AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಂರಿಂದ ಹಲಾಲ್ ಮಾಡಿಸಿದರೆ ದೇವಿಯ ಶಾಪ: ಏನಿದು ದುರ್ಗಮ್ಮನ ಜಾತ್ರೆಯಲ್ಲಿ ಶುರುವಾದ ವಿವಾದ?

ದಾವಣಗೆರೆ ದುರ್ಗಮ್ಮ ಜಾತ್ರೆ ಫೆಬ್ರವರಿ 24 ಮತ್ತು 25ರಂದು ನಡೆಯಲಿದ್ದು, ಸಡಗರ ಮನೆಮಾಡಿದೆ. ಶ್ರೀರಾಮ ಸೇನೆ ಈ ಬಾರಿ ಹಲಾಲ್ ಮುಕ್ತ ಜಾತ್ರೆಗೆ ಕರೆ ನೀಡಿದೆ. ದೇವಿಗೆ ಬಲಿ ನೀಡುವ ಕುರಿಗಳನ್ನು ಮುಸ್ಲಿಮರಿಂದ ಹಲಾಲ್ ಮಾಡಿಸುವುದನ್ನು ವಿರೋಧಿಸಿದ್ದು, ದೇವಿ ಶಾಪ ತಟ್ಟುತ್ತದೆ ಎಂದು ಎಚ್ಚರಿಕೆ ನೀಡಿದೆ.

ಮುಸ್ಲಿಂರಿಂದ ಹಲಾಲ್ ಮಾಡಿಸಿದರೆ ದೇವಿಯ ಶಾಪ: ಏನಿದು ದುರ್ಗಮ್ಮನ ಜಾತ್ರೆಯಲ್ಲಿ ಶುರುವಾದ ವಿವಾದ?
ದುರ್ಗಮ್ಮ ಜಾತ್ರೆImage Credit source: tv9 kannada
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Feb 11, 2026 | 10:19 PM

Share

ದಾವಣಗೆರೆ, ಫೆಬ್ರವರಿ 11: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ದಾವಣಗೆರೆಯ (Davanagere) ದುರ್ಗಮ್ಮನ ಜಾತ್ರೆ ಕೂಡ ಒಂದು. ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಜಾತ್ರೆ (Jatre) ನಡೆಯುತ್ತದೆ. ನಾಟಕ, ಕುಸ್ತಿ, ಟಗರ ಕಾಳಗ ಹೀಗೆ ಹತ್ತು ಹಲವು ಕ್ಷಣಗಳು ಜಾತ್ರೆಯ ವಿಶೇಷ. ಇದೆಲ್ಲಕ್ಕಿಂತ ಹೆಚ್ಚು ಆಕರ್ಷಣೆ ಅಂದರೆ ಕುರಿ ಊಟ. ಪ್ರತಿ ಮನೆಗಳಿಂದ ಮೂರು ನಾಲ್ಕು ಕುರಿಗಳನ್ನ ದೇವಿಗೆ ಬಲಿ ಕೊಡುತ್ತಾರೆ. ಸದ್ಯ ಇದೇ ವಿಚಾರವಾಗಿ ಇದೀಗ ಹೊಸ ಹೋರಾಟ ಶುರುವಾಗಿದೆ.

ಹಲಾಲ್ ಮುಕ್ತ ದುರ್ಗಮ್ಮನ ಜಾತ್ರೆಗೆ ಶ್ರೀರಾಮ ಸೇನೆ ಕರೆ

ಶ್ರೀರಾಮ ಸೇನೆ ಹೊಸ ಹೋರಾಟಕ್ಕೆ ಮುಂದಾಗಿದೆ. ಹೇಳಿದಂತೆ ನಡೆದುಕೊಳ್ಳದಿದ್ದರೆ ದೇವಿ ಶಾಪ ಹಾಕುತ್ತಾಳೆ ಎಂಬ ಭಯ ಕೂಡ ಶ್ರೀರಾಮ ಸೇನೆ ಹಾಕುತ್ತಿದೆ. ಈ ಸಲ ಶ್ರೀರಾಮ ಸೇನೆ ಕರೆ ನೀಡಿದ್ದು, ಹಲಾಲ್ ಮುಕ್ತ ದುರ್ಗಮ್ಮನ ಜಾತ್ರೆ ಆಗಬೇಕು ಎಂದು. ಮುಸ್ಲಿಂ‌ ಕಡೆಯಿಂದ ಹಲಾಲ್ ಮಾಡಿಸಿದರೆ ದೇವಿಯ ಶಾಪ ತಟ್ಟುತ್ತದೆ ಎಂಬ ಪ್ರಚಾರ ಶುರುವಾಗಿದೆ.

