AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope in Kannada: ವಾರ ಭವಿಷ್ಯ: ಸಪ್ಟೆಂಬರ್ ತಿಂಗಳ ಎರಡನೇ ವಾರವು ಶುಭವಿದ್ದರೂ ಅದನ್ನು ಪಡೆದುಕೊಳ್ಳುವುದು ಕಷ್ಟ

ಇದು ಸಪ್ಟೆಂಬರ್ ತಿಂಗಳ ಎರಡನೇ ವಾರವು 08 ರಿಂದ 14ರವರೆಗೆ ಇರಲಿದೆ. ಗ್ರಹಗಳಲ್ಲಿ ಅಲ್ಪ ಬದಲಾವಣೆ ಕಾಣುವುದು. ವಿಶೇಷವಾಗಿ ಸೂರ್ಯನು ಸ್ವಕ್ಷೇತ್ರ, ಶುಕ್ರನು ನೀಚ, ಶನಿ ಸ್ವಕ್ಷೇತ್ರದಲ್ಲಿ ಹಾಗೂ ವರ್ಗೋತ್ತಮದಲ್ಲಿ, ಬುಧನು ಉಚ್ಚಗಾಮಿಯಾಗಿ ಇರುವುದು ಅನೇಕ ಅನುಕೂಲ‌ ಹಾಗು ಅಲ್ಪ ಪ್ರತಿಕೂಲಕ್ಕೆ ಕಾರಣವಾಗಿದೆ.

Weekly Horoscope in Kannada: ವಾರ ಭವಿಷ್ಯ: ಸಪ್ಟೆಂಬರ್ ತಿಂಗಳ ಎರಡನೇ ವಾರವು ಶುಭವಿದ್ದರೂ ಅದನ್ನು ಪಡೆದುಕೊಳ್ಳುವುದು ಕಷ್ಟ
ವಾರ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Sep 07, 2024 | 12:04 AM

Share

ಇದು ಸಪ್ಟೆಂಬರ್ ತಿಂಗಳ ಎರಡನೇ ವಾರವು 08 ರಿಂದ 14 ರವರೆಗೆ ಇರಲಿದೆ. ಗ್ರಹಗಳಲ್ಲಿ ಅಲ್ಪ ಬದಲಾವಣೆ ಕಾಣುವುದು. ವಿಶೇಷವಾಗಿ ಸೂರ್ಯನು ಸ್ವಕ್ಷೇತ್ರ, ಶುಕ್ರನು ನೀಚ, ಶನಿ ಸ್ವಕ್ಷೇತ್ರದಲ್ಲಿ ಹಾಗೂ ವರ್ಗೋತ್ತಮದಲ್ಲಿ, ಬುಧನು ಉಚ್ಚಗಾಮಿಯಾಗಿ ಇರುವುದು ಅನೇಕ ಅನುಕೂಲ‌ ಹಾಗು ಅಲ್ಪ ಪ್ರತಿಕೂಲಕ್ಕೆ ಕಾರಣವಾಗಿದೆ. ಅನುಕೂಲ ಗ್ರಹಗಳು ಶುಭ ಏಕಾದಶ ಸ್ಥಾನದ ಫಲವನ್ನು ನೀಡಲಿ.

ಮೇಷ ರಾಶಿ : ಇದು ಸಪ್ಟೆಂಬರ್ ತಿಂಗಳ‌ ಎರಡನೇ ವಾರವಾಗಿ, ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಶುಭವು ಹೆಚ್ಚು ಗೋಚರಿಸುವುದು. ದ್ವಿತೀಯದಲ್ಲಿ ಗುರುವು ನಿಮಗೆ ಎಲ್ಲ ಕಡೆಯಿಂದ ಸುಖದ ಸ್ಥಾನವನ್ನು ಪರಿಚಯಿಸುವನು. ಭೋಗ ವಸ್ತುಗಳ ನಷ್ಟ ಅಥವಾ ದುರಸ್ತಿ ಮಾಡಬೇಕಾಗುವುದು. ಮಾಡುವ ಕಾರ್ಯವನ್ನು ಆದಾಯದ ಮೂಲವಾಗಿ ಮಾಡಿಕೊಳ್ಳುವಿರಿ. ಸಾಮರ್ಥ್ಯವನ್ನು ತೋರಿಸುವ ನಿಮ್ಮ ತಂತ್ರ ವಿಫಲವಾಗುವುದು. ಕಾರ್ತಿಕೇಯನ ಸ್ಮರಣೆ ಮಾಡಿ ಮಾಡಬೇಕಾದ ಕೆಲಸವನ್ನು ಮಾಡಿ.

