Marriage Horoscope: ವಿವಾಹದ ಕನಸನ್ನು ನನಸು ಮಾಡಿಕೊಳ್ಳಬೇಕಾ? ಯಾರಿಗೆ ಯಾವ ಕಡೆಯಿಂದ ಎಂತಹ ಸಂಗಾತಿ ಸಿಗಬಹುದು?

ಕರ್ಕಾಟಕ ರಾಶಿಯವರು ಸಂಗಾತಿಯ ಅನ್ವೇಷಣೆ ಮಾಡುತ್ತಿದ್ದರೆ ವಿವಾಹವಾಗಬಹುದು. ಪ್ರೇಮ ವಿವಾಹಕ್ಕೂ ಈ ವರ್ಷ ಅವಕಾಶವಿದೆ. ಮಕರ ರಾಶಿಯವರಿಗೆ ವಿವಾಹ ಯೋಗವಿದೆ. ಉತ್ತಮ ಕುಟುಂಬದ ಸಂಗಾತಿಯು ಸಿಗಲಿದ್ದಾರೆ. ಮದುವೆಗೆ ಸಂಬಂಧಿಸಿದ ಜ್ಯೋತಿಷ್ಯ ವಿಶ್ಲೇಷಣೆ ಇಲ್ಲಿದೆ

Marriage Horoscope: ವಿವಾಹದ ಕನಸನ್ನು ನನಸು ಮಾಡಿಕೊಳ್ಳಬೇಕಾ? ಯಾರಿಗೆ ಯಾವ ಕಡೆಯಿಂದ ಎಂತಹ ಸಂಗಾತಿ ಸಿಗಬಹುದು?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 26, 2024 | 9:18 AM

ಮಕ್ಕಳಿಗೆ ವಿವಾಹ ಮಾಡಿಸಬೇಕು ಎನ್ನುವುದು ಎಲ್ಲ ತಂದೆ ತಾಯಿಗಳ ಆಸೆ. ಆದರೆ ಸರಿಯಾಗಿ ಗಂಡು ಸಿಗುವುದಿಲ್ಲ, ಹೆಣ್ಣು ಸಿಗುವುದಿಲ್ಲ ಎಂಬ ಕೊರಗೂ ಇದ್ದೇ ಇದೆ. ಆದರೂ ವಿವಾಹ ಮಾಡಬೇಕೆಂಬ ಛಲ ಮಾತ್ರ ಕಡಿಮೆಯಾಗದು. ನಾವು ಗಟ್ಟಿಯಿರುವಾಗಲೇ ಮಕ್ಕಳಿಗೆ ಒಂದು ದಾರಿ ತೋರಿಸಬೇಕು ಎನ್ನುವುದೇ ಎಲ್ಲ ತಂದೆ ತಾಯಿಗಳ ಕನಸು. ಅದಕ್ಕೆ ಕಾಲವೂ ಕೂಡಿ ಬರಬೇಕು. ಗ್ರಹಗತಿಗಳ ಅನುಕೂಲತೆಯಿಂದ ಅಥವಾ ದೈವಾನುಕೂಲದಿಂದ ಅದು ಸಾಧ್ಯ.

ದೈವಾನುಕೂಲವನ್ನು ಗೊತ್ತು ಮಾಡಿಕೊಳ್ಳುವುದು ಗ್ರಹಗಳ‌ ಮೂಲಕ. ಈ ವರ್ಷ ಯಾವ ರಾಶಿ ವಿವಾಹವನ್ನು ಮಾಡಿಕೊಳ್ಳುತ್ತಾರೆ ಅಥವಾ ಮಾಡಿಕೊಳ್ಳುವ ಅವಕಾಶ ಇದೆ ಎನ್ನುವುದನ್ನು ನೋಡೋಣ.

