ಬಾಗಲಕೋಟೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ: ಶಿಕ್ಷಕ ಬಂಧನ

ಬಾಗಲಕೋಟೆಯ ವಿದ್ಯಾಗಿರಿಯ ಶಿಕ್ಷಕ ಮುತ್ತು ಮುಳ್ಳಾ ಅವರನ್ನು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಬಂಧಿಸಲಾಗಿದೆ. ಶಿಕ್ಷಣ ಇಲಾಖೆಯ CRP ಆಗಿ ಕೆಲಸ ಮಾಡುತ್ತಿದ್ದ ಮುತ್ತು ಮುಳ್ಳಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಘಟನೆಯಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಬಾಗಲಕೋಟೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ: ಶಿಕ್ಷಕ ಬಂಧನ
ಆರೋಪಿ ಮುತ್ತು ಮುಳ್ಳಾ
Edited By:

Updated on: Jun 14, 2025 | 8:54 PM

ಬಾಗಲಕೋಟೆ, ಜೂನ್​ 14: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ (Sexual Assault) ಆರೋಪದ ಮೇಲೆ ಬಾಗಲಕೋಟೆ (Bagalakote) ಮಹಿಳಾ ಪೊಲೀಸ್​ ಠಾಣೆ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ಬಾಗಲಕೋಟೆಯ ವಿದ್ಯಾಗಿರಿ ನಿವಾಸಿ ಮುತ್ತು ಮುಳ್ಳಾ ಬಂಧಿತ ಶಿಕ್ಷಕ. ಶಿಕ್ಷಣ ಇಲಾಖೆಯಲ್ಲಿ CRP ಆಗಿ ಕೆಲಸ ಮಾಡುತ್ತಿದ್ದ ಶಿಕ್ಷಕ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಎಂಬ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಶಿಕ್ಷಕ ಮುತ್ತು ಮುಳ್ಳಾ ವಿರುದ್ಧ ಅಪ್ರಾಪ್ತೆ ಮೇಲೆ ಶಿಕ್ಷಕ ಲೈಂಗಿಕ ದೌರ್ಜನ್ಯ ಆರೋಪದಡಿ ಕೇಸ್ ಬಾಗಲಕೋಟೆ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ.

ಗಾಂಜಾ ಮಾರಾಟದಲ್ಲಿ ತಾಯಿ, ಮಗನಿಗೆ ಜೈಲು ಶಿಕ್ಷೆ

ಶಿವಮೊಗ್ಗ: ಗಾಂಜಾ ಮಾರಾಟ ಪ್ರಕರಣದಲ್ಲಿ ಆರೋಪಿಗಳಾದ ತಾಯಿ, ಮಗನಿಗೆ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗ ಸೆಷನ್ಸ್​ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಅಪರಾಧಿ ಯಾಸೀರ್ ಪಾಷಾ (27)ಗೆ ಕೋರ್ಟ್​ಗೆ ಆರು ವರ್ಷ ಶಿಕ್ಷೆ, 50000 ರೂ. ದಂಡ ವಿಧಿಸಿದೆ. ಅಪರಾಧಿ ಸಾನಿಯಾ ಬೇಗಂ (52)ಗೆ ಮೂರು ವರ್ಷ ಶಿಕ್ಷೆ, 25000 ರೂ. ದಂಡ ವಿಧಿಸಿ ಕೋರ್ಟ್​ ಆದೇಶ ಹೊರಡಿಸಿದೆ.

