Horoscope: ಮಕ್ಕಳನ್ನು ಅತಿ ಸಲುಗೆಯಿಂದ ಬೆಳೆಸಿ ಕಷ್ಟಪಡುವಿರಿ
11 ಫೆಬ್ರವರಿ 2025: ಮಂಗಳವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನಿಮ್ಮ ಯೋಜನೆಗೆ ತಗುಲುವ ಲೆಕ್ಕಾಚಾರವು ತಪ್ಪಾಗಬಹುದು. ಬಂಧುಗಳ ಜೊತೆ ವಿವಾದವು ಏರ್ಪಡಲಿದ್ದು ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯವೂ ಬರಬಹುದು. ಹಾಗಾದರೆ ಫೆಬ್ರವರಿ 11ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಚತುರ್ದಶೀ ನಿತ್ಯನಕ್ಷತ್ರ : ಆಶ್ಲೇಷಾ ಯೋಗ : ಪ್ರೀತಿ, ಕರಣ : ತೈತಿಲ, ಸೂರ್ಯೋದಯ – 06 – 59 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:41 – 17:08, ಯಮಘಂಡ ಕಾಲ 09:53 – 11:20, ಗುಳಿಕ ಕಾಲ12:47 – 14:14.
ತುಲಾ ರಾಶಿ: ಸಮಚಿತ್ತತೆಯನ್ನು ಕಾಪಾಡಿಕೊಳ್ಳಲು ಅಧ್ಯಾತ್ಮ ಬೇಕಾಗುತ್ತದೆ. ನಾಲ್ಕಾರು ಕಾರ್ಯಗಳನ್ನು ಒಂದೇ ಸಮನಾಗಿ ಕೊಂಡೊಯ್ಯುವ ಚಾಣಕ್ಷತೆ ನಿಮಗೆ ಇರಲಿದೆ. ಗುಟ್ಟನ್ನು ಯಾರೇ ಒತ್ತಾಯ ಮಾಡಿದರೂ ಬಿಟ್ಟುಕೊಡಲಾರಿರಿ. ಇಂದು ನೀವು ಸಂತೋಷ ಆಗದೇಹೋಗಬಹುದು. ನಿಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾದ ಮಾತುಗಳು ಎಲ್ಲ ಕಡೆ ಇರಲಿವೆ. ಇಂದಿನ ಎಲ್ಲ ಕಾರ್ಯದಲ್ಲಿಯೂ ಜಯವನ್ನು ಪಡೆಯುವಿರಿ. ಆರ್ಥಿಕಸ್ಥಿತಿಯು ಸುಧಾರಿಸಿದ್ದು ನಿಮಗೆ ಸ್ವಲ್ಪ ನೆಮ್ಮದಿ ಇರುವುದು. ಹಿರಿಯರಲ್ಲಿ ಗೌರವದಿಂದ ನಡೆದುಕೊಳ್ಳುವಿರಿ. ಸಮಸ್ಯೆಯನ್ನು ಬರುವ ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯನ್ನೂ ಮಾಡಿಕೊಂಡು ನಿಮ್ಮನ್ನು ರಕ್ಷಿಸಿಕೊಳ್ಳುವಿರಿ. ನಿರೋದ್ಯೋಗ ಸಮಸ್ಯೆಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಯಾರ ಜೊತೆಯೂ ಭೇದಭಾವ ಎಣಿಸುವ ಅವಶ್ಯಕತೆ ಬರದಂತೆ ನೋಡಿ. ನೆಚ್ಚಿನ ತಾಣವು ನಿಮಗೆ ಹೊಸ ಉತ್ಸಾಹವನ್ನು ನೀಡುವುದು.
