AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೂಜೆ ವಿಚಾರವಾಗಿ ಎರಡು ಬಣಗಳ ನಡುವೆ ಜಗಳ; ತ್ರಿಶೂಲದಿಂದ ಹಲ್ಲೆಗೆ ಯತ್ನ, ಅವಾಚ್ಯ ಪದಗಳಿಂದ ‘ಪೂಜೆ’

ಎಂದಿನಂತೆ ನಿನ್ನೆ ಕೂಡ ದೇವಾಲಯದಲ್ಲಿ ಪೂಜೆ ನಡೆಯುತ್ತಿತ್ತು. ಆದ್ರೆ ಆರತಿ ತಟ್ಟೆ ಹಿಡಿದು ಪೂಜೆ ಮಾಡ್ತಿದ್ದ ಪೂಜಾರಿಯ ಚಿಕ್ಕಪ್ಪ ಮತ್ತು ಪೂಜಾರಿಯ ನಡುವೆ ಗಲಾಟೆ ನಡೆದಿದೆ. ಈ ವೇಳೆ ಪೂಜಾರಿಯನ್ನು ತಳ್ಳಿ ಆತನ ಚಿಕ್ಕಪ್ಪ ತ್ರಿಶೂಲ ಕಿತ್ತುಕೊಂಡು ಹಲ್ಲೆ ಮಾಡಲು ಯತ್ನಿಸಿದ್ದಾರೆ.

ಪೂಜೆ ವಿಚಾರವಾಗಿ ಎರಡು ಬಣಗಳ ನಡುವೆ ಜಗಳ; ತ್ರಿಶೂಲದಿಂದ ಹಲ್ಲೆಗೆ ಯತ್ನ, ಅವಾಚ್ಯ ಪದಗಳಿಂದ ‘ಪೂಜೆ’
ಪೂಜೆ ವಿಚಾರವಾಗಿ ಎರಡು ಬಣಗಳ ನಡುವೆ ಜಗಳ; ತ್ರಿಶೂಲದಿಂದ ಹಲ್ಲೆಗೆ ಯತ್ನ, ಅವಾಚ್ಯ ಪದಗಳಿಂದ ‘ಪೂಜೆ’
TV9 Web
| Edited By: ಆಯೇಷಾ ಬಾನು|

Updated on: Jan 11, 2022 | 11:26 AM

Share

ಹಾವೇರಿ: ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿರುವ ಐತಿಹಾಸಿಕ ಮಾಲತೇಶ ದೇಗುಲದಲ್ಲಿ ಪೂಜೆ ವೇಳೆ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಪರಸ್ಪರ ಹಲ್ಲೆ ನಡೆದಿದ್ದು ಪೂಜೆ ಮಾಡುತ್ತಿದ್ದ ಪೂಜಾರಿಯ ಚಿಕ್ಕಪ್ಪ, ಪೂಜಾರಿಯನ್ನು ತಳ್ಳಿ ತ್ರಿಶೂಲ ಕಿತ್ತುಕೊಂಡು ಹಲ್ಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಸಂತೋಷ ಭಟ್ ಪೂಜಾರರಿಂದ 7 ಜನರ ವಿರುದ್ಧ ದೂರು ದಾಖಲಾಗಿದೆ.

