AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nitya Bhavishya: ತಂದೆ-ತಾಯಿ ಸೇವೆ ಮಾಡುವ ಸೌಭಾಗ್ಯ ಈ ರಾಶಿಯವರಿಗೆ ಪ್ರಾಪ್ತವಾಗಲಿದೆ

2023 ಜನವರಿ 08 ರವಿವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nitya Bhavishya: ತಂದೆ-ತಾಯಿ ಸೇವೆ ಮಾಡುವ ಸೌಭಾಗ್ಯ ಈ ರಾಶಿಯವರಿಗೆ ಪ್ರಾಪ್ತವಾಗಲಿದೆ
ಪ್ರಾತಿನಿಧಿಕ ಚಿತ್ರImage Credit source: thestatesman.com
TV9 Web
| Edited By: |

Updated on: Jan 08, 2023 | 6:00 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 08 ರವಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಭವಿಷ್ಯ:

ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಪೂರ್ವಾಷಾಢ ಮಹಾನಕ್ಷತ್ರ, ಪುಷ್ಯ ಮಾಸ, ಕೃಷ್ಣ ಪಕ್ಷ, ರವಿವಾರ, ಪ್ರತಿಪತ್​ ತಿಥಿ, ಪುಷ್ಯ ನಿತ್ಯನಕ್ಷತ್ರ, ವೈಧೃತಿ ಯೋಗ, ಕೌಲವ ಕರಣ, ಸೂರ್ಯೋದಯ: 07 ಗಂಟೆ 1 ನಿಮಿಷಕ್ಕೆ, ಸೂರ್ಯಾಸ್ತ – 06 ಗಂಟೆ 17 ನಿಮಿಷಕ್ಕೆ. ಶುಭಾಶುಭಕಾಲ: ರಾಹು ಕಾಲ 04:53 ರಿಂದ 06:18, ಯಮಘಂಡ ಕಾಲ 12:39 ರಿಂದ 02:04, ಗುಳಿಕ ಕಾಲ 03:28 ರಿಂದ 04:53ರ ವರೆಗೆ.

ತಾ. 08-01-2023ರ ರವಿವಾರ ರಾಶಿ ಭವಿಷ್ಯ ಹೀಗಿದೆ:

ಮೇಷ: ದೇವರಲ್ಲಿ ದೊಡ್ಡ ಕೋರಿಕೆಯ ಪಟ್ಟಿಯನ್ನು ಇಟ್ಟುಕೊಂಡು ಯಾವುದೂ ಆಗಲಿಲ್ಲ ಎಂಬ ಕೊರಗಿನಲ್ಲಿ ಇರಲಿದ್ದೀರಿ. ಒತ್ತಡದ ನಡುವೆಯೂ ನಿಮ್ಮ ಕಾರ್ಯಗಳನ್ನು ಸರಳೀಕರಿಸಿಕೊಂಡು ಮಾಡುವ ವಿಧಾನಕ್ಕೆ ಮೆಚ್ಚುಗೆ ಸಿಗಲಿದೆ. ಹಣವನ್ನು ಉಳಿಸಲು ಯತ್ನಿಸುವಿರಿ. ಆದರೆ ಅದು ಮುಂದಿನ ಬಾಗಿಲಿನಿಂದ ಬಂದು ಹಿಂದಿನ ಬಾಗಿಲಿನಿಂದ ನಿಮಗೆ ಗೊತ್ತಾಗದಂತೆ ಹೋಗಿರುತ್ತದೆ. ಮಾತನ್ನು ಕಡಿಮೆ ಮಾಡಿ. ಶತ್ರುಗಳು ಹೆಚ್ಚಾದಾರು. ಹಿರಿಯರಾಡಿದ ಮಾತು ನಿಮಗೆ ಸತ್ಯವೆಂದು ಅರಿವಿಗೆ ಬರಲಿದೆ.

ವೃಷಭ: ಮಕ್ಕಳಿಂದ ಬಂದ ಸಿಹಿ ವಾರ್ತೆ ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸಲಿದೆ. ಪಾಲುದಾರಿಕೆಯಲ್ಲಿ ಸಣ್ಣ ವೈಮನಸಿಗೆ ತಲೆ ಹಾಕಲಿದೆ. ದೂರದಲ್ಲಿ ವಾಸಿಸುವ ನೀವು ಇಂದು ಮನೆಗೆ ಹೋಗಿ ಪೋಷಕರನ್ನು ಸಂತೋಷಗೊಳಿಸುವಿರಿ. ಒಳ್ಳೆಯ ಪುಸ್ತಕವನ್ನು ಆಯ್ದುಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಿರಿ. ವೈದ್ಯರ ಸಲಹೆಯನ್ನು ನಿರಾಕರಿಸದೆ ಪಾಲಿಸಿ. ಪ್ರಯಾಣದ ಮನಸ್ಸಿದ್ದರೂ ಖರ್ಚಾಗುವ ಭಯದಿಂದ ಅದನ್ನು ನಿಲ್ಲಿಸಿದ್ದೀರಿ.