ವೃಶ್ಚಿಕ ರಾಶಿ: ನೀವು ಕ್ರಮಿಸುವ ದೂರದ ಬಗ್ಗೆ ಗೊತ್ತಿರಲಿ. ಮಕ್ಕಳನ್ನು ಅತಿಯಾದ ಸಲುಗೆಯಿಂದ ಬೆಳೆಸಿ ಕಷ್ಟಪಡುವಿರಿ. ಹೊಸ ಪ್ರದೇಶಕ್ಕೆ ಬಹಳ ದಿನಗಳ ಅನಂತರ ಹೋಗಲಿದ್ದು, ಬಹಳ ನೆಮ್ಮದಿಯನ್ನು ಪಡೆಯುವಿರಿ. ದುಃಖಗಳು ನೀವು ತಂದುಕೊಂಡದ್ದು ಎಂಬುದನ್ನು ಮರೆಯುವಿರಿ. ಇಂದು ಕಛೇರಿಯನ್ನು ಮಹಿಳೆಯರು ನಿರ್ವಹಿಸಬೇಕಾಗುವುದು. ಮಾಡದ ಕಾರ್ಯಕ್ಕೆ ಅಪವಾದ ಬರುವುದು. ನಿರಂತರ ಕೆಲಸವು ನಿಮಗೆ ಬೇಸರ ತಂದೀತು. ಇಂದು ವೃತ್ತಿಯಲ್ಲಿ ಆತಂಕವು ಬರಬಹುದು. ಪ್ರಾಣಿಗಳಿಂದ ಭೀತರಾಗುವ ಸಾಧ್ಯತೆ ಇದೆ. ನಿಮ್ಮ ಇಷ್ಟದವರ ಭೇಟಿಯಾಗುವಿರಿ. ನಿಮ್ಮ ಕಾರ್ಯಕ್ಕೆ ಧನಸಹಾಯವನ್ನು ಸಾಲವಾಗಿ ಪಡೆಯುವಿರಿ. ತಪ್ಪುಗಳನ್ನು ಒಪ್ಪಿಕೊಂಡು ಸರಿಮಾಡಿಕೊಳ್ಳುವಿರಿ. ಎದುರಿನವರ ಇಂಗಿತವನ್ನು ತಿಳಿದುಕೊಳ್ಳಲು ಕಷ್ಟವಾದೀತು. ನಿಮ್ಮ ಸಾಮರ್ಥ್ಯಕ್ಕೆ ಯೋಗ್ಯವಾದ ಕೆಲಸವನ್ನು ಮಾಡಿ. ಯಾರ ಬಗ್ಗೆಯೂ ಅನಗತ್ಯ ಟೀಕೆಗಳು ಬೇಡ. ನೌಕರರ ವಿಚಾರದಲ್ಲಿ ಅಸಮಾಧಾನವಿರಲಿದೆ. ಆಧ್ಯಾತ್ಮದ ಕಡೆ ಮನಸ್ಸು ಇರಬಹುದು. ಇನ್ನೊಬ್ಬರಿಗೆ ಹೋಲಿಸಿಕೊಂಡು ಸಂಕಟಪಡುವಿರಿ.
ಧನು ರಾಶಿ: ಅಧಿಕಾರದಲ್ಲಿ ಇರುವ ನಿಮ್ಮಮೇಲೆ ನಾನಾ ಒತ್ತಡಗಳು ಬರಬಹುದು. ನಿಮ್ಮವರ ರಕ್ಷಣೆಯ ಹೊಣೆಯು ನಿಮ್ಮ ವರ್ತನೆಯಲ್ಲಿ ಇರಲಿದೆ. ಹಿತಶತ್ರುಗಳ ಬಾಧೆಯು ನಿಮಗೆ ಇನ್ನಷ್ಟು ಬೆಳೆಯಲು ಉತ್ತೇಜನವನ್ನು ಕೊಡುವುದು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ನಕಾರಾತ್ಮಕ ಅಂಶಗಳು ಅಧಿಕಾರಿಗಳಿಗೆ ಹೇಳುವರು. ಹೇಳಿದ್ದು ಮತ್ತು ಮಾಡಿದ್ದಕ್ಕೂ ವ್ಯತ್ಯಾಸವಿರುವುದು. ಯಾರಾದರೂ ನಿಮ್ಮನ್ನು ಛೇಡಿಸಬಹುದು. ವಾಹನ ಖರೀದಿಗೆ ಗೊಂದಲದ ಮನಸ್ಸು ಬೇಡ. ವೃತ್ತಿಯನ್ನೇ ಬದಲಾಯಿಸುವ ಆಸೆ ಬರಬಹುದು. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ. ತಾತ್ಕಾಲಿಕ ಪ್ರೇಮವು ಕೊನೆಯಾಗುವುದು. ಉದ್ಯೋಗದಲ್ಲಿ ಒತ್ತಡವು ಅಧಿಕವಾಗಿ ಇರಲಿದೆ. ಅದು ದಾಂಪತ್ಯದಲ್ಲಿ ಮೇಲೂ ಪರಿಣಾಮವನ್ನು ಬೀರುವುದು. ಹೂಡಿಕೆಯ ವಿಚಾರವನ್ನು ಸ್ನೇಹಿತರ ಮೂಲಕ ಗೊತ್ತುಮಾಡಿಕೊಳ್ಳುವಿರಿ. ಸಿಟ್ಟಿನಿಂದ ಕೂಗಾಡುವಿರಿ. ಸಹೋದರನ ಕಡೆಯಿಂದ ಸಹಾಯವನ್ನು ಅಪೇಕ್ಷಿಸುವಿರಿ.
