AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮರಾಜನಗರ: ಯಾರದೋ ಶ್ಯೂರಿಟಿ, ಇನ್ಯಾರಿಗೋ ಲೋನ್​​; ಕೆನರಾ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬಯಲು

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಕೆನರಾ ಬ್ಯಾಂಕ್​​ನ ಬ್ರಾಂಚ್​​​​ನಲ್ಲಿ ದೊಡ್ಡ ಮೋಸ ಬಯಲಾಗಿದೆ. ಮುಖ್ಯ ಖಾತೆದಾರರ ಗಮನಕ್ಕೆ ಬಾರದಂತೆ ಶ್ಯೂರಿಟಿಯನ್ನಾಗಿಸಿ ಲಕ್ಷಾಂತರ ರೂ ಸಾಲವನ್ನು ಸಿಬ್ಬಂದಿ ತಮಗೆ ಬೇಕಾದವರಿಗೆ ನೀಡುವ ಮೂಲಕ ಮಹಾ ಮೋಸವೆಸಗಿದ್ದಾರೆ. ಹೋಮ್ ಬರ್ಡ್ಸ್ ಮ್ಯಾನ್​ಗೆ ದೂರು ನೀಡಲಾಗಿದೆ.

ಚಾಮರಾಜನಗರ: ಯಾರದೋ ಶ್ಯೂರಿಟಿ, ಇನ್ಯಾರಿಗೋ ಲೋನ್​​; ಕೆನರಾ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬಯಲು
ಪಾಳ್ಯ ಕೆನರಾ ಬ್ಯಾಂಕ್​ನ ಬ್ರಾಂಚ್
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on:Oct 12, 2025 | 8:15 PM

Share

ಚಾಮರಾಜನಗರ, ಅಕ್ಟೋಬರ್​ 12: ಗಡಿನಾಡು ಚಾಮರಾಜನಗರದಲ್ಲೊಂದು (Chamarajanagar) ಬೃಹತ್ ವಂಚನೆ (Fraud) ಜಾಲ ಬೆಳಕಿಗೆ ಬಂದಿದೆ. ಬೇಲಿನೆ ಎದ್ದು ಹೊಲವನ್ನ ಮೇಯ್ದಂತೆ ಬ್ಯಾಂಕ್​ನ ಸಿಬ್ಬಂದಿಯೇ ಗ್ರಾಹಕರಿಗೆ ವಂಚಿಸಿರುವಂತಹ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಕೆನರಾ ಬ್ಯಾಂಕ್​ನ ಬ್ರಾಂಚ್​​ನಲ್ಲಿ ನಡೆದಿದೆ. ಯಾರಿಗೋ ಸಾಲ ನೀಡುವ ಸಲುವಾಗಿ ಮತ್ಯಾರನ್ನೋ ಬಲಿ ಪಶು ಮಾಡಿದ್ದಾರೆ.

ಕೆನರಾ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬಯಲು 

ಬ್ಯಾಂಕ್ ಹೆಸರು ಕೇಳಿದರೆ ಭಾರತದಲ್ಲಿ ಅಪಾರ ಗೌರವವಿದೆ. ಬ್ಯಾಂಕ್ ಅಂದರೆ ಕೇವಲ ಹೆಸರಲ್ಲ ಅದೊಂದು ನಂಬಿಕೆ. ಕಷ್ಟ ಕಾರ್ಪಣ್ಯಕ್ಕೆ ಸಾಲ ಪಡೆಯುವುದಕ್ಕೆ, ತಾವು ಕೂಡಿಟ್ಟ ಹಣ, ಚಿನ್ನಾಭರಣ ಜೋಪಾನವಾಗಿ ಇಡುವುದಕ್ಕೆ ಇರುವ ಏಕೈಕ ಸ್ಥಳ ಅಂದರೆ ಅದು ಬ್ಯಾಂಕ್. ಆದರೆ ಗಡಿನಾಡು ಚಾಮರಾಜನಗರದಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿಯೇ ಕಳ್ಳಾಟ ಆಡಿರುವುದು ಇದೀಗ ಬಟಾಬಯಲಾಗಿದೆ.

