AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಏರ್‌ಪೋರ್ಟ್‌ಗೆ ಮಾಟ ಮಂತ್ರ ಕೇಸಿಗೆ ಟ್ವಿಸ್ಟ್: ಸ್ವಯಂ ಘೋಷಿತ ಬಾಬಾ ಅರೆಸ್ಟ್!

ಬೆಂಗಳೂರು ಏರ್ಪೋಟ್ ಆಡಳಿತ ಮಂಡಳಿ ಕಚೇರಿಗೆ ನಿತ್ಯ ಕೊರಿಯರ್ಗಳು ಬರುವುದು ಸಾಮಾನ್ಯ. ಆದ್ರೆ, ಕಳೆದೊಂದು ತಿಂಗಳ ಹಿಂದೆ ಕೆಐಎಎಲ್ ಆಡಳಿತ ಕಚೇರಿಯ ವಿಳಾಸಕ್ಕೆ ಪೋಸ್ಟ್ ಆಫೀಸ್ ಮೂಲಕ ಪಾರ್ಸೆಲ್ ಒಂದು ಬಂದಿತ್ತು. ವಿಳಾಸ ಸರಿಯಾಗಿದ್ದರಿಂದ ಸಿಬ್ಬಂದಿ ಕುತೂಹಲದಿಂದ ಅದನ್ನು ತೆರೆದಿದ್ದಾರೆ. ಆದರೆ ಬಾಕ್ಸ್ ಓಪನ್ ಮಾಡುತ್ತಿದ್ದಂತೆ ಒಂದು ನಿಗೂಢ ಪಾರ್ಸೆಲ್ ಇಡೀ ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ಬೆಚ್ಚಿಬೀಳಿಸಿತ್ತು. ಇದೀಗ ಈ ಪಾರ್ಸಲ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಇದರ ಹಿಂದೆ ಸ್ವಯಂ ಘೋಷಿತ ಬಾಬಾ ಇರುವುದು ಬೆಳಕಿಗೆ ಬಂದಿದೆ.

ಬೆಂಗಳೂರು ಏರ್‌ಪೋರ್ಟ್‌ಗೆ ಮಾಟ ಮಂತ್ರ ಕೇಸಿಗೆ ಟ್ವಿಸ್ಟ್: ಸ್ವಯಂ ಘೋಷಿತ ಬಾಬಾ ಅರೆಸ್ಟ್!
ಬೆಂಗಳೂರು ವಿಮಾನ ನಿಲ್ದಾಣ
ನವೀನ್ ಕುಮಾರ್ ಟಿ
| Edited By: |

Updated on:Mar 31, 2026 | 7:47 PM

Share

ಬೆಂಗಳೂರು, (ಮಾರ್ಚ್ 31): ಕೆಐಎಎಲ್ (kempegowda international airport bengaluru) ಆಡಳಿತ ಕಚೇರಿಯ ವಿಳಾಸಕ್ಕೆ ಪೋಸ್ಟ್ ಆಫೀಸ್ ಮೂಲಕ ಪಾರ್ಸೆಲ್ ಒಂದು ಬಂದಿತ್ತು. ವಿಳಾಸ ಸರಿಯಾಗಿದ್ದರಿಂದ ಸಿಬ್ಬಂದಿ ಕುತೂಹಲದಿಂದ ಅದನ್ನು ತೆರೆದಿದ್ದಾರೆ. ಆದರೆ ಬಾಕ್ಸ್‌ನೊಳಗೆ ಇದ್ದದ್ದು ಯಾವುದೋ ಬೆಲೆಬಾಳುವ ವಸ್ತುವಲ್ಲ, ಬದಲಾಗಿ ಭೀತಿ ಹುಟ್ಟಿಸುವ ಮಾಟ-ಮಂತ್ರದ ಸಾಮಗ್ರಿಗಳು ಇದ್ದವು. ಇದರಿಂದ ಸಿಬ್ಬಂದಿ ಬೆಚ್ಚಿಬಿದ್ದಿದ್ದು, ಪೂಜೆ ಮಾಡಿ ಪಾರ್ಸೆಲ್ ಮಾಡಲಾಗಿದ್ದ ಈ ವಸ್ತುಗಳನ್ನು ಕಂಡು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಇದೀಗ ಈ ಪಾರ್ಸೆಲ್ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಈ ಬ್ಲ್ಯಾಕ್ ಮಾಜಿಕ್ ಪಾರ್ಸೆಲ್ ​ ಹಿಂದಿನ ರೂವಾರಿ ಸ್ವಯಂ ಘೋಷಿತ ಬಾಬಾನನ್ನು ಬಂಧಿಸಲಾಗಿದೆ.