ಮಕರ ರಾಶಿ: ಆತ್ಮವಿಶ್ವಾಸದಿಂಸ ಸ್ಪರ್ಧೆಯನ್ನು ಗೆಲ್ಲುವಿರಿ. ಅಪರಿಚಿತರ ಜೊತೆ ಸಲುಗೆಯ ಸಂಪರ್ಕ ಏರ್ಪಡಲಿದೆ. ತಂದೆ ಮಕ್ಕಳ ಕಲಹವು ಮಿತಿಯನ್ನು ಮೀರಬಹುದು. ನಿಮ್ಮ ಸ್ವಭಾವವನ್ನು ತಿದ್ದಿಕೊಳ್ಳಬೇಕಾಗುವುದು. ಪುಣ್ಯಕ್ಷೇತ್ರದ ದರ್ಶನದಿಂದ ಮನಸ್ಸು ಪಾವನವಾಗಲಿದೆ. ಹೊಸ ಉದ್ಯೋಗಕ್ಕೆ ನಿಮ್ಮ ಮನಸ್ಸು ತೆರದುಕೊಳ್ಳುವುದು. ಹಿತಶತ್ರುಗಳು ಲಾಭವನ್ನು ತಪ್ಪಿಸುವರು. ಸತ್ಯದ ಮಾತಿನಿಂದ ನಿಮಗೇ ಸಂಕಷ್ಟವು ಬರಬಹುದು. ಸಮಾಜದಿಂದ ಸಿಗುವ ಗೌರವವೂ ನಿಮಗೆ ಬಾರದು. ಬಂಧುಗಳು ನಿಮ್ಮ ಸಹಾಯವನ್ನು ಕೇಳಬಹುದು. ಅನಾರೋಗ್ಯವು ಚಿಕಿತ್ಸೆಯ ಮೂಲಕ ಸರಿಮಾಡಿಕೊಳ್ಳಬೇಕಾಗುವುದು. ನಿಮ್ಮಿಂದ ಆಗದ್ದನ್ನು ಅನ್ಯರು ಮಾಡಿಮುಗಿಸುವರು. ಎಂದೋ ಮನಸ್ಸಿನಲ್ಲಿ ಕೇಳಿಕೊಂಡಿದ್ದು ಇಂದು ಫಲಿಸುವುದು. ಇಂದು ನಿಮ್ಮಿಂದ ಕುಟುಂಬವು ಸಂತೋಷವಾಗಿರುವುದು. ನಿದ್ರೆಯಲ್ಲಿ ಕೆಟ್ಟ ಕನಸುಗಳನ್ನು ಕಂಡು ಚಿಂತೆಗೊಳ್ಳುವಿರಿ. ಉತ್ತಮ ಕಾಲದ ನಿರೀಕ್ಷೆಯಲ್ಲಿ ನೀವು ಇರುವಿರಿ. ದುಂದುವೆಚ್ಚವನ್ನು ನಿಯಂತ್ರಿಸುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗುವಿರಿ.