ಇದನ್ನೂ ಓದಿ: ಸಾಲ ಕೊಡುವ ಮುನ್ನ ಹುಷಾರ್​​! ಕಿಡ್ನ್ಯಾಪ್​​ ಮಾಡಿ ವ್ಯಕ್ತಿಗೆ ಚಿತ್ರಹಿಂಸೆ ಕೊಟ್ಟ ದುಷ್ಕರ್ಮಿಗಳು

ಅದ್ಯಾರಿಗೋ ಸಾಲ ಕೊಡುವುದಕ್ಕೆ ಸಂಬಂಧವೇ ಇಲ್ಲದವರನ್ನ ಬಲಿಪಶು ಮಾಡಿದ್ದಾರೆ. ಎನ್ ಚೈತ್ರಾ ಎಂಬವವರು 2014 ರಲ್ಲಿ ಕೊಳ್ಳೇಗಾಲ ತಾಲೂಕಿನ ಪಾಳ್ಯದಲ್ಲಿ ಕೆನರಾ ಬ್ಯಾಂಕ್​​ನಲ್ಲಿ ಖಾತೆ ತೆರೆದಿದ್ದರು. ಬಳಿಕ 2016ರಲ್ಲಿ 25 ಸಾವಿರ ರೂ. ಹಣವನ್ನ ಸಾಲವನ್ನಾಗಿ ಪಡೆದಿದ್ದರು. ಬಳಿಕ ಆ ಹಣವನ್ನ ಸಹ ಬಡ್ಡಿ ಸಮೇತ ಕಟ್ಟಿ ತೀರಿಸಿದ್ದರು.

ಇದಾದ ಬಳಿಕ ಚೈತ್ರಾ ತನ್ನ ಪತಿ ಜೊತೆ ಕೊಳ್ಳೇಗಾಲಕ್ಕೆ ಶಿಫ್ಟ್ ಆಗಿದ್ದರು. ಇದಾದ ಬಳಿಕ 2017 ರಲ್ಲಿ ಪಾಳ್ಯ ಬ್ರಾಂಚ್​​ನಲ್ಲಿರುವ ತನ್ನ ಖಾತೆಯನ್ನ ಕೊಳ್ಳೇಗಾಲ ಬ್ರಾಂಚ್​ಗೆ ಶಿಫ್ಟ್ ಮಾಡಿಸಿದ್ದರು. ಆದರೆ ಕಹಾನಿ ಮೇ ಟ್ವಿಸ್ಟ್ ಎನ್ನುವ ಹಾಗೆ ಪಾಳ್ಯ ಕೆನರಾ ಬ್ಯಾಂಕ್ ಸಿಬ್ಬಂದಿ ವರ್ಗಾಯಿಸದೆ ಕಳ್ಳಾಟ ಆಡಿದ್ದಾರೆ.

