AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರೇಮಠದ ಉತ್ತರಾಧಿಕಾರಿಯನ್ನಾಗಿ 4 ವರ್ಷದ ಬಾಲಕನ ನೇಮಕ; ಹಸಿರು ಶಾಲು ಹೊದಿಸಿ ಪೀಠಾಧಿಪತಿಯಾಗಿ ಘೋಷಣೆ

ಪೀಠಾದಿಪತಿಯಾಗಿದ್ದವರು ಲಿಂಗ್ಯಕ್ಯರಾದ ಮೇಲೆ ಮಠದ ಪೀಠಾಧಿಪತಿ ಸ್ಥಾನವನ್ನು ಖಾಲಿ ಬಿಡಲು ಆಗುವುದಿಲ್ಲ. ಹೀಗಾಗಿ ಅವರ ಕುಟುಂಬದಲ್ಲಿದ್ದವರಿಗೆ ಪೀಟದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಬೇಕಾಗುತ್ತದೆ. ಅವರ ಕುಟುಂಬದವರು ನಿರ್ಧಾರ ಮಾಡಿ ನೀಲಕಂಠಯ್ಯಸ್ವಾಮಿಗೆ ಉತ್ತರಾಧಿಕಾರಿ ನೇಮಕ ಮಾಡಲು ಒಪ್ಪಿಗೆ ನೀಡಿದ್ದರಿಂದ ಈ ಬಾಲಕನನ್ನು ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆ.

ಹಿರೇಮಠದ ಉತ್ತರಾಧಿಕಾರಿಯನ್ನಾಗಿ 4 ವರ್ಷದ ಬಾಲಕನ ನೇಮಕ; ಹಸಿರು ಶಾಲು ಹೊದಿಸಿ ಪೀಠಾಧಿಪತಿಯಾಗಿ ಘೋಷಣೆ
ಹಿರೇಮಠದ ಉತ್ತರಾಧಿಕಾರಿಯನ್ನಾಗಿ 4 ವರ್ಷದ ಬಾಲಕನ ನೇಮಕ
Follow us
TV9 Web
| Updated By: preethi shettigar

Updated on:Jul 14, 2021 | 11:06 AM

ಕಲಬುರಗಿ: ಸಾಮಾನ್ಯವಾಗಿ ಮಠದ ಉತ್ತರಾಧಿಕಾರಿಯಾಗಿ ನೇಮಕಗೊಳ್ಳಬೇಕಾದರೆ ಜ್ಞಾನ, ತಿಳುವಳಿಕೆ ಸಂಪಾದನೆ ಮಾಡಿರಬೇಕು ಮತ್ತು ಅದಕ್ಕೊಂದು ಸಮಯ ಮತ್ತು ವಯಸ್ಸಿನ ಮಿತಿ ಇದೆ ಎಂದು ನಂಬಲಾಗಿದೆ. ಆದರೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕಾಳಗಿ ಪಟ್ಟಣದಲ್ಲಿರುವ ಸಂಸ್ಥಾನ ಹಿರೇಮಠದ ಉತ್ತರಾಧಿಕಾರಿಯನ್ನಾಗಿ 4 ವರ್ಷದ ನೀಲಕಂಠಯ್ಯಸ್ವಾಮಿ ಅವರನ್ನು ನೇಮಿಸಲಾಗಿದೆ. ಇದು ಅಚ್ಚರಿಯಾದರು ಕೂಡ ಸತ್ಯ. ಮಠದ ಪೀಠಾಧಿಪತಿಯಾಗಿದ್ದ ಶಿವಬಸವ ಶಿವಾಚಾರ್ಯ ಸ್ವಾಮೀಜಿ(45) ಇದೇ ಜುಲೈ ಹನ್ನೆರಡರಂದು ಲಿಂಗೈಕ್ಯರಾಗಿದ್ದರು. ನಿನ್ನೆ ಕಾಳಗಿ ಪಟ್ಟಣದಲ್ಲಿ ಲಿಂಗೈಕ್ಯ ಸ್ವಾಮೀಜಿಯ ಅಂತ್ಯಕ್ರಿಯೇ ನಡೆಯಿತು. ಇದೇ ಸಂದರ್ಭದಲ್ಲಿ ಅನೇಕ ಸ್ವಾಮೀಜಿಗಳ ಸಮ್ಮುಖದಲ್ಲಿ ನಾಲ್ಕು ವರ್ಷದ ಬಾಲಕನನ್ನು ಮುಂದಿನ ಮಠದ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿ, ಕೆಲ ವಿಧಿ ವಿಧಾನಗಳನ್ನು ಕೂಡ ನೆರವೇರಿಸಲಾಗಿದೆ.

