
ನವದೆಹಲಿ, (ಜುಲೈ 27): ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ನೇತೃತ್ವದಲ್ಲಿ ದೆಹಲಿಯಲ್ಲಿ (New Delhi) ನಡೆದ ಕರ್ನಾಟಕದ ಎಲ್ಲಾ ಸಂಸದರ ಸಭೆ (Karnataka MPs Meeting) ಅಂತ್ಯವಾಗಿದ್ದು, ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ 13 ಅಂಶಗಳ ಬಗ್ಗೆ ಚರ್ಚೆಯಾಗಿದೆ. 15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿಗಳ ಅನುದಾನ, ಬೆಂಗಳೂರಿನ STRR ಯೋಜನೆ, ಕೋಲಾರದಲ್ಲಿ ರೈಲ್ವೇ ಕೋಚ್ ಕಾರ್ಖಾನೆ ಸೇರಿದಂತೆ ಇತರೆ ರಾಜ್ಯದ ಬಾಕಿ ಇರುವ ಯೋಜನೆಗಳ ಬಗ್ಗೆ ಚರ್ಚಿಸಿದ್ದು, ಇವುಗಳ ಜಾರಿಗೆಗೆ ಒಗ್ಗಟ್ಟಾಗಿ ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ಹೇರಲು ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಈ ವಿಧೇಯಕಗಳಿಗೆ ಗೃಹ ಸಚಿವಾಲಯ ಹಾಗೂ ಸಂಬಂಧಿತ ಕೇಂದ್ರ ಸಚಿವಾಲಯಗಳೊಂದಿಗೆ ತ್ವರಿತ ಒಪ್ಪಿಗೆ ಕೊಡಿಸಬೇಕು ಎಂದು ಎಲ್ಲಾ ಸಂದರಿಗೆ ಡಿಕೆ ಶಿವಕುಮಾರ್ ಮವವಿ ಮಾಡಿದ್ದಾರೆ.
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ರಾಜ್ಯದ ಎಲ್ಲ ಸಂಸದರ ಸಭೆ ಕರೆದಿದ್ದರು ತೆರಿಗೆ ಹಂಚಿಕೆ ಸೇರಿ ಹಲವು ವಿಚಾರಗಳು ಚರ್ಚೆಗೆ ಬಂದಿತ್ತು. ಸಭೆಯಲ್ಲಿ ನಾನು ಒಂದು ಸಲಹೆ ನೀಡಿದ್ದೇನೆ. ಸಂಸತ್ ಅಧಿವೇಶನಕ್ಕೂ ಮುನ್ನ ಸಭೆ ನಡೆಸಲು ಹೇಳಿದ್ದೇನೆ. ಸಂಘರ್ಷ ಬೇಡ ಸಹಕಾರದಲ್ಲಿ ಕೆಲಸ ಮಾಡೋಣ ಎಂದು ಸಿಎಂ ಹೇಳಿದ್ದು, ರಾಜ್ಯದ ಹಿತಕ್ಕಾಗಿ ಸಹಕಾರ ನೀಡುವ ಭರವಸೆ ನೀಡಿದ್ದೇವೆ. ಕರ್ನಾಟಕ ತೆರಿಗೆ ಹಂಚಿಕೆ ಹೆಚ್ಚಾಗಿದೆ, ಮೂಲ ಸೌಕರ್ಯಗಳು, ನೀರಾವರಿ, ರೈಲ್ವೆಗೆ ಅನುದಾನವನ್ನ ಕೇಂದ್ರ ಸರ್ಕಾರ ಹೆಚ್ಚಿಸಿದೆ ಎಂದರು.
ಮೇಕೆದಾಟು ವಿಚಾರದಲ್ಲಿ ರಾಜಕೀಯ ಹೇಳಿಕೆ ನೀಡುವುದಿಲ್ಲ. ರಾಜ್ಯ ಪರಿಷ್ಕೃತ DPR ಕೊಡಬೇಕು, ಕಾವೇರಿ, ಗೋವಾವರಿ, ಕೃಷ್ಣಾ ನದಿಗಳನ್ನು ಸಂಪರ್ಕಿಸಬೇಕಿದೆ. ಜಲಾಶಯಗಳ ಹೂಳು ಎತ್ತಲು ಕೇಂದ್ರ ಕ್ರಮ ತೆಗೆದುಕೊಳ್ಳುತ್ತಿದೆ. ನಿಮ್ಮ ಸಹಕಾರ ಬೇಕು ಎಂದು ನಾವು ಕೇಳಿದ್ದೇವೆ. ಮೇಕೆದಾಟು ವಿಚಾರದಲ್ಲಿ ನಾವು ಸಹಕರಿಸಿದ್ದಕ್ಕೆ ಕೇಂದ್ರ ಸರ್ಕಾರದಿಂದ ರಾಜ್ಯದ ಪರವಾಗಿ ಉತ್ತರ ಬಂದಿದೆ. ಪರಿಷ್ಕೃತ ಡಿಪಿಆರ್ ಮಾಡಲು ಕೇಂದ್ರ ಸರ್ಕಾರ ಹೇಳಿದೆ. ನೀವು ತಮಿಳುನಾಡು ಸಿಎಂ ಜೊತೆಗೂ ಮಾತನಾಡಿ ಎಂದಿದ್ದೇವೆ. ಮಹದಾಯಿ ವಿಚಾರದಲ್ಲಿ ಪರಿಸರ ಅನುಮತಿ ಬಗ್ಗೆ ನೀಡಿಲ್ಲ.ಕಾನೂನು ವ್ಯಾಪ್ತಿಯಲ್ಲಿದೆ ಎಂದಿದೆ, ಈ ಸಮಸ್ಯೆ ಇತ್ಯರ್ಥವಾಗಬೇಕಿದೆ ಎಂದರು.
Published On - 9:45 pm, Mon, 27 July 26