AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ನಿರ್ವಹಣೆಗೆ ಆರ್ಟ್ ಆಫ್ ಲಿವಿಂಗ್​ನಿಂದ ನದಿ ಪುನರುಜ್ಜೀವನ ಕಾರ್ಯ

ಬೆಂಗಳೂರಿನ ಅಂತರ್ಜಲ ಕುಸಿತ ಮತ್ತು ನದಿಗಳ ನಾಶದ ಹಿನ್ನೆಲೆಯಲ್ಲಿ, ಸುವರ್ಣಮುಖಿ ನದಿ ಪುನರುಜ್ಜೀವನಕ್ಕಾಗಿ ಆರ್ಟ್ ಆಫ್ ಲಿವಿಂಗ್, ಕರ್ನಾಟಕ ಸರ್ಕಾರ ಹಾಗೂ ಐಐಎಂ ಬೆಂಗಳೂರು ಕಾರ್ಯಾಗಾರ ಆಯೋಜಿಸಿದ್ದವು. ನೈಸರ್ಗಿಕ ವಿಧಾನಗಳಿಂದ ಜಲ ಮೂಲಗಳನ್ನು ಪುನಃಸ್ಥಾಪಿಸಿ, ಮಾಲಿನ್ಯ ನಿಯಂತ್ರಿಸಿ, ಸಮುದಾಯದ ಸಹಭಾಗಿತ್ವದೊಂದಿಗೆ ಶಾಶ್ವತ ನೀರಿನ ಭದ್ರತೆ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ನಿರ್ವಹಣೆಗೆ ಆರ್ಟ್ ಆಫ್ ಲಿವಿಂಗ್​ನಿಂದ ನದಿ ಪುನರುಜ್ಜೀವನ ಕಾರ್ಯ
ನದಿ ಪುನರುಜ್ಜೀವನ ಕಾರ್ಯ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 10, 2025 | 10:44 PM

Share

ಬೆಂಗಳೂರು, ಅಕ್ಟೋಬರ್ 10: ಅಂತರ್ಜಲ ಮಟ್ಟಗಳು ಕ್ಷೀಣಿಸುತ್ತಿರುವುದು, ಸರೋವರಗಳು ಕಣ್ಮರೆಯಾಗುತ್ತಿರುವುದು ಮತ್ತು ಕಾವೇರಿ ನದಿಯ ಮೇಲೆ ಅತಿಯಾದ ಅವಲಂಬನೆಯೊಂದಿಗೆ, ಬೆಂಗಳೂರಿನ ನೀರಿನ ಬಿಕ್ಕಟ್ಟು ಹದಗೆಡುತ್ತಿರುವ ಹಿನ್ನೆಲೆ ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ (Art of Living International Center) ಸುವರ್ಣಮುಖಿ ನದಿ ಪುನರುಜ್ಜೀವನ ಜಾಗೃತಿ ಮತ್ತು ಕ್ರಿಯಾ ಕಾರ್ಯಾಗಾರವು ಸರ್ಕಾರಿ ನಾಯಕರು, ವಿಜ್ಞಾನಿಗಳು ಮತ್ತು ಸಮುದಾಯ ಪ್ರತಿನಿಧಿಗಳನ್ನು ಒಟ್ಟುಗೂಡಿಸಿ ಕಾರ್ಯಸಾಧ್ಯ ಪರಿಹಾರಗಳನ್ನು ರೂಪಿಸಿತು.

ನೈಸರ್ಗಿಕ ಜಲ ಪುನಃಸ್ಥಾಪಿಸುವುದು, ಪ್ರಕೃತಿ ಆಧಾರಿತ ವಿಧಾನಗಳ ಮೂಲಕ ಮಾಲಿನ್ಯವನ್ನು ನಿಭಾಯಿಸುವುದು ಮತ್ತು ದೀರ್ಘಕಾಲೀನ ನೀರಿನ ಸುರಕ್ಷತೆಗಾಗಿ ಸಮುದಾಯಗಳನ್ನು ಸಜ್ಜುಗೊಳಿಸುವಿಕೆ ಹೀಗೆ ಹಲವು ವಿಚಾರಗಳ ಮೇಲೆ ಚರ್ಚೆ ಮಾಡಲಾಗಿದೆ.