ಮಿಥುನ: ಆಗಾಧವಾದ ಆಲೋಚನಯಲ್ಲಿ ಮುಳುಗಲಿದ್ದೀರಿ. ಉತ್ತಮವಾದ ವಿಚಾರ ಹಾಗೂ ಸಂದರ್ಭಗಳನ್ನು ಮನನ ಮಾಡಿ. ಆ ಕುರಿತು ಆಲೋಚಿಸಿ.‌ ಸಕಾರಾತ್ಮಕತೆ ಉಂಟಾಗಲಿದೆ. ಆಗಾಗ ಬರುವ ನೋವುಗಳು ನಿಮ್ಮನ್ನು ಪೀಡಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುವವು. ಆಪ್ತರ ಜೊತೆ ಒಂದಿಷ್ಟು ಹರಟೆ ಹೊಡೆಯಿರಿ. ಹಣದ ಚಿಂತೆ ನಿಮ್ಮನ್ನು ಇಂದು ಕಾಡಲಿದೆ. ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ಕೊಡುವಿರಿ. ಧರ್ಮಕಾರ್ಯದಲ್ಲಿ ಒಲವು ಹೆಚ್ಚಲಿದೆ.

ಕರ್ಕ: ಶೈತ್ಯದಿಂದ ನಿಮ್ಮ ದಿನ ಹೈರಾಣಾಗಲಿದೆ. ಈಗಲೇ ಕಡಿಮೆ ಮಾಡಿಕೊಳ್ಳುವುದು ಉಚಿತ. ಮಕ್ಕಳ ಜೊತೆ ಕಾಲಕಳೆಯಿರಿ. ವಿದ್ಯುತ್ ಉಪಕರಣಗಳನ್ನು ಖರೀದಿಸುವಿರಿ. ದಿನಸಿ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಿದೆ. ವಿವಾಹವು ವಿಳಂಬವೆಂದು ಅನ್ನಿಸಬಹುದು. ತಂದೆಯ ಜೊತೆ ಜಗಳವನ್ನು ಮಾಡುವಿರಿ. ಮನೆಯಲ್ಲಿನ ಸಮಸ್ಯೆಗಳು ಹೆಚ್ಚಾದಂತೆ ತೋರುವುದು. ಶಿಕ್ಷಕರಿಗೆ, ಧಾರ್ಮಿಕ ವರ್ಗಕ್ಕೆ ಶುಭದಿನವಿದೆ.

ಸಿಂಹ: ಶತ್ರುಗಳಿಬ್ಬರ ಮುಖಾಮುಖಿಯಾಗಿ ಜಗಳವನ್ನು ಮಾಡಲಿದ್ದೀರಿ. ನಿಮ್ಮ ಬುದ್ಧಿ, ಮನಸ್ಸುಗಳು ನಿಮ್ಮ ಸ್ತಿಮಿತದಲ್ಲಿರಲಿ. ಯಾವ ಸಂದರ್ಭದಲ್ಲಿ ಕೈಮೀರಿ ಹೋಗುವ ಸನ್ನಿವೇಶವನ್ನು ತಂದುಕೊಳ್ಳಬೇಡಿ. ಅಮೂಲ್ಯ ವಸ್ತು ಅಥವಾ ಉನ್ನತ ಪದವಿಗಳು ನಷ್ಟವಾಗಲಿವೆ. ದುಃಖಿಸುವ ಅಗತ್ಯವಿಲ್ಲ. ಇನ್ನಷ್ಟು ಉತ್ತಮವಾದುದನ್ನು ನೀಡಲು ಇದು ಸಂಭವಿಸಿರಬಹುದು. ಅನಾರೋಗ್ಯ ವಿಚಾರವಾಗಿ ಸ್ನೇಹಿತರ ಜೊತೆ ಮಾತನಾಡಿ. ಉತ್ತಮ‌ವಾದ ಮಾರ್ಗವು ನಿಮಗೆ ಸಿಗಬಹುದು. ಮೌನಕ್ಕೆ ಶರಣಾಗಿ ಕಷ್ಟವನ್ನು ತಂದುಕೊಳ್ಳದಿರುವುದು ಉತ್ತಮ.

