AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಯಲ್ಲಿ ಗ್ರಾಮೀಣ ಕ್ರೀಡೆ: ಮಕ್ಕಳೊಟ್ಟಿಗೆ ಬಾಲ್ಯಕ್ಕೆ ಮರಳಿದ ಪೋಷಕರು

ಚಿಕ್ಕಮಗಳೂರು: ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಆಟಗಳನ್ನ ಆಡಿಸ್ತಾರೆ. ಮಕ್ಕಳ ಟ್ಯಾಲೆಂಟ್ ನೋಡಿ ಪೇರೆಂಟ್ಸ್ ಖುಷಿ ಪಡ್ತಾರೆ. ಬಟ್ ಇಲ್ಲಿ ಹಂಗಲ್ಲ. ಹೆತ್ತವ್ರು ಆಟ ಆಡ್ತಾರೆ. ಮಕ್ಕಳು ನಿಂತು ನೋಡ್ತಾರೆ. ಗೋಣಿಚೀಲದಲ್ಲಿ ಕಾಲಿಟ್ಕೊಂಡು ಜಂಪಿಂಗ್. ಕಾಲಿಗೆ ಕಾಲು ಕಟ್ಕೊಂಡು ರನ್ನಿಂಗ್​. ಮ್ಯೂಸಿಕಲ್ ಚೇರ್​ನಲ್ಲಿ ಹೆಣ್ಣೈಕ್ಳ ಚಮಕ್. ಬಿಂದಾಸ್ ಆಗಿ ಕುಣ್ಯೋದೇನು. ಭರ್ಜರಿ ಬ್ಯಾಟಿಂಗ್ ಮಾಡೋದೇನು. ಟೋಟಲಿ ಮಸ್ತಿ ಮೂಡ್. ಕೆಲ್ಸಗಳಿಗೆಲ್ಲಾ ಗೋಲಿ ಹೊಡ್ದು ಒಂದೆಡೆ ಸೇರಿದ್ದ ಇವ್ರೆಲ್ಲಾ ಎಂಜಾಯ್ ಮಾಡಿದ ಪರಿ ಇದು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದ […]

ಶಾಲೆಯಲ್ಲಿ ಗ್ರಾಮೀಣ ಕ್ರೀಡೆ: ಮಕ್ಕಳೊಟ್ಟಿಗೆ ಬಾಲ್ಯಕ್ಕೆ ಮರಳಿದ ಪೋಷಕರು
ಸಾಧು ಶ್ರೀನಾಥ್​
|

Updated on:Jan 28, 2020 | 2:07 PM

Share

ಚಿಕ್ಕಮಗಳೂರು: ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಆಟಗಳನ್ನ ಆಡಿಸ್ತಾರೆ. ಮಕ್ಕಳ ಟ್ಯಾಲೆಂಟ್ ನೋಡಿ ಪೇರೆಂಟ್ಸ್ ಖುಷಿ ಪಡ್ತಾರೆ. ಬಟ್ ಇಲ್ಲಿ ಹಂಗಲ್ಲ. ಹೆತ್ತವ್ರು ಆಟ ಆಡ್ತಾರೆ. ಮಕ್ಕಳು ನಿಂತು ನೋಡ್ತಾರೆ.

ಗೋಣಿಚೀಲದಲ್ಲಿ ಕಾಲಿಟ್ಕೊಂಡು ಜಂಪಿಂಗ್. ಕಾಲಿಗೆ ಕಾಲು ಕಟ್ಕೊಂಡು ರನ್ನಿಂಗ್​. ಮ್ಯೂಸಿಕಲ್ ಚೇರ್​ನಲ್ಲಿ ಹೆಣ್ಣೈಕ್ಳ ಚಮಕ್. ಬಿಂದಾಸ್ ಆಗಿ ಕುಣ್ಯೋದೇನು. ಭರ್ಜರಿ ಬ್ಯಾಟಿಂಗ್ ಮಾಡೋದೇನು.

