AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ಮಳೆ ಬಾರದೇ ಒಣಗಿ ಹೋದ ಕಡಲೆ: ಕೈಕೊಟ್ಟ ಹಿಂಗಾರು, ರೈತ ಕಂಗಾಲು

Dharwad News: ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಮುಂಗಾರು ಕೈಕೊಟ್ಟ ಬಳಿಕ ಹಿಂಗಾರು ಮಳೆಯಾದರೂ ಆಗುತ್ತೆ ಅಂದುಕೊಂಡಿದ್ದ ರೈತರಿಗೆ ನಿರಾಸೆಯಾಗಿದೆ. ಏಕೆಂದರೆ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಾಗಲೆಲ್ಲಾ ಹಿಂಗಾರು ಮಳೆ ಕೈ ಹಿಡಿಯುತ್ತಿತ್ತು, ಆದರೆ ಈ ಬಾರಿ ಹಿಂಗಾರು ಮಳೆ ಕೂಡ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿ ಕಂಗಾಲಾಗಿ ಹೋಗಿದ್ದಾರೆ.

ಧಾರವಾಡ: ಮಳೆ ಬಾರದೇ ಒಣಗಿ ಹೋದ ಕಡಲೆ: ಕೈಕೊಟ್ಟ ಹಿಂಗಾರು, ರೈತ ಕಂಗಾಲು
ಕಡಲೆ ಬೆಳೆ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on: Nov 16, 2023 | 8:04 PM

Share

ಧಾರವಾಡ, ನವೆಂಬರ್​​​ 16: ಜಿಲ್ಲೆಯ ಪ್ರಮುಖ ಬೆಳೆಗಳ ಪೈಕಿ ಕಡಲೆ (Chickpeas) ಕೂಡ ಒಂದು. ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಹಿಂಗಾರು ಹಂಗಾಮಿನಲ್ಲಿ ಕಡಲೆ ಬೆಳೆಯುತ್ತಾರೆ. ಕಡಿಮೆ ಶ್ರಮ ಹಾಗೂ ಕಡಿಮೆ ನಿರ್ವಹಣೆ ಈ ಬೆಳೆಗೆ ಸಾಕು. ಅಲ್ಲದೇ ಕೊನೆ ಕೊನೆಗೆ ಚಳಿಯ ಮೇಲೆಯೇ ಈ ಬೆಳೆ ಕೈಗೆ ಬಂದು ಬಿಡುತ್ತೆ. ಇದೇ ಕಾರಣಕ್ಕೆ ಮುಂಗಾರು ಕೈಕೊಟ್ಟಿದ್ದಕ್ಕೆ ಹಿಂಗಾರಿನಲ್ಲಾದರೂ ಈ ಬೆಳೆ ಕೈ ಹಿಡಿಯಬಹುದು ಅಂದುಕೊಂಡು ಕಡಲೆ ಬಿತ್ತನೆ ಮಾಡಿದ ರೈತರಿಗೆ ಇದೀಗ ನಿರಾಸೆ ಮೂಡಿದೆ.

ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಮುಂಗಾರು ಕೈಕೊಟ್ಟ ಬಳಿಕ ಹಿಂಗಾರು ಮಳೆಯಾದರೂ ಆಗುತ್ತೆ ಅಂದುಕೊಂಡಿದ್ದ ರೈತರಿಗೆ ನಿರಾಸೆಯಾಗಿದೆ. ಏಕೆಂದರೆ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಾಗಲೆಲ್ಲಾ ಹಿಂಗಾರು ಮಳೆ ಕೈ ಹಿಡಿಯುತ್ತಿತ್ತು, ಆದರೆ ಈ ಬಾರಿ ಹಿಂಗಾರು ಮಳೆ ಕೂಡ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿ ಕಂಗಾಲಾಗಿ ಹೋಗಿದ್ದಾರೆ.

ಇದನ್ನೂ ಓದಿ: ಅದೊಂದಿದ್ದರೆ ಸಾಕಂತೆ ಪಡಿತರ ಬೇಡವಂತೆ… ಧಾರವಾಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಸಾವಿರಾರು ಜನ ಅನೇಕ ತಿಂಗಳಿಂದ ರೇಷನ್ ಪಡೆದೇ ಇಲ್ಲ!

ಅದರಲ್ಲೂ ಅನೇಕ ಕಡೆಗಳಲ್ಲಿ ಹಿಂಗಾರು ನಂಬಿ ಅನೇಕ ಕಡೆಗಳಲ್ಲಿ ಬಿತ್ತನೆ ಕಾರ್ಯ ಮಾಡಿದ್ದರು. ಅದರಲ್ಲೂ ಕಡಿಮೆ ನಿರ್ವಹಣೆ ಬೇಡುವ ಕಡಲೆ ಬಿತ್ತನೆ ಅನೇಕ ಕಡೆಗಳಲ್ಲಿ ಆಗಿತ್ತು. ಆದರೆ ಇದೀಗ ಅಂಥ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೇ ಒಂದು ಮಳೆ ಬಂದಿದ್ದರೂ ಸಾಕಿತ್ತು ಕಡಲೆ ಬೆಳೆ ಕೈಗೆ ಬರಲು. ಆದರೆ ಇದೀಗ ಎಲ್ಲವೂ ಮುಗಿದೇ ಹೋಗಿದೆ. ಒಂದು ಮಳೆ ಬಂದಿದ್ದರೆ ಮುಂದೆ ಚಳಿಯ ಮೇಲೆಯೇ ಕಾಳುಗಳು ಬಲಿತು, ಬೆಳೆ ಕೈಗೆ ಬರುತ್ತಿತ್ತು. ಆದರೆ ಮಳೆ ಬಾರದೇ ಗಿಡ ಒಣಗಿ ಹೋಗುತ್ತಿವೆ.

