AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ ಹೆದ್ದಾರಿಯಲ್ಲಿ ಸಂಚಾರಕ್ಕೆ ಹೊಸ ನಿಯಮ; ಓವರ್ ಟೇಕ್ ಮಾಡಲು ಹೋಗಿ ಪಥ ಶಿಸ್ತು ಉಲ್ಲಂಘಿಸಿದ್ರೆ 500 ರೂ ದಂಡ

ವಾಹನಗಳ ಸವಾರರು ಓವರ್ ಟೇಕ್ ಮಾಡಲು ಬೇರೆ ಬೇರೆ ಪಥಗಳಲ್ಲಿ ನುಸುಳಿ ಹೋಗುವಾಗ ಅಪಘಾತಗಳು ಸಂಭವಿಸಿ ಸಾವು-ನೋವುಗಳಾಗುತ್ತಿವೆ. ಹೀಗಾಗಿ ಹೆದ್ದಾರಿಗಳಲ್ಲಿ ದುರಂತ ತಪ್ಪಿಸಲು ನಿಯಮ ಹೆದ್ದಾರಿಯಲ್ಲಿ ಪಥ ಶಿಸ್ತು ಉಲ್ಲಂಘಿಸಿದ್ರೆ ಐದು ನೂರು ರೂಪಾಯಿ ದಂಡ ವಿಧಿಸಲಾಗುತ್ತೆ.

ದಾವಣಗೆರೆ ಹೆದ್ದಾರಿಯಲ್ಲಿ ಸಂಚಾರಕ್ಕೆ ಹೊಸ ನಿಯಮ; ಓವರ್ ಟೇಕ್ ಮಾಡಲು ಹೋಗಿ ಪಥ ಶಿಸ್ತು ಉಲ್ಲಂಘಿಸಿದ್ರೆ 500 ರೂ ದಂಡ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
ಆಯೇಷಾ ಬಾನು|

Updated on:Feb 21, 2023 | 9:02 AM

Share

ದಾವಣಗೆರೆ: ಹೆದ್ದಾರಿಯಲ್ಲಿ ಪಥ ಶಿಸ್ತು ಉಲ್ಲಂಘಿಸಿದ್ರೆ ಐದು ನೂರು ರೂಪಾಯಿ ದಂಡ ವಿಧಿಸಲಾಗುತ್ತೆ. ಹೊಸ ನಿಯಮ ನಿನ್ನೆ(ಫೆ.20) ಸಂಜೆಯಿಂದಲೇ ಜಾರಿಯಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ಸಂಚಾರ ನಿಯಮಗಳ ಜಾಗೃತಿಗಾಗಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೈಕ್ ಜಾಥಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್, ಜಿಲ್ಲೆಯ ವ್ಯಾಪ್ತಿಯಲ್ಲಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರೆ-48 ಹಾಯ್ದು ಹೋಗಿದೆ. ದಾವಣಗೆರೆ ಜಿಲ್ಲೆಯ ವ್ಯಾಪ್ತಿಯ ಹೆದ್ದಾರಿಯಲ್ಲಿ ಸರ್ಕಾರ ನಿನ್ನೆ ಸಂಜೆಯಿಂದ ಪೈಲೆಟ್ ಪ್ರಾಜೆಕ್ಟ್ ಯೊಂದನ್ನ ಆರಂಭಿಸಿದೆ‌. ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ದುರಂತಕ್ಕೆ ಕಡಿವಾಣ ಹಾಕುವುದು ಈ ಯೋಜನೆಯ ಉದ್ದೇಶ. ಅದೇ ಪಥ ಶಿಸ್ತು ಅಂತಾ. ದಾವಣಗೆರೆ ಜಿಲ್ಲೆಯಲ್ಲಿ ಆರು ಲೈನ್ ಹೆದ್ದಾರಿ ಇದೆ. ಆ ಕಡೆ ಮೂರು ಲೈನ್ ಈ ಕಡೆ ಮೂರು ಲೈನ್. ಈಗ ಹೊಸ ನಿಯಮದ ಪ್ರಕಾರ ಹೆಚ್ಚು ವೇಗವಾಗಿ ಹೋಗುವ ಕಾರ್ ಸೇರಿದಂತೆ ನಾಲ್ಕು ಚಕ್ರದ ವಾಹನಗಳಿಗೆ ಒಳ ಪಥ ಅಂದ್ರೆ ಇನ್ನರ್ ಲೈನ್ ನಿಗದಿ ಮಾಡಲಾಗಿದೆ. ಈ ಲೈನ್ ನಲ್ಲಿ ಭಾರಿ ವಾಹನಗಳು ಬರುವಂತಿಲ್ಲ. ಲಾರಿ ಬಸ್ಸು, ಟ್ಯಾಂಕರ್ ಸೇರಿದಂತೆ ಭಾರಿ ವಾಹನಗಳು ಸೆಕೆಂಡ್ ಲೈನ್ ನಲ್ಲಿ ಅಂದ್ರೆ ಔಟರ್ ಲೈನ್ ನಲ್ಲಿ ಹೋಗಬೇಕು. ಇದನ್ನ ಉಲ್ಲಂಘನೆ ಮಾಡಿದ್ರೆ ಐದು ನೂರು ರೂಪಾಯಿ ದಂಡ ಖಚಿತ.

