AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮೀಣ ಸೊಗಡಿನಲ್ಲೇ ಯಲ್ಲಾಲಿಂಗನ ಆರಾಧನೆ: ಜಾತ್ರೆಯಲ್ಲಿ ಖಡಕ್ ರೊಟ್ಟಿಯ ಕಮಾಲ್

ಬೆಳಗಾವಿ: ಬಣ್ಣ ಬಣ್ಣದ ಸೀರೆಯುಟ್ಟು ಮಹಿಳೆಯರ ಭವ್ಯ ಮೆರವಣಿಗೆ. ಕಣ್ಣಾಯಿಸಿದಷ್ಟು ದೂರ ಜನಸಾಗರ. ಎಲ್ಲರ ತಲೆಯ ಮೇಲೊಂದು ಬಿಳಿ ಬಣ್ಣದ ಮೂಟೆ. ಇದರ ಜೊತೆ ಜೊತೆಗೆ ದೇವರ ನಾಮಸ್ಮರಣೆ. ಅರ್ರೆ ಇದೆನಪ್ಪಾ, ಎಲ್ರು ತಲೆ ಮೇಲೆ ಮೂಟೆ ಇಟ್ಕೊಂಡು ಬರ್ತಿದ್ದಾರೆ. 9ನೇ ದಿನ ನಡೆಯುವ ರೊಟ್ಟಿ ಜಾತ್ರೆ: ಇಂತಹ ವಿಭಿನ್ನ ಕಾರ್ಯಕ್ಕೆ ಸಾಕ್ಷಿ ಆಗಿದ್ದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮುಗಳಖೋಡದಲ್ಲಿರುವ ಜಿಡಗಾ ಮಠ. ಇಲ್ಲಿ ಪ್ರತಿವರ್ಷ 11 ದಿನಗಳ ಕಾಲ ಅದ್ಧೂರಿಯಾಗಿ ಯಲ್ಲಾಲಿಂಗ ಪ್ರಭುಗಳ ಜಾತ್ರೆ […]

ಗ್ರಾಮೀಣ ಸೊಗಡಿನಲ್ಲೇ ಯಲ್ಲಾಲಿಂಗನ ಆರಾಧನೆ: ಜಾತ್ರೆಯಲ್ಲಿ ಖಡಕ್ ರೊಟ್ಟಿಯ ಕಮಾಲ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jan 20, 2020 | 8:20 PM

Share

ಬೆಳಗಾವಿ: ಬಣ್ಣ ಬಣ್ಣದ ಸೀರೆಯುಟ್ಟು ಮಹಿಳೆಯರ ಭವ್ಯ ಮೆರವಣಿಗೆ. ಕಣ್ಣಾಯಿಸಿದಷ್ಟು ದೂರ ಜನಸಾಗರ. ಎಲ್ಲರ ತಲೆಯ ಮೇಲೊಂದು ಬಿಳಿ ಬಣ್ಣದ ಮೂಟೆ. ಇದರ ಜೊತೆ ಜೊತೆಗೆ ದೇವರ ನಾಮಸ್ಮರಣೆ. ಅರ್ರೆ ಇದೆನಪ್ಪಾ, ಎಲ್ರು ತಲೆ ಮೇಲೆ ಮೂಟೆ ಇಟ್ಕೊಂಡು ಬರ್ತಿದ್ದಾರೆ.

9ನೇ ದಿನ ನಡೆಯುವ ರೊಟ್ಟಿ ಜಾತ್ರೆ: ಇಂತಹ ವಿಭಿನ್ನ ಕಾರ್ಯಕ್ಕೆ ಸಾಕ್ಷಿ ಆಗಿದ್ದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮುಗಳಖೋಡದಲ್ಲಿರುವ ಜಿಡಗಾ ಮಠ. ಇಲ್ಲಿ ಪ್ರತಿವರ್ಷ 11 ದಿನಗಳ ಕಾಲ ಅದ್ಧೂರಿಯಾಗಿ ಯಲ್ಲಾಲಿಂಗ ಪ್ರಭುಗಳ ಜಾತ್ರೆ ನಡೆಯುತ್ತೆ. ವಿಶೇಷವಾಗಿ 9ನೇ ದಿನ ರೊಟ್ಟಿ ಜಾತ್ರೆ ನಡೆಯುತ್ತೆ. ಅದ್ರಂತೆ ಇವತ್ತು ಭಕ್ತರು ಐದು ಲಕ್ಷಕ್ಕೂ ಅಧಿಕ ರೊಟ್ಟಿಗಳನ್ನ ದೇವರಿಗೆ ಸಮರ್ಪಿಸಿದ್ರು. ಇದ್ರಲ್ಲಿ ಬೇಕಾದಷ್ಟು ರೊಟ್ಟಿಯನ್ನ ಮಠದಲ್ಲೇ ಇಟ್ಕೊಂಡು ಉಳಿದ ರೊಟ್ಟಿಯನ್ನ ದಾಸೋಹ ನಡೆಸುವ ಮಠಕ್ಕೆ ಕಳುಹಿಸಲಾಗುತ್ತೆ.

ಪ್ರಸಾದ ಹಂಚಿ ತಿನ್ನುವುದೇ ಜಾತ್ರೆ ವಿಶೇಷ: ಇನ್ನು, ಖಡಕ್ ರೊಟ್ಟಿಯ ಕಮಾಲ್ ಒಂದ್ಕಡೆ ಆಗಿದ್ರೆ, ಮತ್ತೊಂದ್ಕಡೆ ಗ್ರಾಮೀಣ ಸೊಗಡಿನ ಲೋಕವೇ ಸೃಷ್ಟಿಯಾಗಿತ್ತು. ಗುಡಿಸಲಿನಲ್ಲಿ ರೊಟ್ಟಿ ಮಾಡುವುದು. ಗೋದಿಯನ್ನ ಕುಟ್ಟುವುದು. ಬಾವಿಯಿಂದ ನೀರು ಸೇದುವುದರ ಜೊತೆಗೆ ಹಳ್ಳಿ ಕಟ್ಟೆಯೂ ಸಿದ್ಧವಾಗಿತ್ತು. ಅದೇನೆ ಇರಲಿ, ಜಾತ್ರೆ ಅಂದ್ರೆ ಕೇವಲ ದೇವರ ಆರಾಧನೆ ಮಾಡಿ ಪ್ರಸಾದ ಸೇವಿಸುವುದಲ್ಲ. ಬದ್ಲಿಗೆ ಪ್ರಸಾದವನ್ನ ತಾವೇ ತಂದು ಹಂಚಿ ತಿನ್ಬೇಕು ಎನ್ನುವುದೇ ಈ ಜಾತ್ರೆಯ ವಿಶೇಷ.

Follow Us
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