ರಜೆ ವಿಚಾರವೂ ವಿವಾದಕ್ಕೆ ಕಾರಣವಾಗಿದೆ, ಏನಿದು ದಸರಾ ರಜೆ ವಿವಾದ? ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಿಕ್ಷಕರು ಬರೆದ ಪತ್ರದಲ್ಲಿ ಏನಿದೆ?

ಬೇರೆ ಇಲಾಖೆಯ ನೌಕರರಿಗೆ 30 ದಿನಗಳ ರಜೆ ಇದ್ರೆ, ಶಿಕ್ಷಕರಿಗೆ ಹತ್ತು ಗಳಿಕೆ ರಜೆಯಷ್ಟೆ. ಇದ್ಯಾವ ನ್ಯಾಯ ಎಂದು ಶಿಕ್ಷಕರ ಸಂಘ ಆಕ್ರೋಶ ಹೊರಹಾಕಿದೆ. ಶಿಕ್ಷಣ ಇಲಾಖೆ ಕಳೆದ ವರ್ಷ ಕೊರೊನಾ ಹೆಸರಲ್ಲಿ ರಜೆಯ ಅವಧಿ ವಿಸ್ತರಣೆ ಬಗ್ಗೆ ಮೌಖಿಕವಾಗಿ ಶಿಕ್ಷಕರ ಸಂಘಕ್ಕೆ ತಿಳಿಸಿತ್ತು.ಆದ್ರೆ ಈ ವರ್ಷವೂ ರಜೆಯ ಅವಧಿಯನ್ನ ವಿಸ್ತರಣೆ ಮಾಡಿಲ್ಲ, ಶಿಕ್ಷಕರ ರಜೆಯನ್ನ ಸುಖಾಸುಮ್ಮನೆ ಕಡಿತ ಮಾಡಲಾಗಿದೆ - ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ರಜೆ ವಿಚಾರವೂ ವಿವಾದಕ್ಕೆ ಕಾರಣವಾಗಿದೆ, ಏನಿದು ದಸರಾ ರಜೆ ವಿವಾದ? ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಿಕ್ಷಕರು ಬರೆದ ಪತ್ರದಲ್ಲಿ ಏನಿದೆ?
ದಸರಾ ರಜೆ ವಿಚಾರವೂ ವಿವಾದಕ್ಕೆ ಕಾರಣ, ಮುಖ್ಯಮಂತ್ರಿಗೆ ಪತ್ರ ಬರೆದ ಶಿಕ್ಷಕರು
Follow us
| Updated By: ಸಾಧು ಶ್ರೀನಾಥ್​

Updated on:Oct 17, 2023 | 10:06 AM

ಇಡೀ ರಾಜ್ಯದಲ್ಲಿ ಶಾಲೆಗಳಿಗೆಲ್ಲ ರಜೆ ಇದೆ. ಮಕ್ಕಳು ರಜೆಯ ಖುಷಿಯಲ್ಲಿದ್ದಾರೆ.ದಸರಾ ರಜೆಯನ್ನ ಮಕ್ಕಳು ಎಂಜಾಯ್ ಮಾಡ್ತಿದಾರೆ.ಆದ್ರೆ ಇದೀಗ ದಸರಾ ರಜೆಯ ವಿಚಾರವೂ ಸುದ್ದಿಯಾಗಿದೆ.ಮಕ್ಕಳು ಎಂಜಾಯ್ ಮಾಡ್ತಿದ್ರೆ ಶಿಕ್ಷಕರು ಸುದ್ದಿಯಾಗಿದ್ದಾರೆ.ಶಿಕ್ಷಕರು ಸುದ್ದಿಯಾಗೋಕೆ ಕಾರಣ ಅದೇ ರಜೆ.ಎಸ್ ದಸರಾ ರಜೆ (Navratri) ಅವಧಿ ಕಡಿತ ಮಾಡಲಾಗಿದೆ ಎಂದು ಶಿಕ್ಷಕರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.ದಸರಾ ರಜೆಯನ್ನ ವಿಸ್ತರಣೆ ಮಾಡಬೇಕೆಂದು ಹುಬ್ಬಳ್ಳಿ (Hubballi) ಶಿಕ್ಷಕರು ಪತ್ರ ಬರೆದಿದ್ದಾರೆ.ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಶಿಕ್ಷಕರು ಪತ್ರ ಬರೆದಿದ್ದಾರೆ. ದಸರಾ ರಜೆ ವಿಚಾರವೂ ಇದೀಗ ವಿವಾದಕ್ಕೆ ಕಾರಣವಾಗಿದೆ…ಅಷ್ಟಕ್ಕೂ ಏನಿದು ರಜಾ (Holiday) ವಿವಾದ (Controversy) ಅಂತೀರಾ ಈ ಸ್ಟೋರಿ ನೋಡಿ…ಒಂದು ಕಡೆ ರಜೆ ವಿಚಾರವಾಗಿ ಶಿಕ್ಷಕರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಶಿಕ್ಷಕರಿಂದ ಪತ್ರ . ಮತ್ತೊಂದು ಕಡೆ ಮಾಜಿ ಸಿಎಂ ಬಳಿಯೂ ಮನವಿ ಸಲ್ಲಿಸಿದ ಶಿಕ್ಷಕರು. ರಜೆ ವಿಸ್ತರಣೆ ಮಾಡಿ ಎಂದು ಅಳಲು ತೋಡಿಕೊಳ್ತಿರೋ ಶಿಕ್ಷಕರು. ಇವೆಲ್ಲ ವಿದ್ಯಮಾನಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ.

