2024ನೇ ಸಾಲಿನ CM ಪದಕ ಪ್ರಕಟ: 197 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಗೌರವ
ಕರ್ನಾಟಕ ಸರ್ಕಾರವು 2024ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟಿಸಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಕೆ.ಬಾಬಾ ಅವರನ್ನು ಒಳಗೊಂಡಂತೆ 197 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪುರಸ್ಕೃತರಾಗಿದ್ದಾರೆ. ನಕ್ಸಲ್ ನಿಗ್ರಹದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 22 ಅಧಿಕಾರಿಗಳಿಗೂ ಈ ಪ್ರಶಸ್ತಿ ನೀಡಲಾಗಿದೆ. ಪೊಲೀಸ್ ಇಲಾಖೆಯ ಅತ್ಯುತ್ತಮ ಕಾರ್ಯಕ್ಷಮತೆಗೆ ಈ ಪುರಸ್ಕಾರ ಸಾಕ್ಷಿಯಾಗಿದೆ.

ಬೆಂಗಳೂರು, ಮಾರ್ಚ್ 30: ರಾಜ್ಯ ಸರ್ಕಾರ 2024ನೇ ಸಾಲಿನ ಮುಖ್ಯಮಂತ್ರಿ ಪದಕ (CM Awards) ಪ್ರಕಟಿಸಿದ್ದು, ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಸಿಐಡಿ ಎಸ್ಪಿ ಅನೂಪ್ ಶೆಟ್ಟಿ ಸೇರಿದಂತೆ 197 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಅದೇ ರೀತಿಯಾಗಿ ರಾಜ್ಯದ ಮತ್ತು ನೆರೆ ರಾಜ್ಯದ ನಕ್ಸಲರ (Naxal) ಶರಣಾಗತಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಮುಖ್ಯ ಕಾರ್ಯನಿರ್ವಹಿಸಿದ ರಾಜ್ಯ ಗುಪ್ತವಾರ್ತೆ ಹಾಗೂ ರಾಜ್ಯ ನಕ್ಸಲ್ ನಿಗ್ರಹ ಪಡೆಯ 22 ಅಧಿಕಾರಿ ಮತ್ತು ಸಿಬ್ಬಂದಿಗೂ ಮುಖ್ಯಮಂತ್ರಿ ಪದಕ ನೀಡಲಾಗಿದೆ.
197 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಮುಖ್ಯಮಂತ್ರಿ ಪದಕ
- ಸಿ.ಕೆ. ಬಾಬಾ, ಐಪಿಎಸ್, ಪೊಲೀಸ್ ಅಧೀಕ್ಷಕರು, ಬೆಂಗಳೂರು ಜಿಲ್ಲೆ
- ಡಾ: ಅನೂಪ್ ಎ ಶೆಟ್ಟಿ, ಐಪಿಎಸ್, ಪೊಲೀಸ್ ಅಧೀಕ್ಷಕರು, ಸಿಐಡಿ, ಬೆಂಗಳೂರು
