AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸರ ವಿರುದ್ಧ ದೂರಿದ್ದಕ್ಕೆ ಸುಳ್ಳು ಕೇಸ್​ನಲ್ಲಿ ಫಿಟ್​: ಜಡ್ಜ್​ ಮುಂದೆ ಅಳಲು ತೋಡಿಕೊಂಡ KPTCL ಉದ್ಯೋಗಿ

ಪೊಲೀಸರು ತಮ್ಮ ವಿರೋಧಿಗಳನ್ನು ಯಾವುದೋ ಒಂದು ಸುಳ್ಳು ಕೇಸ್​ನಲ್ಲಿ ಫಿಟ್ ಮಾಡುತ್ತಾರೆ ಅಂತೆಲ್ಲಾ ಮಾತುಗಳು ಕೇಳಿದ್ದೇವೆ. ಸಿನಿಮಾದಲ್ಲೂ ಸಹ ನೋಡಿದ್ದೇವೆ. ಅದರಂತೆ ಇಲ್ಲಿ ರಿಯಲ್​ ಆಗಿ ವ್ಯಕ್ತಿಯೊಬ್ಬರನ್ನು ಪೊಲೀಸರು ಸುಳ್ಳು ಗಾಂಜಾ ಕೇಸ್​ನಲ್ಲಿ ಫಿಟ್​ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಬಂಧನವಾಗಿದ್ದ ವ್ಯಕ್ತಿ ಕೋರ್ಟ್​ನಲ್ಲಿ ಜಡ್ಜ್​ ಮುಂದೆ ಪೊಲೀಸರ ಅಸಲಿ ಮುಖವನ್ನು ಬಿಚ್ಚಿಟ್ಟಿದ್ದಾರೆ. ಏನಿದು ಪ್ರಕರಣ ಎನ್ನುವ ವಿವರ ಇಲ್ಲಿದೆ.

ಪೊಲೀಸರ ವಿರುದ್ಧ ದೂರಿದ್ದಕ್ಕೆ ಸುಳ್ಳು ಕೇಸ್​ನಲ್ಲಿ ಫಿಟ್​: ಜಡ್ಜ್​ ಮುಂದೆ ಅಳಲು ತೋಡಿಕೊಂಡ KPTCL ಉದ್ಯೋಗಿ
ಹೈಕೋರ್ಟ್​​
Ramesha M
| Edited By: |

Updated on:Aug 06, 2024 | 8:00 PM

Share

ಬೆಂಗಳೂರು, (ಆಗಸ್ಟ್​ 06): ಪೊಲೀಸರ ವಿರುದ್ಧ ದೂರಿದ್ದಕ್ಕೆ ಸುಳ್ಳು ಕೇಸ್ ಹಾಕಿ ಬಂಧನ ಮಾಡಿದ್ದಾರೆ ಎಂದು ಕೆಪಿಟಿಸಿಎಲ್ ಉದ್ಯೋಗಿಯೊಬ್ಬರು ಗಂಭೀರ ಅರೋಪ ಮಾಡಿದ್ದಾರೆ. ಹೌದು…ಪೊಲೀಸರು ಗಾಂಜಾ ಕೇಸ್ ಹಾಕಿದ್ದಾರೆ ಎಂದು ಕೆಪಿಟಿಸಿಎಲ್ ಇಂಜಿನಿಯರ್ ಆಗಿರುವ ಶಾಂತಕುಮಾರಸ್ವಾಮಿ ಎನ್ನುವರು ಹೈಕೋರ್ಟ್​ ಮೊರಹೋಗಿದ್ದು, ಹೈಕೋರ್ಟ್​ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಮುಂದೆ ಪೊಲೀಸರಿಂದ ತಮಗಾದ ಕಿರುಕುಳವನ್ನು ಬಿಚ್ಚಿಟ್ಟಿದ್ದಾರೆ. ಇದನ್ನು ಆಲಿಸಿದ ಹೈಕೋರ್ಟ್​, ಕಿರುಕುಳ ನೀಡದಂತೆ ಪೊಲೀಸರಿಗೆ ಹೇಳುವಂತೆ ಎಸ್​​ಪಿಪಿಗೆ ಸೂಚನೆ ನೀಡಿದೆ. ಅಲ್ಲದೇ ಆರೋಪ ಸತ್ಯವಾದರೆ ಡಿವೈಎಸ್​ಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪೊಲೀಸರ ವಿರುದ್ಧ ಮಾಡಿದ ಆರೋಪಗಳೇನು?