ಇದನ್ನೂ ಓದಿ: ಸಂಸಾರದ ಜಂಜಾಟಕ್ಕಿಂತ ಸನ್ಯಾಸತ್ವ ಉತ್ತಮ: ದಾವಣಗೆರೆ ಸಿವಿಲ್ ಇಂಜಿನಿಯರಿಂಗ್ ಟಾಪರ್ ಈಗ ಜೈನ ಸನ್ಯಾಸಿ

ಫೆಬ್ರವರಿ 24 ಮತ್ತು 25ರಂದು ದಾವಣಗೆರೆ ದುಗ್ಗಮ್ಮನ ಜಾತ್ರೆ ನಡೆಯಲಿದೆ. ದೇವಿಗೆ ಸಾವಿರಾರು ಕುರಿಗಳ ಬಲಿ ಕೊಡಲಾಗುತ್ತದೆ. ಬಲಿ ಕೊಡುವಾಗ ಮುಸ್ಲಿಂ ಕಡೆಯಿಂದ ಹಲಾಲ್ ಮಾಡಿಸಬಾರದು. ಈ ಹಲಾಲ್ ಮಾಡುವುದು ಮುಸ್ಲಿಮರ ಪದ್ದತಿ. ದೇವಿ ಆರಾಧಕರು ಯಾರು ಕೂಡ ಮುಸ್ಲಿಮರಿಂದ ಹಲಾಲ್ ಮಾಡಿಸಬೇಡಿ. ನಮ್ಮ ಹಿಂದೂ ಸಂಪ್ರದಾಯದಂತೆ ಹಿಂದೂಗಳಲ್ಲಿರುವ ಕಲಾಲ್ ಅಥವಾ ಕಾಟೀಕ್ ಸಮಾಜದವರಿಂದ ಕುರಿ ಬಲಿ ಕೊಡಿ. ಹಿಂದೂಗಳು ಹಲಾಲ್ ಮಾಡಿಸುವುದು ಅವೈಜ್ಞಾನಿಕ, ಅದರಲ್ಲೂ ಮುಸ್ಲಿಮರಿಂದ ಹಲಾಲ್ ಮಾಡಿಸಿದರೆ ಶಾಪ ತಟ್ಟುತ್ತದೆ ಎಂದು ಶ್ರೀರಾಮ ಸೇನೆ ಎಚ್ಚರಿಕೆ ನೀಡಿದೆ.

ಈಗಾಗಲೇ ಜಾತ್ರೆ ಸಂಭ್ರಮ ಶುರು

ಈಗಾಗಲೇ ದಾವಣಗೆರೆ ನಗರದಲ್ಲಿ ದೇವತೆ ಜಾತ್ರೆಯ ಸಂಭ್ರಮ ಶುರುವಾಗಿದೆ. ಆಕಾಶದತ್ತೆರಕ್ಕೆ ದೇವಿಯ ಹಂದರ ಗಂಬ, ಕೇಸರಿ ಧ್ವಜದ ಹಾರಾಟ, ಐತಿಹಾಸಿಕ ಜಾತ್ರೆಗೆ ಚಾಲನೆ ಸಿಕ್ಕಿದ್ದು ವಿಶೇಷ. ಇತ್ತೀಚಿಗೆ ಸಾವಿರಾರು ಜನರ ಸಮ್ಮುಖದಲ್ಲಿ ದೇವಸ್ಥಾನದ ಧರ್ಮದರ್ಶಿ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಎಸ್ ಮಲ್ಲಿಕಾರ್ಜುನ್ ಹಂದರ ಗಂಬಕ್ಕೆ ಪೂಜೆ ಸಲ್ಲಿಸಿದ್ದರು. ಇಡಿ ದೇವಸ್ಥಾನದ ಆವರಣದಲ್ಲಿ ಸಂಭ್ರಮ ಮನೆ ಮಾಡಿತ್ತು.

ಹಂದರ ಗಂಬ ಪೂಜೆಯಾದ ಬಳಿಕ ನಿಜವಾದ ಜಾತ್ರೆಗೆ ಚಾಲನೆ ಸಿಕ್ಕಿದೆ. ಫೆಬ್ರವರಿ 24 ಮತ್ತು 25ರಂದು ಜಾತ್ರೆಯ ಮಹತ್ವದ ದಿನಗಳು. ಅಂದರೆ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಇಡಿ ನಗರವೇ ಈ ಎರಡು ದಿನ ಮಾತ್ರ ಗಮ್ಮ ಎನ್ನುತ್ತಿರುತ್ತದೆ. ಒಂದು ದಿನ ಸಸ್ಯಹಾರಿಗಳಿಗೆ, ಇನ್ನೊಂದು ದಿನ ಮಾಂಸಾಹಾರಿಗಳಿಗೆ. ಇನ್ನು ದೇವಿ ಜಾತ್ರೆಯಲ್ಲಿ ಬೇವಿನ ಉಡಿಗೆ ಹಾಗೂ ಬೆತ್ತಲೆ ಸೇವೆ ನಡೆದರೆ ಸೂಕ್ತ ಕ್ರಮ‌ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಫೆ. 22ರಂದು ದುರ್ಗಾಂಭಿಕಾ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಫೆ 23 ಮತ್ತು 24 ರಂದು ಉಡಿ ತುಂಬುವ ಕಾರ್ಯವಿದೆ. ಫೆ. 24 ರಂದು ರಾತ್ರಿ 11ಕ್ಕೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಫೆ 25 ರಂದು ಚರಗ ಚಲ್ಲುವ ಮೂಲಕ ದೇವಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ: ಗಿಡಮೂಲಿಕೆ ಮಾರಾಟಕ್ಕೆ ಆಫ್ರಿಕಾಗೆ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದ 8 ಮಂದಿ ಸಂಕಷ್ಟದಲ್ಲಿ: ಬಂಧನ ಭೀತಿ

