AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ; ಎಲ್ಲೂ ಆ್ಯಸಿಡ್ ಸಿಗದಂತೆ ಸರ್ಕಾರಕ್ಕೆ ಮನವಿ ಮಾಡಿದ ಸಂತ್ರಸ್ಥ ಯುವತಿ

ನಾನು ಬಹುತೇಕ ಗುಣಮುಖವಾಗಿದ್ದು, ತುಂಬಾ ನೋವು ಪಟ್ಟಿದ್ದೇನೆ ಎಂದು ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ಥ ಯುವತಿ ತಮ್ಮ ನೋವು ತೋಡಿಕೊಂಡಿದ್ದಾರೆ.

ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ; ಎಲ್ಲೂ ಆ್ಯಸಿಡ್ ಸಿಗದಂತೆ ಸರ್ಕಾರಕ್ಕೆ ಮನವಿ ಮಾಡಿದ ಸಂತ್ರಸ್ಥ ಯುವತಿ
ಸಂತ್ರಸ್ಥ ಯುವತಿ
Follow us
TV9 Web
| Updated By: ವಿವೇಕ ಬಿರಾದಾರ

Updated on: Aug 12, 2022 | 2:53 PM

ಬೆಂಗಳೂರು: ನಾನು ಬಹುತೇಕ ಗುಣಮುಖವಾಗಿದ್ದು, ತುಂಬಾ ನೋವು ಪಟ್ಟಿದ್ದೇನೆ ಎಂದು ಬೆಂಗಳೂರಿನ (Bengaluru) ಸುಂಕದಕಟ್ಟೆಯಲ್ಲಿ ಆ್ಯಸಿಡ್ (Acid) ದಾಳಿಗೊಳಗಾದ ಸಂತ್ರಸ್ಥ ಯುವತಿ ತಮ್ಮ ನೋವು ತೋಡಿಕೊಂಡಿದ್ದಾರೆ. ಸರ್ಕಾರಕ್ಕೆ ಒಂದು ಮನವಿ ಮಾಡುತ್ತೇನೆ. ಎಲ್ಲೂ ಆ್ಯಸಿಡ್ ಸಿಗಬಾರದು. ಯಾರಿಗೂ ಈ ಸ್ಥಿತಿ ಬೇಡ. ನನಗಾದ ನೋವು ಯಾವ ಹೆಣ್ಣಿಗೂ ಬೇಡ ಎಂದು ಹೇಳಿದ್ದಾರೆ.

ನಾನು ಕಾನೂನು ಮೂಲಕ ಆರೋಪಿಗೆ ಕಠಿಣ ಶಿಕ್ಷೆ ಕೊಡುವಂತೆ ಮಾಡುತ್ತೇನೆ. ಆ್ಯಸಿಡ್ ದಾಳಿ ನಡೆದ ದಿನ ನಾನು ಆಫೀಸ್ ಗೆ ಹೋಗಿದ್ದೆ. ಅಪ್ಪ ನನ್ನನ್ನು ಡ್ರಾಪ್ ಮಾಡಿದರು. ಅಮೇಲೆ ನಾನು ಮೇಲೆ ಹೋಗಿದ್ದೆ. ಯಾರೊ ಹಿಂದಿನಿಂದ ಕರೆದಂತೆ ಆಯ್ತು. ಆವಾಗ ನೋಡಿದರೆ ಈ ನಾಗೇಶ್​ ಕೈನಲ್ಲಿ ಗ್ಲೌಸ್​ನಲ್ಲಿ ಆ್ಯಸಿಡ್ ಹಿಡಿದು ನಿಂತಿದ್ದನು. ನಂತರ ನಾನು ಮುಂದೆ ಬಂದೆ ತನ್ನ ಜುಟ್ಟು ಹಿಡಿದು ಎಳೆದು ಆ್ಯಸಿಡ್ ಹಾಕಿದ. ನಂತರ ಕಿರುಚಾಡಿದೆ ಎಂದು ದಾಳಿಯ ದಿನದ ಘಟನೆಯನ್ನು ವಿವರಿಸಿದರು.

ನಡೆದಿದ್ದೇನು? 

ಎಪ್ರಿಲ್​ 28ರಂದು ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಬೆಂಗಳೂರಿನ  ಸುಂಕದಕಟ್ಟೆ ಮುತ್ತೂಟ್ ಫಿನ್​​ಕಾರ್ಪ್​ ಬಳಿ ಆರೋಪಿ ನಾಗೇಶ್ ಆ್ಯಸಿಡ್ ಹಾಕಿ ವಿಕೃತಿ ಮೆರೆದಿದ್ದನು. ನಾಗೇಶ್ ಎಂಬಾತ ಪ್ರೀತಿಸುವಂತೆ ಯುವತಿಯ ಹಿಂದೆ ಬಿದ್ದಿದ್ದನು.