ಮದುವೆ ರದ್ದಾಗಿದ್ದಕ್ಕೆ ದುಡ್ಡು ಕೊಡುವಂತೆ ಶಾಸಕ ಹಾಗೂ‌ ಪೊಲೀಸರು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಪೊಲೀಸರ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಗಾಂಜಾ ಕೇಸ್ ಹಾಕಿ ಬಂಧಿಸಿದ್ದಾರೆ. ಅಲ್ಲದೇ ಪೊಲೀಸರು ಡೋರ್ ಕ್ಲೋಸ್ ಮಾಡಿ ಹೊಡೆದಿದ್ದಾರೆ ಎಂದು ಸಾಗರ ಡಿವೈಎಸ್​ಪಿ ಗೋಪಾಲಕೃಷ್ಣ ನಾಯಕ್ ವಿರುದ್ಧ‌ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಕೊಟ್ಟೇ ಕೊಡ್ತಾರೆ: ರಾಜ್ಯಪಾಲರ ಭೇಟಿ ಬಳಿಕ ಅಬ್ರಾಹಂ ಸ್ಫೋಟಕ ಹೇಳಿಕೆ

ಅಲ್ಲದೇ ಎನ್​ಕೌಂಟರ್ ಮಾಡುವುದಾಗಿ ಗನ್ ಇಟ್ಟು ಬೆದರಿಸಿದ್ದಾರೆ. ಪರ್ಸ್,‌ ಸಾಕ್ಷ್ಯವಿದ್ದ ಮೊಬೈಲ್‌ ಕಿತ್ತಿಟ್ಟುಕೊಂಡಿದ್ದಾರೆ. ಸಾಲದಕ್ಕೆ ರೌಡಿಶೀಟರ್ ಮಾಡಿಸಿ ಕೆಲಸದಿಂದ ಸಸ್ಪೆಂಡ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕೆಪಿಟಿಸಿಎಲ್ ಇಂಜಿನಿಯರ್ ಶಾಂತಕುಮಾರಸ್ವಾಮಿ ಎಂಬುವರು ಹೈಕೋರ್ಟ್​ ನ್ಯಾಯಾಧೀಶರ ಮುಂದೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳನ್ನು ಕೇಳಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ, ಆರೋಪ ಸತ್ಯವಾದರೆ ಡಿವೈಎಸ್​ಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪ್ರಕರಣದ ಹಿನ್ನೆಲೆ

ಕೆಪಿಟಿಸಿಎಲ್​ ಇಂಜಿನಿಯರ್ ಆಗಿರುವ ಶಾಂತಕುಮಾರಸ್ವಾಮಿ  ಅವರಿಗೆ ಮದುವೆ ಫಿಕ್ಸ್ ಆಗಿದ್ದು, ಬಳಿಕ ಕೆಲ ಕಾರಣಾಂತರಗಳಿಂದ ಮದುವೆ ರದ್ದಾಗಿದೆ. ಈ ಸಂಬಂಧ ಸಾಗರ ಶಾಸಕ ಮತ್ತು ಪೊಲೀಸರು ಸೇರಿಕೊಂಡು ಮದುವೆ ರದ್ದು ಮಾಡಿಕೊಂಡಿದ್ದಕ್ಕೆ ಹಣ ನೀಡಬೇಕೆಂದಿದ್ದಾರೆ. ಇದನ್ನು ರೆಕಾರ್ಡ್​ ಮಾಡಿಕೊಂಡು ಶಾಂತಕುಮಾರಸ್ವಾಮಿ ಅವರು ಲೋಕಾಯುಕ್ತಗೆ ದೂರು ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಪೊಲೀಸರು, ಮದುವೆ ಫಿಕ್ಸ್​ ಆಗಿದ್ದ ಯುವತಿ ಕಡೆಯಿಂದ ದೂರು ಕೊಡಿಸಿದ್ದಾರೆ. ಬಳಿಕ ಶಾಂತಕುಮಾರಸ್ವಾಮಿ ತಮ್ಮ ವಿರುದ್ಧ ದೂರನ್ನು ರದ್ದುಗೊಳಿಸುವಂತೆ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಇದನ್ನು ಗಮನಿಸಿದ ಸಾಗರ ಪೊಲೀಸರು, ಶಾಂತಕುಮಾರಸ್ವಾಮಿ ವಿರುದ್ಧ ಗಾಂಜಾ ಕೇಸ್ ಹಾಕಿ ಬಂಧಿಸಿದ್ದರು. ನಂತರ ಜೈಲಿಗೆ ಹೋಗಿ ಬಂದ ಶಾಂತಕುಮಾರಸ್ವಾಮಿ ತಮ್ಮ ಮೇಲಿನ ಪ್ರಕರಣವನ್ನು ರದ್ದು ಕೋರಿ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:13 pm, Tue, 6 August 24

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!