ಒನ್ ಡೇ ಟ್ರಿಪ್ ಮಾಡಿ ಕ್ಯಾಬ್ ಚಾಲಕನ ಬಳಿಯೇ ದರೋಡೆ: ಕಾರು ಸಮೇತ ಪರಾರಿಯಾಗಿದ್ದ ಆಸಾಮಿ ಅಂದರ್

ಒನ್ ಡೇ ಟ್ರಿಪ್ ಮಾಡಿ ಕ್ಯಾಬ್ ಚಾಲಕನ ಬಳಿಯೇ ದರೋಡೆ ಮಾಡಿದ ಆರೋಪಿಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿರುವಂತಹ ಘಟನೆ ನಡೆದಿದೆ. ಟೆಕ್ಕಿಯ ಸೋಗಿನಲ್ಲಿ ಬಂದವನಿಂದ ಚಾಕು ತೋರಿಸಿ ದರೋಡೆ ಮಾಡಿದ್ದಲ್ಲದೇ ಕ್ಯಾಬ್​ ಸಮೇತ ಪರಾರಿ ಆಗಿದ್ದ.

ಒನ್ ಡೇ ಟ್ರಿಪ್ ಮಾಡಿ ಕ್ಯಾಬ್ ಚಾಲಕನ ಬಳಿಯೇ ದರೋಡೆ: ಕಾರು ಸಮೇತ ಪರಾರಿಯಾಗಿದ್ದ ಆಸಾಮಿ ಅಂದರ್
ಒನ್ ಡೇ ಟ್ರಿಪ್ ಮಾಡಿ ಕ್ಯಾಬ್ ಚಾಲಕನ ಬಳಿಯೇ ದರೋಡೆ: ಕಾರು ಸಮೇತ ಪರಾರಿಯಾಗಿದ್ದ ಆಸಾಮಿ ಅಂದರ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 15, 2024 | 3:49 PM

ದೇವನಹಳ್ಳಿ, ಸೆಪ್ಟೆಂಬರ್​ 15: ಕ್ಯಾಬ್​ ಚಾಲಕನ ಬಳಿಯೇ ದರೋಡೆ (robbery) ಮಾಡಿ ಜೊತೆಗೆ ಕ್ಯಾಬ್ ಸಮೇತ ಎಸ್ಕೇಪ್​ ಆಗಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ  ಬೆಂಗಳೂರು ಮೂಲದ ಖಾನ್​ ಎಂಬಾತನನ್ನು ಬಂಧಿಸಿದ್ದಾರೆ. ದರೋಡೆ ಬಗ್ಗೆ ಚಾಲಕ ರವಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ವಿಲ್ಸನ್​ ಗಾರ್ಡ‌ನ್​ನಿಂದ ಆ್ಯಪ್ ಮೂಲಕ ಕ್ಯಾಬ್ ಬುಕ್‌ ಮಾಡಿದ್ದ ಆರೋಪಿ ಟೆಕ್ಕಿಯ ಸೋಗಿನಲ್ಲಿ ಕ್ಯಾಬ್​ ಹತ್ತಿದ್ದಾನೆ. ಬಳಿಕ ಚಾಲಕ ರವಿಕುಮಾರ್​ ಸಿಟಿ ಏರ್ಪೋಟ್ ಮತ್ತು ನಂದಿಬೆಟ್ಟ ಸುತ್ತಾಡಿ ಸಂಜೆ ಡಾಬಾಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಗ್ರಾಮ ಪಂಚಾಯತಿ ಮಾಜಿ ಸದಸ್ಯನ ತಲೆಗೆ 3 ಗುಂಡು ಹೊಡೆದು ಬರ್ಬರ ಹತ್ಯೆ

ಈ ವೇಳೆ ಡಾಬಾದಲ್ಲಿ ಚಾಕು ತೋರಿಸಿ ಬೆದರಿಸಿ ಹಣ, ಮೊಬೈಲ್ ಮತ್ತು ಅಕೌಂಟ್​ನಲ್ಲಿದ್ದ ಹಣವನ್ನು ದರೋಡೆ ಮಾಡಿದ್ದು, ಬಳಿಕ ಅದೇ ಕ್ಯಾಬ್​ನಲ್ಲಿ ಪರಾರಿ ಆಗಿದ್ದ. ಚಾಲಕ ದೂರು ಆಧರಿಸಿ ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಸಿ ಆರೋಪಿಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬ‌ಂಧಿಸಿದ್ದಾರೆ.

ಸರಗಳ್ಳತನ, ಮನೆ ಕಳ್ಳತನ ಮಾಡುತ್ತಿದ್ದ ಖದೀಮರು ಅಂದರ್​

ತುಮಕೂರು: ನಗರದ ಗೋಕುಲ ಬಡಾವಣೆಯಲ್ಲಿ ಸರಗಳ್ಳತನ, ಮನೆ ಕಳ್ಳತನ ಪ್ರಕರಣವನ್ನು ಜಯನಗರ ಠಾಣೆಯ ಪೊಲೀಸರು ಭೇದಿಸಿ ಕಳ್ಳರನ್ನು ಬಂಧಿಸಿದ್ದಾರೆ. ಸರಗಳವು ಪ್ರಕರಣದಲ್ಲಿ ನಾಗಮಂಗಲ ಮೂಲದ ಕ್ಯಾಬ್ ಚಾಲಕ ಶಶಿಧರ್‌(37), ಪೀಣ್ಯದ ನಿವಾಸಿ ಅಭಿಷೇಕ್(21), ರೋಹನ್ ಕುಮಾರ್‌(20) ಬಂಧಿತರು.

ಇದನ್ನೂ ಓದಿ: Murder clue: ಹಿಟ್​ ಅಂಡ್​ ರನ್ ಅಪಘಾತ ಎಂದು ಬಿಂಬಿಸಿ ಭೀಕರ ಹತ್ಯೆ, ಆದರೆ ಮೃತಳ ಚಪ್ಪಲಿ ನೀಡಿತ್ತು ಮಹತ್ವದ ಸುಳಿವು!

2.95 ಲಕ್ಷ ಮೌಲ್ಯದ 49 ಗ್ರಾಂ 2 ಎಳೆಯ ಚಿನ್ನದ ಸರ, ಒಂದು ಬೈಕ್ ಜಪ್ತಿ ಮಾಡಲಾಗಿದೆ. ಇದರ ಜೊತೆಗೆ ಮನೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಒಟ್ಟು 15 ಪ್ರಕರಣಗಳಿಗೆ ಇಬ್ಬರು ಆರೋಪಿಗಳು ಬೇಕಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.