ಕುಂಭ ರಾಶಿ: ವಸ್ತುಗಳ ಉತ್ಪನ್ನದಲ್ಲಿ ಕೆಲಸ ಮಾಡುವವರಿಗೆ ಶ್ರಮ ಅಧಿಕ. ಉತ್ತಮ ಮಾತಿನಿಂದ ಸಜ್ಜನರನ್ನು ಸಂಪಾದಿಸಿಕೊಳ್ಳುವಿರಿ. ಸಮಾಜದ ಲಾಭಕ್ಕಾಗಿ ಕಾರ್ಯವನ್ನು ಮಾಡುವಿರಿ. ಸ್ತ್ರೀಯರಿಗೆ ಕೃಷಿಯ ಬಗ್ಗೆ ಆಸಕ್ತಿ ಬರಬಹುದು. ಅಪರಿವಿತರು ನಿಮ್ಮ ಜೊತೆ ಪರಿಚಿತರಂತೆ ಮಾತನಾಡಬಹುದು. ಸಂಗಾತಿಯ ಮನೋಭಾವವನ್ನು ಅರಿತುಕೊಳ್ಳಲು ಕಷ್ಟವಾದೀತು. ದೂರದ ಸ್ಥಳಕ್ಕೆ ಪ್ರವಾಸ ಹೋಗುವ ಸಂದರ್ಭವು ಬರಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಕೇಳದೇ ಯಾರಿಗೂ ಉಪದೇಶವನ್ನು ನೀಡುವುದು ಬೇಡ. ಧನಲಾಭವಾದರೂ ಮನಸ್ಸಿನಲ್ಲಿ ನೆಮ್ಮದಿ ಕೊರತೆ ಕಾಣುವುದು. ಕಛೇರಿಯ ಒತ್ತಡವನ್ನು ಮನೆಯವರೆಗೂ ತರುವುದು ಬೇಡ. ಹಣ ಸಂಪಾದನೆಗೆ ನಿಮ್ಮ ತಂತ್ರಗಳು ಫಲಿಸದು. ಇಂದಿನ ಆದಾಯದಿಂದ ನಿಮ್ಮ ಆಸೆಗಳನ್ನು ತೀರಿಸಿಕೊಳ್ಳುವಿರಿ. ನೀವು ಪರಿಚಿತರಿಂದ ಸಹಾಯವನ್ನು ಅಪೇಕ್ಷಿಸುವಿರಿ. ಕಛೇರಿಯಲ್ಲಿ ಎಲ್ಲರ ಜೊತೆ ಸೌಹಾರ್ದದಿಂದ ವರ್ತಿಸಿ. ಪ್ರೀತಿಯ ವಿಚಾರದಲ್ಲಿ ಇಂದು ಬೇಸರವಾಗಬಹುದು. ನಿಮಗೆ ಅಗೌರವ ತೋರಬಹುದು.
ಮೀನ ರಾಶಿ: ಉದ್ಯಮದಿಂದ ಆರ್ಥಿಕ ಲಾಭ ಹಾಗೂ ದುಂದು ವೆಚ್ಚವೂ ಆಗಲಿದೆ. ದೇವರ ಮೇಲಿನ ನಂಬಿಕೆಯು ಕ್ಷೀಣವಾಗುವ ಸಾಧ್ಯತೆ ಇದೆ. ನಿಮ್ಮ ಉನ್ನತಿಯನ್ನು ಇಷ್ಟಪಡುವವರು ಜೊತೆಗಿರುವರು. ನೌಕರರ ಅಭಾವವನ್ನು ನೀಗಿಸಲು ಈಗಿಂದಲೇ ಪ್ರಯತ್ನ ಮಾಡಿ. ನಿಮ್ಮದಾದ ಸ್ವತಂತ್ರ ಆದಾಯವನ್ನು ಇಟ್ಟುಕೊಳ್ಳಿ. ಖಾಸಗಿ ವೃತ್ತಿಯಲ್ಲಿ ಆದಾಯವನ್ನು ಹೆಚ್ಚಿಸಿಕೊಳ್ಳಲು ಮಾತನಾಡುವಿರಿ. ಶತ್ರುಗಳಿಗೆ ನೀವೇ ಕೇಂದ್ರಬಿಂದು ಆಗಿರಬಹುದು. ನಿಮ್ಮ ಯೋಜನೆಗೆ ತಗುಲುವ ಲೆಕ್ಕಾಚಾರವು ತಪ್ಪಾಗಬಹುದು. ಬಂಧುಗಳ ಜೊತೆ ವಿವಾದವು ಏರ್ಪಡಲಿದ್ದು ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯವೂ ಬರಬಹುದು. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಬಹಳ ಪ್ರಯತ್ನಶೀಲರಾಗುವರು. ನಿಮಗೆ ತಾಳ್ಮೆಯೂ ಬಹಳ ಮುಖ್ಯವಾಗುವುದು. ಅಧ್ಯಾತ್ಮದಲ್ಲಿ ಹೆಚ್ಚು ಮನಸ್ಸು ಇರುವುದು. ನಿಮ್ಮ ವ್ಯಾಪಾರದಿಂದ ಅಧಿಕ ಲಾಭವು ಸಿಗುವುದು. ಅಧಿಕಾರಿ ವರ್ಗದವರ ಕಣ್ಣು ನಿಮ್ಮ ಮೇಲೆ ಇರಲಿದೆ. ಸಣ್ಣ ಅಹಂಕಾರವು ನಿಮ್ಮನ್ನು ಕೆಡಿಸಬಹುದು.