ಕನ್ಯಾ: ಹೊರಗೆ ಆಹಾರವನ್ನು ಸ್ವೀಕರಿಸಬೇಕು ಎನ್ನುವ ಆಸೆಯು ನಿಮಗಿದ್ದರೂ ಆರೋಗ್ಯವನ್ನು ಗಮನಿಸಿಕೊಂಡು ಹೋಗುವುದು ಉತ್ತಮ. ಶತ್ರುಗಳು ನಿಮ್ಮ ಸಾಧನೆಯನ್ನು ಕಂಡು ಕೊರಗಬಹುದು. ಹೂಡಿಕೆಗೆ ಬೇಕಾದ ಆಲೋಚನೆಗಳನ್ನು ಮಾಡಬಹುದು. ಮನೆಯನ್ನು ಕಟ್ಟಲು ಸಾಲಮಾಡಬೇಕಾದ ಸ್ಥಿತಿಯು ಬರಬಹುದು. ಮನೆಗೆಲಸಕ್ಕೆ ಸಹಾಯಮಾಡಲಿದ್ದೀರಿ. ವಿವಾಹ ಯೋಗವು ನಿಮಗೆ ಬರಲಿದೆ. ದೈವದ ಮೊರೆಯನ್ನು ಹೊಗುವ ಅನಿವಾರ್ಯತೆ ಎದುರಾಗಬಹುದು.

ತುಲಾ: ತುಂಬ ದಿನಗಳ ನಂತರ ಕುಟುಂಬದವರ ಮಿಲನವಾಗಲಿದ್ದು ಬಹಳ ಸಂತೋಷದಿಂದ ಭಾಗವಹಿಸುವಿರಿ. ಗೃಹೋಪಯೋಗಿ ವಸ್ತುಗಳ ಖರೀದಿಯಿಂದ ಖರ್ಚಾಗುವ ಸಾಧ್ಯತೆಯಿದೆ. ದಾಯಾದಿ ಕಲಹವು ಇಂದು ನ್ಯಾಯಾಲಯಕ್ಕೆ ಹೋಗಲಿದೆ‌. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಸಿಗಲಿದೆ. ಸಂಗಾತಿಯ ಜೊತೆ ಅನೌಪಚಾರಿಕ ಹರಟೆಯಿಂದ ಕಾಲವನ್ನು ಕಳೆಯುವಿರಿ. ಪ್ರವಾಸದ ಆಯಾಸವು ನಿಮ್ಮನ್ನು ಸೋಮಾರಿಗಳನ್ನಾಗಿ ಮಾಡಲಿದೆ.

ವೃಶ್ಚಿಕ: ರಾಜಕಾರಣಿಗಳು ಇಂದು ತಮ್ಮ ಕ್ಷೇತ್ರದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಲಿದ್ದಾರೆ. ಆಭರಣವನ್ನು ತಡಗೆದುಕೊಳ್ಳುವ ಮನಸ್ಸು ಮಾಡುವಿರಿ. ನೀವು ಉನ್ನತಸ್ಥಾನಕ್ಕೆ ಹೋಗಲು ಯಾರದೋ ಇನ್ ಪ್ಲುಯನ್ಸ್ ಬಳಸಿಕೊಳ್ಳುವಿರಿ. ಆದಾಯ ಮತ್ತು ಖರ್ಚುಗಳ ಲೆಕ್ಕಾಚಾರವನ್ನು ಕಂಡಾಗ ನಿಮಗೆ ಆಶ್ಚರ್ಯವು ಕಾದಿರುತ್ತದೆ. ಸಂಗಾತಿಯ ಬೇಸರವನ್ನು ಕ್ಷಣಕಾಲದಲ್ಲಿ ದೂರ ಮಾಡುವ ವಿದ್ಯೆಯನ್ನು ನೀವು ಕಲಿತಿದ್ದೀರಿ. ಮಾತುಗಳನ್ನು ಚೆನ್ನಾಗಿ ಆಡುವಿರಿ.

ಧನುಸ್ಸು: ತಂದೆ ಹಾಗೂ ತಾಯಿಯರ ಸೇವೆಯನ್ನು ಮಾಡುವ ಸೌಭಾಗ್ಯ ನಿಮಗಿಂದು ಪ್ರಾಪ್ತವಾಗಲಿದೆ. ವಿದ್ಯಾಭ್ಯಾಸಕ್ಕೆಂದು ಉತ್ತಮ‌ವಾದ ವಿದ್ಯಾಕೇಂದ್ರವನ್ನು ಹುಡುಕುತ್ತಿದ್ದರೆ ನಿಮಗದು ಸಿಗಲಿದೆ. ಜನಜಾಗೃತಿಯ ಕಾರ್ಯಕ್ರಮಗಳಿಗೆ ಹೋಗಲಿದ್ದೀರಿ. ಉತ್ತಮ ಆಹಾರವನ್ನು ಸೇವಿಸುವ ದಿನವಿಂದು. ವಿದ್ಯುದುಪಕರಣಗಳಿಂದ ಹಣವು ಖರ್ಚಾಗಬಹುದು. ನಿಮ್ಮ ಮೇಲೆ ಅನುಮಾನದ ಹುತ್ತಗಳು ಇರುತ್ತವೆ. ಶುಭದಿನದ ನಿರೀಕ್ಷೆಯಲ್ಲಿ ಇರುವಿರಿ.