ಇದನ್ನೂ ಓದಿ: Duologue with Barun Das: ಶ್ರೀ ಶ್ರೀ ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ

ಜಾಗತಿಕ ಮಾನವತಾವಾದಿ ನಾಯಕ ಗುರುದೇವ್ ಶ್ರೀ ಶ್ರೀ ರವಿ ಶಂಕರ್ ರವರ, ಭಾರತದಲ್ಲಿ ನಶಿಸುತ್ತಿರುವ ನದಿಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಭಾರತವನ್ನು ಜಲಸಂಪನ್ಮೂಲವನ್ನಾಗಿ ಮಾಡುವ ದೃಷ್ಟಿಕೋನದಿಂದ ಪ್ರೇರಿತರಾಗಿ ದಿ ಆರ್ಟ್ ಆಫ್ ಲಿವಿಂಗ್, ಕರ್ನಾಟಕ ಸರ್ಕಾರ ಮತ್ತು ಐಐಎಂ ಬೆಂಗಳೂರು ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬೆಂಗಳೂರಿನಲ್ಲಿ ನೀರಿನ ಭವಿಷ್ಯಕ್ಕಾಗಿ ನೀತಿಗತ ದೃಷ್ಟಿಕೋನಗಳು, ಪಾರಂಪರಿಕ ಜ್ಞಾನ ಮತ್ತು ನಾಗರಿಕರ ಸಹಭಾಗಿತ್ವಗಳನ್ನು ಮಾರ್ಗಸೂಚಿ ಹೆಣೆಯಲಾಯಿತು.

ಕಾರ್ಯಾಗಾರವು ಸಾಂಕೇತಿಕವಾದ ಜಲ ಕಲಶ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಇದರಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಐದು ನದಿಗಳಾದ ಕುಮುದ್ವತಿ, ಅರ್ಕಾವತಿ, ವೃಷಭಾವತಿ, ಸುವರ್ಣಮುಖಿ ಮತ್ತು ಪಾಲಾರ್​​ನಿಂದ ಸಂಗ್ರಹಿಸಲಾದ ನೀರನ್ನು ಪವಿತ್ರಗೊಳಿಸಿ ಒಟ್ಟು ಸೇರಿಸಲಾಯಿತು. ನಂತರ ವೈದಿಕ ಗುರುಕುಲದ ವಿದ್ಯಾರ್ಥಿಗಳು ಋಗ್ವೇದದ ಆಪಃ ಸೂಕ್ತವನ್ನು ಪಠಿಸಿದರು. ನದಿಗಳ ಬಗ್ಗೆ ಭಾರತದಲ್ಲಿರುವ ಸಾಂಸ್ಕೃತಿಕ ಶ್ರದ್ಧೆಯ ಈ ಭಾವನೆಯು ಸಂವಾದ ಮತ್ತು ಕ್ರಿಯಾಶೀಲತೆಯ ದಿನಕ್ಕೆ ನಾಂದಿ ಹಾಡಿತು.

