AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಕರೆಂಟ್​ ಬಿಲ್​ ಜಾಸ್ತಿ ಬಂತೆಂದು ಮೀಟರ್​​​ ರೀಡರ್​ ಮೇಲೆ ಹಲ್ಲೆ

ಕರೆಂಟ್​ ಬಿಲ್​ ಜಾಸ್ತಿ ಬಂತೆಂದು ಮೀಟರ್​​​ ರೀಡರ್​​ನನ್ನು ಥಳಿಸಿರುವ ಘಟನೆ ಬೆಂಗಳೂರಿನ ಗೋವಿಂದಪುರದಲ್ಲಿ ನಡೆದಿದೆ.

ಬೆಂಗಳೂರು: ಕರೆಂಟ್​ ಬಿಲ್​ ಜಾಸ್ತಿ ಬಂತೆಂದು ಮೀಟರ್​​​ ರೀಡರ್​ ಮೇಲೆ ಹಲ್ಲೆ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on: Aug 08, 2023 | 12:00 PM

Share

ಬೆಂಗಳೂರು: ಕರೆಂಟ್​ ಬಿಲ್ (Current Bill)​ ಜಾಸ್ತಿ ಬಂತೆಂದು ಬೆಸ್ಕಾಂನ (BESCOM) ಮೀಟರ್​​​ (Meter) ರೀಡರ್​​ನನ್ನು ಥಳಿಸಿರುವ ಘಟನೆ ಬೆಂಗಳೂರಿನ (Bengaluru) ಗೋವಿಂದಪುರದಲ್ಲಿ ನಡೆದಿದೆ. ಮೀಟರ್​ ರೀಡರ್​​ ನಾಗರಾಜ್​​ ನಾಯ್ಕ್​​ ಹಲ್ಲೆಗೊಳಗಾದ ವ್ಯಕ್ತಿ. ಶಂಶಾದ್​ ಖಾನ್​ (35) ಹಲ್ಲೆ ಮಾಡಿದ ವ್ಯಕ್ತಿ. ಘಟನೆಯಲ್ಲಿ ನಾಗರಾಜ್​​ ನಾಯ್ಕ್​ ಅವರ ಹಲ್ಲು ಮುರಿದಿದೆ. ಗೋವಿದಪುರದ 16ನೇ ಕ್ರಾಸ್​​ನಲ್ಲಿರುವ ಶಂಶಾದ್​ ಖಾನ್​ ಮನೆಯ ವಿದ್ಯುತ್​ ಮೀಟರ್​​​ನ್ನು ಇತ್ತೀಚಿಗೆ ಬದಲಾಯಿಸಲಾಗಿದ್ದು, ಹಳೆ ಮೀಟರ್​ ತೆಗೆದು ಹೊಸ ಮೀಟರ್​ ಅಳವಡಿಸಲಾಗಿದೆ.

ನಾಗರಾಜ್​​ ನಾಯ್ಕ್​ ಅವರು ಆ.4 ರಂದು ಬೆಳಿಗ್ಗೆ 11:30ರ ಸುಮಾರಿಗೆ ಶಂಶಾದ್​ ಖಾನ್​ ಅವರ ಮನೆಯ ಮೀಟರ್​ ರೀಡ್​ ಮಾಡಿ 458 ರೂ. ಬಾಕಿ ಬಿಲ್​ ಸೇರಿದಂತೆ ಒಟ್ಟು 4,026 ರೂ. ಬಿಲ್​ ನೀಡಿದ್ದಾರೆ. ಇದನ್ನು ಕಂಡ ಶಂಶಾದ್​ ಖಾನ್​​ ಕಳೆದ ಬಾರಿಗಿಂತ ಈ ಬಾರಿ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಬಿಲ್ ಬಂದಿದೆ. ಇದು ಹೇಗೆ ಸಾಧ್ಯ ಎಂದು ನಾಗರಾಜ್ ಅವರ​ ಜೊತೆ ವಾಗ್ವಾದಕ್ಕಿಳಿದ್ದಿದ್ದಾರೆ.