ವೃಷಭ ರಾಶಿ : ಈ ವಾರ ನಿಮಗೆ ಶುಭವಿದ್ದರೂ ಅದನ್ನು ಪಡೆದುಕೊಳ್ಳುವುದು ಕಷ್ಟ. ನಿಮ್ಮ ಸಕಾರಾತ್ಮಕ ಆಲೋಚನಗಳು ವಿಪರೀತವಾಗಿ ಕಾಣಿಸುವುದು. ಸಂಗಾತಿಯ ಬಗ್ಗೆ ಸದಭಿಪ್ರಾಯದ ಕೊರತೆ ಕಾಣಿಸುವುದು. ಕುಟುಂಬದ ಜೊತೆ ಅನ್ಯೋನ್ಯತೆಯಿಂದ ಇರುವಿರಿ. ಮಕ್ಕಳ ವಿಚಾರದಲ್ಲಿ ಸಂತೋಷವು ಇರದು. ಉದ್ಯೋಗದಲ್ಲಿ ಸ್ಥಿರತೆಯಿಂದ ನೆಮ್ಮದಿ ನಿಮ್ಮದಾಗಲಿದೆ. ಕಾಲಿನಲ್ಲಿ ಆದ ಗಾಯವು ನಿಮಗೆ ಹಿಂಸೆ ಕೊಡುವುದು‌. ಕಡಿಮೆ ಆದಂತೆ ಕಂಡರೂ ಮತ್ತೆ ಅಧಿಕವಾಗುವುದು. ಧನ್ವಂತರಿಯ ಪ್ರಾರ್ಥನೆ‌ ಮಾಡಿ ಔಷಧಿ ಸೇವಿಸಿ.

ಮಿಥುನ ರಾಶಿ : ರಾಶಿ ಚಕ್ರದ ಮೂರನೆಯ ರಾಶಿಯವರಿಗೆ ಈ ವಾರ ಅಶುಭ.‌ ಗುರುವು ದ್ವಾದಶದಲ್ಲಿ ಇದ್ದು ಬಲಹೀನನಾಗಿ ಶುಭವನ್ನು ಕೊಡಲು ಅಶಕ್ತ. ರಾಶಿಯ ಅಧಿಪತಿ ಬುಧ ತೃತೀಯದಲ್ಲಿ ಇದ್ದಾನೆ. ತಕ್ಕಮಟ್ಟಿನ‌ ಸಾಮರ್ಥ್ಯ ಸ್ವಭಾವಗಳು ಇತರರಿಗೆ ಗೊತ್ತಾಗುವುದು. ಸಂಗಾತಿಯ ವಿರೋಧವನ್ನು ಕಟ್ಟಕೊಳ್ಳಬೇಕು. ಹೊಂದಾಣಿಕೆ ಕಷ್ಟವಾಗುವುದು. ತಂದೆಯಿಂದ ದೂರವಿರುವಿರಿ. ಕುಟುಂಬದ ಮಮತೆ ನಿಮಗೆ ಸಿಗದು. ಕುಜನು ನಿಮ್ಮ ರಾಶಿಯಲ್ಲಿ ಇರುವ ಕಾರಣ, ಒಂದೊಂದೇ ನಕಾರಾತ್ಮಕ ಆಲೋಚನೆಯನ್ನು ಹೆಚ್ಚಿಸುವನು. ರಾಮತಾರಕ ಮಂತ್ರವನ್ನು ಪಠಿಸಿ.

ಕರ್ಕಾಟಕ ರಾಶಿ : ಈ ವಾರ ನಿಮಗೆ ಉತ್ತಮ ಫಲಗಳು ಹೆಚ್ಚು ಕಾಣಿಸುವುದು. ಯಂತ್ರಗಳಿಂದ‌ ನಷ್ಟ‌ ಕಂಡರೂ ಅನಂತರ ಅದನ್ನು ಸರಿಮಾಡಿಕೊಂಡು ಹೋಗುವಿರಿ. ವಿವಾಹ ವಿಳಂಬಕ್ಕೆ ಬೇಸರವಾಗಲಿದೆ. ಉದ್ಯೋಗದಲ್ಲಿ ಶತ್ರುಗಳು ಹುಟ್ಟಿಕೊಳ್ಳುವರು. ಪ್ರತಿಭೆಯ ಅನಾವರಣಕ್ಕೆ ತಡೆಯಾಗಲಿದೆ. ಕಲಾವಿದರು ತೆರೆಯ ಮರೆಯಲ್ಲಿ ಈ ವಾರ ಇರಬೇಕಾದೀತು. ಕೃತಘ್ನತೆಯನ್ನು ಹೆಚ್ಚು ತೋರಿಸುವಿರಿ. ಕುಲದೇವರ ಆರಾಧನೆಯಿಂದ ತೊಂದರೆಯನ್ನು ಪರಿಹರಿಸಿಕೊಳ್ಳುವ ಮಾರ್ಗವು ಸಿಗಲಿದೆ.