ಗುರುದೇವ್ ಶ್ರೀ ಶ್ರೀ ರವಿ ಶಂಕರ್ ಹೇಳಿದ್ದಿಷ್ಟು 

ಈ ವೇಳೆ ಮಾತನಾಡಿದ ಗುರುದೇವ್ ಶ್ರೀ ಶ್ರೀ ರವಿ ಶಂಕರ್ ಅವರು, ‘ನದಿಗಳು ಮತ್ತು ಮಳೆ ಜೀವನದ ತೊಟ್ಟಿಲು. ಕುಂದುತ್ತಿರುವ ಬೆಂಗಳೂರಿನ ನೀರಿನ ಸಂಪನ್ಮೂಲಗಳನ್ನು ಮತ್ತು ಕಣ್ಮರೆಯಾಗುತ್ತಿರುವ ಹಸಿರು ಹೊದಿಕೆಯನ್ನು ಸಂರಕ್ಷಿಸುವುದು ನಮ್ಮ ಆದ್ಯತೆ. ಪುಣ್ಯ ನದಿಗಳ ನೀರನ್ನು ನಾವು ನಮ್ಮನ್ನು ಶುದ್ಧೀಕರಿಸಿಕೊಳ್ಳಲು ಬಳಸಿದ್ದೇವೆ. ಆದರೆ ಇಂದು ಅದೇ ನದಿಗಳನ್ನು ಶುದ್ಧೀಕರಿಸಬೇಕಾಗಿರುವ ಸ್ಥಿತಿಗೆ ತಲುಪಿದ್ದೇವೆ’ ಎಂದರು.

‘ಸರ್ಕಾರಿ ಸಂಸ್ಥೆಗಳು ಮತ್ತು ಆರ್ಟ್ ಆಫ್ ಲಿವಿಂಗ್​​ನ ನದಿಗಳ ಪುನಶ್ಚೇತನದ ತಂಡವು ಜಂಟಿಯಾಗಿ ತಯಾರಿಸಿರುವ ಯೋಜನೆಯು ಭರವಸೆಯ ಆರಂಭವಾಗಿದೆ. ಇದನ್ನು ನಾವು ಕಾರ್ಯರೂಪಕ್ಕೆ ತಂದು, ಜನರಿಗೆ ಮತ್ತು ಎಲ್ಲಾ ರೀತಿಯ ಜೀವಗಳಿಗೆ ಶಾಶ್ವತವಾದ ನೀರಿನ ಸುರಕ್ಷತೆಯನ್ನು ನೀಡಬೇಕಾಗಿದೆ’ ಎಂದು ಗುರುದೇವ್ ಅವರು ಹೇಳಿದ್ದಾರೆ.

ಇತರೆ ರಾಜ್ಯಗಳಿಗೂ ಇದು ಮಾದರಿ: ಉಮಾ ಮಹಾದೇವನ್

ಇನ್ನು ಕಾರ್ಯಾಗಾರವನ್ನು ಉದ್ಘಾಟಿಸಿದ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ಶ್ರೀಮತಿ ಉಮಾ ಮಹಾದೇವನ್, ಯೋಜನೆಯ ಪ್ರಮಾಣ ಮತ್ತು ಸಾಮರ್ಥ್ಯವನ್ನು ಒತ್ತಿ ಹೇಳಿದರು. “ಆರ್ಥಿಕ ಬೆಳವಣಿಗೆಗೆ ತ್ವರಿತ ನಗರ ವಿಸ್ತರಣೆ ಅಗತ್ಯ, ಆದರೆ ಇದು ಅಂತರ್ಜಲ ಮಟ್ಟವನ್ನು ಕಡಿಮೆ ಮಾಡಿದೆ. 65 ಮಿಲಿಯನ್ ಘನ ಅಡಿ ಸಂಗ್ರಹ ಸಾಮರ್ಥ್ಯದೊಂದಿಗೆ 216 ಚದರ ಕಿ.ಮೀ ಪೆರಿ-ಅರ್ಬನ್ ಪ್ರದೇಶವನ್ನು ಒಳಗೊಂಡಿರುವ ಈ ಜಲಾಶಯ ಮತ್ತು ಅದರ 110 ಸಂಬಂಧಿತ ಜಲಮೂಲಗಳು ಮತ್ತು 332 ಹೊಳೆಗಳು ಅಂತರ್ಜಲವನ್ನು ಪುನಃಸ್ಥಾಪಿಸಬಹುದು, ಮಳೆ ನೀರನ್ನು ಸಂಗ್ರಹಿಸಬಹುದು ಮತ್ತು ಸುತ್ತಮುತ್ತಲಿನ 69 ಹಳ್ಳಿಗಳಿಗೆ ಸುಸ್ಥಿರ ನೀರಿನ ಮೂಲವಾಗಬಹುದು. ಈ ಯೋಜನೆ ಕರ್ನಾಟಕಕ್ಕೆ ಮಾತ್ರವಲ್ಲದೆ ಭಾರತದಾದ್ಯಂತ ಇತರೆ ರಾಜ್ಯಗಳಿಗೂ ಮಾದರಿಯಾಗಿದೆ ಎಂದು ಉಮಾ ಮಹಾದೇವನ್ ಎಂದರು.