ಪಾರ್ಸೆಲ್ ಬಂದಿದ್ದ ಬಾಕ್ಸ್​ ಸಂಬಂಧ ಕೆಐಎಎಲ್ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಚರಣೆ ನಡೆಸಿ ಪಾರ್ಸೆಲ್ ಕಳುಹಿಸಿದ್ದ ವ್ಯಕ್ತಿಯನ್ನು ಹೈದರಾಬಾದ್​​ ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮಾಟ ಮಂತ್ರ ಮಾಡಿಸಿದ ರೀತಿಯ ಪಾರ್ಸೆಲ್ ಕಳುಹಿಸಿದ್ದು ನ್ಯೂಜಿಲೆಂಡ್ ಸುಬಾಷ್ ಜೈ ಅಜೀಜ್ ಎಂದು ಗುರುತಿಸಲಾಗಿದೆ. ಇನ್ನು ವಿಚಾರಣೆ ನಡೆಸಿದಾಗ ತಾನೊಬ್ಬ ದೇವಮಾನವ ಎಂದು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

ವಿಮಾನ ದುರಂತ ಸಂಭವಿಸದಿರಲಿ ಎಂದು ಪೂಜೆ

ಹೈದರಾಬಾದ್​​ನಲ್ಲಿ ಸಿಕ್ಕ ಸುಬಾಷ್ ಜೈ ಅಜೀಜ್ ನನ್ನು ಹಿಡಿದು ಬೆಂಗಳೂರು ಕರೆತಂದು ವಿಚಾರಣೆ ನಡೆಸಿದಾಗ ತಾನೊಬ್ಬ ಬಾಬಾ ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ ಬ್ಲ್ಯಾಕ್ ಮಾಜಿಕ್ ರೀತಿಯ ಪಾರ್ಸೆಲ್ ಏಕೆ ಕಳುಹಿಸಿದ್ದು ಎಂದು ಕೇಳಿದಾಗ ವಿಮಾನ ದುರಂತ ಸಂಭವಿಸದಿರಲಿ ಎಂದು ಪೂಜೆ ಮಾಡಿ ಕಳುಹಿಸಿರುವುದಾಗಿ ಹೇಳಿದ್ದಾನೆ.

ಈ ಹಿಂದೆ ಅಹಮದಾಬಾದ್ ನಲ್ಲಿ ನಡೆದ ವಿಮಾನ ದುರಂತ ಬೆಂಗಳೂರಿನಲ್ಲಿ ನಡೆಯದಿರಲಿ ಎಂದು ಪೂಜೆ ಮಾಡಿದ್ದು, ತಾನು ಬಳಸಿದ್ದ ಹಾರ, ಅರಿಶಿನ ಕುಂಕುಮ ಹಾಗೂ ಪೋಟೋಗಳನ್ನ ನೀಡಿದ್ದಾಗಿ ಹೇಳಿದ್ದಾನೆ. ಜೊತೆಗೆ ನಾನೊಬ್ಬ ದೇವ ಮಾನವನಾಗಿದ್ದು, ನಾನು ಹಾಕಿದ ಹಾರವನ್ನ ಒಳ್ಳೆ ಕೆಲಸಗಳಿಗೆ ನೀಡುತ್ತೇನೆ. ಎಲ್ಲೆಂದರಲ್ಲಿ ಬಿಸಾಕಲ್ಲ ಎಂದಿದ್ದಾನೆ.