ಇದಕ್ಕೆ ನಾಗರಾಜ್​ ನಾಯ್ಕ್​​ ನಾನು ಮೀಟರ್​ ರೀಡಿಂಗ್​ ಆಧರಿಸಿಯೇ ಬಿಲ್​ ನೀಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಶಂಶಾದ್​ ಖಾನ್​, ನಾಗರಾಜ್​ ನಾಯ್ಕ್​ ಅವರ ಜಗಳಕ್ಕೆ ಇಳಿದಿದ್ದಾನೆ. ಈ ವೇಳೆ ನಾಗರಾಜ್​​, ಶಂಶಾದ್​ ಖಾನ್ ಜೊತೆ ಮಾತು ಆಲಿಸದೆ ಅಕ್ಕಪಕ್ಕದ ಮನೆಗಳ ಮೀಟಿರ್​ ರೀಡ್​​ ಮಾಡಲು ಹೋದರು. ನಾಗರಾಜ್​ ನಾಯ್ಕ್​​ ಮೂರ್ನಾಲ್ಕು ಮನೆ ದಾಟಿ ಮುಂದೆ ಹೋಗುತ್ತಿದ್ದಂತೆ ಹಿಂದೆಯೇ ಬಂದ ಶಂಶಾದ್​ ಖಾನ್, ನಾಗರಾಜ್​ ನಾಯ್ಕ್​​ ಅವರ ಬಳಿಗೆ ಹೋಗಿ ಮತ್ತೆ ಜಗಳ ತೆಗೆದಿದ್ದಾರೆ.

ಇದನ್ನೂ ಓದಿ: ಹನಿಟ್ರ್ಯಾಪ್​ ಜಾಲದಲ್ಲಿ ಸಿಲುಕಿ ಲಕ್ಷ ಲಕ್ಷ ಹಣ ಕಳೆದುಕೊಂಡ ಕರ್ನಾಟಕದ ಮಾಜಿ ಸಿಎಂ ವಿಶೇಷ ಅಧಿಕಾರಿ

ಆಗ ನಾಗರಾಜ್​ ನಾಯ್ಕ್​ ಬೆಸ್ಕಾಂ ಕಚೇರಿಗೆ ಭೇಟಿ ನೀಡುವಂತೆ ಸಲಹೆ ನೀಡಿದ್ದಾರೆ. ಈ ವೇಳೆ ಶಂಶಾದ್​​ ಖಾನ್​​, ನಾಗರಾಜ್​ ನಾಯ್ಕ್​ ಅವರ ಮುಖಕ್ಕೆ ಮೂರ್ನಾಲ್ಕು ಬಾರಿ ಗುದ್ದಿದ್ದಾನೆ. ಇದರಿಂದ ನಾಗರಾಜ್​ ಅವರ ಒಂದು ಹಲ್ಲು ಮುರಿದಿದೆ. ಇದರಿಂದ ತೀವ್ರ ರಕ್ತಸ್ರಾವಗಿತ್ತಿದ್ದಂತೆ ನಾಗರಾಜ್​​ ಅಲ್ಲಿಂದ ಕಾಲ್ಕಿತ್ತು ಪಕ್ಕದ ಬೀದಿಯ ಮನೆಯೊಂದರ ಬಳಿ ಹೋಗಿ ನಿಂತರು. ಅಲ್ಲಿಗೂ ಶಂಶದ್​ ಖಾನ್​ ಹಿಂಬಾಲಿಸಿಕೊಂಡು ಬಂದು ಜಗಳ ತೆಗೆದಿದ್ದಾನೆ.

ಈ ವೇಳೆ ನಾಗರಾಜ್​ ನಾಯಕ್ ತಮ್ಮ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಜಗಳ ಬಿಡಿಸಿ ನಾಗರಾಜ್​ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ನಂತರ ನಾಗರಾಜ್​ ನಾಯ್ಕ ಗೋವಿಂದಪುರ ಪೊಲೀಸ್​ ಠಾಣೆಗೆ ದೂರು ನೀಡಿದರು. ಸದ್ಯ ಪೊಲೀಸರು ಶಂಶಾದ್​ ಖಾನ್​ನನ್ನು ಬಂಧಿಸಿ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಶಂಶಾದ್​ ಖಾನ್ 300 ಕ್ಕೂ ಹೆಚ್ಚು ಯೂನಿಟ್‌ ವಿದ್ಯುತ್​ ಬಳಸಿದ್ದರಿಂದ ಅವರು ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌ಗೆ ಅರ್ಹರಲ್ಲ ಎಂದು ನಾಗರಾಜ್​ ನಾಯಕ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