ಹೀಗೆ ಒಂದು ಕಡೆ ಜಾತ್ರೆಗೆ ಸಂಭ್ರಮದ ಸಿದ್ದತೆ ನಡೆಯುತ್ತಿದೆ. ಇನ್ನೊದು ಕಡೆ ಶ್ರೀರಾಮ ಸೇನೆ ಹಲಾಲ್ ಕಟ್ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದೆ. ಮೇಲಾಗಿ ದೇವಸ್ಥಾನದ ಮುಂದೆ ಕುರಿ ಬಲಿ ನಿಷೇಧವಿದೆ.  ಹೀಗಾಗಿ ಕುರಿಗಳ ಬಲಿ ಕೊಡುವು ನಾಲ್ಕು ಗೋಡೆಗಳ ನಡುವೆ. ಅದು ಒಂದು ರೀತಿಯಲ್ಲಿ ಖಾಸಗಿ ವಿಚಾರ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಶ್ರೀರಾಮ ಸೇನೆ ಈ ವರ್ಷ ಹಲಾಲ್ ಕಟ್ ಮುನ್ನೆಲೆಗೆ ತಂದಿದ್ದು ಹತ್ತಾರು ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us
ಇಂದು ಈ ರಾಶಿಯವರಿಗೆ ಸ್ವಲ್ಪ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಸ್ವಲ್ಪ ಖರ್ಚು ಹೆಚ್ಚಾಗುವ ಸಾಧ್ಯತೆ
ಮುಂಬೈನಲ್ಲಿ ವರುಣನ ಆರ್ಭಟಕ್ಕೆ ಕೆರೆಯಂತಾದ ರಸ್ತೆಗಳು
ಮುಂಬೈನಲ್ಲಿ ವರುಣನ ಆರ್ಭಟಕ್ಕೆ ಕೆರೆಯಂತಾದ ರಸ್ತೆಗಳು
ಮೆಟ್ರೋ ನಿಲ್ದಾಣಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲು ಆದೇಶ
ಮೆಟ್ರೋ ನಿಲ್ದಾಣಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲು ಆದೇಶ
ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು
ಗಾಯಕಿಯಾದ ಪತ್ನಿ ಶಿಲ್ಪಾ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಗಣೇಶ್ ಕಾಮಿಡಿ ಮಾತು
ಭೂ ಪರಿಹಾರ ನೀಡದಿದ್ದಕ್ಕೆ ಡಿಸಿ ಆವರಣದಲ್ಲಿರುವ ಸರ್ಕಾರಿ ಕಚೇರಿಯೇ ಜಪ್ತಿ
ಭೂ ಪರಿಹಾರ ನೀಡದಿದ್ದಕ್ಕೆ ಡಿಸಿ ಆವರಣದಲ್ಲಿರುವ ಸರ್ಕಾರಿ ಕಚೇರಿಯೇ ಜಪ್ತಿ
ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕರ ಅಡ್ಡಮತದಾನ
ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಶಾಸಕರ ಅಡ್ಡಮತದಾನ
ಕನ್ನಡದವರು ಬೆಳೆಸಲ್ಲ ಎಂದಿದ್ದ ಸೋನು, ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ
ಕನ್ನಡದವರು ಬೆಳೆಸಲ್ಲ ಎಂದಿದ್ದ ಸೋನು, ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ
ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ ದೊಡ್ಡ ಬ್ಲಂಡರ್: ರಾಜಣ್ಣ ಎಚ್ಚರಿಕೆ
ಸಿದ್ದರಾಮಯ್ಯರನ್ನು ಕಡೆಗಣಿಸಿದ್ರೆ ದೊಡ್ಡ ಬ್ಲಂಡರ್: ರಾಜಣ್ಣ ಎಚ್ಚರಿಕೆ
ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್?
ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಶಾಕ್?
ವಿದ್ಯುತ್ ಖಾಸಗೀಕರಣಗೊಳಿಸುವ ಬಗ್ಗೆ ಇಂಧನ ಸಚಿವ ಕೊಟ್ಟ ಸ್ಙಷ್ಟನೆ ಹೀಗಿದೆ
ವಿದ್ಯುತ್ ಖಾಸಗೀಕರಣಗೊಳಿಸುವ ಬಗ್ಗೆ ಇಂಧನ ಸಚಿವ ಕೊಟ್ಟ ಸ್ಙಷ್ಟನೆ ಹೀಗಿದೆ