ಮಕರ: ಹಳೆಯ ಸಂಗಾತಿಯ ಜೊತೆ ಮಾತುಕತೆಯಿಂದ ನಿಮ್ಮ ಮೇಲಿದ್ದ ಪೂರ್ವಾಗ್ರಹಗಳು ದೂರವಾಗಬಹುದು. ಹೆಚ್ಚು ವಿಶ್ರಾಂತಿಯನ್ನು ಬಯಸಲಿದ್ದೀರಿ. ನಿಮಗಿಂದು ಸಭೆ, ಸಮಾರಂಭಗಳಲ್ಲಿ ಮಾತನಾಡುವ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಸ್ವ ಆಸಕ್ತಿಯಿಂದ ತೊಡಗಿಕೊಳ್ಳುವರು. ಆಯಾಸವಿದ್ದರೂ ಇನ್ನೊಬ್ಬರ ಒತ್ತಾಯಕ್ಕೆ ಅವರೊಂದಿಗೆ ವಾತುವಿಹಾರಕ್ಕೆಂದು ಹೋಗುವಿರಿ. ದೀರ್ಘಕಾಲದ ವಾಹನದಿಂದ ವಾತಸಂಬಂಧಿ ರೋಗಗಳು ಬರಬಹುದು.

ಕುಂಭ: ಅಪರಿಚಿತ ದೂರವಾಣಿಯ ಕರೆ ನಿಮ್ಮ ದಿನವನ್ನು ಹಾಳು ಮಾಡಲಿದೆ. ನಿಮ್ಮ ಆಲೋಚನಗಳಿಂದ ಅನೇಕರು ಪ್ರಭಾವಿತರಾಗುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಯ ಬಗ್ಗೆ ಮಾತುಕತೆಗಳು ಇಂದು ಮನೆಯಲ್ಲಿ ನಡೆಯಬಹುದು. ಬಂಧುಗಳು‌ ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತನಾಡುವರು. ಸಂಪತ್ತಿನ ಅನಿರೀಕ್ಷಿತವಾಗಿ ಖರ್ಚಾಗಲಿದೆ. ಕಲಾವಿದರಿಗೆ ಉತ್ತಮ ಅವಕಾಶವು ಸಿಗಲಿದೆ. ನಿಮ್ಮ ಸಹಾಯಕ್ಕೆ ಬಂದವರನ್ನು ಸ್ಮರಿಸಿಕೊಳ್ಳಲಿದ್ದೀರಿ. ತಿಳಿವಳಿಕಯಿಂದ‌ ಕೂಡಿದ ನಿಮ್ಮ ಜೀವನ ಸುಗಮವಾಗಲಿದೆ.

ಮೀನ: ಇಂದಿನ ವಿರಾಮದ ಸಮಯವನ್ನು ಆರಾಮಾಗಿ ಕಳೆಯುವಿರಿ. ಎಂದೋ ಕೂಡಿಟ್ಟ ಹಣವು ಇಂದು ನಿಮ್ಮ ಸಮಯಕ್ಕೆ ಸರಿಯಾಗಿ ಸಿಗುವುದು. ನಿಮ್ಮಿಂದ ಪ್ರೀತಿಯನ್ನು ಬಯಸುವವರಿಗೆ ಪ್ರೀತಿಯನ್ನು ಕೊಡಿ. ಬೆಚ್ಚಗಿನ ವಾತಾವರಣದಲ್ಲಿರ ಇರಿ. ಫಲಾಹಾರವೇ ನಿಮ್ಮ ಇಂದಿನ ಆಹಾರವಾಗಬಹುದು. ಅನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸ. ನಿಧಾನವಾಗಿ ಸಾಗುತ್ತಿದ್ದ ನಿಮ್ಮ ಕೆಲಸಕ್ಕೆ ವೇಗ ಸಿಗಲಿದೆ. ಸಿವಿಲ್ ಕೆಲಸದಲ್ಲಿ ಪ್ರಗತಿ ಇದೆ. ಸ್ವಲ್ಪ ಪ್ರಯಾಣದ ಅನಿವಾರ್ಯತೆ ಬರಬಹುದು.

ಲೋಹಿತಶರ್ಮಾ, ಇಡುವಾಣಿ