ಹುಬ್ಬಳ್ಳಿ ಶಿಕ್ಷಕರು ಇದೀಗ ರಜೆಗಾಗಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಎಸ್ ಇದಕ್ಕೆಲ್ಲ ಕಾರಣ ದಸರಾ ರಜೆ, ಮಕ್ಕಳಿಗೆ ಇದೀಗ ದಸರಾ ರಜೆಯನ್ನ ನೀಡಲಾಗಿದೆ. ಆದ್ರೆ ಇದೇ ತಿಂಗಳು 25 ಕ್ಕೆ ಮತ್ತೆ ಶಾಲೆ ಆರಂಭ ಎಂದು ಇಲಾಖೆ ಹೇಳಿದೆ.ಆದ್ರೆ ದಸರಾ ಹಬ್ಬ ಇರೋದು 24 ಕ್ಕೆ.ಒಂದು ದಿನದಲ್ಲಿ ಮಕ್ಕಳು ಹೇಗೆ ಶಾಲೆಗೆ ಬರೋಕೆ ಸಾಧ್ಯ ಅನ್ನೋ ಪ್ರಶ್ನೆ ಇವರದಾಗಿದೆ.

ಶಿಕ್ಷಣ ಇಲಾಖೆ ದಸರಾ ರಜೆಯನ್ನ ಕಡಿತ ಮಾಡಿದೆಯಂತೆ.ಕೊರೊನಾ ಸಮಯದಲ್ಲಿ ರಜೆ ಕಡಿತ ಮಾಡಿತ್ತು.ಆದ್ರೆ ಅದನ್ನ ಇನ್ನು ಸರಿ ಮಾಡಿಲ್ಲ.ಮೊದಲು ದಸರಾ ರಜೆ ಒಂದು ತಿಂಗಳಿತ್ತು.ಇದೀಗ ಕೇವಲ 15 ದಿನಕ್ಕೆ ರಜೆಯನ್ನ ಕಡಿತ ಮಾಡಿದೆ.ದಸರಾ ಹಬ್ಬ ಮರುದಿನವೇ ಶಾಲೆ ಆರಂಭ ಮಾಡ್ತಿರೋದು ಮಕ್ಕಳಿಗೆ ಒತ್ತಡ ಆಗತ್ತೆ,ಮಕ್ಕಳು ಹಬ್ಬಕ್ಕೆ ಹೋಗಿರ್ತಾರೆ.ಆ ಕಾರಣಕ್ಕೆ ದಸರಾ ರಜೆಯನ್ನ ವಿಸ್ತರಣೆ ಮಾಡಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಶಿಕ್ಷಕರು ಪತ್ರ ಬರೆದಿದ್ದಾರೆ.

ಇನ್ನು ಶಿಕ್ಷಣ ಇಲಾಖೆ ಕಳೆದ ವರ್ಷ ರಜೆಯ ಅವಧಿ ವಿಸ್ತರಣೆ ಬಗ್ಗೆ ಮೌಖಿಕವಾಗಿ ಶಿಕ್ಷಕರ ಸಂಘಕ್ಕೆ ತಿಳಿಸಿತ್ತು.ಆದ್ರೆ ಈ ವರ್ಷವೂ ರಜೆಯ ಅವಧಿಯನ್ನ ವಿಸ್ತರಣೆ ಮಾಡಿಲ್ಲ,ಇದಲ್ಲದೆ ಶಿಕ್ಷಕರ ರಜೆಯನ್ನ ಸುಖಾಸುಮ್ಮನೆ ಕಡಿತ ಮಾಡಲಾಗಿದೆ ಅನ್ನೋ ಆರೋಪವೂ ಇದೆ. ಈ ಕಾರಣಕ್ಕೆ ಶಿಕ್ಷಕರ ಒಕ್ಕೂಟ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ರಜೆಯ ಅವಧಿ ವಿಸ್ತರಣೆ ಮಾಡಲು ಮನವಿ ಮಾಡಿದ್ರು.

