AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಡೂಟಕ್ಕಿಂತ ತರಕಾರಿ ಊಟವೇ ದುಬಾರಿ: ಬೆಂಗಳೂರಿನಲ್ಲಿ ಬದನೆಕಾಯಿ, ಬೀನ್ಸ್ ಬೆಲೆ ಕೇಳಿ ಗ್ರಾಹಕರು ಕಂಗಾಲು!

ಬೆಂಗಳೂರಿನಲ್ಲಿ ಮುಂಗಾರು ಹವಾಮಾನ ವೈಪರೀತ್ಯದಿಂದಾಗಿ ತರಕಾರಿ ಪೂರೈಕೆ ಕುಸಿದಿದ್ದು, ಬೆಲೆಗಳು ಗಗನಕ್ಕೇರಿವೆ. ಇತಿಹಾಸದಲ್ಲೇ ಮೊದಲ ಬಾರಿಗೆ ಬದನೆಕಾಯಿ ನೂರರ ಗಡಿ ದಾಟಿದ್ದರೆ, ಬೀನ್ಸ್ ಮತ್ತು ಬೆಳ್ಳುಳ್ಳಿ ದರಗಳು ಬರೋಬ್ಬರಿ 200 ರೂಪಾಯಿಗೆ ತಲುಪಿವೆ. ಆದರೆ ಕಳೆದ ವಾರ ಗ್ರಾಹಕರ ಕಣ್ಣೀರು ಹಾಕಿಸಿದ್ದ ಟೊಮೇಟೊ ಬೆಲೆ ಮಾತ್ರ ಸದ್ಯ 20-30 ರೂಪಾಯಿಗೆ ಇಳಿಕೆಯಾಗಿ ಕೊಂಚ ನಿರಾಳ ತಂದಿದೆ.

ಬಾಡೂಟಕ್ಕಿಂತ ತರಕಾರಿ ಊಟವೇ ದುಬಾರಿ: ಬೆಂಗಳೂರಿನಲ್ಲಿ ಬದನೆಕಾಯಿ, ಬೀನ್ಸ್ ಬೆಲೆ ಕೇಳಿ ಗ್ರಾಹಕರು ಕಂಗಾಲು!
ಸಿಲಿಕಾನ್ ಸಿಟಿಯಲ್ಲಿ ಬದನೆಕಾಯಿ, ಬೀನ್ಸ್ ಬೆಲೆ ಕೇಳಿ ಗ್ರಾಹಕರು ಕಂಗಾಲು!
ಭಾವನಾ ಹೆಗಡೆ
|

Updated on: Jun 26, 2026 | 12:03 PM

Share

ಮುಖ್ಯಾಂಶಗಳು

  • ಇತಿಹಾಸದಲ್ಲೇ ಮೊದಲ ಬಾರಿಗೆ ಕೆಜಿ ಬದನೆಕಾಯಿ ಬೆಲೆ ನೂರರ ಗಡಿ ದಾಟಿದೆ.
  • ಶುಂಠಿ, ಬೀನ್ಸ್, ಬೆಳ್ಳುಳ್ಳಿ ದರ ಕೆಜಿಗೆ 200 ರೂಪಾಯಿಗೆ ಏರಿಕೆಯಾಗಿದೆ.
  • ಕಳೆದ ವಾರ ದುಬಾರಿಯಾಗಿದ್ದ ಟೊಮೇಟೊ ಬೆಲೆ 20-30 ರೂಪಾಯಿಗೆ ಇಳಿಕೆಯಾಗಿದೆ.

ಬೆಂಗಳೂರು, ಜೂನ್ 26: ನಗರದ (Bengaluru) ಜನತೆಗೆ ಮಾರುಕಟ್ಟೆಯಲ್ಲಿ ಮತ್ತೊಂದು ಭಾರಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದಿನನಿತ್ಯದ ಅಡುಗೆಗೆ ಅತ್ಯಗತ್ಯವಾಗಿರುವ ತರಕಾರಿಗಳ (Vegetable Price Hike) ಬೆಲೆ ಗಗನಕ್ಕೇರಿದ್ದು, ಮಧ್ಯಮ ಹಾಗೂ ಬಡ ವರ್ಗದ ಜನರ ಜೇಬಿಗೆ ಭಾರಿ ಕತ್ತರಿ ಬಿದ್ದಿದೆ. ಕಳೆದ ವಾರ ಗ್ರಾಹಕರ ಕಣ್ಣೀರು ಹಾಕಿಸಿದ್ದ ಟೊಮೇಟೊ ಬೆಲೆ ಈಗ ಕೊಂಚ ಇಳಿಕೆಯಾಗಿದ್ರೂ, ಸದ್ಯ ಬದನೆಕಾಯಿ ಮತ್ತು ಬೀನ್ಸ್ ಸರದಿ ಬಂದಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕೆಜಿ ಬದನೆಕಾಯಿ ಬೆಲೆ ನೂರರ ಗಡಿ ದಾಟಿದ್ದು, ವಾಂಗಿಬಾತ್ ಪ್ರಿಯರಿಗೆ ಭಾರಿ ಶಾಕ್ ನೀಡಿದೆ.

