AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಂತಾಮಣಿ: ಕೈವಾರದ ಬೆಟ್ಟದ ಮೇಲೆ ಶ್ರೀರಾಮನ ಹೆಜ್ಜೆ ಗುರುತು, ವಿಸ್ಮಯಕ್ಕೆ ಕಾರಣವಾಗಿದೆ ಲಕ್ಷ್ಮಣ ತೀರ್ಥ!

ಕೈವಾರ ಬೆಟ್ಟ ಮಹಾಭಾರತದ ಕಾಲದಲ್ಲಿ ಏಕಚಕ್ರಾಧಿಪುರ ಎಂದು ಖ್ಯಾತಿಯಾಗಿತ್ತು ಎನ್ನಲಾಗಿದೆ. ಪಾಂಡವರು ಇದೇ ಬೆಟ್ಟದಲ್ಲಿ ಅಜ್ಞಾತವಾಸ ಮಾಡಿರುವ ಬಗ್ಗೆ ಕುರುಹುಗಳಿವೆ. ಮತ್ತೊಂದಡೆ ಅಯೋಧ್ಯೆಯ ಶ್ರೀರಾಮ, ಸೀತೆ, ಲಕ್ಷ್ಮಣರು ನಡೆದಾಡಿರುವ ಪ್ರತೀತಿ ಇದೆ. ಇದ್ರಿಂದ ಕೈವಾರ ಬೆಟ್ಟಕ್ಕೆ ಐತಿಹಾಸಿಕವಾಗಿ ಮಹತ್ವ ಬಂದಿದೆ.

ಚಿಂತಾಮಣಿ: ಕೈವಾರದ ಬೆಟ್ಟದ ಮೇಲೆ ಶ್ರೀರಾಮನ ಹೆಜ್ಜೆ ಗುರುತು, ವಿಸ್ಮಯಕ್ಕೆ ಕಾರಣವಾಗಿದೆ ಲಕ್ಷ್ಮಣ ತೀರ್ಥ!
ಕೈವಾರದ ಬೆಟ್ಟದ ಮೇಲೆ ಶ್ರೀರಾಮನ ಹೆಜ್ಜೆ ಗುರುತು, ಲಕ್ಷ್ಮಣ ತೀರ್ಥ ವಿಸ್ಮಯ!
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​|

Updated on: Jan 12, 2024 | 2:45 PM

Share

ಚಿಕ್ಕಬಳ್ಳಾಪುರ, ಜನವರಿ 12: ಅಯೋಧ್ಯೆಯ ಶ್ರೀರಾಮ, ಸೀತೆ ಲಕ್ಷ್ಮಣನ ಜೊತೆಗೂಡಿ ವನವಾಸ ಬಂದಿದ್ದಾಗ ಅದೊಂದು ಪುರಾಣ ಪ್ರಸಿದ್ದ ಆಧ್ಯಾತ್ಮಿಕ ಕ್ಷೇತ್ರಕ್ಕೆ ಆಗಮಿಸಿ ಅಲ್ಲಿರುವ ಬೆಟ್ಟದಲ್ಲಿ ವಿಶ್ರಾಂತಿ ಪಡೆದಿದ್ದರಂತೆ. ಆಗ ಸೀತೆಯ ನೀರಿನ ದಾಹ ಥಣಿಸಲು ಮುಂದಾದ ಲಕ್ಷ್ಮಣ, ಬಂಡೆಗೆ ಬಾಣ ಬಿಟ್ಟು ನೀರು ತೆಗೆದಿದ್ದನಂತೆ. ಅದಕ್ಕೆ ಸಾಕ್ಷಿಯಾಗಿ ಇಂದಿಗೂ ಆ ಬೆಟ್ಟದ ಬಂಡೆಯಲ್ಲಿ ಲಕ್ಷ್ಮಣತೀರ್ಥ ಇದ್ದು, ಹಲವು ವಿಸ್ಮಯಗಳಿಗೆ ಕಾರಣವಾಗಿದೆ.

ಯಾವ ಬೆಟ್ಟಕ್ಕೆ ಶ್ರೀರಾಮ ಬಂದಿದ್ರು: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನಲ್ಲಿ ಕೈವಾರ ಎನ್ನುವ ಗ್ರಾಮವೊಂದಿದೆ. ಇದೇ ಕೈವಾರ ಗ್ರಾಮಕ್ಕೆ ಹೊಂದಿಕೊಂಡಂತೆ ಕೈವಾರ ಬೆಟ್ಟವಿದೆ. ಇದೆ ಬೆಟ್ಟ ಐತಿಹಾಸಿಕವಾಗಿ ಹಾಗೂ ಪೌರಣಿಕವಾಗಿ ಪ್ರಸಿದ್ದಿಯಾಗಿದೆ. ಇನ್ನೂ ಅಯೋಧ್ಯೆಯ ಶ್ರೀರಾಮ, ಸೀತೆ, ಲಕ್ಷ್ಮಣನ ಜೊತೆಗೂಡಿ ವನವಾಸಕ್ಕೆ ಬಂದಿದ್ರು ಎನ್ನುವ ಪ್ರತಿತಿ ಇದೆ. ಇದೆ ಬೆಟ್ಟದಲ್ಲಿ ವಿಶ್ರಾಂತಿ ಪಡೆದಿದ್ದರು ಎನ್ನುವ ನಂಬಿಕೆಯಿದೆ.