ಕಲಬುರಗಿ ಜಿಲ್ಲೆಯ ಹಿರೇನಾಗಾಂವ ಮಠದ ಲಿಂಗೈಕ್ಯರಾಗಿರುವ ಶಿವಬಸವ ಶಿವಾಚಾರ್ಯ ಸ್ವಾಮೀಜಿ ತಲೆಮೇಲಿದ್ದ ಹಸಿರು ಶಾಲು, ಕೈಯಲ್ಲಿದ್ದ ಬೆತ್ತವನ್ನು ಉತ್ತರಾಧಿಕಾರಿಯಾಗಿ ನೇಮಕವಾಗಿರುವ ನೀಲಕಂಠಯ್ಯಸ್ವಾಮಿಗೆ ಹಸ್ತಾಂತರ ಮಾಡಲಾಗಿದೆ. ನಾಲ್ಕು ವರ್ಷದ ಬಾಲಕ ನೀಲಕಂಠಸ್ವಾಮಿ ಬೇರಾರು ಅಲ್ಲಾ, ಲಿಂಗ್ಯಕ್ಯರಾಗಿರುವ ಶಿವಬಸವ ಶಿವಾಚಾರ್ಯ ಸ್ವಾಮೀಜಿಯ ಪೂರ್ವಾಶ್ರಮದ ಸಹೋದರ ಗುರುನಂಜಯ್ಯ ಹಿರೇಮಠ ಅವರ ಪುತ್ರ. ಇನ್ನು ಶಾಲೆಯ ಮೆಟ್ಟಿಲು ಹತ್ತದ ಬಾಲಕ ಇದೀಗ ಮಠದ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದಾರೆ. ಸದ್ಯ ನೀಲಕಂಠಯ್ಯಸ್ವಾಮಿ ಮಠದ ಉತ್ತರಾಧಿಕಾರಿಯಾಗಿದ್ದರು, ಕೂಡಾ ಮಠದ ಉಸ್ತುವಾರಿಯನ್ನು ಬಾಲಕ ಹದಿನೆಂಟು ವರ್ಷದವನಾಗುವವರಗೆ ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು ನಿರ್ವಹಿಸಲಿದ್ದಾರೆ.

ಪುತ್ರವರ್ಗ ಪೀಠ ಪರಂಪರೆಯ ಮಠ ಶಿವಾಚಾರ್ಯ ಪರಂಪರೆಯಲ್ಲಿ ಎರಡು ರೀತಿಯ ಮಠಗಳಿವೆ. ಒಂದು ಪುತ್ರವರ್ಗ ಪೀಠ ಮತ್ತೊಂದು ಶಿಷ್ಯ ಪರಂಪರೆಯ ಪೀಠ. ಪುತ್ರವರ್ಗ ಪೀಠ ಪರಂಪರೆಯಲ್ಲಿ, ಲಿಂಗ್ಯಕ್ಯರಾಗಿರುವ ಸ್ವಾಮೀಜಿಗಳ ಕುಟುಂಬದವರಲ್ಲಿ ಯಾರದರು ಇದ್ದರೆ, ಅವರನ್ನೇ ಮಠದ ಮುಂದಿನ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗುತ್ತದೆ. ಅವರ ಕುಟುಂಬದಲ್ಲಿ ಯಾರು ಇರದೇ ಇದ್ದರೆ, ಇದ್ದರು ಸ್ವಾಮೀಜಿಗಳಾಗಲು ಆಸಕ್ತಿ ತೋರದೆ ಇದ್ದರೆ, ಮಾತ್ರ ಬೇರೆಯವರನ್ನು ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಪರಂಪರೆ ಇದೆ.

ಶಿಷ್ಯ ವರ್ಗದ ಪೀಠಗಳಲ್ಲಿ ಬೇರೆಯವರನ್ನು ಮಠದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲು ಅವಕಾಶವಿದೆ. ಕಾಳಗಿಯ ಸಂಸ್ಥಾನ ಹಿರೇಮಠ ಪುತ್ರವರ್ಗ ಪರಂಪರೆಯ ಮಠವಾಗಿದ್ದರಿಂದ, ಅವರ ಕುಟುಂಬದವರ ಒಪ್ಪಿಗೆ ಪ್ರಕಾರ, ನಾಲ್ಕು ವರ್ಷದ ಬಾಲಕನಿಗೆ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆ ಎಂದು ಇಲ್ಲಿನ ಸ್ವಾಮೀಜಿಗಳು ತಿಳಿಸಿದ್ದಾರೆ.

ಸದ್ಯ ಪೀಠಾದಿಪತಿಯಾಗಿದ್ದವರು ಲಿಂಗ್ಯಕ್ಯರಾದ ಮೇಲೆ ಮಠದ ಪೀಠಾಧಿಪತಿ ಸ್ಥಾನವನ್ನು ಖಾಲಿ ಬಿಡಲು ಆಗುವುದಿಲ್ಲ. ಹೀಗಾಗಿ ಅವರ ಕುಟುಂಬದಲ್ಲಿದ್ದವರಿಗೆ ಪೀಟದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಬೇಕಾಗುತ್ತದೆ. ಅವರ ಕುಟುಂಬದವರು ನಿರ್ಧಾರ ಮಾಡಿ ನೀಲಕಂಠಯ್ಯಸ್ವಾಮಿಗೆ ಉತ್ತರಾಧಿಕಾರಿ ನೇಮಕ ಮಾಡಲು ಒಪ್ಪಿಗೆ ನೀಡಿದ್ದರಿಂದ ಈ ಬಾಲಕನನ್ನು ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆ.