ಟೋಟಲಿ ಮಸ್ತಿ ಮೂಡ್. ಕೆಲ್ಸಗಳಿಗೆಲ್ಲಾ ಗೋಲಿ ಹೊಡ್ದು ಒಂದೆಡೆ ಸೇರಿದ್ದ ಇವ್ರೆಲ್ಲಾ ಎಂಜಾಯ್ ಮಾಡಿದ ಪರಿ ಇದು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದ ಶಾಲೆಯೊಂದ್ರಲ್ಲಿ ಫನ್ ಫೇರ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅದ್ರಲ್ಲೂ ಪೇರೆಂಟ್ಸ್​ಗೆಂದೇ ನಡೆದ ಈ ಪ್ರೋಗ್ರಾಂನಲ್ಲಿ ಸಖತ್ ಎಂಟರ್​ಟೈನ್​ಮೆಂಟ್ ಇತ್ತು. ಗೋಣಿ ಚೀಲದೊಳಗೆ ಕಾಲು ಇಟ್ಕೊಂಡು ಜಂಪ್ ಮಾಡ್ಕೊಂಡು ಹೋಗ್ತಿದ್ರೆ ಮಕ್ಕಳು ಹುರಿದುಂಬಿಸಿದ್ರು. ಇನ್ನೂ ಕೆಲವರು ನೆಗೆಯೋ ಬಿರುಸಲ್ಲಿ ಕೆಳಗೆ ಬೀಳ್ತಿದ್ರು. ಆದ್ರೂ ಸ್ಪರ್ಧೆ ಜೋಶ್ ಮಾತ್ರ ಕಮ್ಮಿಯಾಗಲಿಲ್ಲ.

ಇನ್ನು ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗಾಗಿ ಪ್ರೋಗ್ರಾಂಗಳು ನಡೆದ್ರೆ ಈ ಶಾಲೆಯಲ್ಲಿ ಮಾತ್ರ ಪೋಷಕರಿಗೂ ಮಸ್ತಿ ನೀಡ್ಬೇಕು ಅಂತಾ ಕಾರ್ಯಕ್ರಮ ಆಯೋಜಿಸ್ತಾರೆ. ಮಕ್ಕಳ ಜೊತೆ ಮಕ್ಕಳಾಗಿ ತಾವೂ ಬಾಲ್ಯದ ಆಟಗಳನ್ನ ಆಡೋದನ್ನ ಪೇರೆಂಟ್ಸ್ ಮಿಸ್ ಮಾಡಲ್ಲ. ಹೀಗಾಗೇ ಕೆಲ್ಸನೆಲ್ಲಾ ಬದಿಗೊತ್ತಿ ಭಾಗಿಯಾಗ್ತಾರೆ. ಹಾಗೇ ಕ್ರೀಡೆಗಳಲ್ಲಿ ಸ್ಪರ್ಧಿಸಿ ತಮ್ಮೆಲ್ಲಾ ನೋವು ಮರೀತಾರೆ. ಹೆತ್ತವರ ಆಟಗಳನ್ನ ನೋಡ್ತಾ ಮಕ್ಕಳು ಖುಷಿ ಪಡ್ತಾರೆ.

ಇನ್ನೊಂದು ವಿಶೇಷ ಅಂದ್ರೆ ಆಟ, ಓಟ ಎಲ್ಲಾ ಮುಗಿದ್ಮೇಲೆ ವಿದ್ಯಾರ್ಥಿಗಳು ಮನೆಗಳಲ್ಲೇ ರೆಡಿ ಮಾಡಿ ತಂದ ತಿಂಡಿಗಳನ್ನ ಮಾರಾಟ ಮಾಡ್ತಾರೆ. ಆಟ ಆಡಿ ಮೊದ್ಲೇ ಹಸಿವಲ್ಲಿರೋ ಎಲ್ರೂ ಹೊಸ ಹೊಸ ಟೇಸ್ಟ್ ನೋಡ್ತಾರೆ.

Published On - 1:57 pm, Tue, 28 January 20

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