
ಬೆಂಗಳೂರು, ಜುಲೈ 06: ರಾಜ್ಯದಲ್ಲಿ ಮುಂಗಾರು ಮಳೆ (Monsoon rain) ಚುರುಕುಗೊಂಡಿರುವುದರಿಂದ ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಒಳಹರಿವು ಗಣನೀಯವಾಗಿ ಆರಂಭವಾಗಿದೆ. ಜೂನ್ ತಿಂಗಳಲ್ಲಿ ಮಳೆ ಕೈಕೊಟ್ಟಿದ್ದರಿಂದ ಆತಂಕದಲ್ಲಿದ್ದ ರೈತರಿಗೆ ಈಗ ಜಲಾಶಯಗಳಿಗೆ ಹರಿದುಬರುತ್ತಿರುವ ನೀರು ಕೊಂಚ ನಿರಾಳ ತಂದಿದ್ದು, ಕೃಷಿ ಚಟುವಟಿಕೆಗಳಿಗೆ ಮರುಜೀವ ಬಂದಂತಾಗಿದೆ. ಕಾವೇರಿ ಹಾಗೂ ಕೃಷ್ಣಾ ನದಿ ಪ್ರದೇಶದ ಡ್ಯಾಂಗಳು ಭರ್ತಿಯಾಗುವ ಮುನ್ಸೂಚನೆ ಸಿಕ್ಕಿದೆ.
| ಜಲಾಶಯದ ಹೆಸರು (ಜಿಲ್ಲೆ) | ಗರಿಷ್ಠ ಸಾಮರ್ಥ್ಯ | ಇಂದಿನ ನೀರಿನ ಮಟ್ಟ | ಇಂದಿನ ಸಂಗ್ರಹ (TMC) | ಒಳಹರಿವು (Cusecs) | ಹೊರಹರಿವು (Cusecs) |
| ಕೆ.ಆರ್.ಎಸ್ ಡ್ಯಾಂ (ಮಂಡ್ಯ) | 124.80 ಅಡಿ (49.45 TMC) | 81.55 ಅಡಿ | 11.487 TMC | 4,291 | 764 |
| ಲಿಂಗನಮಕ್ಕಿ ಡ್ಯಾಂ (ಶಿವಮೊಗ್ಗ) | 1819 ಅಡಿ (151.64 TMC) | 1751.60 ಅಡಿ | 19.6 TMC | 18,486 | 507 |
| ತುಂಗಭದ್ರಾ ಡ್ಯಾಂ (ಕೊಪ್ಪಳ) | 105.78 TMC | — | 9.38 TMC | 1,550 | 140 |
| ಭದ್ರಾ ಜಲಾಶಯ (ಶಿವಮೊಗ್ಗ) | 186 ಅಡಿ (71.53 TMC) | 139 ಅಡಿ | 26.548 TMC | 4,135 | 212 |
| ಹೇಮಾವತಿ ಜಲಾಶಯ (ಹಾಸನ) | 2922 ಅಡಿ (37 TMC) | 2894.60 ಅಡಿ | 16.641 TMC | 6,294 | 300 |
| ಕಬಿನಿ ಜಲಾಶಯ (ಮೈಸೂರು) | — | 58.40 ಅಡಿ | 6.74 TMC | 5,774 | 500 |
| ಆಲಮಟ್ಟಿ ಜಲಾಶಯ (ವಿಜಯಪುರ) | 519.60 ಮೀಟರ್ | 507.79 ಮೀಟರ್ | — | 1,239 | 822 |
| ಹಿಡಕಲ್ ಜಲಾಶಯ (ಬೆಳಗಾವಿ) | 2175 ಅಡಿ (51 TMC) | 2094 ಅಡಿ | 5.803 TMC | 5,377 | 102 |
| ಮಲಪ್ರಭಾ ಡ್ಯಾಂ (ಬೆಳಗಾವಿ) | 2079 ಅಡಿ (37.73 TMC) | 2047 ಅಡಿ | 5.325 TMC | 622 | 194 |
| ಬಸವಸಾಗರ ಡ್ಯಾಂ (ಯಾದಗಿರಿ) | 492.25 ಮೀಟರ್ | 488.84 ಮೀಟರ್ | — | 00 | 764 |
| ಗಾಜನೂರು ಡ್ಯಾಂ (ಶಿವಮೊಗ್ಗ) | full | 18,000 | 18,000 | ||
| ತುಂಬೆ ವೆಂಟೆಡ್ ಡ್ಯಾಂ (ದಕ್ಷಿಣ ಕನ್ನಡ) | 6 ಮೀಟರ್ | 4.78 ಮೀಟರ್ | |||
| ಹಾರಂಗಿ ಜಲಾಶಯ (ಕೊಡಗು) | 2859 ಅಡಿ | 2835.92 ಅಡಿ | —- | 1,344 | 180 |
ಶಿವಮೊಗ್ಗದ ಗಾಜನೂರು ಡ್ಯಾಂ ಈಗಾಗಲೇ ಸಂಪೂರ್ಣ ಭರ್ತಿಯಾಗಿದ್ದು, 14 ಗೇಟ್ಗಳ ಮೂಲಕ 18 ಸಾವಿರ ಕ್ಯೂಸೆಕ್ ನೀರನ್ನು ತುಂಗಾ ನದಿಗೆ ಹರಿಸಲಾಗುತ್ತಿದೆ. ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕಳೆದ 6 ದಿನಗಳಲ್ಲಿ ಡ್ಯಾಂ ಮಟ್ಟ 5.5 ಅಡಿಯಷ್ಟು ಏರಿಕೆಯಾಗಿದ್ದು, ವಿದ್ಯುತ್ ಉತ್ಪಾದನೆಗೆ ಕೊಂಚ ನಿರಾಳ ತಂದಿದೆ. ಹಾಗೆಯೇ ಕಬಿನಿ ಮತ್ತು ತುಂಗಭದ್ರಾ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಸಂಗ್ರಹ ಕೊಂಚ ಕಡಿಮೆಯಿದೆ.
ಒಟ್ಟಾರೆಯಾಗಿ, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ಇರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ವೇಗವಾಗಿ ಏರಿಕೆಯಾಗಲಿದ್ದು, ಜಲಕ್ಷಾಮದ ಆತಂಕ ದೂರಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:10 am, Mon, 6 July 26