Swiggy: ಸ್ವಿಗ್ಗಿಯಲ್ಲಿ ಕಾಫಿ ಆರ್ಡರ್ ಮಾಡಿದ ಬೆಂಗಳೂರು ಯುವಕ; ಡೆಲಿವರಿ ಬಾಯ್ ಏನು ಮಾಡಿದ ಗೊತ್ತಾ?

Bengaluru News: ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಕೆಫೆ ಕಾಫಿ ಡೇ (ಸಿಸಿಡಿ) ಔಟ್‌ಲೆಟ್‌ನಲ್ಲಿ ಕಾಫಿ ಕುಡಿಯಬೇಕೆನಿಸಿದ್ದರಿಂದ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದರು. ಆ ಆರ್ಡರ್ ಅನ್ನು ಅಕ್ಸೆಪ್ಟ್​ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್ ಮಾಡಿದ ಪ್ಲಾನ್ ಏನು ಗೊತ್ತಾ?

Swiggy: ಸ್ವಿಗ್ಗಿಯಲ್ಲಿ ಕಾಫಿ ಆರ್ಡರ್ ಮಾಡಿದ ಬೆಂಗಳೂರು ಯುವಕ; ಡೆಲಿವರಿ ಬಾಯ್ ಏನು ಮಾಡಿದ ಗೊತ್ತಾ?
ಸ್ವಿಗ್ಗಿ ಏಜೆಂಟ್
Follow us
| Updated By: ಸುಷ್ಮಾ ಚಕ್ರೆ

Updated on:May 05, 2022 | 7:24 PM

ಬೆಂಗಳೂರು ಭಾರತದ ಟೆಕ್ ಹಬ್ (Tech Hub) ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಬೆಂಗಳೂರು ವಿಚಿತ್ರ ಘಟನೆಗಳು ಮತ್ತು ಸನ್ನಿವೇಶಗಳ ಚಿನ್ನದ ಗಣಿ ಎಂದು ನಿಮಗೆ ತಿಳಿದಿದೆಯೇ? ಬೆಂಗಳೂರು ತಮಾಷೆಯ ಸಂಗತಿಗಳ ಕಾರಣದಿಂದ ಆಗಾಗ ಟ್ವಿಟ್ಟರ್​ನಲ್ಲಿ ಸದ್ದಾಗುತ್ತಲೇ ಇರುತ್ತದೆ. ಕೆಲವು ದಿನಗಳ ಹಿಂದೆ ರೂಮ್‌ಮೇಟ್‌ಗಳಿಬ್ಬರ ನಡುವೆ ನಡೆದಿದೆ ಎನ್ನಲಾದ ವಾಟ್ಸ್​ಆ್ಯಪ್ ಚಾಟ್ (WhatsApp Chat) ಟ್ವಿಟರ್‌ನಲ್ಲಿ ವೈರಲ್ ಆಗಿತ್ತು. ಇದೀಗ, ಸ್ವಿಗ್ಗಿ ಫುಡ್ ಡೆಲಿವರಿ ಏಜೆಂಟ್‌ಗೆ ಸಂಬಂಧಿಸಿದ ಅಚ್ಚರಿಯ ಘಟನೆಯೊಂದು ವೈರಲ್ ಆಗಿದೆ.

ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಕೆಫೆ ಕಾಫಿ ಡೇ (ಸಿಸಿಡಿ) ಔಟ್‌ಲೆಟ್‌ನಲ್ಲಿ ಕಾಫಿ ಕುಡಿಯಬೇಕೆನಿಸಿದ್ದರಿಂದ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದರು. ಆ ಆರ್ಡರ್ ಅನ್ನು ಅಕ್ಸೆಪ್ಟ್​ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್ ಎಷ್ಟು ಹೊತ್ತಾದರೂ ಡೆಲಿವರಿ ನೀಡಲು ಬರಲಿಲ್ಲ. ಕೊನೆಗೆ ಅವರು ಫೋನ್ ಮಾಡಿ ಹೇಳಿದ ಮಾತು ಕೇಳಿ ಸ್ವಿಗ್ಗಿಯಲ್ಲಿ ಕಾಫಿ ಆರ್ಡರ್ ಮಾಡಿದ ಗ್ರಾಹಕನಿಗೆ ನಗಬೇಕೋ/ ಅಳಬೇಕೋ ತಿಳಿಯಲಿಲ್ಲವಂತೆ. (Source)

ಓಂಕಾರ್ ಜೋಶಿ ಎಂಬುವವರು ಟ್ವಿಟರ್‌ನಲ್ಲಿ ಈ ಪೋಸ್ಟ್​ ಹಂಚಿಕೊಂಡಿದ್ದಾರೆ. ಸ್ವಿಗ್ಗಿ ಡೆಲಿವರಿ ಏಜೆಂಟ್ ತಾನು ಕಾಫಿಯನ್ನು ಡೆಲಿವರಿ ನೀಡುವ ಬದಲು ಡಂಜೋ (Dunzo) ಎಂಬ ಮತ್ತೊಂದು ಡೆಲಿವರಿ ಅಪ್ಲಿಕೇಶನ್‌ನಿಂದ ಇನ್ನೊಬ್ಬ ವ್ಯಕ್ತಿಯನ್ನು ಬುಕ್ ಮಾಡಿ, ಅವರ ಮೂಲಕ ತನ್ನ ಗ್ರಾಹಕನಿಗೆ ಕಾಫಿಯನ್ನು ಕಳುಹಿಸಿಕೊಟ್ಟಿದ್ದಾರೆ. ತನ್ನ ಗ್ರಾಹಕನಿಗೆ ಡಂಜೋದಲ್ಲಿ ಕಾಫಿ ಕಳುಹಿಸಿರುವುದಾಗಿ ಹೇಳಿದ ಸ್ವಿಗ್ಗಿ ಡೆಲಿವರಿ ಬಾಯ್ ತನಗೆ 5 ಸ್ಟಾರ್ ಕೊಡುವಂತೆ ಮನವಿ ಮಾಡಿದ್ದಾನೆ!

ಈ ಟ್ವೀಟ್​ 2,500 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಈ ಪೋಸ್ಟ್​ ನೋಡಿ ನೆಟಿಜನ್‌ಗಳು ತಮಾಷೆಯಾಗಿ ಈ ಪೋಸ್ಟ್​ಗೆ ಕಮೆಂಟ್ ಹಾಕುತ್ತಿದ್ದಾರೆ. ಆ ಸ್ವಿಗ್ಗಿ ಡೆಲಿವರಿ ಬಾಯ್ ಇನ್ನೆಂತಹ ಸೋಮಾರಿ ಇರಬಹುದು ಎಂದು ಕೆಲವರು ಕಮೆಂಟ್ ಮಾಡಿದ್ದರೆ ಇನ್ನು ಕೆಲವರು ಟ್ರಾಫಿಕ್ ಉಸಾಬರಿಯೇ ಬೇಡವೆಂದು ಆತ ಜಾಣತನ ಪ್ರದರ್ಶಿಸಿದ್ದಾನೆ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:22 pm, Thu, 5 May 22

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