AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar Death: ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಹಿರಿಯ ಛಾಯಗ್ರಾಹಕ

ಇತ್ತೀಚೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್​ನಲ್ಲಿ ಡಾ.ರಾಜ್ ಕುಮಾರ್ ರವರ ಛಾಯಚಿತ್ರ ಪ್ರದರ್ಶನದಲ್ಲಿ ಭವಾನಿ ಲಕ್ಷ್ಮಿನಾರಾಯಣ ತಮ್ಮ ಬಳಿ ಇದ್ದ ರಾಜ್ ಕುಮಾರ್ ಕುಟುಂಬದ ಪೋಟೊಗಳನ್ನು ಪ್ರದರ್ಶನ ಮಾಡಿದ್ದರು. ಆಗ ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ್ದ ನಟ ಪುನೀತ್ ರಾಜ್ ಕುಮಾರ್, ಪೋಟೋಗಳನ್ನು ನೋಡಿ ಪ್ರಶಂಸೆ ವ್ಯಕ್ತಡಿಸಿದ್ದರು.

Puneeth Rajkumar Death: ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಹಿರಿಯ ಛಾಯಗ್ರಾಹಕ
ಹಿರಿಯ ಛಾಯಗ್ರಾಹಕ ಭವಾನಿ ಲಕ್ಷ್ಮಿನಾರಾಯಣ
Follow us
TV9 Web
| Updated By: preethi shettigar

Updated on: Oct 30, 2021 | 11:01 AM

ಚಿಕ್ಕಬಳ್ಳಾಪುರ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಘಾತದಿಂದ ಮೃತಪಟ್ಟ ಸುದ್ದಿಯನ್ನು ಕೇಳಿ ರಾಜ್ಯದ ಜನ ಕಂಬನಿ ಮೀಡಿದಿದ್ದಾರೆ. ಆದರೆ ಚಿಕ್ಕಬಳ್ಳಾಪುರದಲ್ಲೊಬ್ಬರು ಹಿರಿಯ ಜೀವಿ ಪುನೀತ್ ಬಾಲಕರಾಗಿದ್ದಾಗ ಅವರ ತುಂಟಾಟ ಮುಗ್ದತೆ ನೆನಸಿಕೊಂಡು ಕಂಬಿನಿ ಮಿಡಿದಿದ್ದಾರೆ. ದಿವಂಗತ ಡಾ.ರಾಜ್ ಕುಮಾರ್ ಕುಟುಂಬಕ್ಕೆ ಚಿರಪರಿಚಿತರಾಗಿದ್ದ ಹಿರಿಯ ಛಾಯಗ್ರಾಹಕ ಭವಾನಿ ಲಕ್ಷ್ಮಿನಾರಾಯಣ, ರಾಜ್ ಕುಮಾರ್ ಕುಟುಂಬ ಚೆನೈನಲ್ಲಿ ವಾಸವಿದ್ದಾಗ ಅವರ ಮನೆಗೆ ಹೋಗಿ ಬಾಲಕನಾಗಿದ್ದ ಪುನೀತ್​ರ ವಿವಿಧ ಛಾಯಚಿತ್ರ ತೆಗೆದಿದ್ದರು. ನಂತರ ಡಾ.ರಾಜ್ ಕುಮಾರ್ ರವರ ಕೆಲವು ಚಲನಚಿತ್ರಗಳಲ್ಲಿ ಸ್ಟೀಲ್ ಪೋಟೋ ಗ್ರಾಫರ್ ಆಗಿದ್ದ ಭವಾನಿ ಲಕ್ಷ್ಮಿನಾರಾಯಣ, ಡಾ. ರಾಜ್​ ಕುಮಾರ್​ ಕುಟುಂಬದ ಛಾಯಚಿತ್ರಗಳನ್ನು ತೆಗೆದಿದ್ದರು.

ಇತ್ತೀಚೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್​ನಲ್ಲಿ ಡಾ.ರಾಜ್ ಕುಮಾರ್ ರವರ ಛಾಯಚಿತ್ರ ಪ್ರದರ್ಶನದಲ್ಲಿ ಭವಾನಿ ಲಕ್ಷ್ಮಿನಾರಾಯಣ ತಮ್ಮ ಬಳಿ ಇದ್ದ ರಾಜ್ ಕುಮಾರ್ ಕುಟುಂಬದ ಪೋಟೊಗಳನ್ನು ಪ್ರದರ್ಶನ ಮಾಡಿದ್ದರು. ಆಗ ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ್ದ ನಟ ಪುನೀತ್ ರಾಜ್ ಕುಮಾರ್, ಪೋಟೋಗಳನ್ನು ನೋಡಿ ಪ್ರಶಂಸೆ ವ್ಯಕ್ತಡಿಸಿದ್ದರು.

ಇತ್ತೀಚೆಗೆ ಮಂತ್ರಾಲಯ ಹಾಗೂ ತಿರುಪತಿಗೆ ಹೋಗಿ ಬರುವಾಗ ತಮ್ಮ ಚಿಕ್ಕಬಳ್ಳಾಪುರದ ಮನೆಗೆ ಪುನೀತ್ ಬಂದು ಹೋಗಿದ್ದರು. ಇನ್ನೂ ಕೋಕಾಕ್ ಚಳುವಳಿ ಸಂದರ್ಭದಲ್ಲಿ ಕೋಲಾರದಿಂದ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರಕ್ಕೆ ಡಾ. ರಾಜ್ ಕುಮಾರ್ ಕುಟುಂಬ ಸದಸ್ಯರು ಆಗಮಿಸಿದ ಫೋಟೋಗಳು ಕೂಡ ಛಾಯಗ್ರಾಹಕ ಭವಾನಿ ಲಕ್ಷ್ಮಿನಾರಾಯಣ ಬಳಿ ಇದೆ.

puneeth rajkumar

ಬಾಲಕನಾಗಿದ್ದಾಗ ಪುನೀತ್

ಪುನೀತ್​ರ ಪೋಟೊಗಳು ಈಗಲು ತಮ್ಮ ಬಳಿ ಇದೆ. ಈಗ ಪುನೀತ್ ಮೃತಪಟ್ಟ ಸುದ್ದಿ ಕೇಳಿ ಮಾತೆ ಬರುತ್ತಿಲ್ಲ. ಇನ್ನೂ ಪುನೀತ್ ರಾಜ್ ಕುಮಾರ್ ರವರ ಬಾಲ್ಯದ ದಿನಗಳನ್ನು ನೆನಪಿಸುವ ಕೆಲವು ಪೋಟೊಗಳನ್ನು ನಾನು ಈಗಲೂ ಸಂರಕ್ಷಿಸಿಟ್ಟಿದ್ದೇನೆ ಎಂದು ಲಕ್ಷ್ಮಿನಾರಾಯಣ ಕಂಬನಿ ಮಿಡಿದಿದ್ದಾರೆ.

ದನ್ನೂ ಓದಿ:

Puneeth Rajkumar Death: ಯುವ ನಟ ಪುನೀತ್​ ರಾಜ್​ ಕುಮಾರ್ ಅಕಾಲಿಕ ನಿಧನ -ಎರಡು ದಿನ ಜಿಮ್ ಸೆಂಟರ್​​ಗಳು ಬಂದ್

ಚಿರು ಸರ್ಜಾ ಸಾವನ್ನು ನೆನಪಿಸಿದ ಪುನೀತ್​ ಹೃದಯಾಘಾತ; ಹೃದಯದ ಆರೋಗ್ಯದ ಬಗ್ಗೆಯೂ ಇರಲಿ ಗಮನ

ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