ಕರ್ನಾಟಕದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಶ್ ಚಂದ್ರ ರೇ ಮಾತನಾಡಿ, ಪರಿಸರ ಪುನಃಸ್ಥಾಪನೆಯನ್ನು ವನ್ಯಜೀವಿ ಸಂರಕ್ಷಣೆಯೊಂದಿಗೆ ಹೇಗೆ ಸಮತೋಲನಗೊಳಿಸಲಾಗುತ್ತಿದೆ ಎಂಬುದನ್ನು ವಿವರಿಸಿದರು. ಈ ಯೋಜನೆಯಲ್ಲಿ, ಗೇಟೆಡ್ ಸಮುದಾಯಗಳು ಮತ್ತು ಆರ್‌ಡಬ್ಲ್ಯೂಎ ಗಳಲ್ಲಿನ ನಿವಾಸಿಗಳ ಸಮುದಾಯದ ತೊಡಗಿಸಿಕೊಳ್ಳುವಿಕೆಯಲ್ಲಿ ಆರ್ಟ್ ಆಫ್ ಲಿವಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ, ನೀರಿನ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವಾಗ ಜೀವವೈವಿಧ್ಯತೆ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಲಾಗಿದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.

ಜಲ ಜೀವನ್ ಮಿಷನ್ ಚೇರ್ ಪ್ರೊಫೆಸರ್, ಐಐಎಂ ಬೆಂಗಳೂರಿನ ಪ್ರೊ. ಡಾ. ಗೋಪಾಲ್ ನಾಯಕ್ ಪ್ರತಿಕ್ರಿಯಿಸಿ, ಮೂಲಭೂತ ಕ್ರಮಕ್ಕಾಗಿ ಕರೆ ನೀಡಿದರು. ಈ ಯೋಜನೆಯನ್ನು ಯಶಸ್ವಿಗೊಳಿಸಲು ವರ್ತನೆಯಲ್ಲಿ ಬದಲಾವಣೆ ತರುವುದು ಅಗತ್ಯ. ಮನಸ್ಥಿತಿಯಲ್ಲಿನ ಈ ಬದಲಾವಣೆಯನ್ನು ಮುನ್ನಡೆಸಲು ಆರ್ಟ್ ಆಫ್ ಲಿವಿಂಗ್ ಅತ್ಯುತ್ತಮ ಸ್ಥಳವಾಗಿದೆ ಎಂದು ಅವರು ಒತ್ತಿ ಹೇಳಿದರು.

