AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಐದು ರಾಶಿಯವರು ಒಂದಲ್ಲಾ ಒಂದು ಸಲ ಭಾರೀ ಮೊತ್ತದ ಹಣ ಕಳೆದುಕೊಳ್ಳುತ್ತಾರೆ; ಇಲ್ಲಿದೆ ನಷ್ಟದ ಕಾರಣಗಳು

ಐದು ರಾಶಿಯವರಿಗೆ ಬಹಳ ಮುಖ್ಯವಾದ ಎಚ್ಚರಿಕೆಯಿಂದ ಇರಬೇಕು. ಅದೇನೆಂದರೆ ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ತಾವು ದುಡಿದ ಹಣದ ದೊಡ್ಡ ಪಾಲನ್ನು ಇವರು ಕಳೆದುಕೊಳ್ಳುತ್ತಾರೆ. ಆದ್ದರಿಂದ ಬಹಳ ಎಚ್ಚರಿಕೆ ವಹಿಸಿ, ನಿರ್ಧಾರ ತೆಗೆದುಕೊಳ್ಳಬೇಕು.

ಈ ಐದು ರಾಶಿಯವರು ಒಂದಲ್ಲಾ ಒಂದು ಸಲ ಭಾರೀ ಮೊತ್ತದ ಹಣ ಕಳೆದುಕೊಳ್ಳುತ್ತಾರೆ; ಇಲ್ಲಿದೆ ನಷ್ಟದ ಕಾರಣಗಳು
horoscope
TV9 Web
| Edited By: |

Updated on: Jun 27, 2023 | 3:17 PM

Share

ಯಾರನ್ನಾದರೂ ನಂಬಿ, ಹಣ ಹೂಡಿಕೆ ಮಾಡಿ, ಆ ನಂತರ ಮೋಸ ಹೋದ ಅನುಭವ ಬಹಳ ಬೆಲೆ ಕೇಳುವಂಥದ್ದು. ಅಥವಾ ಅತ್ಯುತ್ಸಾಹ, ವಿಪರೀತ ವಿಶ್ವಾಸದಿಂದ ತೆಗೆದುಕೊಂಡ ನಿರ್ಧಾರ ಸಹ ಕೆಲವು ಸಲ ಸರಿಯಾಗಿಯೇ ಕೈ ಕೊಡುತ್ತದೆ. ಐದು ರಾಶಿಯವರಿಗೆ ಬಹಳ ಮುಖ್ಯವಾದ ಎಚ್ಚರಿಕೆಯಿಂದ ಇರಬೇಕು. ಅದೇನೆಂದರೆ ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ತಾವು ದುಡಿದ ಹಣದ ದೊಡ್ಡ ಪಾಲನ್ನು ಇವರು ಕಳೆದುಕೊಳ್ಳುತ್ತಾರೆ. ಆದ್ದರಿಂದ ಬಹಳ ಎಚ್ಚರಿಕೆ ವಹಿಸಿ, ನಿರ್ಧಾರ ತೆಗೆದುಕೊಳ್ಳಬೇಕು.

ವೃಷಭ

ಮತ್ತೊಬ್ಬ ವ್ಯಕ್ತಿಗೆ ಬಹಳ ಕಷ್ಟ ಇದೆ, ಒಂದು ಸಲ ಸಹಾಯ ಮಾಡಿದರೆ ಅದರಿಂದ ಅವರು ಉದ್ಧಾರ ಆಗುತ್ತಾರೆ ಎಂದುಕೊಂಡು ಈ ರಾಶಿಯವರು ಮಾಡಿದ ಸಹಾಯದಿಂದ ದೊಡ್ಡ ಸಮಸ್ಯೆಯನ್ನೇ ಎದುರಿಸುವಂತಾಗುತ್ತದೆ. ಈ ರಾಶಿಯವರಲ್ಲಿ ಕೆಲವರು ತಮ್ಮ ಮನೆ, ಆಸ್ತಿಯನ್ನು ಅಡಮಾನ ಮಾಡಿ, ನೆರವಾಗಿರುವ ಉದಾಹರಣೆ ಸಹ ಕಂಡುಬರುತ್ತದೆ. ಇದಾದ ಮೇಲೆ ಸಹಾಯ ಪಡೆದ ವ್ಯಕ್ತಿಯು ಹಳೆಯದನ್ನೆಲ್ಲ ಮರೆತು ತಾನು ನೆಮ್ಮದಿಯಾಗಿ ಉಳಿದು, ಈ ವೃಷಭ ರಾಶಿಯವರನ್ನೇ ಸಂಕಷ್ಟಕ್ಕೆ ಸಿಲುಕಿಸುತ್ತಾರೆ.

ಸಿಂಹ

ಕಷ್ಟವೋ- ನಷ್ಟವೋ, ಸಾಲವೋ- ಸೋಲವೋ ನಾನು ಹೇಳಿದ್ದೇ ಆಗಬೇಕು ಎಂಬ ಇವರ ಹಠದ ಕಾರಣಕ್ಕೆ ದೊಡ್ಡ ಮೊತ್ತವನ್ನು ಕಳೆದುಕೊಳ್ಳುವಂತಾಗುತ್ತದೆ. ವ್ಯಾಪಾರ- ವ್ಯವಹಾರ, ಷೇರು ಮಾರುಕಟ್ಟೆ ಹೂಡಿಕೆ ಮಾಡುತ್ತಾರೆ ಅಂತಾದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಅನುಭವಿಗಳ ಸಲಹೆ, ಕುಟುಂಬದವರು ಹೇಳಿದ ಮಾತನ್ನು ಕೇಳಿಸಿಕೊಳ್ಳಬೇಕು, ಅನುಸರಿಸಬೇಕು. ಮುಖ್ಯವಾಗಿ, ನನಗೆ ಎಲ್ಲ ಗೊತ್ತು, ನಾನು ತೀರ್ಮಾನ ಮಾಡ್ತೀನಿ ಎಂಬ ಧೋರಣೆ ಬೇಡ.