ಬೇರೆಯವರ ಹೆಸಲ್ಲಿ ಲಕ್ಷಾಂತರ ರೂ ಸಾಲ ಮಂಜೂರು 

2017ರಲ್ಲಿ ಬ್ಯಾಂಕ್ ಖಾತೆ ವರ್ಗಾವಣೆ ಮಾಡದೆ ಇದ್ದದ್ದು ಒಂದಾದರೆ, ಮತ್ತೊಂದು ಮಹಾ ಮೋಸ ಕೂಡ ಬೆಳಕಿಗೆ ಬಂದಿದೆ. ಚೈತ್ರಾ ಅವರು ತುರ್ತು ಹಣದ ಅವಶ್ಯತೆ ಕಾರಣ ಖಾಸಗಿ ಫೈನಾನ್ಸ್​ನಲ್ಲಿ 50 ಸಾವಿರ ರೂ. ಹಣ ಸಾಲಕ್ಕಾಗಿ ಅರ್ಜಿ ಹಾಕಿದ್ದರು. ಬ್ಯಾಂಕ್​​ನ ಸಿಬ್ಬಂದಿ ಚೈತ್ರಾ ಅವರ ಡಾಕ್ಯುಮೆಂಟ್ಸ್​​ ವೆರಿಫಿಕೇಶನ್ ಮಾಡುವಾಗ ಚೈತ್ರಾ 1 ಲಕ್ಷ 20 ಸಾವಿರ ರೂ. ಸಾಲದ ಹಣಕ್ಕೆ ಶ್ಯೂರಿಟಿ ಹಾಕಿರುವುದು ಗೊತ್ತಾಗಿದೆ. ಆದರೆ ಅಸಲಿಗೆ ಚೈತ್ರಾ ಯಾವ ಶ್ಯೂರಿಟಿನೂ ಹಾಕಿಲ್ಲ. ಬ್ಯಾಂಕ್​​ನ ಸಿಬ್ಬಂದಿ ಚೈತ್ರಾ ಅವರ ಬ್ಯಾಂಕ್ ಖಾತೆ ಇನ್ ಆಕ್ಟೀವ್ ಆಗಿದ್ದನ್ನ ಗಮನಿಸಿ ಇವರ ದಾಖಲಾತಿಯನ್ನ ಬಳಸಿಕೊಂಡು ಲಕ್ಷ್ಮೀ ಮಹಿಳಾ ಸಹಕಾರ ಸಂಘಕ್ಕೆ 1 ಲಕ್ಷದ 20 ಸಾವಿರ ರೂ. ಸಾಲ ನೀಡಿದ್ದಾರೆ.

ಈ ವಿಚಾರವಾಗಿ ಚೈತ್ರಾ, ತನ್ನ ಪತ್ನಿಯೊಂದು ಪಾಳ್ಯ ಗ್ರಾಮದ ಕೆನರಾ ಬ್ಯಾಂಕ್​ಗೆ ಹೋಗಿ ಕೇಳಿದರೆ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದಾರೆ. ನಮಗೂ ಇದಕ್ಕೈ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸಿಬ್ಬಂದಿ ಪಲಾಯನವಾಗಿದ್ದಾನೆ.

ಎನ್. ಚೈತ್ರಾ ಹೇಳಿದ್ದಿಷ್ಟು 

ಈ ಕುರಿತು ಪ್ರತಿಕ್ರಿಯಿಸಿರುವ ಎನ್. ಚೈತ್ರಾ, ನಾನು ಯಾವುದೇ ಸಾಲಕ್ಕೂ ಶ್ಯೂರಿಟಿ ಹಾಕಿಲ್ಲ. ಅಕ್ರಮವಾಗಿ ಶ್ಯೂರಿಟಿ ಹಾಕಿ ಲೋನ್ ಮಂಜೂರು ಮಾಡಿದ್ದಾರೆ ಎಂದರು. ಸದ್ಯ ಇದರಿಂದ ರೋಸಿ ಹೋದ ಗೃಹಿಣಿ ಹೋಮ್ ಬರ್ಡ್ಸ್ ಮ್ಯಾನ್​ಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Cyber Fraud: ದೇಶದ ವಿವಿಧೆಡೆ ಕೋಟಿ ಕೋಟಿ ದೋಚುತ್ತಿದ್ದ ಸೈಬರ್ ವಂಚಕರ ಜಾಲ ಭೇದಿಸಿದ ದಾವಣಗೆರೆ ಪೊಲೀಸ್

ಸದ್ಯ ಬೆಳಕಿಗೆ ಬಂದಿದ್ದು ಇದೊಂದು ಪ್ರಕರಣ, ಆದರೆ ಬೆಳಕಿಗೆ ಬಾರದೆ ಇರುವುದು ಇನ್ನು ಎಷ್ಟಿದೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇಂತ ಕಳ್ಳಾಟವಾಡಿ ಬ್ಯಾಂಕ್​ಗೆ ಕೆಟ್ಟ ಹೆಸರು ತಂದ ಸಿಬ್ಬಂದಿಗೆ ತಕ್ಕ ಶಾಸ್ತಿ ಆಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:14 pm, Sun, 12 October 25

Follow Us
Suraj Prasad SN
Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