ಸಿಂಹ ರಾಶಿ : ಇದು ಸಪ್ಟೆಂಬರ್ ತಿಂಗಳ ಮೂರನೇ ವಾರವಾಗಿದ್ದು ರಾಶಿ ಚಕ್ರದ ಐದನೇ ರಾಶಿಯವರಿಗೆ ಮಿಶ್ರಫಲವಿದೆ. ಸೂರ್ಯನೇ ಸ್ವರಾಶಿಯಲ್ಲಿ ಇರುವಾಗ ಆರೋಗ್ಯವು ಕೆಟ್ಟರೂ ಅನಂತರ ಸರಿಯಾಗುವುದು. ಮುಖದ ಮೇಲೆ ಏನಾದರೂ ಚರ್ಮರೋಗವು ಕಾಣಿಸುವುದು. ಉದ್ಯೋಗದ ಹುಡುಕಾಟ ನಿಮಗೆ ಬೇಸರ ತರಿಸುವುದು. ಆಡಳಿತ ವರ್ಗದಲ್ಲಿ ಇರುವವರಿಗೆ ಒಳ್ಳೆಯ ವಾರ. ಸಂಗಾತಿಯಿಂದ ದೂರವಿರಬೇಕಾಗುವುದು. ನಾಗರ ಬಿಂಬಕ್ಕೆ‌ ಕ್ಷೀರ ಅಭಿಷೇಕ ಮಾಡಿ.

ಕನ್ಯಾ ರಾಶಿ : ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ವಾರ ಶುಭವಿದೆ. ಸೊಂಟಕ್ಕೆ ಸಂಬಂಧಿಸಿದ ನೋವು ಕಾಣಿಸಿಕೊಳ್ಳುವುದು. ವೈವಾಹಿಕ ಅಡೆತಡೆಗಳನ್ನು ನೀವು ಯಾರದ್ದೋ ಮೂಲಕ ಮೀರಬೇಕಾಗುವುದು. ಔಷಧ ವ್ಯಾಪಾರವು ಕಳೆಗುಂದುವುದು. ಮಾನ ಸನ್ಮಾನಗಳು ನಡೆದರೂ ನಿಮಗೆ ಇದರಿಂದ ಖುಷಿ ಸಿಗದು. ಶತ್ರುಗಳು ನಿಮ್ಮಿಂದ ದೂರಸರಿಯುವರು. ಬಂಧುಗಳನ್ನು ಕಳೆದುಕೊಳ್ಳುವ ಸ್ಥಿತಿ ಬರುವುದು. ಇಷ್ಟದೇವರಲ್ಲಿ ಅನನ್ಯ ಭಕ್ತಿಯಿಂದ ಅಭೀಷ್ಟವನ್ನು ಪ್ರಾರ್ಥಿಸಿ.

ತುಲಾ ರಾಶಿ : ಸಪ್ಟೆಂಬರ್ ತಿಂಗಳ ಈ ವಾರದಲ್ಲಿ ನಿಮಗೆ ಸಂಕಟದ ದಿನಗಳೇ ಹೆಚ್ಚು ಗೊತ್ತಾಗುವುದು. ಕೈ ಹಾಕಿದ ಕಾರ್ಯವನ್ನು ನೀವು ಅಂದುಕೊಂಡಂತೆ ಆಗದು ಎಂಬ ಬೇಸರ ಇರಲಿದೆ. ದೈಹಿಕ‌ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಷ್ಟವಸದೀತು. ಒಂದು ರೋಗಕ್ಕೆ ಮಾಡಿದ ಔಷಧಿ ಇನ್ನೊಂದು ರೋಗಕ್ಕೆ ಬಾರದು. ಈ ವಾರ ವ್ಯಾವಹಾರಿಕ ವಿಚಾರದಲ್ಲಿ ಸೋಲು. ನಿಮ್ಮ ಆಯ್ಕೆಗಳು ತಪ್ಪಾಗಿ ನಷ್ಟವೂ ಆಗುವುದು. ಮಹಾಲಕ್ಷ್ಮಿಯ ಅನುಗ್ರಹಕ್ಕಾಗಿ ಪ್ರಾರ್ಥಿಸಿ.

