Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ಐಜಿಪಿ ರಾಘವೇಂದ್ರ ಸುಹಾಸ್​ಗೆ ಸಿಐಡಿಯಿಂದ ನೋಟಿಸ್

ಕೇಸ್​ನಲ್ಲಿ ಇದುವರೆಗೆ ಎಷ್ಟು ಹಣದ ವರ್ಗಾವಣೆ ಅಗಿದೆ? ಬಂಗಾರ ಎಲ್ಲಿಂದ ಎಲ್ಲಿಗೆ ಹೋಗುತಿತ್ತು? ಬಂಗಾರವನ್ನು ಪೊಲೀಸ್ ಠಾಣೆ ಬಳಿಯಿದ್ದ ಕಾರಿನಿಂದ ಯಾರು ಕಳ್ಳತನ ಮಾಡಿದ್ದರು? ಎನ್ನುವ ಹಲವು ಪ್ರಶ್ನೆಗಳಿಗೆ ಸಿಐಡಿ ತಂಡ ಉತ್ತರ ಹುಡುಕುತ್ತಿದೆ.

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ಐಜಿಪಿ ರಾಘವೇಂದ್ರ ಸುಹಾಸ್​ಗೆ ಸಿಐಡಿಯಿಂದ ನೋಟಿಸ್
ಐಜಿಪಿ ರಾಘವೇಂದ್ರ ಸುಹಾಸ್
Follow us
TV9 Web
| Updated By: sandhya thejappa

Updated on:Jun 19, 2021 | 11:10 AM

ಬೆಂಗಳೂರು: ಬೆಳಗಾವಿಯಲ್ಲಿ 4ಕೆ.ಜಿ 900 ಗ್ರಾಂ ಚಿನ್ನ ಅಕ್ರಮ ಸಾಗಣೆ ಕೇಸ್ ಸಂಬಂಧ ಐಜಿಪಿ ರಾಘವೇಂದ್ರ ಸುಹಾಸ್​ಗೆ ಸಿಐಡಿ ತನಿಖಾ ತಂಡ ನೋಟಿಸ್ ನೀಡಿದೆ. ವಿಚಾರಣೆಗೆ ಹಾಜರಾಗಲು ಸಿಐಡಿ ನೋಟಿಸ್ ನೀಡಿದ್ದು, ಐಜಿಪಿ ರಾಘವೇಂದ್ರ ಸುಹಾಸ್ ಕೊರೊನಾ ಕಾರಣ ನೀಡಿ ವಿಚಾರಣೆಗೆ ಹಾಜರಾಗುವುದಕ್ಕೆ ಸಮಯವನ್ನು ಕೇಳಿದ್ದಾರೆ. ಕುಟುಂಬಸ್ಥರಿಗೆ ಕೊವಿಡ್ ಇರುವ ಕಾರಣ ನೀಡಿರುವ ಐಜಿಪಿ, ಕೊವಿಡ್​ನಿಂದ ಕುಟುಂಬ ಗುಣವಾದ ಬಳಿಕ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದಾರಂತೆ.

ಈವರೆಗಿನ ಹಳೆಯ ಕೇಸ್​ಗೆ ಮೂರು ಹೊಸ ಕೇಸ್ ದಾಖಲಾಗಿದೆ. ನಾಲ್ಕು ಕೇಸ್​ಗಳನ್ನು ಒಟ್ಟಾಗಿಸಿ ಸಿಐಡಿ ತಂಡ ತನಿಖೆ ನಡೆಸುತ್ತಿದೆ. ಕೇಸ್ ನಂಬರ್ 1- ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಕಾರಿನಲ್ಲಿದ್ದ ಬಂಗಾರ ಕಳ್ಳತನವಾಗಿರುವ ಪ್ರಕರಣ ದಾಖಲಾಗಿದೆ. ಕೇಸ್ ನಂಬರ್ 2- ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಹಣ ಪಡೆದಿರುವ ಆರೋಪ ಪ್ರಕರಣ ದಾಖಲಾಗಿದೆ. ಕೇಸ್ ನಂಬರ್ 3- ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ನಕಲಿ ಪೊಲೀಸ್ ಐಡಿ ಕಾರ್ಡ್ ಬಳಕೆ ಸಂಬಂಧ ಕೇಸ್ ದಾಖಲಾಗಿದೆ. ಕೇಸ್ ನಂಬರ್ 4- ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಐಜಿಪಿ ಮಾಹಿತಿ ಮೇರೆಗೆ ಎರಿಟಿಗಾ ಕಾರು ಸೀಜ್ ಮಾಡಿದ್ದ ಕೇಸ್ ದಾಖಲಾಗಿದೆ.

ಜಪ್ತಿಯಾದ ಕಾರಿನಲ್ಲಿದ್ದ 4 ಕೆಜಿ 900 ಗ್ರಾಂ ಚಿನ್ನ ಸಾಗಿಸಿದ್ದರು. ಅಕ್ರಮದ ಬಗ್ಗೆ ಟಿವಿ9ನಲ್ಲಿ ವಿಸ್ತೃತ ವರದಿ ಪ್ರಸಾರವಾಗಿತ್ತು. ಟಿವಿ9 ವರದಿ ಬಳಿಕ ಐಜಿಪಿ ಸೇರಿ ನಾಲ್ವರು ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿತ್ತು.

ಕೇಸ್​ನಲ್ಲಿ ಇದುವರೆಗೆ ಎಷ್ಟು ಹಣದ ವರ್ಗಾವಣೆ ಅಗಿದೆ? ಬಂಗಾರ ಎಲ್ಲಿಂದ ಎಲ್ಲಿಗೆ ಹೋಗುತಿತ್ತು? ಬಂಗಾರವನ್ನು ಪೊಲೀಸ್ ಠಾಣೆ ಬಳಿಯಿದ್ದ ಕಾರಿನಿಂದ ಯಾರು ಕಳ್ಳತನ ಮಾಡಿದ್ದರು? ಎನ್ನುವ ಹಲವು ಪ್ರಶ್ನೆಗಳಿಗೆ ಸಿಐಡಿ ತಂಡ ಉತ್ತರ ಹುಡುಕುತ್ತಿದೆ.

ಇದನ್ನೂ ಓದಿ

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಬೆನ್ನಲ್ಲೇ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ವರ್ಗಾವಣೆ

ಮಂಗಳೂರಿನಲ್ಲಿ ಬಂಗಾರ ಕದ್ದ ಮಿಕಗಳು ಲಾಕ್; ಬೆಳಗಾವಿಯಲ್ಲಿ ಗೋಲ್ಡ್ ಸ್ಮಗ್ಲಿಂಗ್ ಕೇಸ್​ಗೆ ಟ್ವಿಸ್ಟ್

(CID issued a notice to IGP Raghavendra Suhas to attend the investigation)

Published On - 11:09 am, Sat, 19 June 21

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