- ಅಂಷುಕುಮಾರ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಹಾವೇರಿ ಜಿಲ್ಲೆ
- ರಾಮನಗೌಡ ಎ ಹಟ್ಟಿ, ಅಡಿಷನಲ್ ಎಸ್ಪಿ, ವಿಜಯಪುರ ಜಿಲ್ಲೆ
- ಸುರೇಶ ಟಿ.ವಿ. ಅಡಿಷನಲ್ ಎಸ್ಪಿ, ರಾಮನಗರ ಜಿಲ್ಲೆ
- ಪ್ರಕಾಶರಾಠೋಡ, ಎಸಿಪಿ, ಕೆ.ಜಿ. ಹಳ್ಳಿ ಉಪ-ವಿಭಾಗ, ಬೆಂಗಳೂರು ನಗರ
- ರೀನಾ ಸುವರ್ಣಾ ಎನ್, ಎಸಿಪಿ, ವೈಟ್ ಫೀಲ್ಡ್ ಉಪ-ವಿಭಾಗ, ಬೆಂಗಳೂರು ನಗರ
- ಧನ್ಯ ಎನ್ ನಾಯಕ, ಎಸಿಪಿ, ಮಂಗಳೂರು ಉಪ-ವಿಭಾಗ, ಮಂಗಳೂರು ನಗರ
- ಶಾಂತಮಲ್ಲಪ್ಪ, ಎಸಿಪಿ, ದೇವರಾಜ ಉಪ-ವಿಭಾಗ, ಮೈಸೂರು ನಗರ
- ಗೋಪಿ ಬಿ.ಆರ್. ಡಿವೈಎಸ್ಪಿ, ಆಳಂದ ಉಪ-ವಿಭಾಗ, ಕಲಬುರಗಿ ಜಿಲ್ಲೆ
- ಅರವಿಂದ ಎನ್ ಕಲಗುಜ್ಜಿ, ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪ-ವಿಭಾಗ, ಉಡುಪಿ ಜಿಲ್ಲೆ
- ಪಾಂಡುರಂಗ ಎಸ್. ಡಿವೈಎಸ್ಪಿ, ಕೆಜಿಎಫ್ ಉಪ-ವಿಭಾಗ, ಕೆಜಿಎಫ್,
- ರವಿಕುಮಾರ್ ಕೆ.ವೈ. ಡಿವೈಎಸ್ಪಿ, ಸೆನ್ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆ
- ಪ್ರಕಾಶ ಪಿ ಬಿ., ಡಿವೈಎಸ್ಪಿ, ಡಿಎಆರ್, ದಾವಣಗೆರೆ ಜಿಲ್ಲೆ
ಇದನ್ನೂ ಓದಿ: ಸದ್ಯದಲ್ಲೇ ಬ್ರಿಟಿಷ್ ಕಾಲದ ಟೋಪಿಗೆ ನಿವೃತ್ತಿ: ಕರ್ನಾಟಕ ಪೊಲೀಸರ ತಲೆ ಅಲಂಕರಿಸಲಿದೆ ಸ್ಮಾರ್ಟ್ ಹ್ಯಾಟ್
- ಜಿ.ವಿ. ಉದಯ್ ಭಾಸ್ಕರ, ಡಿವೈಎಸ್ಪಿ, ಸಿಐಡಿ, ಬೆಂಗಳೂರು
- ಎಂ.ಹೆಚ್. ಪಾಯಿಕ, ಡಿವೈಎಸ್ಪಿ, ಸಿಐಡಿ, ಬೆಂಗಳೂರು
- ಜಯಂತಿ ಪಿ, ಡಿವೈಎಸ್ಪಿ, ಎಸ್ಐಟಿ ಕೆಎಲ್ಎ, ಬೆಂಗಳೂರು
- ಸಿದ್ದಪ್ಪ ಲಕ್ಷ್ಮಪ್ಪ ಕೋಡ್ಲಿವಾಡ, ಸಹಾಯಕ ಕಮಾಂಡೆಂಟ್, 3ನೇ ಪಡೆ, ಕೆಎಸ್ಆರ್ಪಿ, ಬೆಂಗಳೂರು
- ನಾಗೇಶ್ ಜಿ.ಎನ್, ಪೊಲೀಸ್ ಇನ್ಸ್ಪೆಕ್ಟರ್, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ, ಬೆಂಗಳೂರು ನಗರ.
