AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನು 1 ತಿಂಗಳ ಕಾಲ ನಾನ್ ವೆಜ್ ಜಾತ್ರೆ: ಇದು ಲೋಕ ಚುನಾವಣೆ ಸ್ಪೆಷಲ್ ಅಲ್ಲ; ದಾವಣಗೆರೆ ದುರ್ಗಾಂಭಿಕಾ ದೇವಿ ಲೋಕಲ್​​ ಜಾತ್ರೆ ಗಮ್ಮತ್ತು!

ಕನ್ನಡದ ಬಹುತೇಕ ಚಲನ ಚಿತ್ರಗಳಲ್ಲಿ ದಾವಣಗೆರೆ ದುರ್ಗಾಂಭಿಕಾ ದೇವಿ ಜಾತ್ರೆಯ ಪ್ರಸ್ತಾಪ ಇದೆ. ಲಕ್ಷಾಂತರ ಕುರಿಗಳನ್ನ ಇಲ್ಲಿ ಬಲಿ ಕೊಡಲಾಗುತ್ತಿದ್ದು ನಿಜಕ್ಕೂ ಇದು ನಾನ್ ವೆಜ್ ಜಾತ್ರೆ ಅಂತಲೇ ಪ್ರಸಿದ್ಧಿ ಪಡೆದಿದೆ. ನಿರಂತರವಾಗಿ ಒಂದು ತಿಂಗಳ ಕಾಲ ನಡೆಯುವ ಜಾತ್ರೆ ಇದಾಗಿದೆ.

ಇನ್ನು 1 ತಿಂಗಳ ಕಾಲ ನಾನ್ ವೆಜ್  ಜಾತ್ರೆ: ಇದು ಲೋಕ ಚುನಾವಣೆ ಸ್ಪೆಷಲ್ ಅಲ್ಲ; ದಾವಣಗೆರೆ ದುರ್ಗಾಂಭಿಕಾ ದೇವಿ ಲೋಕಲ್​​ ಜಾತ್ರೆ ಗಮ್ಮತ್ತು!
ದಾವಣಗೆರೆ ದುರ್ಗಾಂಭಿಕಾ ದೇವಿ ಜಾತ್ರೆ,1 ತಿಂಗಳು ನಾನ್ ವೆಜ್ ಗಮ್ಮತ್ತು!
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​

Updated on: Mar 16, 2024 | 12:39 PM

ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ದಾವಣಗೆರೆ ದುರ್ಗಾಂಭಿಕಾ ಜಾತ್ರೆ (Davangere Durgambhika Devi local fair) ಕೂಡಾ ಒಂದು. ಇಂತಹ ಜಾತ್ರೆಯ ಗಮ್ಮತ್ತೆ ಬೇರೆ. ದೇವಿಗೆ ಅಧಿಕೃತವಾಗಿ ಕೋಣ ಬಲಿಯಾದ ಬಳಿಕ ಇಡೀ ನಗರದಲ್ಲಿ ಮಸಾಲೆ ವಾಸನೆ ಶುರುವಾಗುತ್ತಿದೆ. ಇನ್ನೊಂದು ಕಡೆ ಇಲ್ಲಿ ದೇವಿಗೆ ಹರಕೆ ತೀರಿಸುವ ಪ್ರಸಿದ್ಧ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು ಪ್ರತಿಯೊಬ್ಬರ ಮನೆ ಮುಂದೆ ಒಂದು ಕುರಿ ಕಂಡು ಬತುತ್ತಿದೆ. ಇಲ್ಲಿದೆ ನೋಡಿ ನಾನ್ ವೆಜ್ ಜಾತ್ರೆಯ ಸ್ಟೋರಿ. ನೂರಾರು ಜನ ಕೈಯಲ್ಲಿ ಪೂಜಾ ಸಾಮಗ್ರಿ ಹಿಡಿದುಕೊಂಡು ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಕಿಲೋ ಮೀಟರ್ ಗಂಟಲೇ ಕ್ಯೂ ಇದೆ. ಇನ್ನೂ ಅಸಲಿ ಜಾತ್ರೆಯೇ ಆರಂಭವಾಗಿಲ್ಲ. ಜನ ದೇವಿ ದರ್ಶನಕ್ಕೆ ನಾ ಮುಂದು ನೀ ಮುಂದು ಎನ್ನುತ್ತಿದ್ದರು. ಪ್ರಾಣಿ ಬಲಿ ನಿಷೇಧ ಅಂತಾ ಜಿಲ್ಲಾಡಳಿತ ಪ್ರತಿ ವರ್ಷ ತನ್ನ ಕೆಲ್ಸಾ ತಾ ಮಾಡುತ್ತದೆ. ಆದ್ರೆ ದೇವಿಗೆ ಸಲ್ಲಬೇಕಾದ ಗೌರವ ಭಕ್ತರು ಸಲ್ಲಿಸುತ್ತಲೇ ಇರುತ್ತಾರೆ (non veg village fair).