ಹೆದ್ದಾರಿಯಲ್ಲಿ ದುರಂತ ತಪ್ಪಿಸಲು ಹಾಗೂ ಭಾರಿ ವಾಹನಗಳು ನಿಧಾನವಾಗಿ ಚಲಿಸುತ್ತವೆ. ಕಾರ್ ಗಳು ವೇಗವಾಗಿ ನುಸುಳಿಕೊಂಡು ಹೋಗುತ್ತವೆ. ಆಗ ದುರಂತಗಳು ಸಂಭವಿಸುತ್ತವೆ. ಹೊಸ ನಿಯಮದ ಪ್ರಕಾರ ಎರಡನೇ ಲೈನ್ ನಲ್ಲಿ ಮಾತ್ರ ಭಾರಿ ವಾಹನಗಳು‌ ಚಲಿಸಬೇಕು. ವೇಗವಾಗಿ ಹೋಗುವ ನಾಲ್ಕು ಚಕ್ರದ ವಾಹನಗಳಿಗೆ ಇನ್ನರ್ ಲೈನ್ ಮೀಸಲು ಎಂದರು.

ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣ ನಾಮಕರಣ ಗೊಂದಲಕ್ಕೆ ತೆರೆ; ರಾಷ್ಟಕವಿ ಕವಿ ಕುವೆಂಪು ಹೆಸರಿಡುವ ಬಗ್ಗೆ ಕೇಂದ್ರಕ್ಕೆ ಖುದ್ದು ಸಿಎಂ ಶಿಫಾರಸು

ಹೇಗೆ ಪತ್ತೆ ದಂಡ ಕಟ್ಟುವ ವಿಧಾನ ಹೇಗೆ?

ದಾವಣಗೆರೆ ಜಿಲ್ಲೆಯಲ್ಲಿ ಇದು ಪೈಲೆಟ್ ಪ್ರಾಜೆಕ್ಟ್ ಆಗಿ ಶುರುವಾಗಿದೆ‌. ಇಲ್ಲಿ ಅನುಷ್ಠಾನ ಆಗಿದ್ದನ್ನ ನೋಡಿ ಮುಂದೆ ಎಲ್ಲ ಕಡೆ ಈ ಪದ್ದತಿ ವಿಸ್ತಾರ ಆಗಲಿದೆ. ಅಂದ್ರೆ ದಾವಣಗೆರೆ ಜಿಲ್ಲೆಯ ಹೆಬ್ಬಾಳ್ ಬಳಿ ಟೋಲ್ ಗೇಟ್ ಇದೆ. ಅದು ಬಿಟ್ಟರೇ ಹಾವೇರಿ ಜಿಲ್ಲೆ ಆರಂಭದಲ್ಲಿ ಚಳಗೆರೆ ಬಳಿ ಟೋಲ್ ಗೇಟ್ ಇದೆ. ಈ ಎರಡು ಟೋಲ್ ಗಳ ನಡುವೆ 65 ಕಿಲೋಮೀಟರ್ ದೂರವಿದೆ. ಈ ನಡುವೆ ಒಂಬತ್ತು ಕಡೆ ಸ್ವಯಂ ಚಾಲಿತ ಕ್ಯಾಮರಾ ( ಅಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನೈಷನ್ ಕ್ಯಾಮರಾ) ಅಳವಡಿಸಲಾಗಿದೆ. ಬೃಹತ್ ವಾಹನಗಳು ಪಥ ಶಿಸ್ತು ಉಲ್ಲಂಘಿಸಿದ್ರೆ ಆ ವಾಹನ ನಂಬರ್, ಸ್ಥಳ ಹಾಗೂ ಜಿಪಿಎಸ್ ಲೋಕೇಷನ್ ಇರುವ ಚಿತ್ರಗಳನ್ನ ಟೋಲ್ ಗೇಟ್ ನಲ್ಲಿ ಇರುವ ಮಲ್ಟಿ ಫಂಕ್ಷನಲ್ ಡಿವೈಸ್ ಗೆ ರವಾನಿಸುತ್ತದೆ. ಪಥ ಶಿಸ್ತು ಉಲ್ಲಂಘಿಸಿದ ವಾಹನ ಟೋಲ್ ಗೇಟ್ ಗೆ ಬಂದ ಬಳಿಕ ದಂಡ ವಿಧಿಸಲಾಗುತ್ತದೆ‌. ಟೋಲ್ ತಪ್ಪಿಸಿಕೊಂಡು ಮತ್ತೊಂದು ಟೋಲ್ ಗೆ ಹೋದ್ರು ಸಹ ಅಲ್ಲಿಯೂ ದಂಡ ವಿಧಿಸಲಾಗುತ್ತದೆ. ಇದು ಮುಖ್ಯವಾಗಿ ಬೃಹತ್ ವಾಹನಗಳಿಗೆ ಸೂಕ್ತ ಎಚ್ಚರಿಕೆ, ಜೊತೆಗೆ ದುರಂತ ತಪ್ಪಿಸುವ ಉದ್ದೇಶ. ಒಂಬತ್ತು ಕ್ಯಾಮರಾಗಳು ಇದ್ದ ಹಿನ್ನೆಲೆ ಹೆದ್ದಾರಿ ದರೋಡೆಯಂತಹ ಪ್ರಕರಣಗಳು ಸಹ ನಿಯಂತ್ರಣಕ್ಕೆ ಬರುವುದು ಖಚಿತ‌ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:50 am, Tue, 21 February 23

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್