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದನು. ಗಾಯಾಳು ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಹೆಗ್ಗನಹಳ್ಳಿ ನಿಯಾಸಿಯಾಗಿದ್ದು. ನಾಗೇಶ್ ಹೆಗ್ಗನಹಳ್ಳಿಯಲ್ಲಿಯೇ ಬಾಡಿಗೆಗೆ ಇದ್ದನು. ಯುವತಿ ಎಂ ಕಾಂ ವಿದ್ಯಾಭ್ಯಾಸ ಮಾಡಿದ್ದಾಳೆ. ಇತ್ತೀಚೆಗೆ ಮುತೂಟ್ ಫಿನ್​ಕಾರ್ಪ್​ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. 8 ರಿಂದ 9 ತಿಂಗಳಿಂದ ಹಿಂದಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದಳು. ನಾಗೇಶ್ ಪ್ರೀತಿ ಮಾಡುವಂತೆ ಯುವತಿ ಹಿಂದೆ ಬಿದ್ದಿದ್ದನು.

ಆದರೆ ಯುವತಿ ನೀನು ನನಗೆ ಅಣ್ಣನ‌ ರೀತಿ ಎಂದಿದ್ದಳಂತೆ. ಆದರೂ ಮಾತು ಕೇಳದೇ ಪೀಡಿಸುತ್ತಿದ್ದನಂತೆ. ಎಪ್ರಿಲ್​ 28ರ ಬೆಳಗ್ಗೆ ಕೆಲಸಕ್ಕೆ ಬಂದ ಯುವತಿಯನ್ನು ನಾಗೇಶ್ ಫಾಲೊ ಮಾಡಿಕೊಂಡು ಬಂದಿದ್ದನು. ಮತ್ತೆ ಪ್ರೀತಿ ಮಾಡುವಂತೆ ಪೀಡಿಸಿದ್ದನು.  ಒಪ್ಪದಿದ್ದಾಗ ಆ್ಯಸಿಡ್ ಎರಚಿದ್ದಾನೆ.

ಆರೋಪಿ ನಾಗೇಶ್​​ನ ಬಂಧನ

ಆಸಿಡ್ ಎರಚಿ  ಪರಾರಿಯಾಗಿದ್ದ ಆರೋಪಿ ನಾಗೇಶ್​ನನ್ನು ಪೊಲೀಸರು ಮೇ 13 ರಂದು 16 ದಿನಗಳ ಬಳಿಕ ಬಂಧಿಸಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಆರೋಪಿ ನಾಗೇಶ್​ನನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ತಿರುವಣ್ಣಾಮಲೈನ ರಮಣಾ ಆಶ್ರಮದಲ್ಲಿ ಕಾವಿ ಬಟ್ಟೆ ಧರಿಸಿ ತಲೆಮರೆಸಿಕೊಂಡಿದ್ದನು. ನಾನು ಸ್ವಾಮೀಜಿ ಎಂದು ಆಶ್ರಮದಲ್ಲಿ ಹೇಳಿಕೊಂಡಿದ್ದನು. ಆಶ್ರಮದಲ್ಲಿ ಸಾವಿರಾರು ಜನರು ಇದ್ದಿದ್ದಕ್ಕೆ ನಾನು ಬಂದಿದ್ದೇನೆ. ಆಶ್ರಮಕ್ಕೆ ಬಂದು ತಲೆಮರೆಸಿಕೊಂಡಿದ್ದಾಗಿ ಪೊಲೀಸರ ವಿಚಾರಣೆಯ ವೇಳೆ ನಾಗೇಶ್‌ ಮಾಹಿತಿ ನೀಡಿದ್ದಾನೆ.

ಭಕ್ತರ ಸೋಗಿನಲ್ಲಿ ಹೋಗಿ ಸ್ವಾಮೀಜಿ ವೇಷದಲ್ಲಿದ್ದ ಆರೋಪಿ ಬಂಧನ ಕಾವಿ ಬಟ್ಟೆ ಧರಿಸಿ ಆಶ್ರಮದಲ್ಲಿ ತಲೆಮರೆಸಿಕೊಂಡಿದ್ದ ನಾಗೇಶ್​ನನ್ನು ಹಿಡಿಯಲು ಭಕ್ತರ ವೇಷದಲ್ಲಿ ಮಫ್ತಿಯಲ್ಲಿ ಪೊಲೀಸರು ಆಶ್ರಮಕ್ಕೆ ತೆರಳಿದ್ದರು. ಭಕ್ತರ ವೇಷದಲ್ಲಿ ತೆರಳಿ ಸ್ವಾಮೀಜಿ ವೇಷದಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ದೋಷಾರೋಪ ಪಟ್ಟಿ ಸಲ್ಲಿಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಕೆ ನಡೆಸಿ ಆಗಸ್ಟ 9 ರಂದು ಮೂರು ತಿಂಗಳ ನಂತರ 13ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಾಥಮಿಕ ಚಾರ್ಜ್​ಶೀಟ್​ ಒಟ್ಟು 770 ಪುಟಗಳಿವೆ. ದೋಷಾರೋಪ ಪಟ್ಟಿಯಲ್ಲಿ ಒಟ್ಟು 92 ಸಾಕ್ಷಿಗಳನ್ನು ಪೊಲೀಸರು ಹೆಸರಿಸಿದ್ದಾರೆ. ಇದರೊಂದಿಗೆ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೂ ಐಪಿಸಿ 164ರ ಅಡಿಯಲ್ಲಿ ದಾಖಲಿಸಲಾಗಿದೆ.