ದಸರಾ ರಜೆ ಅಂದ ತಕ್ಷಣ ನಮಗೆಲ್ಲ ಹಬ್ಬಗಳ ನೆನಪು,ಹಬ್ಬಕ್ಕಾಗಿಯೇ ದಸರಾ ರಜೆ ಕೊಡಲಾಗಿತ್ತು,ಆದ್ರೆ ಇದೀಗ ಹಬ್ಬ ಮುಗಿದ ಮರುದಿನವೇ ಶಾಲೆ ಆರಂಭ ಮಾಡ್ತಿರೋದು ಗ್ರಾಮೀಣ ಭಾಗದ ಮಕ್ಕಳಿಗೆ ತೊಂದರೆ ಉಂಟಾಗತ್ತೆ. ಬಹುತೇಕ ಮಕ್ಕಳು ರಜೆಗಾಗಿ ಊರಿಗೆ ಹೋಗಿರ್ತಾರೆ.ಅವರಿಗೆ ಮರುದಿನವೇ ಶಾಲೆಗೆ ಬರೋದಿಕ್ಕೆ ಆಗಲ್ಲ.ಆ ಕಾರಣಕ್ಕೆ ಶಿಕ್ಷಕರ ಸಂಘ ರಜೆಯ ಅವಧಿಯನ್ನ ವಿಸ್ತರಣೆ ಮಾಡಲು ಮುಖ್ಯಮಂತ್ರಿ, ಶಿಕ್ಷಣ ಸಚಿವರ ಕದ ತಟ್ಟಿದೆ. 24 ರಂದು ಹಬ್ಬ ಇದ್ರು,25 ಕ್ಕೆ ಶಾಲೆ ಆರಂಭವಾಗಿರೋ ಕಾರಣಕ್ಕೆ ಮಕ್ಕಳು ಒತ್ತಡದಲ್ಲಿರುತ್ತವೆ, ಹಬ್ಬ ಆಚರಣೆಯೂ ಆಗಲ್ಲ ಎಂದು ಶಿಕ್ಷಕರ ಸಂಘ ಜಗದೀಶ್ ಶೆಟ್ಟರ್ ಬಳಿ ಮನವಿ ಮಾಡಿಕೊಂಡರು.ಬೇರೆ ಇಲಾಖೆಯ ನೌಕರರಿಗೆ 30 ರಜೆ ಇದ್ರೆ ,ಶಿಕ್ಷಕರಿಗೆ ಮಾತ್ರ ಹತ್ತು ಗಳಿಕೆ ರಜೆಯಷ್ಟೆ. ಇದ್ಯಾವ ನ್ಯಾಯ ಎಂದು ಶಿಕ್ಷಕರ ಸಂಘ ಆಕ್ರೋಶ ಹೊರಹಾಕಿದ್ರು…

ಒಟ್ಟಾರೆ ರಾಜ್ಯಾದ್ಯಂತ ಶಾಲೆಗಳು ರಜೆ ಇದ್ರು ಶಿಕ್ಷಕರು ಸುದ್ದಿಯಲ್ಲಿದ್ದಾರೆ. ಶಿಕ್ಷಕರಿಗೊಂದು ನ್ಯಾಯ ಬೇರೆ, ಇಲಾಖೆಯ ನೌಕರರಿಗೊಂದು ನ್ಯಾಯನಾ ಎಂದು ಶಿಕ್ಷಕರ ಸಂಘ ಅಸಮಾಧಾನ ಹೊರ ಹಾಕಿದೆ.ಈ ತಿಂಗಳು 31 ರ ವರೆಗೂ ರಜೆ ಅವಧಿ ವಿಸ್ತರಣೆ ಮಾಡಲು ಶಿಕ್ಷಕರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು,ಶಿಕ್ಷಣ ಇಲಾಖೆ ರಜೆ ವಿಸ್ತರಣೆ ಮಾಡತ್ತಾ,ಆಥವಾ ಈಗಿರೋ ಆದೇಶ ಮುಂದುವರೆಸುತ್ತಾ ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:02 am, Tue, 17 October 23