ಎಂದಿನಂತೆ ನಿನ್ನೆ ಕೂಡ ದೇವಾಲಯದಲ್ಲಿ ಪೂಜೆ ನಡೆಯುತ್ತಿತ್ತು. ಆದ್ರೆ ಆರತಿ ತಟ್ಟೆ ಹಿಡಿದು ಪೂಜೆ ಮಾಡ್ತಿದ್ದ ಪೂಜಾರಿಯ ಚಿಕ್ಕಪ್ಪ ಮತ್ತು ಪೂಜಾರಿಯ ನಡುವೆ ಗಲಾಟೆ ನಡೆದಿದೆ. ಈ ವೇಳೆ ಪೂಜಾರಿಯನ್ನು ತಳ್ಳಿ ಆತನ ಚಿಕ್ಕಪ್ಪ ತ್ರಿಶೂಲ ಕಿತ್ತುಕೊಂಡು ಹಲ್ಲೆ ಮಾಡಲು ಯತ್ನಿಸಿದ್ದಾರೆ. ಪರಸ್ಪರರ ನಡುವೆ ನಡೆದ ವಾಗ್ವಾದ, ಮಾತಿನ ಚಕಮಕಿ, ತಳ್ಳಾಟ, ನೂಕಾಟದ ದೃಶ್ಯಗಳು ದೇವಸ್ಥಾನದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಸದ್ಯ ಘಟನೆ ಸಂಬಂಧ ಸಂತೋಷ ಭಟ್ ಪೂಜಾರರಿಂದ ಏಳು ಜನರ ವಿರುದ್ಧ ದೂರು ದಾಖಲಾಗಿದೆ. ಉಪ್ಪಾರ ಉರ್ಫ್ ಬಣಕಾರ ಹಾಗೂ ಪೂಜಾರ ಕುಟುಂಬದವರ ನಡುವೆ ಪೂಜೆಗಾಗಿ ಕಿತ್ತಾಟ ನಡೆದಿದೆ. ಶಿವಪ್ಪ ಉಪ್ಪಾರ ಉರ್ಫ್ ಬಣಕಾರ, ಪ್ರಕಾಶ ಉಪ್ಪಾರ, ಸುನೀಲ ಉಪ್ಪಾರ, ಮಹಾದೇವಪ್ಪ ಉಪ್ಪಾರ, ಗುರುರಾಜ ಉಪ್ಪಾರ, ಮೃತ್ಯುಂಜಯ ಉಪ್ಪಾರ ಮತ್ತು ಸುಭಾಸ ಉಪ್ಪಾರ ಎಂಬುವರ ವಿರುದ್ಧ ದೂರು ದಾಖಲಾಗಿದೆ.

ನಿನ್ನೆ ಬೆಳಿಗ್ಗೆ 7.22 ಗಂಟೆಗೆ ದೇವಸ್ಥಾನದಲ್ಲಿ ಪೂಜೆ ವೇಳೆ ಗಲಾಟೆ ನಡೆದಿದೆ. ನಾವು ಪೂಜೆ ಮಾಡುತ್ತೇವೆ, ನಾವು ಪೂಜೆ ಮಾಡುತ್ತೇವೆ ಅಂತಾ ಕಿತ್ತಾಟ ಶುರುವಾಗಿದೆ. ದೇವಸ್ಥಾನಕ್ಕೆ ಹೋದಾಗ ನನ್ನ ಗಂಡ ಮೃತ್ಯುಂಜಯ ಬಣಕಾರ ಹಾಗೂ ಮೈದುನನ್ನ ಸಂತೋಷ ಭಟ್ ಹಾಗೂ ಇತರರು ಸೇರಿಕೊಂಡು ಕೊಲೆ ಮಾಡಲು ಯತ್ನಿಸಿದ್ದಲ್ಲದೇ ಆರೋಪಿಗಳು ಮೈಕೈ ಮುಟ್ಟಿ, ಅವಾಚ್ಯವಾಗಿ ಬೈದಾಡಿ ಜೀವಬೆದರಿಕೆ ಹಾಕಿದ್ದಾರೆ ಅಂತಾ ಸಂತೋಷ ಭಟ್ ಸೇರಿದಂತೆ ಒಂಬತ್ತು ಜನರು ವಿರುದ್ಧ ಬಣಕಾರ ಕುಟುಂಬದ ಮಹಿಳೆ ಪ್ರತಿದೂರು ದಾಖಲಿಸಿದ್ದಾಳೆ. ಕಳೆದ ಹಲವು ವರ್ಷಗಳಿಂದ ಉಪ್ಪಾರ ಉರ್ಫ್ ಬಣಕಾರ ಹಾಗೂ ಪೂಜಾರ ಕುಟುಂಬದ ನಡುವೆ ಮಾಲತೇಶ ದೇವಸ್ಥಾನದ ಪೂಜೆ ವಿಚಾರವಾಗಿ ನಡೆಯುತ್ತಿರುವ ಜಗಳ ನಿನ್ನೆ ಕೊಲೆ ಯತ್ನದವರೆಗೂ ಹೋಗಿದೆ.

ಇದನ್ನೂ ಓದಿ: ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​​ರನ್ನು ಕೊಂದೇಬಿಡುತ್ತೇನೆ ಎಂದು 2020ರಿಂದ ಬೆನ್ನತ್ತಿದ್ದ 72ವರ್ಷದ ವೃದ್ಧ ಅರೆಸ್ಟ್ !

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