ವೃಶ್ಚಿಕ ರಾಶಿ : ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಹೆಚ್ಚು ಶುಭವು ಸಿಗಲಿದೆ. ಅನುಭವಿಸಿದ ಸಂಕಷ್ಟಗಳು ಒಂದೊಂದಾಗಿ‌ ಕಳೆಯುವುದು. ಮಕ್ಕಳ ವಿಚಾರದಲ್ಲಿ ನಿಮಗೆ ತೃಪ್ತಿ ಇರದು. ಭೋಗ ವಸ್ತುಗಳನ್ನು ಹೆಚ್ಚು ಬಳಸುವಿರಿ. ಅದಕ್ಕಾಗಿ ಹಣವನ್ನು ಖರ್ಚುಮಾಡುವಿರಿ. ಸಹಾಸ ಕಾರ್ಯದಲ್ಲಿ ತೊಡಗುವವರಿಗೆ ಎಚ್ಚರಿಕೆ ಬೇಕು. ಈ ವಾರ ವಿದೇಶ ಸಂಚಾರದ ಯೋಜನೆಯನ್ನು ತಯಾರಿಸುವಿರಿ. ಸರ್ಕಾರದ ಕೆಲಸವನ್ನು ಈ ವಾರದಲ್ಲಿ ಮಾಡಬೇಕಾಗುವುದು. ವಲ್ಲೀಸಹಿತನಾದ ಸುಬ್ರಹ್ಮಣ್ಯನ್ನು‌ ಸ್ತುತಿಸಿ ಅನುಗ್ರಹ ಪಡೆಯಿರಿ.

ಧನಸ್ಸು ರಾಶಿ : ಸಪ್ಟೆಂಬರ್ ತಿಂಗಳ ಎರಡನೇ ವಾರ ಅಶುಭವೇ ಅಧಿಕವಾಗಿ ಕಾಣಿಸುವುದು. ಯಾವುದೂ ಬೇಡ ಎಂಬ ತೀರ್ಮಾನಕ್ಕೆ ನೀವು ಬರುವಿರಿ. ಹಣಕಾಸಿಗೆ ಸಂಬಂಧಿಸಿದ ಒಂದೊಂದೆ ಸಮಸ್ಯೆಗಳು ಬರುವುದು. ಯಾವುದು ಮುಖ್ಯ ಅಮುಖ್ಯ ಎಂಬ ಗೊಂದಲದಲ್ಲಿ ನೀವಿರುಬಿರಿ. ಕೌಟುಂಬಿಕ ಶಾಂತಿಯು ಹಾಳಾಗಿ ನೀವೇ ಮನೆಯಿಂದ ದೂರವಿರಬೇಕಾದೀತು. ರಾಜಕೀಯದ ವ್ಯಕ್ತಿಗಳು ಯಥಾಸ್ಥಿತಿಯನ್ನು ಕಾಪಾಡಿಕೊಂಡರಷ್ಟೇ ಒಳ್ಳೆಯದೇ. ನಕಾರಾತ್ಮಕ ಹೇಳಿಕೆಗಳಿಂದ ನಿಮಗೆ ಕುತ್ತುಬರಬಹುದು. ಅಲೆದಾಟದಿಂದ ಮಾನಸಿಕವಾಗಿ ಕುಗ್ಗುವಿರಿ. ಗುರುದರ್ಶನ ಅಥವಾ ಗುರುವಿನ ಸಹವಾಸದಲ್ಲಿ ನೀವಿರುವುದು ಒಳ್ಳೆಯದು.

