ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಚುನಾವಣೆ ಸಮರ: ಆರೋಪ-ಪ್ರತ್ಯಾರೋಪ ಜೋರು!

| Updated By: ಗಂಗಾಧರ​ ಬ. ಸಾಬೋಜಿ

Updated on: Jun 26, 2024 | 10:56 PM

ಕರ್ನಾಟಕದಲ್ಲಿ ಹಾಲು ದರ ಏರಿಕೆ ಒಂದು ಕಡೆ ಆದರೆ ಕೋಚಿಮುಲ್ ಚುನಾವಣೆ ಹಿನ್ನಲೆ ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿದೆ. ಚುನಾವಣೆ ನಡೆಸುವ ವಿಚಾರ ಹಾಗೂ ಅಧಿಕಾರ ಅನುಭವಿಸುವ ವಿಚಾರವಾಗಿ ವಾಕ್ಸಮರವೇ ನಡೆದಿದೆ. ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಸುವ ವಿಚಾರಕ್ಕೆ ಈಗ ಮತ್ತೆ ಸದ್ದು ಮಾಡುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಚುನಾವಣೆ ಸಮರ: ಆರೋಪ-ಪ್ರತ್ಯಾರೋಪ ಜೋರು!
ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಚುನಾವಣೆ ಸಮರ: ಆರೋಪ-ಪ್ರತ್ಯಾರೋಪ ಜೋರು!
Follow us on

ಚಿಕ್ಕಬಳ್ಳಾಪುರ, ಜೂನ್​ 26: ಅತ್ತ ಕೆಎಂಎಫ್ (KMF) ಲೀಟರ್ ಹಾಲಿಗೆ ಹೆಚ್ಚುವರಿ ಹಾಲು ಸೇರಿಸಿ, ಹಾಲಿನ ದರ ಏರಿಕೆ ಮಾಡಿದ್ದರೆ, ಇತ್ತ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಮಹಾಮಂಡಳಿಯ ಆಡಳಿತ ಮಂಡಳಿ ಚುನಾವಣೆ (Election) ನಡೆಸುವ ವಿಚಾರಕ್ಕೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಬೆಂಬಲಿತರ ನಡುಎ ವಾಕ್ಸಮರ ಜೋರಾಗಿದೆ.

ಕೋಚಿಮುಲ್ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಮಹಾಮಂಡಳಿ ವಾದ-ವಿವಾದ, ಆರೋಪ-ಪ್ರತ್ಯಾರೋಪ ಹಗರಣಗಳಿಗೆ ಖ್ಯಾತಿ. ಇನ್ನು ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಮಹಾಮಂಡಳಿ ವಿಭಜನೆ ಮಾಡಿ, ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಮಂಡಳಿ ಮಾಡುವ ವಿಚಾರಕ್ಕೆ ರಾಜ್ಯದಲ್ಲೇ ಗಮನ ಸೆಳೆದಿತ್ತು.

ಇದನ್ನೂ ಓದಿ: ಅಜ್ಜವಾರ: ಹಾಲಿಗೆ ನೀರು ಸೇರಿಸಿ ಕೆಎಂಎಫ್​​ಗೆ ಭಾರೀ ವಂಚನೆ, ಹಾಲಿನ ಡೈರಿ ಗುಮಾಸ್ತ-ಕಾರ್ಯದರ್ಶಿ ಸಸ್ಪೆಂಡ್​

ಇನ್ನು ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಸುವ ವಿಚಾರಕ್ಕೆ ಈಗ ಮತ್ತೆ ಕುಖ್ಯಾತಿಯಾಗಿದೆ. ಪ್ರಸ್ತುತ ಇರುವ ಆಡಳಿತ ಮಂಡಳಿಯ ಅವಧಿ ಮುಗಿದು ಒಂದು ವರ್ಷವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಆಡಳಿತ ಮಂಡಳಿಯ ಅವಧಿಯನ್ನು ಒಂದು ವರ್ಷ ವಿಸ್ತರಿಸಿದೆ. ಇದರಿಂದ ಬಿಜೆಪಿ, ಜೆಡಿಎಸ್ ಬೆಂಬಲಿತ ನಿರ್ದೇಶಕರುಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರುಗಳು ಒಕ್ಕೂಟ ವಿಭಜನೆ ಮಾಡಿ ಚುನಾವಣೆ ನಡೆಸುವುದು ಒಳ್ಳೆಯದು ಎನ್ನುತ್ತಿದ್ದಾರೆ.

ಇನ್ನು ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಅಂದಿನ ಆಡಳಿತ ಮಂಡಳಿಯ ಅವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡಿದ್ದರಂತೆ. ಈಗ ನಾವು ಏಕೆ ವಿಸ್ತರಣೆ ಮಾಡಿಕೊಂಡು ಮುಂದುವರೆಯಬಾರದು, ಅವರಿಗೊಂದು ನ್ಯಾಯ, ನಮಗೊಂದು ನ್ಯಾಯವೇ ಎಂದು ಹಾಲಿ ಕೋಚಿಮುಲ್ ನಿರ್ದೇಶಕ ಊಲವಾಡಿ ಬಾಬು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕೋಚಿಮುಲ್ ಅವ್ಯವಹಾರ: ಶಾಸಕ ಕೆ.ವೈ.ನಂಜೇಗೌಡ ಮನೆ ಮೇಲೆ ಇಡಿ ದಾಳಿ

ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಮಹಾಮಂಡಳಿಯ ಆಡಳಿತ ಮಂಡಳಿ ಚುನಾವಣೆ ನಡೆಸುವ ವಿಚಾರಕ್ಕೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರ ನಡುವೆ ವಾಕ್ಸಮರ ಜೋರಾಗಿದ್ದು, ಕೋಚಿಮುಲ್‍ನ್ನು ಹೇಗೆ ಲಾಭದಾಯಕ ಮಾಡಬೇಕು, ಹಾಲು ಉತ್ಪಾದಕ ರೈತರನ್ನು ಹೇಗೆ ಅಭಿವೃದ್ಧಿಗೊಳಿಸಬೇಕು ಎನ್ನುವುದರ ಬದಲು ಚುನಾವಣೆ ನಡೆಸುವ ವಿಚಾರ ಹಾಗೂ ಅಧಿಕಾರ ಅನುಭವಿಸುವ ವಿಚಾರಕ್ಕೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.