ಘಟನೆಯ ಪ್ರತ್ಯಕ್ಷದರ್ಶಿಗಳು ಐಪಿಸಿ 164ರ ಅಡಿಯಲ್ಲಿ ವಿಚಾರಣಾ ನ್ಯಾಯಾಧೀಶರ ಹೊರತಾದ ಪ್ರತ್ಯೇಕ, ಸ್ವತಂತ್ರ ನ್ಯಾಯಾಧೀಶರ ಎದುರು ಸ್ವಯಂ ಪ್ರೇರಣೆಯಿಂದ ಸಾಕ್ಷಿಗಳು ತಮ್ಮ ಹೇಳಿಕೆ ದಾಖಲಿಸುತ್ತಾರೆ. ಈ ಕಲಂ ಅಡಿಯಲ್ಲಿ ಸಾಕ್ಷಿ ನುಡಿಯುವ ಪ್ರಕ್ರಿಯೆ ಗೌಪ್ಯವಾಗಿರುತ್ತದೆ. ಮಾತ್ರವಲ್ಲ ವಿಡಿಯೊ ಚಿತ್ರೀಕರಣದ ಮೂಲಕವೂ ದಾಖಲಾಗುತ್ತದೆ. ಕಾನೂನು ಪ್ರಕ್ರಿಯೆಯಲ್ಲಿ ಐಪಿಸಿ 164 ಅಡಿಯಲ್ಲಿ ದಾಖಲಿಸುವ ಸಾಕ್ಷಿಗೆ ತನ್ನದೇ ಆದ ಮಹತ್ವವಿದೆ.

ರಾಜ್ಯದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ನಿರಂತರ ಮಳೆಗೆ ದೇವಿಮನೆ ಘಟ್ಟ ಭಾಗದ ಗುಡ್ಡ ಕುಸಿತ: ಹೆದ್ದಾರಿ ತುಂಬಾ ಮಣ್ಣು
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಯಾಕೆ ಅಂತ ಗೊತ್ತಿದೆ: ವಿಜಯೇಂದ್ರ
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ಇಡೀ ಪಂದ್ಯದ ಚಿತ್ರಣ ಬದಲಿಸಿದ ಫಾಫ್ ಡುಪ್ಲೆಸಿಸ್ ಸ್ಟನ್ನಿಂಗ್ ಕ್ಯಾಚ್
ದುರಂತಕ್ಕೀಡಾದ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನ ತುಂಬಲಾಗಿತ್ತು
ದುರಂತಕ್ಕೀಡಾದ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನ ತುಂಬಲಾಗಿತ್ತು
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್
ದ್ಯಾಮೇಶ್ ಧ್ವನಿಗೆ ಮೆಚ್ಚುಗೆ ಸೂಚಿಸಿದ ನಟಿ ರಚಿತಾ ರಾಮ್
ದ್ಯಾಮೇಶ್ ಧ್ವನಿಗೆ ಮೆಚ್ಚುಗೆ ಸೂಚಿಸಿದ ನಟಿ ರಚಿತಾ ರಾಮ್
ಬೆಣ್ಣೆಹಳ್ಳದಲ್ಲಿ ಪ್ರತಿವರ್ಷ ಪ್ರವಾಹದಂಥ ಸ್ಥಿತಿಯಿಂದ ಮೂರು ಬೆಳೆ ನಷ್ಟ
ಬೆಣ್ಣೆಹಳ್ಳದಲ್ಲಿ ಪ್ರತಿವರ್ಷ ಪ್ರವಾಹದಂಥ ಸ್ಥಿತಿಯಿಂದ ಮೂರು ಬೆಳೆ ನಷ್ಟ
ವಿಮಾನ ಬಿದ್ದ ರಭಸಕ್ಕೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ
ವಿಮಾನ ಬಿದ್ದ ರಭಸಕ್ಕೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