ವಿವಿಕೆಐನ ನದಿ ಪುನರುಜ್ಜೀವನ ಯೋಜನೆಗಳ ರಾಷ್ಟ್ರೀಯ ನಿರ್ದೇಶಕ ಮತ್ತು ಅಂತರ್ಜಲ ಮತ್ತು ಜಿಐಎಸ್ ಆಧಾರಿತ ಜಲ ನಿರ್ವಹಣೆಯಲ್ಲಿ ಐದು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಅನುಭವಿ ಭೂವಿಜ್ಞಾನಿ ಡಾ. ವೈ. ಲಿಂಗರಾಜು ಮಾತನಾಡಿ, ನಗರಾಭಿವೃದ್ಧಿಯ ಹೆಸರಿನಲ್ಲಿ, ಪ್ರಕೃತಿ ಅಳುತ್ತಿದೆ. ಮಾಲಿನ್ಯಕಾರಕಗಳನ್ನು ತೊಡೆದುಹಾಕಲು ಮತ್ತು ಅಂತರ್ಜಲವನ್ನು ಮರುಪೂರಣಗೊಳಿಸಲು ನೈಸರ್ಗಿಕ ಸುಸ್ಥಿರತೆ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕೆಂದು ಅವರು ಪ್ರತಿಪಾದಿಸಿದರು. ಒಳಚರಂಡಿ ಸಂಸ್ಕರಣಾ ಘಟಕಗಳಿಗೆ ಶಕ್ತಿ ಮತ್ತು ಕಚ್ಚಾ ವಸ್ತುಗಳ ಅಗತ್ಯವಿದ್ದರೂ, ಜೈವಿಕ ರೇಖೆಗಳು (bio-ridges), ಮಾಲಿನ್ಯ-ಹೀರಿಕೊಳ್ಳುವ ಸಸ್ಯವರ್ಗ ಮತ್ತು ಮಳೆನೀರಿನ ನೈಸರ್ಗಿಕ ಮರುಬಳಕೆಯಂತಹ ಸರಳ ಪರಿಸರ ಮಧ್ಯಸ್ಥಿಕೆ ವಿಧಾನಗಳಿಂದ ದೀರ್ಘಕಾಲೀನ ಫಲಿತಾಂಶಗಳನ್ನು ಸಾಧಿಸಬಹುದು ಎಂದರು.

ಇದನ್ನೂ ಓದಿ: 70 ಗಂಟೆ ಕೆಲಸ ಮಾಡುವುದಕ್ಕಿಂತ, ಎಷ್ಟು ಮಾನಸಿಕವಾಗಿ ಸಿದ್ಧರಾಗಿದ್ದೀರಾ ಎನ್ನುವುದು ಮುಖ್ಯ: ರವಿಶಂಕರ್ ಗುರೂಜಿ

ಸುವರ್ಣಮುಖಿ ನದಿ ಪುನರುಜ್ಜೀವನ ಯೋಜನೆಯು ದಿ ಆರ್ಟ್ ಆಫ್ ಲಿವಿಂಗ್‌ನ, ನದಿಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಅಂತರ್ಜಲವನ್ನು ಪುನಃಸ್ಥಾಪಿಸುವ ವ್ಯಾಪಕ ರಾಷ್ಟ್ರೀಯ ಆಂದೋಲನದ ಭಾಗವಾಗಿದೆ. 2013 ರಿಂದ, ಈ ಸಂಸ್ಥೆಯು ಭಾರತದಾದ್ಯಂತ 70 ಕ್ಕೂ ಹೆಚ್ಚು ನದಿಗಳು ಮತ್ತು ಹೊಳೆಗಳ ಪುನರುಜ್ಜೀವನಕ್ಕೆ ನೇತೃತ್ವ ವಹಿಸಿದ್ದು, ಇದು 34.5 ದಶಲಕ್ಷಕ್ಕೂ ಹೆಚ್ಚು ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಬೆಂಗಳೂರು ಉಪಕ್ರಮವೊಂದೇ 216 ಚದರ ಕಿಲೋಮೀಟರ್‌ಗಳ ಜಲಾನಯನ ಪ್ರದೇಶದಾದ್ಯಂತ 110 ಜಲಮೂಲಗಳನ್ನು ಪುನರುಜ್ಜೀವನಗೊಳಿಸಲು ಸಜ್ಜಾಗಿದ್ದು, 69 ಹಳ್ಳಿಗಳ 9.3 ಲಕ್ಷ ಜನರು ಇದರ ಲಾಭ ಪಡೆಯಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!