AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇ. 40 ಕಮಿಷನ್ ಕೊಡಬೇಕಾಗಿತ್ತು, ಯಡಿಯೂರಪ್ಪಗೆ ಪತ್ರ ಬರೆದಿದ್ದೆವು ಸ್ಪಂದಿಸಿರಲಿಲ್ಲ- ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಪುನರುಚ್ಚಾರ

ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದೆವು. ಸರ್ಕಾರ ಬದಲಾಯ್ತು. ಆಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಬಂದ ಮೇಲೂ ಸ್ಪಂದಿಸಿಲ್ಲ. ರಾಜ್ಯಪಾಲರ ಬಳಿ ಕೂಡ ಹೋದೆವು. ಪಿಡಬ್ಲ್ಯೂಡಿ ಮಿನಿಸ್ಟರ್ ಬಳಿ ಕೂಡ ಹೋದೆವು.

ಶೇ. 40 ಕಮಿಷನ್ ಕೊಡಬೇಕಾಗಿತ್ತು, ಯಡಿಯೂರಪ್ಪಗೆ ಪತ್ರ ಬರೆದಿದ್ದೆವು ಸ್ಪಂದಿಸಿರಲಿಲ್ಲ- ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಪುನರುಚ್ಚಾರ
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ
TV9 Web
| Updated By: sandhya thejappa|

Updated on:Dec 13, 2021 | 1:17 PM

Share

ಬೆಂಗಳೂರು: ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿರುವ ಸರ್ಕಾರ ಆರೋಪದ ವಿಚಾರಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯ ಕಂಟ್ರಾಕ್ಟರ್ ಅಸೋಸಿಯೇಷನ್ ಇಂದು (ಡಿಸೆಂಬರ್ 13) ಪತ್ರಿಕಾಗೋಷ್ಠಿ ನಡೆಸಿದೆ. ಅಧ್ಯಕ್ಷ ಡಿ ಕೆಂಪಣ್ಣ ಹಾಗೂ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದ್ದು, ಯಾವುದೇ ಕಾಮಗಾರಿ ಮಾಡಬೇಕಾದರೆ 40 ಪರ್ಸೆಂಟ್ ಕಮಿಷನ್ ಕೊಡಬೇಕಾಗುತ್ತದೆ. ಅದಕ್ಕಾಗಿ ಹಿಂದೆ ಯಡಿಯೂರಪ್ಪಗೆ ನಾವು ಪತ್ರ ಬರೆದಿದ್ದೆವು. ಯಡಿಯೂರಪ್ಪ ಸರಿಯಾಗಿ ಸ್ಪಂದಿಸಲಿಲ್ಲ. ಹೀಗಾಗಿ ಬಿಎಲ್ ಸಂತೋಷ್ ಅವರಿಗೂ ರೆಫರ್ ಮಾಡಿದ್ದೆವು ಅಂತ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದೆವು. ಸರ್ಕಾರ ಬದಲಾಯ್ತು. ಆಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಬಂದ ಮೇಲೂ ಸ್ಪಂದಿಸಿಲ್ಲ. ರಾಜ್ಯಪಾಲರ ಬಳಿ ಕೂಡ ಹೋದೆವು. ಪಿಡಬ್ಲ್ಯೂಡಿ ಮಿನಿಸ್ಟರ್ ಬಳಿ ಕೂಡ ಹೋದೆವು. ಅದರಲ್ಲಿ ಭ್ರಷ್ಟಾಚಾರ ಬಗ್ಗೆ ಹೇಳಬಾರದಿತ್ತು ಅಂತ ಹೇಳಿದ್ರು. ಭ್ರಷ್ಟಾಚಾರ ಸಾಬೀತು ಮಾಡಿದಿರಾ ಅಂದ್ರೆ ಅದು ಆಗೋದಿಲ್ಲ. ನಮ್ಮ ಬಳಿ ಸಾಕ್ಷಿ ಇದೆ ಅಂತ ಡಿ ಕೆಂಪಣ್ಣ ಹೇಳಿಕೆ ನೀಡಿದ್ದಾರೆ.