ಮುಂಗಾರು ಅವಾಂತರ: ತರಕಾರಿ ಹರಿವು ಕುಸಿತ

ರಾಜ್ಯಾದ್ಯಂತ ಮುಂಗಾರು ಮಳೆ ಆರಂಭವಾಗಿದ್ದರೂ, ಹವಾಮಾನದ ಏರುಪೇರು ತರಕಾರಿ ಇಳುವರಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಒಂದೆಡೆ ಕೆಲವು ಭಾಗಗಳಲ್ಲಿ ಅತಿವೃಷ್ಟಿಯಿಂದ ಬೆಳೆಗಳು ಕೊಳೆತು ಹೋಗುತ್ತಿದ್ದರೆ, ಇನ್ನೊಂದೆಡೆ ಸಕಾಲಕ್ಕೆ ಮಳೆಯಾಗದ ಕಡೆಗಳಲ್ಲಿ ಅನಾವೃಷ್ಟಿಯಿಂದಾಗಿ ಬೆಳೆಗಳು ನಾಶವಾಗಿವೆ. ಇದರ ನೇರ ಪರಿಣಾಮ ಮಾರುಕಟ್ಟೆಗೆ ಪೂರೈಕೆಯಾಗುವ ತರಕಾರಿಗಳ ಪ್ರಮಾಣ ಭಾರಿ ಕುಸಿದಿದ್ದು, ಬೆಲೆಗಳು ದಿಢೀರ್ ರೇಷ್ಮೆ ದರವನ್ನು ಪಡೆದುಕೊಳ್ಳುತ್ತಿವೆ.

ಸೆಂಚುರಿ ದಾಟಿದ ಬದನೆಕಾಯಿ, ಡಬಲ್ ಸೆಂಚುರಿ ಬಾರಿಸಿದ ಬೀನ್ಸ್!

ಇತಿಹಾಸದಲ್ಲೇ ಮೊದಲ ಬಾರಿಗೆ ಕೆಜಿ ಬಿಳಿ ಬದನೆಕಾಯಿ ಬೆಲೆ ಬರೋಬ್ಬರಿ 100 ರಿಂದ 140 ರೂಪಾಯಿಗೆ ತಲುಪಿದೆ. ಇನ್ನು ಅಡುಗೆಗೆ ರುಚಿ ನೀಡುವ ಬೀನ್ಸ್, ಬಟಾಣಿ, ಶುಂಠಿ ಮತ್ತು ಬೆಳ್ಳುಳ್ಳಿ ದರಗಳು ಈಗ ‘ಡಬಲ್ ಸೆಂಚುರಿ’ (200 ರೂ.) ಬಾರಿಸಿ ಗ್ರಾಹಕರು ತರಕಾರಿ ಮಾರ್ಕೆಟ್ ಕಡೆ ತಲೆಹಾಕದಂತೆ ಮಾಡಿವೆ. ನುಗ್ಗೆಕಾಯಿ, ಕ್ಯಾಪ್ಸಿಕಂ ಮತ್ತು ಹಸಿಮೆಣಸಿನಕಾಯಿ ದರಗಳೂ ಸಹ ನೂರರ ಗಡಿ ದಾಟಿ ಮುನ್ನುಗ್ಗುತ್ತಿವೆ.

ಮಾರುಕಟ್ಟೆಯ ಇಂದಿನ ಪ್ರಮುಖ ತರಕಾರಿಗಳ ದರ ಪಟ್ಟಿ (ಕೆಜಿಗಳಲ್ಲಿ) ಹೀಗಿದೆ:

  • ಬದನೆಕಾಯಿ: 40 ರೂ. ಇದ್ದದ್ದು ಈಗ 100 ರೂ.
  • ಬೀನ್ಸ್: 50 ರೂ. ಇಂದ ಬರೋಬ್ಬರಿ 150 ರೂ.ಗೆ ಏರಿಕೆ
  • ಬಟಾಣಿ, ಶುಂಠಿ, ಬೆಳ್ಳುಳ್ಳಿ: 80-100 ರೂ. ಇಂದ ನೇರವಾಗಿ 200 ರೂ.
  • ಹಸಿಮೆಣಸಿನಕಾಯಿ: 50 ರೂ. ಇಂದ 120 ರೂ.
  • ನುಗ್ಗೆಕಾಯಿ ಮತ್ತು ಕ್ಯಾಪ್ಸಿಕಂ: 90 ರಿಂದ 100 ರೂ.