ಮೇಷ ರಾಶಿ :

ಇವರಿಗೆ ಈ ವರ್ಷ ವಿವಾಹ ಮಾಡಿಕೊಳ್ಳಬಹುದು. ಪ್ರೇಮದಲ್ಲಿ ಇದ್ದರೆ ಹಿರಿಯರ ನಿಶ್ಚಯದೊಂದಿಗೆ ಈ ಅವಕಾಶವನ್ನು ಮಾಡಿಕೊಳ್ಳಬಹುದು. ಸಂಗಾತಿಯನ್ನು ಹುಡುಕುತ್ತಿದ್ದರೆ ಅವರಿಗೂ ಸಿಗುವುದು. ಪಶ್ಚಿಮ‌ ದಿಕ್ಕಿನ ಕಡೆಯಿಂದ ನಿಮಗೆ ಸಂಗಾತಿಯ ಲಾಭವಾಗಲಿದೆ. ನಗರ ಪ್ರದೇಶದ ಸಂಗಾತಿಯನ್ನು ನೀವು ವರಿಸುವ ಸಂದರ್ಭವು ಬರುವುದು. ಲಕ್ಷಣವುಳ್ಳ ಸಂಗಾತಿಯ ಪ್ರಾಪ್ತಿಯಾಗಲಿದೆ.

ಕರ್ಕಾಟಕ ರಾಶಿ :

ಈ ರಾಶಿಯವರೂ ಕೂಡ ಸಂಗಾತಿಯ ಅನ್ವೇಷಣೆ ಮಾಡುತ್ತಿದ್ದರೆ ವಿವಾಹವಾಗಬಹುದು. ಪ್ರೇಮ ವಿವಾಹಕ್ಕೂ ಈ ವರ್ಷ ಅವಕಾಶವಿದೆ. ದಕ್ಷಿಣ ದಿಕ್ಕಿನಿಂದ ಸಂಗಾತಿಯ ಪ್ರಾಪ್ತಿಯಾಗುವುದು. ಗ್ರಾಮೀಣ ವಾಸಿಯಾದವರನ್ನು ಸಂಗಾತಿಯಾಗಿ ಪಡೆಯುವಿರಿ.

ವೃಶ್ಚಿಕ ರಾಶಿ :

ಇವರಿಗೂ ಈ ವರ್ಷ ವಿವಾಹ ಯೋಗವಿದೆ. ಪ್ರೇಮ ವಿವಾಹವೂ ಎಲ್ಲರ ಒಪ್ಪಿಗೆಯಿಂದ ನಡೆಯಲಿದೆ. ರೂಪವುಳ್ಳ ಸಂಗಾತಿಯು ಸಿಗುವರು. ದಕ್ಷಿಣ ದಿಕ್ಕಿನಲ್ಲಿ ಸಂಗಾತಿಯನ್ನು ಅನ್ವೇಷಿಸಬಹುದು. ಹಳ್ಳಿಯಲ್ಲಿ ವಾಸಿಸುವವರು ಅಥವಾ ಹಳ್ಳಿಯಲ್ಲಿ ಆಸ್ತಿಯನ್ನು ಹೊಂದಿರುವವರು ಸಂಗಾತಿಯಾಗಿ ಸಿಗುವರು.

ಮಕರ ರಾಶಿ :

ಈ ರಾಶಿಯವರಿಗೆ ವಿವಾಹ ಯೋಗವಿದೆ. ಉತ್ತಮ ಕುಟುಂಬದ ಸಂಗಾತಿಯು ಸಿಗಲಿದ್ದಾರೆ. ಪೂರ್ವ ದಿಕ್ಕಿನಲ್ಲಿ ವಿವಾಹವನ್ನು ಬಯಸುವವರು ಹುಡುಕಬಹುದು. ಗ್ರಾಮೀಣ ಭಾಗದ ಸಂಗಾತಿಯನ್ನು ಪಡೆಯುವರು.

ಲೋಹಿತ ಹೆಬ್ಬಾರ್ – 8762924271

ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