್ಯ ಮತ್ತು ಸಂಬಂಧಗಳಲ್ಲಿ ಎಚ್ಚರಿಕೆ ಅಗತ್ಯ. ಭೌತಿಕ ಮತ್ತು ಮಾನಸಿಕ ಸ್ಥಿತಿ ಉತ್ತಮಗೊಳ್ಳಲಿದೆ.

ಮೇ ತಿಂಗಳಿನಿಂದ ಈ ರಾಶಿಗೆ ಗುರುವಿನ ಅನುಗ್ರಹವಿದ್ದರು, ಶನಿ ನಿಮ್ಮನ್ನು ಬಿಡುವುದಿಲ್ಲ
Sagittarius Horoscope May
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: May 01, 2026 | 5:34 PM

Share

ಆಧಿಪತ್ಯ ರಾಶಿ. ಜೊತೆಗೆ ಅವನ ಪೂರ್ಣ ದೃಷ್ಟಿ. ಶನಿಯ ಪೂರ್ಣ ದೃಷ್ಟಯೂ ಈ ರಾಶಿಗೆ ಕಾಣಿಸಲಿದೆ. ಉದ್ಯೋಗದ ಸವಾಲುಗಳನ್ನು ಎದುರಿಸುವ ಚಾಕಚಕ್ಯತೆ ಬರಲಿದೆ. ತೊಂದರೆಯಲ್ಲಿ ಸಿಕ್ಕಿದರೂ ಅದರಿಂದ ಹೊರಬರುವ ಯೋಜನೆಯನ್ನು ಕೂಡಲೇ ಹಾಕಿಕೊಳ್ಳಬಹುದು. ಮೇ ತಿಂಗಳಲ್ಲಿ ಅದೃಷ್ಟ ಅಧಿಕವಾಗಿರುವ ರಾಶಿ ಇದು. ಮೂಲ, ಪೂರ್ವಾಷಾಢ, ಉತ್ತರಾಷಾಢ ನಕ್ಷತ್ರಗಳಿದ್ದು, ಮೊದಲೆರಡು ನಕ್ಷತ್ರಕ್ಕೆ ಗ್ರಹಗಳ ಪರಿಣಾಮ ಹೆಚ್ಚಿರಲಿದೆ.

ಈ ತಿಂಗಳು ನಿಮ್ಮ ರಾಶ್ಯಾಧಿಪತಿ ಗುರು ಮಿಥುನ ರಾಶಿಯಲ್ಲಿ ಕೇಂದ್ರ ಸ್ಥಾನದಲ್ಲಿರುವುದು ನಿಮಗೆ ದೊಡ್ಡ ರಕ್ಷಾ ಕವಚವಿದ್ದಂತೆ. ನಾಲ್ಕನೇ ಮನೆಯಲ್ಲಿ (ಸುಖ ಸ್ಥಾನ) ಶನಿ, ಕುಜ ಮತ್ತು ಬುಧರ ಸಂಘಮವಿರುವುದು ಜೀವನದ ಭೌತಿಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ.

​ಕೃಷಿ:

ಭೂಮಿ ಮತ್ತು ತೋಟಗಾರಿಕೆ

​ವಿಶೇಷತೆ: ನಾಲ್ಕನೇ ಮನೆಯಲ್ಲಿ ಕುಜನು ಇರುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿಸಲು ಇದು ಸಕಾಲ. ಅಡಿಕೆ, ತೆಂಗಿನಂತಹ ತೋಟಗಾರಿಕಾ ಬೆಳೆಗಳಿಗೆ ಹೊಸ ರೀತಿಯ ಸಾವಯವ ಗೊಬ್ಬರ ಅಥವಾ ತಂತ್ರಜ್ಞಾನ ಬಳಸಲು ಇದು ಉತ್ತಮ ಸಮಯ. ಶನಿಯ ಪ್ರಭಾವದಿಂದ ಕೆಲಸಗಾರರ ಕೊರತೆ ಎದುರಾಗಬಹುದು ಅಥವಾ ಕೆಲಸಗಳು ನಿಧಾನಗತಿಯಲ್ಲಿ ಸಾಗಬಹುದು. ತಾಳ್ಮೆಯಿಂದ ಕೆಲಸ ಮಾಡಿಸಿಕೊಳ್ಳುವುದು ಉತ್ತಮ.

​ಪ್ರೇಮ ಮತ್ತು ವಿವಾಹ:

ಸಂಬಂಧಗಳ ಬಲವರ್ಧನೆಯಾಗಲಿದೆ. ಸಪ್ತಮ ಸ್ಥಾನದ ಗುರು ನಿಮ್ಮ ವ್ಯಕ್ತಿತ್ವಕ್ಕೆ ಒಂದು ರೀತಿಯ ಆಕರ್ಷಣೆಯನ್ನು ನೀಡುತ್ತಾನೆ. ಸಂಗಾತಿಯ ಕಡೆಯಿಂದ ಆರ್ಥಿಕ ಸಹಾಯ ಅಥವಾ ಆಸ್ತಿ ಲಾಭವಾಗುವ ಯೋಗವಿದೆ.

ಸಂಗಾತಿಯೊಂದಿಗೆ ಧಾರ್ಮಿಕ ಪ್ರವಾಸ ಅಥವಾ ದೇವತಾ ಕಾರ್ಯಗಳಲ್ಲಿ ಭಾಗವಹಿಸುವಿರಿ. ಅವಿವಾಹಿತರಿಗೆ ಪ್ರತಿಷ್ಠಿತ ಕುಟುಂಬದಿಂದ ಸಂಬಂಧಗಳು ಬರುವುದು.