ಸೀತೆಯ ನೀರಿನ ದಾಹ ತಣಿಸಲು ಬಾಣ ಹೊಡೆದಿದ್ದ ಲಕ್ಷ್ಮಣ: ವಿಶ್ರಾಂತಿಯಲ್ಲಿದ್ದ ಸೀತೆ, ನೀರಿನ ದಾಹ ಆಗಿರುವುದಾಗಿ ತಿಳಿಸುತ್ತಾಳೆ. ಆತ ಸೀತೆಯ ನೀರಿನ ದಾಹ ಥಣಿಸಲು ಮುಂದಾದ ಲಕ್ಷ್ಮಣ, ಬಂಡೆಗೆ ಬಾಣ ಬಿಟ್ಟು ನೀರು ತೆಗೆದಿದ್ದನಂತೆ. ಅದಕ್ಕೆ ಸಾಕ್ಷಿಯಾಗಿ ಇಂದಿಗೂ ಕೈವಾರ ಬೆಟ್ಟದಲ್ಲಿ ಲಕ್ಷ್ಮಣ ತೀರ್ಥವಿದೆ, ಮತ್ತೊಂದಡೆ ಬೆಟ್ಟದ ಮೇಲಿರುವ ಲಕ್ಷ್ಮಣ ತೀರ್ಥದ ನೀರು ಸದಾ ತಂಪಾಗಿ, ಶುದ್ಧವಾಗಿ ಬರಗಾಲಕ್ಕೂ ಜಗ್ಗದೇ ತುಂಬಿ ತುಳುಕುತ್ತಿದೆ. ಅದರ ನೀರನ್ನೇ ಸ್ಥಳೀಯರು ಪೂಜೆ, ಪುನಸ್ಕಾರಗಳಿಗೆ ಬಳಸುತ್ತಾರೆ.

Also Read:  ಹಂಪಿಯಲ್ಲಿ ಚಾರ್ತುಮಾಸ ತಪಸ್ಸು ನಡೆಸಿದ ಶ್ರೀರಾಮ.. ಸೀತೆಯನ್ನು ಮರಳಿ ಪಡೆಯಲು ವಿರೂಪಾಕ್ಷ ದೇವರ ಆರ್ಶೀವಾದ ಪಡೆದರಂತೆ!

ಅಮರನಾರಾಯಣಸ್ವಾಮಿ ದೇವಸ್ಥಾನಕ್ಕೆ ಶ್ರೀರಾಮ ಭೇಟಿ: ಇನ್ನು ತ್ರೇತಾಯುಗಕ್ಕೂ ಮುನ್ನವೇ ಕೈವಾರ ಪಟ್ಟಣದಲ್ಲಿ ಅಮರನಾರಾಯಣಸ್ವಾಮಿ ದೇವಸ್ಥಾನವಿತ್ತಂತೆ. ಶ್ರೀರಾಮ ಸೀತೆ ಲಕ್ಷ್ಮಣ ಮೂವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರಂತೆ. ಅದರ ಜ್ಞಾಪಕಾರ್ಥವಾಗಿ ದೇವಸ್ಥಾನದಲ್ಲಿ ಇಂದಿಗೂ ರಾಮ, ಸೀತೆ, ಲಕ್ಷ್ಮಣ ವಿಗ್ರಹ ಇರುವುದನ್ನು ಕಾಣಬಹುದಾಗಿದೆ.

ಕೈವಾರ ಬೆಟ್ಟ ಮಹಾಭಾರತದ ಕಾಲದಲ್ಲಿ ಏಕಚಕ್ರಾಧಿಪುರ ಎಂದು ಖ್ಯಾತಿಯಾಗಿತ್ತು ಎನ್ನಲಾಗಿದೆ. ಪಾಂಡವರು ಇದೇ ಬೆಟ್ಟದಲ್ಲಿ ಅಜ್ಞಾತವಾಸ ಮಾಡಿರುವ ಬಗ್ಗೆ ಕುರುಹುಗಳಿವೆ. ಮತ್ತೊಂದಡೆ ಅಯೋಧ್ಯೆಯ ಶ್ರೀರಾಮ, ಸೀತೆ, ಲಕ್ಷ್ಮಣರು ನಡೆದಾಡಿರುವ ಪ್ರತೀತಿ ಇದೆ. ಇದ್ರಿಂದ ಕೈವಾರ ಬೆಟ್ಟಕ್ಕೆ ಐತಿಹಾಸಿಕವಾಗಿ ಮಹತ್ವ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್
ಅವನ ತಂದೆ-ತಾಯಿ ತಮಿಳುನಾಡಿಂದ ಬಂದು ನಮ್ಮೂರಲ್ಲಿ ನೆಲೆಸಿದ್ದರು: ಗ್ರಾಮಸ್ಥರು
ಅವನ ತಂದೆ-ತಾಯಿ ತಮಿಳುನಾಡಿಂದ ಬಂದು ನಮ್ಮೂರಲ್ಲಿ ನೆಲೆಸಿದ್ದರು: ಗ್ರಾಮಸ್ಥರು
ಮಾಸ್ಕ್​​​ಮ್ಯಾನ್​​ ಚಿನ್ನಯ್ಯ ಎಸ್​ಐಟಿ ವಶಕ್ಕೆ, ಬೆಳ್ತಂಗಡಿ ಕೋರ್ಟ್ ಆದೇಶ
ಮಾಸ್ಕ್​​​ಮ್ಯಾನ್​​ ಚಿನ್ನಯ್ಯ ಎಸ್​ಐಟಿ ವಶಕ್ಕೆ, ಬೆಳ್ತಂಗಡಿ ಕೋರ್ಟ್ ಆದೇಶ