ಮುಂಗಾರು ಮಳೆಯಾಗದೇ ಭೂಮಿಯಲ್ಲಿ ತೇವಾಂಶವೇ ಇಲ್ಲದಾಗಿದೆ. ಮುಂಗಾರು ಮಳೆಯಾಗಿದ್ದರೆ ತೇವಾಂಶ ಉಳಿದುಕೊಂಡು, ಹಿಂಗಾರು ಮಳೆ ಕೊಂಚ ತಡವಾಗಿ ಬಂದಿದ್ದರೂ ನಡೆಯುತ್ತಿತ್ತು. ಆದರೆ ಮುಂಗಾರು ಮಳೆ ಕೈಕೊಟ್ಟು, ಇದೀಗ ಹಿಂಗಾರು ಕೂಡ ಕೈಕೊಟ್ಟಿದೆ. ಇದೆಲ್ಲದರ ಮೇಲೆ ಬಿಸಿಲಿನ ಪ್ರಮಾಣವೂ ಹೆಚ್ಚಾಗಿದೆ. ಹೀಗಾಗಿ ನೀರಿನ ಅಂಶ ಇಲ್ಲದೇ ಬೆಳೆ ಒಣಗುತ್ತಿರೋದು ಒಂದು ಕಡೆಯಾದರೆ, ವಿವಿಧ ರೋಗಗಳು ಬೆಳೆಗೆ ಮುತ್ತಿಕೊಳ್ಳುತ್ತಿರೋದು ಮತ್ತೊಂದು ಕಡೆ.

ಇದನ್ನೂ ಓದಿ: ಸಂತೋಷ-ಸಮಾಧಾನದ ಸಂಗತಿ! ಮುಂಗಾರು ಹಿಂಗಾರು ಕೈಕೊಟ್ಟರೂ ಆ ರೈತ ಮಾಡಿದ ಸೂಪರ್​ ಐಡಿಯಾಗೆ ಬಂಪರ್​ ಬೆಳೆ- ಮಹಿಳಾ ಕೃಷಿ ಕಾರ್ಮಿಕರಿಗೆ ಕೈತುಂಬಾ ಕೆಲಸ

ಪ್ರತಿವರ್ಷ ಉತ್ತಮ ಬೆಳೆ ಪಡೆಯುತ್ತಿದ್ದ ರೈತರಿಗೆ ಈ ಬಾರಿ ಎಕರೆಗೆ ಹತ್ತು ಕೇಜಿ ಕಾಳು ಕೂಡ ಬರೋದಿಲ್ಲ ಅನ್ನೋ ಸ್ಥಿತಿ ಬಂದಿದೆ. ಹೊಲ ಸಿದ್ಧ ಮಾಡಿಕೊಂಡು, ಬಿತ್ತನೆ ಕೆಲಸಕ್ಕೆ ಖರ್ಚು ಮಾಡಿದ್ದೂ ಕೂಡ ಈ ಬಾರಿ ಬರೋದಿಲ್ಲ. ಇದರಿಂದಾಗಿ ಮುಂದೆ ಏನೂ ಮಾಡದೇ ರೈತರು ಹೊಲಗಳಿಗೆ ಹೋಗೋದನ್ನೇ ಬಿಟ್ಟಿದ್ದಾರೆ.

ಧಾರವಾಡ ಜಿಲ್ಲೆಯ ಅನೇಕ ಭಾಗಗಳಲ್ಲಿ ಕಪ್ಪು ಮಣ್ಣು ಇರೋದ್ರಿಂದ ರೈತರು ಹಿಂಗಾರು ಮಳೆ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದಾರೆ. ಒಂದೆರಡು ಮಳೆಯಾಗಿಬಿಟ್ಟರೆ ರೈತರಿಗೆ ಬೆಳೆ ಕೈಗೆ ಸಿಕ್ಕುಬಿಡುತ್ತೆ. ಆದರೆ ಈ ಬಾರಿ ಮಾತ್ರ ಮುಂಗಾರಿನಲ್ಲಿಯೂ ಮಳೆ ಬರಲಿಲ್ಲ. ಇನ್ನು ಹಿಂಗಾರಿನಲ್ಲಿಯೂ ಮಳೆಯಾಗದೇ ರೈತರು ಕೈಸುಟ್ಟುಕೊಳ್ಳುವಂತಾಗಿರೋದು ವಿಪರ್ಯಾಸದ ಸಂಗತಿಯೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