AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫುಡ್ ಡೆಲಿವರಿ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್ ಗ್ರ್ಯಾಂಡ್ ಎಂಟ್ರಿ: ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಸೇವೆ ಆರಂಭ

ಫ್ಲಿಪ್‌ಕಾರ್ಟ್ ತನ್ನ ಆಹಾರ ವಿತರಣಾ ಸೇವೆಯನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಿದೆ. ONDC ಮೂಲಕ ವಿಸ್ತರಿಸುವ ಯೋಜನೆಯೂ ಇದೆ. ಸ್ವಿಗ್ಗಿ ಮತ್ತು ಝೊಮ್ಯಾಟೋದಂತಹ ದೈತ್ಯರಿಗೆ ಇದು ನೇರ ಸ್ಪರ್ಧೆಯಾಗಲಿದೆ. ಆದಾಗ್ಯೂ, 'ಫೋರಂ ಫಾರ್ ಇಂಟರ್ನೆಟ್ ರಿಟೇಲರ್ಸ್' ಸಂಸ್ಥೆಯು ಫ್ಲಿಪ್‌ಕಾರ್ಟ್ ವಿರುದ್ಧ 3000 ಕೋಟಿ ರೂ. ತೆರಿಗೆ ವಂಚನೆ ಮತ್ತು ಅನ್ಯಾಯದ ಸ್ಪರ್ಧೆಯ ಕುರಿತು ದೂರು ನೀಡಿದೆ.

ಫುಡ್ ಡೆಲಿವರಿ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್ ಗ್ರ್ಯಾಂಡ್ ಎಂಟ್ರಿ: ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಸೇವೆ ಆರಂಭ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jul 24, 2026 | 4:07 PM

Share

ಬೆಂಗಳೂರು, ಜು.24: ದೇಶದ ಪ್ರಮುಖ ಇ-ಕಾಮರ್ಸ್ ದೈತ್ಯ ಹಾಗೂ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ (Flipkart), ಭಾರತದಲ್ಲಿ ತನ್ನದೇ ಆದ ಆಹಾರ ಸರಬರಾಜು (Food Delivery) ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲು ಸಜ್ಜಾಗಿದೆ. ಮುಂದಿನ ಒಂದು ತಿಂಗಳ ಒಳಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ (Pilot Rollout) ಈ ಸೇವೆಗೆ ಚಾಲನೆ ನೀಡಲಿದೆ ಎಂದು ಎನ್‌ಡಿಟಿವಿ ಪ್ರಾಫಿಟ್ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಗ್ರಾಹಕರ ಪ್ರತಿಕ್ರಿಯೆಯನ್ನು ಪರೀಕ್ಷಿಸಿದ ಬಳಿಕ, ಸೇವೆಯನ್ನು ದೇಶದ ಇತರೆ ಪ್ರಮುಖ ನಗರಗಳಿಗೂ ವಿಸ್ತರಿಸಲು ಕಂಪನಿ ಯೋಜಿಸಿದೆ. ಫ್ಲಿಪ್‌ಕಾರ್ಟ್ ತನ್ನ ಫುಡ್ ಡೆಲಿವರಿ ಸೇವೆಗಾಗಿ ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ. ಇದರ ಜೊತೆಗೆ, ಸರ್ಕಾರದ ಬೆಂಬಲಿತ ಒಎನ್‌ಡಿಸಿ ನೆಟ್‌ವರ್ಕ್ ಮೂಲಕವೂ ಗ್ರಾಹಕರಿಗೆ ಸೇವೆ ಲಭ್ಯವಾಗುವಂತೆ ಮಾಡಲು ತಂತ್ರ ರೂಪಿಸುತ್ತಿದೆ.

ಈಗಾಗಲೇ ಸ್ವಿಗ್ಗಿ, ಝೊಮ್ಯಾಟೋಗಳಂತಹ ದೈತ್ಯ ಸಂಸ್ಥೆಗಳಿರುವ ತೀವ್ರ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತನ್ನದೇ ಆದ ಬಲವಾದ ಹೆಜ್ಜೆಗುರುತು ಮೂಡಿಸಲು ಫ್ಲಿಪ್‌ಕಾರ್ಟ್ ಸಿದ್ಧತೆ ನಡೆಸುತ್ತಿದೆ. ಆದರೆ, ಈ ಸೇವೆ ಆರಂಭವಾಗುವ ಅಧಿಕೃತ ದಿನಾಂಕವನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ; B.Tech ಪದವೀಧರರಿಗೆ ಸುವರ್ಣಾವಕಾಶ

ಮತ್ತೊಂದೆಡೆ, ಆನ್‌ಲೈನ್ ಮಾರಾಟಗಾರರ ಒಕ್ಕೂಟವಾದ ‘ಫೋರಂ ಫಾರ್ ಇಂಟರ್ನೆಟ್ ರಿಟೇಲರ್ಸ್, ಸೆಲ್ಲರ್ಸ್ ಅಂಡ್ ಟ್ರೇಡರ್ಸ್’ ಸಂಸ್ಥೆಯು ಭಾರತೀಯ ಸ್ಪರ್ಧಾತ್ಮಕ ಆಯೋಗಕ್ಕೆ ಫ್ಲಿಪ್‌ಕಾರ್ಟ್ ವಿರುದ್ಧ ದೂರು ನೀಡಿದೆ. ಫ್ಲಿಪ್‌ಕಾರ್ಟ್ ತೆರಿಗೆ ವಂಚನೆಯಿಂದ ಅಂದಾಜು 3,000 ಕೋಟಿ ರೂ. ನಿಧಿಯನ್ನು ಸೃಷ್ಟಿಸಿಕೊಂಡು, ಸ್ವತಂತ್ರ ಮಾರಾಟಗಾರರಿಗೆ ಧಕ್ಕೆಯಾಗುವಂತೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ ಹಾಗೂ ಮಾರುಕಟ್ಟೆಯಲ್ಲಿ ಅನುಚಿತ ಸ್ಪರ್ಧೆಯನ್ನು ಸೃಷ್ಟಿಸುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us