ವೃಶ್ಚಿಕ

ಭೂಮಿ ಮೇಲಿನ ಹೂಡಿಕೆಯಲ್ಲಿ ಭಾರೀ ಹಣವನ್ನು ಕಳೆದುಕೊಳ್ಳುವಂಥ ಯೋಗ ಇವರ ಪಾಲಿಗಿದೆ. ಆತುರವಾಗಿ ತೆಗೆದುಕೊಂಡಂಥ ನಿರ್ಧಾರವು ಇವರು ಪರಿತಪಿಸುವಂತೆ ಮಾಡುತ್ತದೆ. ನಿಮ್ಮ ಅನುಭವ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಏನೇ ಇದ್ದರೂ ಹುಂಬತನದಿಂದಾಗಿ ಹಣ ಕಳೆದುಕೊಳ್ಳುವಂತಾಗುತ್ತದೆ. ಅದರಲ್ಲೂ ಭೂಮಿ, ಮನೆ ಇತ್ಯಾದಿ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಇದನ್ನೂ ಓದಿ: Jupiter transit in Aries: ಗುರು ಗ್ರಹದ ಸಮಸ್ಯೆ ಇರುವ ಈ ಲಗ್ನ, ರಾಶಿಯವರು ಬಹಳ ಜಾಗ್ರತೆಯಿಂದ ಇರಬೇಕು

ಮಕರ

ಒಂದೋ ಬಡ್ಡಿ ಆಸೆಗೆ ಬಿದ್ದು ಅಥವಾ ತಮ್ಮನ್ನು ಹೊಗಳಿದರು ಅನ್ನುವ ಕಾರಣಕ್ಕೆ ಕೈಲಿರುವ ಹಣವನ್ನು ಸಾಲ ಕೊಟ್ಟು ಕಳೆದುಕೊಳ್ಳವಂಥ ಯೋಗ ಇವರಿಗೆ ಇರುತ್ತದೆ. ಆದ್ದರಿಂದ ಇವರು ಇನ್ನೊಬ್ಬರಿಗೆ ಹಣ ನೀಡಬಾರದು. ಇನ್ನು ಈ ರಾಶಿಯವರ ಪೈಕಿ ಕೆಲವರು ಪಾರ್ಟನರ್ ಷಿಪ್ ವ್ಯವಹಾರದಲ್ಲೂ ಹಣ ಕಳೆದುಕೊಳ್ಳವಂಥ ಯೋಗ ಇರುತ್ತದೆ. ವಿಪರೀತ ಶ್ರಮಪಟ್ಟು ದುಡಿಯುವ ಈ ರಾಶಿಯವರು ತಮ್ಮ ಮನೆಯವರಿಗೆ ಗೊತ್ತಾಗದಂತೆ ವ್ಯವಹಾರ ಮಾಡಬಾರದು.

ಮೀನ

ಈ ರಾಶಿಯವರು ಅಧಿಕಾರ ಹಿಡಿಯುವ ಸಲುವಾಗಿ ಮಾಡುವ ಪ್ರಯತ್ನದಲ್ಲಿ ಹಣವನ್ನು ಕಳೆದುಕೊಳ್ಳುತ್ತಾರೆ. ರಾಜಕಾರಣದಲ್ಲಿ ಇದ್ದರಂತೂ ಗೆಲುವೋ ಸೋಲೋ ಆದರೆ ಇವರ ಪಾಲಿಗೆ ಹಣದ ನಷ್ಟ ಕಟ್ಟಿಟ್ಟ ಬುತ್ತಿ. ಇವರಲ್ಲಿ ಕೆಲವರು ಅಪರೂಪದ ವಸ್ತುಗಳನ್ನು ಖರೀದಿ ಮಾಡುವ ಹವ್ಯಾಸ ಇರುವವರಿರುತ್ತಾರೆ. ಅಂಥ ಅಪರೂಪದ ವಸ್ತು ಸಂಗ್ರಹ ಮಾಡುವ ಪ್ರಯತ್ನದಲ್ಲಿ ವಂಚನೆಗೆ ಒಳಗಾಗುವಂಥವರು ಇರುತ್ತಾರೆ.

ರಾಶಿಭವಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಡಿಸಿಎಂಗಳ ಆಯ್ಕೆಯೇ ಈಗ ಕಾಂಗ್ರೆಸ್​​ ಹೈಕಮಾಂಡ್​​ಗೆ ದೊಡ್ಡ ಸವಾಲು!
ಡಿಸಿಎಂಗಳ ಆಯ್ಕೆಯೇ ಈಗ ಕಾಂಗ್ರೆಸ್​​ ಹೈಕಮಾಂಡ್​​ಗೆ ದೊಡ್ಡ ಸವಾಲು!