- ದೀಪಕ್ ಆರ್. ಪೊಲೀಸ್ ಇನ್ಸ್ಪೆಕ್ಟರ್, ಜಯನಗರ ಪೊಲೀಸ್ ಠಾಣೆ, ಬೆಂಗಳೂರು ನಗರ
- ಸಂತೋಷ್ ರಾಮ್ ಆರ್, ಪೊಲೀಸ್ ಇನ್ಸ್ಪೆಕ್ಟರ್, ಸಿಸಿಬಿ, ಬೆಂಗಳೂರು ನಗರ
- ಯೋಗೇಶ್ ಎಸ್.ಟಿ, ಪೊಲೀಸ್ ಇನ್ಸ್ಪೆಕ್ಟರ್, ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು ನಗರ
- ಕಾರೆಪ್ಪ ಶಿವಪ್ಪ ಹಟ್ಟಿ, ಪೊಲೀಸ್ ಇನ್ಸ್ಪೆಕ್ಟರ್, ಕೇಶವಪುರ ಪೊಲೀಸ್ ಠಾಣೆ, ಹುಬ್ಬಳ್ಳಿ
- ಮಹಾಂತೇಶ್ ಧಾಮಣ್ಣನವರ್, ಪೊಲೀಸ್ ಇನ್ಸ್ಪೆಕ್ಟರ್, ಮಾರ್ಕೆಟ್ ಪೊಲೀಸ್ ಠಾಣೆ, ಬೆಳಗಾವಿ ನಗರ
- ರಾಘವೇಂದ್ರ. ಪೊಲೀಸ್ ಇನ್ಸ್ಪೆಕ್ಟರ್, ಚೌಕ್ ಪೊಲೀಸ್ ಠಾಣೆ, ಕಲಬುರಗಿ ನಗರ
- ಗುರುಲಿಂಗಪ್ಪ ಗೌಡ ಎಂ ಪಾಟೀಲ, ಸಿಪಿಐ, ಹುಮ್ನಾಬಾದ್ ವೃತ್ತ, ಬೀದರ ಜಿಲ್ಲೆ
- ಸಚಿನ್ ಎಸ್ ಚಲವಾದಿ, ಸಿಪಿಐ, ಹುಣಸಗಿ ವೃತ್ತ, ಯಾದಗಿರಿ ಜಿಲ್ಲೆ
- ತಿಮ್ಮಣ್ಣ, ಪೊಲೀಸ್ ಇನ್ಸ್ಪೆಕ್ಟರ್, ಡಿಸಿಆರ್ಬಿ, ರಾಯಚೂರು ಜಿಲ್ಲೆ ಮತ್ತು ಇತರರು
ಇದನ್ನೂ ಓದಿ: Karnataka: ಕರ್ನಾಟಕದಲ್ಲಿ ಇ-ಪ್ರಸಾದ ಸೇವೆ ಆರಂಭ, ಬೇರೆ ರಾಜ್ಯಗಳ ಭಕ್ತರಿಂದಲೂ ಪ್ರಸಾದಕ್ಕೆ ಬೇಡಿಕೆ
ಇನ್ನು ಹೇಮಂತ್ ಎಂ ನಿಂಬಾಳ್ಳರ್, ಡಾ. ವೈ.ಎಸ್ ರವಿಕುಮಾರ್, ಅಮಿತ್ ಸಿಂಗ್, ಸುಧೀರ್ ಕುಮಾರ್ ರೆಡ್ಡಿ, ಹರಿರಾಮ್ ಶಂಕರ್, ಜಿತೇಂದ್ರ ದ್ಯಾಮ, ಸಿ.ವಿ. ದೀಪಕ್, ರಾಘವೇಂದ್ರ ಆರ್.ನಾಯಕ್, ಪ್ರಕಾಶ್ ಬಿ. ಕರಿಗಾರ, ಸತೀಶ್ ಸೇರಿದಂತೆ ರಾಜ್ಯ ಗುಪ್ತವಾರ್ತೆ ಹಾಗೂ ರಾಜ್ಯ ನಕ್ಸಲ್ ನಿಗ್ರಹ ಪಡೆಯ 22 ಅಧಿಕಾರಿ ಮತ್ತು ಸಿಬ್ಬಂದಿಗೂ ಮುಖ್ಯಮಂತ್ರಿ ಪದಕ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.