​ಸ್ವ-ಉದ್ಯೋಗ ಮತ್ತು ವ್ಯಾಪಾರ:

ಬುಧನು ಮೀನ ರಾಶಿಯಲ್ಲಿದ್ದರೂ ಕುಜನೊಂದಿಗೆ ಇರುವುದರಿಂದ ನಿಮ್ಮ ಆಲೋಚನಾ ಶಕ್ತಿ ತೀಕ್ಷ್ಣವಾಗಿರುತ್ತದೆ. ಹೊಸ ಉದ್ಯಮ ಆರಂಭಿಸಲು ಅಥವಾ ಇರುವ ಉದ್ಯಮವನ್ನು ವಿಸ್ತರಿಸಲು ಹಣಕಾಸಿನ ನೆರವು ಸುಲಭವಾಗಿ ದೊರೆಯಲಿದೆ. ಕಮಿಷನ್ ಏಜೆಂಟ್ಸ್, ಕಲಾತ್ಮಕ ವಸ್ತುಗಳ ಮಾರಾಟಗಾರರು ಮತ್ತು ಸಮಾಲೋಚಕರಿಗೆ ಈ ತಿಂಗಳು ಹೆಚ್ಚಿನ ಲಾಭಾಂಶ ಸಿಗಲಿದೆ.

​ಅಧಿಕಾರ ಮತ್ತು ಹೂಡಿಕೆ:

ದೀರ್ಘಕಾಲಿಕ ಲಾಭದಿಂದ ಸಂತೃಪ್ತಿ. ರಾಜಕೀಯ ಅಥವಾ ಸಂಘ-ಸಂಸ್ಥೆಗಳಲ್ಲಿ ಇರುವವರಿಗೆ ದೊಡ್ಡ ಜವಾಬ್ದಾರಿಗಳು ಸಿಗಲಿವೆ. ನಿಮ್ಮ ಮಾತು ಇತರರ ಮೇಲೆ ಪ್ರಭಾವ ಬೀರುತ್ತದೆ. ಮೇಷ ರಾಶಿಯ ರವಿ ನಿಮ್ಮನ್ನು ಸಾಹಸಮಯ ಹೂಡಿಕೆಗೆ ಪ್ರೇರೇಪಿಸಬಹುದು. ಆದರೆ, ಹೂಡಿಕೆ ಮಾಡುವಾಗ ಮನೆಯ ಹಿರಿಯರ ಅಥವಾ ತಜ್ಞರ ಸಲಹೆ ಪಡೆಯುವುದು ಅನಿವಾರ್ಯ. ಚಿನ್ನ ಅಥವಾ ಸ್ಥಿರ ಆಸ್ತಿಯ ಮೇಲೆ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ.

ಸ್ಥಳ ಬದಲಾವಣೆ:

ಶನಿ ಮತ್ತು ಕುಜ ನಾಲ್ಕನೇ ಮನೆಯಲ್ಲಿರುವುದರಿಂದ ಅನಿವಾರ್ಯವಾಗಿ ಮನೆ ಬದಲಾಯಿಸುವ ಅಥವಾ ಕಛೇರಿಯನ್ನು ಸ್ಥಳಾಂತರಿಸುವ ಪರಿಸ್ಥಿತಿ ಬರಬಹುದು. ರಕ್ತದೊತ್ತಡ ಅಥವಾ ಎದೆಯ ಭಾಗದಲ್ಲಿ ಸಣ್ಣಪುಟ್ಟ ಕಿರಿಕಿರಿ ಉಂಟಾಗಬಹುದು. ಪ್ರತಿದಿನ ಪ್ರಾಣಾಯಾಮ ಮಾಡುವುದು ಅತ್ಯಗತ್ಯ.

​ಸಂಘರ್ಷ:

ಆಸ್ತಿ ವಿಚಾರವಾಗಿ ಹತ್ತಿರದ ಸಂಬಂಧಿಕರೊಂದಿಗೆ ಮನಸ್ತಾಪವಾಗುವ ಸಾಧ್ಯತೆಯಿದೆ. ಮಾತಿನ ಮೇಲೆ ನಿಗಾ ಇರಲಿ.

– ಲೋಹಿತ ಹೆಬ್ಬಾರ್

Follow Us
ನಿಧಿ ಆಸೆಗೆ ತಾಯಿಯನ್ನೇ ಬಲಿ ಕೊಡಲು ಯತ್ನ!: ಚಾಮರಾಜನಗರದಲ್ಲಿ ಶಾಕಿಂಗ್ ಘಟನೆ
ನಿಧಿ ಆಸೆಗೆ ತಾಯಿಯನ್ನೇ ಬಲಿ ಕೊಡಲು ಯತ್ನ!: ಚಾಮರಾಜನಗರದಲ್ಲಿ ಶಾಕಿಂಗ್ ಘಟನೆ
ಎಕ್ಸಿಟ್ ಪೋಲ್ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ನಡುಕ
ಎಕ್ಸಿಟ್ ಪೋಲ್ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ನಡುಕ
ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ
ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ
ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಲಾಂಗ್ ವೀಕೆಂಡ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಮಲೆ ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ
ಯುವತಿ ಬಾಳಲ್ಲಿ 'ಕೈ' ನಾಯಕನ ಚೆಲ್ಲಾಟ?: ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