ಯುಪಿಯಿಂದ ಬೆಂಗಳೂರಿಗೆ ಬಂದಿದ್ದ

ಈ ಸುಬಾಷ್ ಜೈ ಅಜೀಜ್ ಕಳೆದ ತಿಂಗಳು ಉತ್ತರ ಪ್ರದೇಶಕ್ಕೆ ಬಂದಿದ್ದು, ಅಲ್ಲಿಂದ ಬೆಂಗಳೂರಿನ ಕೆಂಪೇಗೌಡ ಏರ್ಪೋಟ್ ಗೆ ಆಗಮನಿಸಿದ್ದ. ಈ ವೇಳೆ ತನ್ನ ಕೊರಳಲ್ಲಿದ್ದ ಹಾರ, ಅರಿಶಿನ ಕುಂಕುಮ, ತಿನ್ನಲ್ಲು ತೆಗೆದುಕೊಂಡಿದ್ದ ಕಬ್ಬು, ಕೆಲ ದೇವರ ಪೋಟೋಗಳನ್ನೆಲ್ಲ ಒಂದು ಬಾಕ್ಸ್ ನಲ್ಲಿಟ್ಟು ಜೊತೆಗೆ ಶ್ರೀಲಂಕಾ ಭಾಷೆಯಲ್ಲಿ ಪತ್ರವನ್ನ ಬರೆದು ಬಾಕ್ಸ್​​ನಲ್ಲಿ ಹಾಕಿದ್ದ. ಬಳಿಕ ಬಾಕ್ಸ್ ಹಿಡಿದು ಕೆಂಪೇಗೌಡ ಏರ್ಪೋಟ್ ನಲ್ಲಿರುವ ಪೋಸ್ಟ್​​ ಆಫೀಸ್​​ಗೆ ತೆರಳಿ ಕೆಐಎಎಲ್ ಸಿಇಓ ಹೆಸರಿಗೆ ಕೋರಿಯರ್ ಮಾಡಿ ಹೋಗಿದ್ದ. ಬಳಿಕ ಪೋಸ್ಟ್ ಆಫೀಸ್ ಸಿಬ್ಬಂದಿ ಕೆಐಎಎಲ್ ಕಚೇರಿಗೆ ತೆರಳಿ ಬಾಕ್ಸ್ ಡೆಲೆವರಿ ಮಾಡಿದ್ದು, ಆ ವೇಳೆ ಬಾಕ್ಸ್ ಓಪನ್ ಮಾಡಿದಾಗ ಎಲ್ಲಾ ವಸ್ತು ಮಾಟ ಮಂತ್ರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿದ್ದು, ಇದನ್ನು ಕಂಡು ಸಿಬ್ಬಂದಿ ಶಾಕ್ ಆಗಿದ್ದರು. ಈ ಸಂಬಂಧ ಕೆಂಪೇಗೌಡ ಏರ್ಪೋಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದರು.

ಒಟ್ಟಾರೆ ಹೈ ಪೈ ಟೆಕ್ನಾಲಜಿ ಮೂಲಕ ದೇಶದಲ್ಲೇ ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣಕ್ಕೆ ಬ್ಲಾಕ್ ಮ್ಯಾಜಿಕ್ ರೀತಿಯ ವಸ್ತು ಕಳುಹಿಸಿ ಎಲ್ಲರು ಆತಂಕಗೊಳ್ಳುವಂತೆ ಮಾಡಿದ್ದು, ಪಾರ್ಸೆಲ್ ಕಳಿಸಿದ್ದ ಸ್ವಯಂ ಘೋಷಿತ ಬಾಬಾ ಕಂಬಿ ಎಣಿಸುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:31 pm, Tue, 31 March 26

Follow Us
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್
ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್
‘ಇದು ನನ್ನ ಕರಿಯರ್​​ಗೆ ಟ್ವಿಸ್ಟ್ ಕೊಟ್ಟ ಸಿನಿಮಾ’; ‘ಶೇರ್’ ಮೆಚ್ಚಿದ ತನಿಷಾ
‘ಇದು ನನ್ನ ಕರಿಯರ್​​ಗೆ ಟ್ವಿಸ್ಟ್ ಕೊಟ್ಟ ಸಿನಿಮಾ’; ‘ಶೇರ್’ ಮೆಚ್ಚಿದ ತನಿಷಾ
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ?
ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ?
ಇಂದು ಈ ರಾಶಿಯವರಿಗೆ ಸಣ್ಣ ಪುಣ್ಣ ಆರೋಗ್ಯ ಸಮಸ್ಯೆ ಕಾಡಬಹುದು!
ಇಂದು ಈ ರಾಶಿಯವರಿಗೆ ಸಣ್ಣ ಪುಣ್ಣ ಆರೋಗ್ಯ ಸಮಸ್ಯೆ ಕಾಡಬಹುದು!
ಇದ್ದಕ್ಕಿದ್ದಂತೆ ಹೈವೇಗೆ ಹಾರಿದ ಹಸು; ಕಾರಿನ ಸ್ಥಿತಿ ಏನಾಯ್ತು ನೋಡಿ!
ಇದ್ದಕ್ಕಿದ್ದಂತೆ ಹೈವೇಗೆ ಹಾರಿದ ಹಸು; ಕಾರಿನ ಸ್ಥಿತಿ ಏನಾಯ್ತು ನೋಡಿ!
ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ
ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ
ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್
ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್
114 ಎಸೆತಗಳ ನಂತರ ಮೊದಲ ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ
114 ಎಸೆತಗಳ ನಂತರ ಮೊದಲ ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