ಇದು ಪ್ರಸಿದ್ಧ ದಾವಣಗೆರೆ ದುರ್ಗಾಂಭಿಕಾ ದೇವಿಯ ಜಾತ್ರೆಯ ಮಹಿಮೆ. ಬೆಳಿಗ್ಗೆ ಎರಡು ಗಂಟೆವರೆಗೂ ಸಾವಿರಾರು ಮಕ್ಕಳು ಮಹಿಳೆಯರು ಸೇರಿ ದೇವಿಗೆ ಹಕರೆ ತೀರಿಸಿದರು. ಬೆಣ್ಣೆ ನಗರಿ ದಾವಣಗೆರೆ ಇನ್ನೊಂದು ವಾರ ಬೆಣ್ಣೆ ವಾಸನೆಗಿಂತ ಮಟನ್ ಮಸಾಲೆ ವಾಸನೆ ಬರುತ್ತದೆ. ಕಾರಣ ಇಲ್ಲಿ ನೋಡಿ ಬಹುತೇಕ ಮನೆಗಳ ಮುಂದೆ ಕುರಿಗಳು ಬಂದಿವೆ. ಇವು ದೇವಿಗೆ ಅರ್ಪಿಸಲು ತಂದ ಕುರಿಗಳು.

Also Read: ಜನ್ರ ಮುಂದೆ ತಮ್ಮ ದೈತ್ಯಾಕಾರ ದೇಹಗಳ ಪ್ರದರ್ಶಿಸಿ, ಶಕ್ತಿ ಪ್ರದರ್ಶನ ಮಾಡಿ, ಪ್ರಶಸ್ತಿ ಹಣ ಬಾಚಿಕೊಂಡ ನೂರಾರು ದೇಹದಾರ್ಢ್ಯ ಪಟುಗಳು , ಯಾವೂರಲ್ಲಿ?

ಮುಂದಿನ ಮಂಗಳವಾರ ದೊಡ್ಡ ಜಾತ್ರೆ ದೇವಿಗೆ ಕೊಣದ ಅರ್ಪಣೆ ಆಗುತ್ತದೆ. ಇದಾದ ಬಳಿಕ ಮರು ದಿನ ಬುಧವಾದ ಕುರಿ ಗಳನ್ನ ದೇವಿಗೆ ಅರ್ಪಿಸುತ್ತಾರೆ. ಆಗ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಕುರಿ ಕೋಳಿ ತಂದು ಅಡುಗೆ ಮಾಡುತ್ತಾರೆ. ಒಂದು ತಿಂಗಳ ಕಾಲ ನಿರಂತರವಾಗಿ ನಡೆಯುವ ಜಾತ್ರೆ ಪ್ರಸಿದ್ಧಿ ಪಡೆದಿದೆ. ವಿಶೇಷವಾಗಿ ದಾವಣಗೆರೆಯ ಹೆಣ್ಣು ಮಕ್ಕಳು ಇಲ್ಲಿಯೇ ಇದ್ದರೂ ಎರಡು ವರ್ಷಕ್ಕೊಮ್ಮೆ ಬಂದು ಹರಕೆ ತೀರಿಸುವುದು ಕಡ್ಡಾಯ ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ ಎಂದ್ರೆ ತಪ್ಪಾಗಲಿಕ್ಕಿಲ್ಲ.

ಕನ್ನಡದ ಬಹುತೇಕ ಚಲನ ಚಿತ್ರಗಳಲ್ಲಿ ದಾವಣಗೆರೆ ದುರ್ಗಾಂಭಿಕಾ ದೇವಿ ಜಾತ್ರೆಯ ಪ್ರಸ್ತಾಪ ಇದ್ದೆ ಇರುತ್ತದೆ. ಮೇಲಾಗಿ ಇಲ್ಲಿ ಸಂಗೀತ, ನಾಟಕ, ವಿವಿಧ ಸ್ಪರ್ಧೆ ಹೀಗೆ ಇಡೀ ನಗರವೇ ಒಂದು ತಿಂಗಳ ಕಾಲ ನಿರಂತರವಾಗಿ ಸಂಭ್ರಮದಲ್ಲಿ ಇರುತ್ತದೆ. ಸಸ್ಯಾಹಾರಿಗಳು ಸೋಮವಾರ ದೇವಿಗೆ ಏಡಿ ಅರ್ಪಿಸಿದರೇ, ಮಾಂಸಾಹಾರಿಗಳು ಬುಧವಾರ ಎಡೆ ಅರ್ಪಿಸುತ್ತಾರೆ. ಹೀಗಾಗಿ ಲಕ್ಷಾಂತರ ಕುರಿಗಳನ್ನ ಇಲ್ಲಿ ಬಲಿ ಕೊಡಲಾಗುತ್ತಿದ್ದು ನಿಜಕ್ಕೂ ಇದು ನಾನ್ ವೆಜ್ ಜಾತ್ರೆ ಅಂತಲೇ ಪ್ರಸಿದ್ಧಿ ಪಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