ಸಾಂಬಾರ್ ಮಾಡೋಕೂ ಯೋಚನೆ ಮಾಡಬೇಕು: ಗ್ರಾಹಕರ ಅಳಲು

ನಾವೇನು ತಿನ್ನಬೇಕು ಹೇಳಿ? ಸಂಬಳ ಹೆಚ್ಚಾಗಲ್ಲ, ಆದ್ರೆ ತರಕಾರಿ ಬೆಲೆ ದಿನಾ ಹೆಚ್ಚಾಗುತ್ತೆ. ನೂರು ರೂಪಾಯಿ ತಗೊಂಡು ಬಂದ್ರೆ ಒಂದು ಕೆಜಿ ಬದನೆಕಾಯಿನೂ ಬರಲ್ಲ. ಎಲ್ಲಾ ನೂರರ ಗಡಿ ದಾಟಿದೆ. ಸಾಂಬಾರ್ ಮಾಡೋಕೂ ಯೋಚನೆ ಮಾಡಬೇಕಾಗಿದೆ ಎಂದು ಮಾರುಕಟ್ಟೆಗೆ ಬಂದ ಗ್ರಾಹಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ವ್ಯಾಪಾರಿಗಳೂ ಸಹ ತರಕಾರಿ ಬಾರದ ಹಿನ್ನೆಲೆಯಲ್ಲಿ ವ್ಯಾಪಾರ ಕುಂಠಿತಗೊಂಡಿರುವುದಾಗಿ ಕಳವಳ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ನಿರಾಳ ತಂದ ಟೊಮೇಟೊ!

ಈ ಎಲ್ಲಾ ಬೆಲೆ ಏರಿಕೆಯ ನಡುವೆ ಗ್ರಾಹಕರಿಗೆ ಸದ್ಯ ಸಮಾಧಾನ ತಂದಿರೋದು ಕೇವಲ ಟೊಮೇಟೊ ಮಾತ್ರ. ಕಳೆದ ವಾರ 60 ರಿಂದ 70 ರೂಪಾಯಿ ಮುಟ್ಟಿದ್ದ ಟೊಮೇಟೊ ಬೆಲೆ, ಈಗ ಮಾರುಕಟ್ಟೆಗೆ ಭರ್ಜರಿ ಆವಕ ಹಿನ್ನೆಲೆಯಲ್ಲಿ 20 ರಿಂದ 30 ರೂಪಾಯಿಗೆ ಇಳಿಕೆಯಾಗಿದೆ. ಆದಾಗ್ಯೂ, ಉಳಿದೆಲ್ಲಾ ಅಗತ್ಯ ವಸ್ತುಗಳು ಮತ್ತು ತರಕಾರಿಗಳ ಬೆಲೆ ಗಗನಕ್ಕೇರಿರುವುದು ಮಧ್ಯಮ ವರ್ಗದ ಜನರ ಬಜೆಟ್‌ ಅಸ್ತವ್ಯಸ್ತಗೊಳಿಸಿದೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ
ಮಂಜುನಾಥಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿವೈ ವಿಜಯೇಂದ್ರ
ಮಂಜುನಾಥಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಿವೈ ವಿಜಯೇಂದ್ರ
ಶರಾವತಿ ವಿದ್ಯುದಾಗಾರಕ್ಕೆ ನುಗ್ಗಿದ ನೀರು: 7ನೇ ಯುನಿಟ್‌ನಲ್ಲಿ ಭಾರೀ ಅವಘಡ
ಶರಾವತಿ ವಿದ್ಯುದಾಗಾರಕ್ಕೆ ನುಗ್ಗಿದ ನೀರು: 7ನೇ ಯುನಿಟ್‌ನಲ್ಲಿ ಭಾರೀ ಅವಘಡ
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಕೇಂದ್ರ
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮೇಲಿನ ಎಲ್ಲಾ ನಿರ್ಬಂಧ ಹಿಂಪಡೆದ ಕೇಂದ್ರ
ಇಂದು ಈ ರಾಶಿಯವರಿಗೆ ಇಂದು ಅನಾರೋಗ್ಯ ಕಾಡಬಹುದು, ಎಚ್ಚರ!
ಇಂದು ಈ ರಾಶಿಯವರಿಗೆ ಇಂದು ಅನಾರೋಗ್ಯ ಕಾಡಬಹುದು, ಎಚ್ಚರ!
ಭಾವಿ ಪತ್ನಿಗೆ ಹಾಕಿದ್ದ ಚಿನ್ನ ನಕಲಿ: ಮದ್ವೆ ಕ್ಯಾನ್ಸಲ್, ಕಂಗಾಲಾದ ಯುವಕ
ಭಾವಿ ಪತ್ನಿಗೆ ಹಾಕಿದ್ದ ಚಿನ್ನ ನಕಲಿ: ಮದ್ವೆ ಕ್ಯಾನ್ಸಲ್, ಕಂಗಾಲಾದ ಯುವಕ
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇತುವೆ ಕುಸಿತ; 10 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇತುವೆ ಕುಸಿತ; 10 ಜನರಿಗೆ ಗಾಯ
ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್​​ಶಾನ ನೋಡಲು ಮುಗಿಬಿದ್ದ ಜನ
ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್​​ಶಾನ ನೋಡಲು ಮುಗಿಬಿದ್ದ ಜನ
ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಕೇಸ್​​: ಯುವಕ ಅರೆಸ್ಟ್
ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಕೇಸ್​​: ಯುವಕ ಅರೆಸ್ಟ್
33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ: ಡಿಕೆಶಿ
33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ: ಡಿಕೆಶಿ