ಮಕರ ರಾಶಿ : ಈ ವಾರದಲ್ಲಿ ಹತ್ತನೇ ರಾಶಿಯವರಿಗೆ ಪ್ರಗತಿ ಇದ್ದರೂ ಅಲ್ಲಲ್ಲಿ ತೊಡಕುಗಳು ಕಾಣಿಸಿಕೊಳ್ಳುವುವು. ರಾಶಿಯ ಅಧಿಪತಿ ದ್ವಿತೀಯದಲ್ಲಿ ಇರುವ ಕಾರಣ ಕುಟುಂಬದಲ್ಲಿ ಸಮಾಧಾನ ಇರದು. ಮನಸ್ಸಿಗೆ ಜಾಡ್ಯ ಬರುವುದು. ಆಗಾಗ ಉತ್ಸಾಹ ಕಾಣಿಸಿಕೊಳ್ಳುವುದು. ವೈವಾಹಿಕ ಮಾತುಕತೆಗಳು ಒಮ್ಮೆ ಬಂದುಹೋಗುವುದು. ಆಸ್ತಿ ಖರೀದಿಯನ್ನು ಮಾಡದೇ ಕೇವಲ ವ್ಯವಹಾರವನ್ನಷ್ಟನ್ನೇ ಮಾಡಿ. ತೃತೀಯದಲ್ಲಿ ರಾಹು ಪಂಚಮದಲ್ಲಿ ಗುರು ಇರುವುದು ಉತ್ತಮ‌ ಸಮಯದಲ್ಲಿ ನೀವಿರುವಿರಿ. ಆದರೆ ಎಲ್ಲ ಸಮಯವೂ ಅಲ್ಲ. ಶಿವ ಪಂಚಾಕ್ಷರವನ್ನು ಪಠಿಸಿ.

ಕುಂಭ ರಾಶಿ : ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರ ಶುಭಾಶುಭಫಲ ಇರುವುದು. ವಾಹನ ಖರೀದಿ ಹಾಗೂ ಸಂಚಾರದಲ್ಲಿ ಜಾಗರೂಕರಾಗಿರಿ.‌ ಶುಕ್ರನು ನವಮದಲ್ಲಿ ಇದ್ದು ನೀಚನಾಗಿದ್ದಾನೆ. ಕಲಾವಿದರಿಗೆ ಚಿಂತಾಜನಕ ಸ್ಥಿತಿ. ಕೈಗೆ ಬಂದದ್ದು ಸಿಗದೇ ಹೋಗುವುದು. ಈ ವಾರ ನಡೆಯುವ ಉದ್ವೇಗದ ಸಂದರ್ಭವನ್ನು ಸಮಭಾವದಿಂದ ತೆಗೆದುಕೊಳ್ಳಿ. ಅನಾರೋಗ್ಯದ ಕಾರಣ ನೀವೇ ವೈದ್ಯರ ಸಲಹೆಯನ್ನು ಪಡೆದು ಮುಂದುವರಿಯಬೇಕು. ಕುಟುಂಬದ ಅಸೌಖ್ಯವು ಈ ವಾರ ನಿವಾರಣೆಯಾಗಲಿದೆ. ರಾಜಕೀಯ ನಾಯಕರಿಗೆ ಪದವಿಯಲ್ಲಿ ಸುಖವಿರದು.‌ ನಿಮ್ಮವರಿಂದ ನಿಮ್ಮ ತೇಜೋವಧೆ ಆಗುವುದು. ಶನೈಶ್ಚರಿನಿಗೆ ದೀಪವನ್ನು ಬೆಳಗಿ.

ಮೀನ ರಾಶಿ : ಇದು ಸಪ್ಟೆಂಬರ್ ತಿಂಗಳ ಎರಡನೇ ವಾರವಾಗಿದ್ದು ಮಿಶ್ರಫಲವು ನಿಮಗಿರಲಿದೆ. ಪ್ರತಿದಿನ ಆಗುವ ಕಾರ್ಯವೇ ಆದರೂ ಈ ವಾರದಲ್ಲಿ ಅದನ್ನು ಬೇರೆ ರೀತಿಯಲ್ಲಿ ಮಾಡಲು ಆಲೋಚಿಸುವಿರಿ. ಈ ವಾರ ಆಪ್ತರಿಂದ ಅವಮಾನಗಳು ಇರುತ್ತದೆ. ಹಣಕಾಸಿಗೆ ತೊಂದರೆಯನ್ನು ನೀಗಿಸಿಕೊಳ್ಳಲು ಬೇಕಾದ ಪ್ರಯತ್ನ ಇರುತ್ತದೆ. ತೊಂದರೆ ಎದುರಾದರೆ ಎದೆಗುಂದದೆ ಸತ್ಯದ ದಾರಿಯಲ್ಲಿ ನಡೆಯಿರಿ. ಪ್ರಾಮಾಣಿಕತೆಯ ಬಗೆಗೆ ನಿಮಗೆ ಗೊಂದಲವಿರುವುದು. ಕುಲಗುರುವಿನ ಆಶೀರ್ವಾದ ನಿಮಗೆ ಅಗತ್ಯ.

ಲೋಹಿತ ಹೆಬ್ಬಾರ್-8762924271 (what’s app only)

ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು