ಬಾಗಲಕೋಟೆ ಲೋಕಸಭೆ ಚುನಾವಣೆ: ಕಾಂಗ್ರೆಸ್-ಬಿಜೆಪಿಯ ಪ್ಲಸ್, ಮೈನಸ್ ಏನು?

ಬಾಗಲಕೋಟೆ ಲೋಕಸಭೆ(Bagalkote Lok Sabha) ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ. ಚುನಾವಣೆಗೆ ದಿನಗಣನೆ ಶುರುವಾಗಿದೆ. ಆದ್ದರಿಂದ ಕಣದಲ್ಲಿನ‌ ಕಲಿಗಳು ಬಿಡುವಿಲ್ಲದೇ ಪ್ರಚಾರ ಶುರು ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ(PC Gaddigoudar) ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್‌(Samyuktha Patil) ಮಧ್ಯೆ ನೇರಾನೇರ ಹಣಾಹಣಿ ನಡೆದಿದೆ.

ಬಾಗಲಕೋಟೆ ಲೋಕಸಭೆ ಚುನಾವಣೆ: ಕಾಂಗ್ರೆಸ್-ಬಿಜೆಪಿಯ ಪ್ಲಸ್, ಮೈನಸ್ ಏನು?
ಸಂಯುಕ್ತಾ ಪಾಟೀಲ್‌, ಪಿಸಿ ಗದ್ದಿಗೌಡರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:May 03, 2024 | 6:29 PM

ಬಾಗಲಕೋಟೆ, ಮೇ.03: ಬಾಗಲಕೋಟೆ ಲೋಕಸಭೆ(Bagalkote Lok Sabha) ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ. ಚುನಾವಣೆಗೆ ದಿನಗಣನೆ ಶುರುವಾಗಿದೆ. ಆದ್ದರಿಂದ ಕಣದಲ್ಲಿನ‌ ಕಲಿಗಳು ಬಿಡುವಿಲ್ಲದೇ ಪ್ರಚಾರ ಶುರು ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ(PC Gaddigoudar) ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್‌(Samyuktha Patil) ಮಧ್ಯೆ ನೇರಾನೇರ ಹಣಾಹಣಿ ನಡೆದಿದೆ. ಪಿಸಿ ಗದ್ದಿಗೌಡರ ಕೇಸರಿ ಪಡೆ ಕಟ್ಟಿಕೊಂಡು ಶ್ರೀರಾಮ, ಹಿಂದು, ಮತ್ತೊಮ್ಮೆ ಮೋದಿ ಎಂದು ಜನರ ಬಳಿ ಮತ ಕೇಳುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಐದು ಗ್ಯಾರಂಟಿ, ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕೆಲಸಗಳು, ನಾಲ್ಕು ಬಾರಿ ಸಂಸದರಾದರೂ ಗದ್ದಿಗೌಡರ ಯಾವ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಮೋದಿ ಅವರು ಕೊಟ್ಟ ಭರವಸೆ ಈಡೇರಿಸಿಲ್ಲ. ನಮ್ಮ ಸರಕಾರ ನುಡಿದಂತೆ ನಡೆದಿದೆ ಎಂದು ಗ್ಯಾರಂಟಿಗಳನ್ನ ಎಲ್ಲ ಕಡೆ ಉದಾಹರಣೆ ನೀಡುತ್ತಾ ಈ ವಿಚಾರಗಳನ್ನು ಮುಂದಿಟ್ಟುಕೊಂಡು ಮತಭೇಟೆ ಶುರು ಮಾಡಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ, ತೇರದಾಳ, ಬಾದಾಮಿ, ಹುನಗುಂದ, ಗದಗ ಜಿಲ್ಲೆಯ ನರಗುಂದ ವಿಧಾನಸಭೆ ಕ್ಷೇತ್ರ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರ ಒಳಗೊಂಡಿದೆ. ಒಟ್ಟು 17,81,912 ಲಕ್ಷ ಮತದಾರರಿದ್ದು, ಅದರಲ್ಲಿ 8,84,194 ಲಕ್ಷ ಪುರುಷರು, ಮಹಿಳಾ ಮತದಾರರು 8,97,622 ಲಕ್ಷ ಇದ್ದಾರೆ. ಒಟ್ಟು 1726 ಮತಗಟ್ಟೆ ಇದ್ದಾವೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ ಮತದಾನದಲ್ಲಿಯೂ ಮಹಿಳೆಯರದ್ದೇ ಮೇಲುಗೈ

ಜಾತಿವಾರು ಮತದಾರರ ವಿವರ

ಲಿಂಗಾಯತ 6.50 ಲಕ್ಷ

ಕುರುಬ 2.44 ಲಕ್ಷ .

ದಲಿತ- 2 ಲಕ್ಷ

ಮುಸ್ಲಿಂ 1.70 ಲಕ್ಷ

ವಾಲ್ಮೀಕಿ 1.18 ಲಕ್ಷ

ಜೈನ : 25,566

ನೇಕಾರ-60

ಕ್ಷತ್ರಿಯರ ಒಳಪಂಗಡ ಸೇರಿ 1 ಲಕ್ಷ.

ಬ್ರಾಹ್ಮಣ 21793

ಇತರೆ 2 ಲಕ್ಷ 86 ಸಾವಿರ ಇದ್ದಾರೆ.

ಅಭ್ಯರ್ಥಿಗಳ ವಿವರ

ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಸತತ ನಾಲ್ಕು ಬಾರಿ ಬಾಗಲಕೋಟೆ ಸಂಸದರು, ಮೂಲತಃ ಕೃಷಿ ಕುಟುಂಬಸ್ಥರು, ಎಲ್ ಎಲ್ ಬಿ ಮಾಡಿ ವಕೀಲಿ ವೃತ್ತಿ ಮಾಡಿದವರು. ಹಿಂದು-ಗಾಣಿಗ, ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದವರು. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ವಿರುದ್ದ 1 ಲಕ್ಷ 68 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್​ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಮೂಲತಃ ವಿಜಯಪುರ ಜಿಲ್ಲೆಯವರಾದ ಇವರು, ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಶಾಸಕ ಹಾಗೂ ಸದ್ಯದ ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ್​ ಅವರ ಪುತ್ರಿ ಸಂಯುಕ್ತಾ ಪಾಟೀಲ್​ ರಾಜಕೀಯ ಕುಟುಂಬದಿಂದ ಬಂದವರು. ವಿಜಯಪುರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಹಾಗೂ ಪಿಕೆಪಿಎಸ್ ಬ್ಯಾಂಕಿನಲ್ಲಿ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯದ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ: ಮತದಾನದ ವೇಳೆ ಕೆಲವೆಡೆ ಗದ್ದಲ, ಗೊಂದಲ, ಎಲ್ಲೆಲ್ಲಿ ಏನೇನನಾಯ್ತು? ಇಲ್ಲಿದೆ ವಿವರ

ಗೆಲುವಿಗೆ ಪ್ಲಸ್ & ಮೈನಸ್

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ಸ್ ಏನು?

  •  ಪ್ರಬಲ ಪೈಪೋಟಿ ಇಲ್ದೇ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಗೆ ಟಿಕೆಟ್ ಸಿಕ್ಕಿರೋದು.
  • ಸತತ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾದ ಬಿಜೆಪಿಯ ಸಂಸದ ಗದ್ದಿಗೌಡರ.
  • ದೇಶದಲ್ಲಿ ಮೋದಿ ಅಲೆ.
  • ಅಯೋದ್ಯೆ ರಾಮಮಂದಿರ ಬಲ.
  • ಜಿಲ್ಲೆಯಲ್ಲಿ ಸಂಸದ ಪಿ.ಸಿ ಗದ್ದಿಗೌಡರ ಸಾದು ರಾಜಕಾರಣ.
  • ಯಾವುದೇ ವಿವಾದಕ್ಕೆ ಸಿಲುಕದ ಸಂಸದ ಎಂಬ ಹೆಗ್ಗಳಿಕೆ.

ಬಿಜೆಪಿ ಮೈನಸ್

  • ಕಳೆದ ನಾಲ್ಕು ಲೋಕ ಸಭಾ ಚುನಾವಣೆಯಲ್ಲಿ ನಮೋ ಜಪ.
  • ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಾಣದ ಅಭಿವೃದ್ಧಿ ಕಾರ್ಯ.
  • ಸ್ವಪಕ್ಷದಲ್ಲಿ ಹೆಚ್ಚಿದ ಬಿನ್ನಮತ.
  • ಪಕ್ಷ ಸಂಘಟನೆ ಮಾಡದೇ, ದೂರ ಇರೋದು. ಪಕ್ಷದ ಕೆಲವು ಕಾರ್ಯಕರ್ತರಲ್ಲಿ ಅಸಮಾಧಾನ.
  • ರಾಜ್ಯದಲ್ಲಿ ಬಿಜೆಪಿಯಿಂದ ಅಧಿಕಾರ ಕೈತಪ್ಪಿರೋದು.
  • ರಾಜ್ಯ ಸರಕಾರದ ಗ್ಯಾರಂಟಿ ಹೊಡೆತ.

ಕಾಂಗ್ರೆಸ್ ಪ್ಲಸ್ ಪಾಯಿಂಟ್ ಏನು?

  • ಲಿಂಗಾಯತ ಪಂಚಮಸಾಲಿ ಅಭ್ಯರ್ಥಿಗೆ ಟಿಕೆಟ್ ನೀಡಿರುವುದು.
  • ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರ ಗೆದ್ದುಬೀಗಿದ ಕಾಂಗ್ರೆಸ್.
  • ಲೋಕ ಚುನಾವಣೆಗೆ ರಾಜ್ಯದ ಗ್ಯಾರಂಟಿ ಟ್ರಂಪ್ ಕಾರ್ಡ್.
  • ವಿಧಾನಸಭಾ ಕ್ಷೇತ್ರದ ಪೈಕಿ 5 ರಲ್ಲಿ ಕಾಂಗ್ರೆಸ್ ಎಂಎಲ್ಎಗಳು.
  • ಲೋಕ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿಗೆ ರಾಜ್ಯ ಸರಕಾರದ ಯೋಜನೆ ಬಲ.
  • ಪಂಚಮಸಾಲಿ ಸಮುದಾಯದ ಬೆಂಬಲ.
  • ಪಂಚಮಸಾಲಿ ಕೂಡಲಸಂಗಮ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಶ್ರೀ, ಬೋವಿ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವ ಶ್ರೀ ಸೇರಿದಂತೆ ಅನೇಕ ಮಠಾಧೀಶರ ಬೆಂಬಲ.

ಕಾಂಗ್ರೆಸ್ ಮೈನಸ್ ಪಾಯಿಂಟ್

  • ಕಾಂಗ್ರೆಸ್​ನಲ್ಲಿ ಟಿಕೆಟ್ ಕೈ ತಪ್ಪಿದ ವೀಣಾ ಕಾಶಪ್ಪನವರ ಬಂಡಾಯ ಅಸಮಾಧಾನ.
  • ಸಂಯುಕ್ತಾ ಪಾಟೀಲ್ ನಾಮಪತ್ರ ವೇಳೆ ಅರ್ಧ ಗಂಟೆ ಬಂದು ಹೋದೋರು ಎಲ್ಲೂ ಪ್ರಚಾರದಲ್ಲಿ ತೊಡಗಿಲ್ಲ.
  • ಸ್ವಂತ ಜಿಲ್ಲೆಯ ಅಭ್ಯರ್ಥಿಗೆ ಟಿಕೆಟ್ ನೀಡದೇ ಇರುವುದು.
  • ಜಿಲ್ಲಾ ಕಾಂಗ್ರೆಸ್​ನಲ್ಲಿ ಬಣ ರಾಜಕೀಯ.
  • ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್​ನಲ್ಲಿ ಹೊಂದಾಣಿಕೆ ಮೂಡದಿರೋದು.
  • ಜಿಲ್ಲಾ ಕಾಂಗ್ರೆಸ್​ನಲ್ಲಿ ಸಮರ್ಪಕ ನಾಯಕತ್ವದ ಕೊರತೆ.

ಇಲ್ಲಿ ಪಂಚಮಸಾಲಿ ಗಾಣಿಗ , ಕುರುಬ ಮತಗಳು ನಿರ್ಣಾಯಕವಾಗಿದೆ. ಜಿಲ್ಲೆಯಲ್ಲಿ 2 ಲಕ್ಷ 12 ಸಾವಿರ ಪಂಚಮಸಾಲಿ ಮತಗಳಿವೆ. ಗಾಣಿಗ 1 ಲಕ್ಷ 12 ಸಾವಿರ ಇದೆ. ಕುರುಬ 2 ಲಕ್ಷ 42 ಸಾವಿರ ಮತಗಳು. ಕುರುಬ ಮತಗಳು ಬಹುತೇಕ ಕಾಂಗ್ರೆಸ್, ಪಂಚಮಸಾಲಿ ‌ಮತಗಳು ಈ ಬಾರಿ ಸಮುದಾಯದ ಮೇಲಿನ ಅಭಿಮಾನದಿಂದ 60% ಪ್ರತಿಶತ ಕಾಂಗ್ರೆಸ್ ಅಭ್ಯರ್ಥಿ ಪಾಲಾಗಲಿವೆ. ಇನ್ನು ಗಾಣಿಗ‌ ಮತದಾರರು ಪಕ್ಷ ಎಂದೂ ನೋಡದೆ ಸಮಾಜದ ಅಭ್ಯರ್ಥಿ ಮಾತ್ರ ಪರಿಗಣಿಸಿ 90% ರಷ್ಟು ಪಿಸಿ ಗದ್ದಿಗೌಡರ್​ಗೆ ಮತ ಹಾಕುತ್ತಾರೆ. ಇಲ್ಲಿ ಪಂಚಮಸಾಲಿ 60% ಮತಗಳು ಬಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಗೆಲುವು ಬಹುತೇಕ ಫಿಕ್ಷ್ ಎನ್ನಲಾಗುತ್ತಿದೆ.

ಇದನ್ನೂ ಓದಿ:ಪ್ರಿಯಾಂಕಾ ಗಾಂಧಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ

ಕ್ಷೇತ್ರದ ಹಿನ್ನೆಲೆ

ಸ್ವತಂತ್ರ ಭಾರತದ ಬಳಿಕ ದೇಶದಲ್ಲಿ 1951 ರಿಂದ ಸಾರ್ವತ್ರಿಕ ಚುನಾವಣೆ ಆರಂಭಗೊಂಡಿತು. ಬಾಗಲಕೋಟೆ ಲೋಕಸಭೆ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದವರು ರಾಮಣ್ಣ ಬಿದರಿ. ಆ ಬಳಿಕ ನಡೆದ 1957ರ ಚುನಾವಣೆಯಲ್ಲೂ ಕಾಂಗ್ರೆಸ್‌ನಿಂದ 2ನೇ ಬಾರಿ ಅವರೇ ಗೆದ್ದಿದ್ದರು. 1951 ರಿಂದ 2019ರ ವರೆಗೆ ಒಟ್ಟು 17 ಲೋಕಸಭೆ ಚುನಾವಣೆ ನಡೆದಿವೆ. 1962ರ ವರೆಗೆ ಬಾಗಲಕೋಟೆ ಕ್ಷೇತ್ರ, ವಿಜಯಪುರ ದಕ್ಷಿಣ ಲೋಕಸಭೆ ಕ್ಷೇತ್ರವಾಗಿತ್ತು. 1967ರ ಚುನಾವಣೆಯಲ್ಲಿ ಬಾಗಲಕೋಟೆ ಪ್ರತ್ಯೇಕ ಲೋಕಸಭೆ ಕ್ಷೇತ್ರವಾಗಿದ್ದು, ಆಗ ಕಾಂಗ್ರೆಸ್‌ನ ಎಸ್.ಬಿ. ಪಾಟೀಲ್​ ಗೆದ್ದಿದ್ದರು. 1962, 1967 ಹಾಗೂ 1977 ಸೇರಿ ಒಟ್ಟು ನಾಲ್ಕು ಬಾರಿ ಸತತ ಗೆದ್ದ ದಾಖಲೆ ಎಸ್.ಬಿ. ಪಾಟೀಲರಿಗಿದೆ. ಆ ಬಳಿಕ 2004 ದಿಂದ ಈ ವರೆಗೆ ಬಿಜೆಪಿಯ ಪಿ.ಸಿ. ಗದ್ದಿಗೌಡರ ಇಲ್ಲಿಂದ ಸತತವಾಗಿ ಗೆಲ್ಲುತ್ತ ಬಂದಿದ್ದಾರೆ. ಇವರನ್ನು ಬಿಟ್ಟರೆ, ಈ ಕ್ಷೇತ್ರದಿಂದ ಎರಡಕ್ಕಿಂತ ಹೆಚ್ಚು ಬಾರಿ ಯಾರೂ ಗೆದ್ದಿಲ್ಲ.

ಹೆಗಡೆ ಕೈ ಬಿಟ್ರು- ವೀರೇಂದ್ರ ಗೆಲ್ಲಿಸಿದರು

ಬಾಗಲಕೋಟೆ ಜಿಲ್ಲೆಯ ಮತದಾರರು, ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ, ಯುವ ಹೋರಾಟಗಾರರಾಗಿದ್ದ ದಿ. ಸಿದ್ದು ನ್ಯಾಮಗೌಡರನ್ನು ಗೆಲ್ಲಿಸಿದ್ದರು. ವೀರೇಂದ್ರ ಪಾಟೀಲ್​ರನ್ನು ಲೋಕಸಭೆಗೆ, ಹಾಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬಾದಾಮಿ ವಿಧಾನಸಭೆ ಕ್ಷೇತ್ರದಿಂದ ಗೆಲ್ಲಿಸಿ, ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದವರು ಈ ಜಿಲ್ಲೆಯ ಮತದಾರರು.

1991 ರ ವರೆಗೆ ಸತತ ಕಾಂಗ್ರೆಸ್ ಪಕ್ಷವೇ ಇಲ್ಲಿಂದ ಗೆದ್ದಿತ್ತು. ಮೊದಲ ಬಾರಿಗೆ ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸಿ, ಅಹಿಂದ ಅಲೆಯಲ್ಲಿ ಗೆದ್ದವರು, ಬಾಗಲಕೋಟೆಯ ಹಾಲಿ ಶಾಸಕ ಎಚ್.ವೈ. ಮೇಟಿ. ಜನತಾ ದಳ ಸರಕಾರದಲ್ಲಿ ಅರಣ್ಯ ಸಚಿವರಾಗಿದ್ದಾಗಲೇ ಲೋಕಸಭೆಗೆ ಗೆದ್ದಿದ್ದರು. ಆ ಬಳಿಕ ಲೋಕಶಕ್ತಿ ಪಕ್ಷದ ಅಜಯಕುಮಾರ ಸರನಾಯಕ (ಬಿಜೆಪಿ-ಲೋಕಶಕ್ತಿ ಹೊಂದಾಣಿಕೆ), 1998 ರಲ್ಲಿ ಗೆದ್ದಿದ್ದರು. ಒಟ್ಟು ಈ ವರೆಗೆ ನಡೆದ 17 ಚುನಾವಣೆಯಲ್ಲಿ 11 ಬಾರಿ ಕಾಂಗ್ರೆಸ್, ತಲಾ ಒಂದು ಬಾರಿ ಜನತಾ ದಳ ಮತ್ತು ಲೋಕಶಕ್ತಿ ಗೆದ್ದಿದ್ದರೆ, ಸತತ ನಾಲ್ಕು ಬಾರಿ ಬಿಜೆಪಿ ಗೆಲ್ಲುತ್ತ ಬಂದಿದೆ.

ಲಿಂಗಾಯಿತರ ಪ್ರಾಬಲ್ಯ

ಬಾಗಲಕೋಟೆ ಕ್ಷೇತ್ರ 1967 ಕ್ಕೂ ಮುಂಚೆ ವಿಜಯಪುರ ದಕ್ಷಿಣ ಲೋಕಸಭೆ ಕ್ಷೇತ್ರವಾಗಿತ್ತು. ದೇಶಕ್ಕೆ ಸ್ವತಂತ್ರ ಬಂದ ಬಳಿಕ ಇಲ್ಲಿಯವರೆಗೆ ಒಟ್ಟು 17 ಸಾರ್ವತ್ರಿಕ ಲೋಕಸಭೆ ಚುನಾವಣೆ ನಡೆದಿವೆ. ಈಗ ನಡೆಯಲಿರುವ ಚುನಾವಣೆ 18ನೇ ಲೋಕಸಭೆ ಚುನಾವಣೆ. ಕರ್ನಾಟಕ ಏಕೀಕರಣಗೊಂಡ ಬಳಿಕ ನಡೆದ ಲೋಕಸಭೆ ಚುನಾವಣೆಯ ಲೆಕ್ಕ ಹಿಡಿದರೆ, ಈ ವರೆಗೆ 16 ಚುನಾವಣೆ ನಡೆದಿವೆ.

ಕಳೆದ 17 ಲೋಕಸಭೆ ಚುನಾವಣೆಯಲ್ಲಿ ಅತಿಹೆಚ್ಚು ಬಾರಿ ಗೆದ್ದಿರುವುದು ಕಾಂಗ್ರೆಸ್. ರಾಮಣ್ಣ ಬಿದರಿಯಿಂದ ಹಿಡಿದು, ಪ್ರಸ್ತುತ ಪಿ.ಸಿ. ಗದ್ದಿಗೌಡರ ವರೆಗೂ ಲಿಂಗಾಯತ ನಾಯಕರು, ಈ ಕ್ಷೇತ್ರದ ಅಧಿಪತ್ಯ ಸಾಧಿಸಿದ್ದಾರೆ. ಆದರೆ, ಸತತ ನಾಲ್ಕು ಬಾರಿ ಗೆದ್ದು ಇತಿಹಾಸ ದಾಖಲಿಸಿದವರು ಎಸ್.ಬಿ. ಪಾಟೀಲ್​ ಹಾಗೂ ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ಈ ಇಬ್ಬರು ಮಾತ್ರ.

ಇದನ್ನೂ ಓದಿ:Lok Sabha Elections 2024: ಲೋಕಸಭೆ ಚುನಾವಣೆ; ಹೆಚ್ಚಿನ ಸಂಖ್ಯೆಯ ಮತದಾನಕ್ಕೆ ಪ್ರಧಾನಿ ಮೋದಿ ಕರೆ

ಗೆಲುವಿನ ಫ್ಯಾಕ್ಟರ್

8 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಲಿಂಗಾಯತ (ಎಲ್ಲ ಉಪ ಪಂಗಡ ಸಹಿತ), ಮುಸ್ಲಿಂ ಹಾಗೂ ದಲಿತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿಯೇ ಕುರುಬ ಸಮಾಜದ ಎಚ್.ವೈ. ಮೇಟಿ ಅವರು ಒಮ್ಮೆ ಗೆದ್ದಿದ್ದು, ಬಿಟ್ಟರೆ ಈವರೆಗೆ ಇಲ್ಲಿಂದ ಗೆದ್ದವರು ಲಿಂಗಾಯತ ನಾಯಕರೇ. ಅದೇ ಕಾರಣಕ್ಕೆ, ಎಲ್ಲಾ ರಾಜಕೀಯ ಪಕ್ಷಗಳು, ಲಿಂಗಾಯತ ನಾಯಕರಿಗೆ ಟಿಕೆಟ್ ನೀಡುತ್ತಲೇ ಬಂದಿವೆ. ವಿಧಾನಸಭೆ ಚುನಾವಣೆಗಳು, ಉಪ ಜಾತಿಗಳ ಲೆಕ್ಕಾಚಾರದಲ್ಲಿ ನಡೆದರೆ, ಲೋಕಸಭೆ ಚುನಾವಣೆ, ಲಿಂಗಾಯತ ವರ್ಸಸ್ ಅಹಿಂದ ಲೆಕ್ಕಾಚಾರದಲ್ಲಿ ನಡೆಯುತ್ತ ಬಂದಿವೆ.

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಮಸ್ಯೆ, ಜನರ ನಿರೀಕ್ಷೆ ಏನು?

  • ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳದೇ ಇರುವುದು.
  • ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಕರಣ ಆಗಬೇಕೆಂಬ ಒತ್ತಾಯವಿದೆ.
  • ಬಾದಾಮಿ, ಹುನಗುಂದ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದ ನೀರಾವರಿ ಇರದೇ ಇರುವುದು.
  • ಬಾದಾಮಿ, ಹುನಗುಂದ ಭಾಗದಲ್ಲಿ ತಾಂಡವ ಆಡ್ತಿದೆ ಬಡತನ. ಗ್ರಾಮಕ್ಕೆ ಗ್ರಾಮಗಳೇ ಪ್ರತಿವರ್ಷ ಗುಳೆ ಹೋಗುತ್ತಾರೆ.
  • ಕ್ಷೇತ್ರದಾದ್ಯಂತ ನೀರಾವರಿ ಭೂಮಿ ಅಧಿಕ ಆಗಿರೋದ್ರಿಂದ ಕಬ್ಬು ಇಲ್ಲಿ ಮುಖ್ಯ ಬೆಳೆಯಾಗಿದೆ.
  • ಜಿಲ್ಲೆಯಲ್ಲಿ 11 ಸಕ್ಕರೆ ಕಾರ್ಖಾನೆಗಳಿದ್ರೂ ಕಬ್ಬು ಬೆಳೆಗಾರರಿಗೆ ಸಿಗ್ತಿಲ್ಲ ಸೂಕ್ತ ಬೆಲೆ.
  • ಪ್ರತಿವರ್ಷ ಸೂಕ್ತ ಬೆಲೆಗಾಗಿ ಹೋರಾಡಲೇಬೇಕು ಕಬ್ಬು ಬೆಳೆಗಾರರು.
  • ಕ್ಷೇತ್ರದಲ್ಲಿ ನೇಕಾರರು ಸಮಸ್ಯೆಗಿಲ್ಲ ಕಿಮ್ಮತ್ತು. ಕನಸಾಗಿಯೇ ಉಳಿದ ಜವಳಿ ಪಾರ್ಕ್.
  • ಐತಿಹಾಸಿಕ ಐಹೊಳೆಯ ಸ್ಮಾರಕ ರಕ್ಷಿಸಲು ಗ್ರಾಮ ಸ್ಥಳಾಂತರ ಇನ್ನೂ ನೆನೆಗುದಿಗೆ ಬಿದ್ದಿರುವುದು.
  • ಯೋಜನೆ ಪ್ರಾರಂಭವಾಗಿ ದಶಕ ಕಳೆದ್ರೂ ಮುಕ್ತಾಯ ಆಗದ ಬಾಗಲಕೋಟೆ-ಕುಡಚಿ ರೈಲ್ವೆ ಯೋಜನೆ.
  • ಪ್ರತಿವರ್ಷ ಉಕ್ಕಿ ಹರಿಯುವ ತ್ರಿವಳಿ ನದಿಗಳು. ನದಿಗಳ ಆರ್ಭಟಕ್ಕೆ ನಲುಗುವ ಜಿಲ್ಲೆಯ ಹಲವು ಗ್ರಾಮಗಳು.
  • ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳ ಶಾಶ್ವತ ಸ್ಥಳಾಂತರಕ್ಕೆ ಸರ್ಕಾರಗಳ ಮೀನಾಮೇಷ.
  • ಐತಿಹಾಸಿಕ ಬಾದಾಮಿ ಪಟ್ಟಣ ಅಮೃತ ಯೋಜನೆಗೆ ನೆನೆಗುದಿಗೆ ಬಿದ್ದಿರೋದು.
  • ಕ್ಷೇತ್ರದಲ್ಲಿ ಬೇಡಿಕೆ ಇರುವ ವಿಮಾನ ನಿಲ್ದಾಣ.
  • ಬಾಗಲಕೋಟೆ ಜಿಲ್ಲೆಯಲ್ಲಿ ಬೆಳೆದಿಲ್ಲ ಕೈಗಾರಿಕೋದ್ಯಮಗಳು.
  • ಆಲಮಟ್ಟಿ ಹಿನ್ನೀರಿನಲ್ಲಿ ನಿರೀಕ್ಷಿತ ಮಟ್ಟಕ್ಕೆ ಏರಿಕೆ ಕಾಣದ ಮೀನುಗಾರಿಕೆ.
  • ತ್ರಿವಳಿ ನದಿಗಳಲ್ಲಿ ಮೊಸಳೆಗಳ ಕಾಟಕ್ಕೆ ಹಾಕಬೇಡಿಕೆ, ಕಡಿವಾಣ. ಮೊಸಳೆ ಪಾರ್ಕ್ ಬೇಡಿಕೆ ಪೆಂಡಿಂಗ್.
  • ಹಿನ್ನೀರು ಅರಿಸಿ ಪ್ರತಿವರ್ಷ ಬರುತ್ತವೆ ದೇಶ, ವಿದೇಶ ಲಕ್ಷಾಂತರ ವಿವಿಧ ಜಾತಿಯ ಪಕ್ಷಿಗಳು. ಪಕ್ಷಿಗಳ ಕಲರವ ನೋಡುವುದೇ ಚೆಂದ. ಆದ್ರೆ ಪಕ್ಷಿ ಪಾರ್ಕ್ ಕನಸು ಈಡೇರಿಲ್ಲ.

ಒಟ್ಟಿನಲ್ಲಿ ಅಭ್ಯರ್ಥಿಗಳು ‌ಜಿದ್ದಿಗೆ ಬಿದ್ದು ಪ್ರಚಾರ ಮಾಡುತ್ತಿದ್ದರು ಅಂತಿಮ ತೀರ್ಪು ಮಾತ್ರ ಮತದಾರರ ಕೈಯಲ್ಲಿದೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:29 pm, Fri, 3 May 24

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