ಲೋಕಲ್ ಕಾಂಟ್ರಾಕ್ಟರ್​ಗೆ ಯಾವುದೇ ಕೆಲಸ ಸಿಗುತ್ತಿಲ್ಲ. ಪ್ಯಾಕೇಜ್ ಸಿಸ್ಟಮ್ ತಂದಿರುವುದರಿಂದ ಲೋಕಲ್ ಕಾಂಟ್ರಾಕ್ಟರ್​ಗೆ ಅವಕಾಶ ಸಿಗುತ್ತಿಲ್ಲ. ಸಿಎಂ ನಮಗೆ ಮಾತನಾಡುವುದಕ್ಕೆ ಅವಕಾಶ ಕೊಡುತ್ತಿಲ್ಲ. ಜನವರಿಯಲ್ಲಿ ನಾವು ಬೃಹತ್ ಹೋರಾಟ ಮಾಡಲು ತೀರ್ಮಾನ ಮಾಡಿದ್ದೇವೆ. ಸರ್ಕಾರ ನಮ್ಮನ್ನು ಕರೆದು ಮಾತುಕತೆ ನಡೆಸಬೇಕು. ಯಾರು ಎಲ್ಲಿ, ಹೇಗೆ ಕಮಿಷನ್ ಕಲೆಕ್ಟ್ ಮಾಡುತ್ತಿದ್ದರು ಅಂತ ನಾವು ಹೇಳೋದಕ್ಕೆ ಸಿದ್ಧ ಅಂತ ಡಿ ಕೆಂಪಣ್ಣ ತಿಳಿಸಿದರು.

ಬೆಂಗಳೂರು ನಗರದಲ್ಲಿ 20 ಸಾವಿರ ಕೋಟಿ ಕಾಮಗಾರಿ ಆಗಿದೆ. ಎದರಲ್ಲಿ ಎಷ್ಟು ಕ್ವಾಲಿಟಿ ಇದೆ ಎಂದು ಹೇಳಿ. ಇದರಲ್ಲಿ ಅಧಿಕಾರಿಗಳು ಕೂಡ ಪಾಲುದಾರರಾಗಿದ್ದಾರೆ. ನಮ್ಮಿಂದ ಮಾತ್ರ ವ್ಯವಸ್ಥೆ ಹಾಳಾಗಿಲ್ಲ, ಅಧಿಕಾರಿಗಳು ಇದ್ದಾರೆ. ದಾಖಲೆ ಇಲ್ಲದೆ ಮಾತನಾಡುತ್ತಿಲ್ಲ, ಸಾಬೀತು ಮಾಡುತ್ತೇವೆ. ಸಿಎಂ ತಮ್ಮನ್ನು ಚರ್ಚೆಗೆ ಕರೆಯುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಭ್ರಷ್ಟಾಚಾರಕ್ಕೆ ಕಡಿವಾಮ ಹಾಕುವಂತೆ ಮನವಿ ಮಾಡ್ತೇವೆ ಅಂತ  ಬೆಂಗಳೂರಿನಲ್ಲಿ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ.

ಇದನ್ನೂ ಓದಿ

ಹೆಸರಿಗಷ್ಟೇ ಸೀಮಿತವಾದ ಸಿಸಿಟಿವಿ ಕ್ಯಾಮರಾ; ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ

ಡಿ.17ಕ್ಕೆ ಕನ್ನಡದ ‘ಆನ’ ವರ್ಸಸ್​ ತೆಲುಗಿನ ‘ಪುಷ್ಪ’; ಅದಿತಿ ಚಿತ್ರಕ್ಕೆ ಬೇಕಿದೆ ಕನ್ನಡಿಗರ ಬೆಂಬಲ

Published On - 1:15 pm, Mon, 13 December 21