2021ರ ಡಿಸೆಂಬರ್​ 5ರಂದು ಶಿಕಾರಿಪುರ ತಾಲೂಕಿನ ಕುಂಬಾರಗುಂಡಿ ಗ್ರಾಮದಲ್ಲಿ ಗಾಂಜಾ ಮಾರಾಟ ವೇಳೆ ಅಪರಾಧಿಗಳಾದ ಯಾಸೀರ್, ಸಾನಿಯಾರನ್ನು ಬಂಧಿಸಲಾಗಿತ್ತು. ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ
ಪ್ರೇಯಸಿ ಮಾತಿಗೆ ಮರುಳಾಗಿ ಹೋದವ ಹೆಣವಾದ! ಕಲಬುರಗಿ ಕೊಲೆ ರಹಸ್ಯ ಬಯಲು
ಖರ್ಚಿಗೆ ಹಣವಿಲ್ಲದಿದ್ದಾಗ ಖೋಟಾ ನೋಟ್ ಪ್ರಿಂಟ್ ಮಾಡಿದ ಉದ್ಯಮಿ ಮಗ
ನೆಲಮಂಗಲ: ಲವರ್​ನ ಮದುವೆಯಾಗಲು ಮುಂದಾಗಿದ್ದ ಯುವಕನ ಕೊಲೆ
50 ಕೋಟಿ ರೂ.ಸಾಲ ಕೊಡಿಸುವುದಾಗಿ ಮಹಿಳೆಗೆ ಕೋಟಾ ನೋಟು ಕೊಟ್ಟ ಮಹಮ್ಮದ್

ಇದನ್ನೂ ಓದಿ: ಬೆಂಗಳೂರಿನಲ್ಲಿ 10 ಕೋಟಿ ರೂ. ಮೌಲ್ಯದ MDMA ಡ್ರಗ್ಸ್‌ ಜಪ್ತಿ, ಓದಲು ಬಂದವಳು ಪೆಡ್ಲರ್ ಆದಳು

ಮಾರಿಯಮ್ಮನ ಕಲ್ಲಿನ ಮೂರ್ತಿ ಕಳ್ಳತನ ಮಾಡಿ‌ ಎಸೆದಿದ್ದ ಆರೋಪಿ ಬಂಧನ

ಚಿಕ್ಕಮಗಳೂರಿನಲ್ಲಿ ಬೇವಿನ ಮರದಡಿ ಇರಿಸಿದ್ದ ಮಾರಿಯಮ್ಮ ದೇವಿಯ ಕಲ್ಲಿನ ಮೂರ್ತಿ ಕಳ್ಳತನ ಮಾಡಿ ಎಸೆದಿದ್ದ ಕಿಡಿಗೇಡಿಯನ್ನು ಚಿಕ್ಕಮಗಳೂರು ನಗರ ಠಾಣೆ ಪೊಲೀಸರಿಂದ ಬಂಧಿಸಿದ್ದಾರೆ. ಶಾಂತಿನಗರದಲ್ಲಿ ಘಟನೆ ನಡೆದಿತ್ತು. ಅನೀಸ್ ಬಂಧಿತ ಆರೋಪಿ. ಎಫ್​ಐಆರ್​ ಕೂಡ ದಾಖಲಾಗಿತ್ತು.

ವರ್ಷದಲ್ಲಿ ಒಮ್ಮೆ ಮಾತ್ರ ದೇವಾಲಯದಿಂದ ಮೂರ್ತಿ ಹೊರ ತೆಗೆದು ಬೇವಿನ ಮರದಡಿ ನಿವಾಸಿಗಳು ಇರಿಸುತ್ತಿದ್ದರು. ಇದಕ್ಕೆ ಅನೀಸ್ ವಿರೋಧ ವ್ಯಕ್ತಪಡಿಸಿದ್ದನು. ಬಡಾವಣೆಯಲ್ಲಿ ಗಲಾಟೆ ಎಬ್ಬಿಸಲು ಸಂಚು ಮಾಡಿ ರಾತ್ರೋರಾತ್ರಿ ಕಲ್ಲಿನ ಮೂರ್ತಿ ಕದ್ದು ಎಸ್ಕೇಪ್ ಆಗಿದ್ದನು. ಎಫ್​ಐಆರ್​​ ದಾಖಲಿಸಿ ಪೊಲೀಸರು ಅನೀಸ್​ನನ್ನು ಬಂಧಿಸಿದ್ದು, ತನಿಖೆ ವೇಳೆ ತಾನೇ ಕದ್ದು ಮೂರ್ತಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದನು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:53 pm, Sat, 14 June 25