ಮಠದ ಪೀಠಾಧಿಪತಿಯಾಗುವವರು, ಧಾರ್ಮಿಕ ಶಿಕ್ಷಣ ಪಡೆಯುವುದು ಕೂಡ ಮುಖ್ಯವಾಗಿರುತ್ತದೆ. ಹೀಗಾಗಿ ಬಾಲಕನಿಗೆ ಶಾಲಾ ಶಿಕ್ಷಣದ ಜತೆಗೆ ಧಾರ್ಮಿಕ ಶಿಕ್ಷಣ ಕೊಡಿಸುವ ಕೆಲಸವನ್ನು ಮಾಡಲಾಗುತ್ತದೆ. ಹದಿನೆಂಟು ವರ್ಷ ದಾಟಿದ ಮೇಲೆ ಆತನಿಗೆ ಅಧಿಕೃತವಾಗಿ ಮಠದ ಪೀಠಾಧಿಪತಿಯನ್ನಾಗಿ ಮಾಡಲಾಗುತ್ತದೆ. ಮಠದಲ್ಲಿ ಮಾತ್ರವಲ್ಲಾ, ವೀರಶೈವ ಪರಂಪರೆಯಲ್ಲಿ ಮನೆಯ ಯಜಮಾನ ಮೃತನಾದರೆ, ಆತನ ಹಿರಿಯ ಪುತ್ರನಿಗೆ ಉತ್ತರಾಧಿಕಾರಿಯಂತ ಹೇಳಿ, ಮೃತ ವ್ಯಕ್ತಿಯ ಶಾಲು ಹಾಕುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಇದೇ ರೀತಿ ಪುತ್ರವರ್ಗದ ಮಠದ ಪರಂಪರೆಯಲ್ಲಿ ಕೂಡ ನಡೆದುಕೊಂಡು ಬಂದಿದೆ. ಇಲ್ಲಿ ಪೀಠಾಧಿಪತಿಯಾಗಿದ್ದವರು, ತಮ್ಮ ಉತ್ತರಾಧಿಕಾರಿಯನ್ನಾಗಿ ಯಾರನ್ನು ಕೂಡಾ ನೇಮಕ ಮಾಡರಿಲಿಲ್ಲಾ. ಅವರು ಅಕಾಲಿಕವಾಗಿ ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ಬಾಲಕನಿಗೆ ಉತ್ತರಾಧಿಕಾರಿಯನ್ನಾಗಿ ಕೆಲ ನಿಯಮಗಳನ್ನು ಪೂರೈಸಲಾಗಿದೆ.

ಪೀಠಾಧಿಪತಿ ಲಿಂಗ್ಯಕ್ಯರಾಗಿರುವ ಹಿನ್ನೆಲೆಯಲ್ಲಿ ಅವರ ಪೂರ್ವಾಶ್ರಮದ ಕುಟುಂಬದ ಬಾಲಕನಿಗೆ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸ್ವಾಮೀಜಿಗಳಾಗುವವರಿಗೆ ಬಾಲ್ಯದಿಂದಲೇ ಧಾರ್ಮಿಕ ಶಿಕ್ಷಣ ನೀಡಿದರೆ ಮಾತ್ರ, ಅವರು ಸಂಸ್ಕಾರಯುತ ಸ್ವಾಮೀಜಿಗಳಾಗಿ ಬೆಳೆಯುತ್ತಾರೆ. ಇಲ್ಲಿ ಮಗುವಿನ ಹಕ್ಕಿಗೆ ಯಾವುದೇ ಚ್ಯುತಿ ಬರದಂತೆ ನೋಡಿಕೊಳ್ಳಲಾಗುವುದು. ಬಾಲಕನಿಗೆ ಶಾಲಾ ಶಿಕ್ಷಣದ ಜತೆಗೆ ಧಾರ್ಮಿಕ ಶಿಕ್ಷಣವನ್ನು ಕೂಡಾ ಕೊಡಿಸಲಾಗುವುದು. ಹದಿನೆಂಟು ವರ್ಷ ತುಂಬಿದ ಮೇಲೆ ಅವರ ಒಪ್ಪಿಗೆ ಮೇರೆಗೆ ಮಠಕ್ಕೆ ಪೀಠಾಧಿಪತಿಯನ್ನಾಗಿ ನೇಮಿಸಲಾಗುವುದು ಎಂದು ಹೊನ್ನಕಿರಣಗಿ ಮಠದ ಸ್ವಾಮಿಜಿ ಚಂದ್ರಗುಂಡ ಶಿವಾಚಾರ್ಯರು ತಿಳಿಸಿದ್ದಾರೆ.

ವರದಿ: ಸಂಜಯ್ ಚಿಕ್ಕಮಠ

ಇದನ್ನೂ ಓದಿ: ಕಲಬುರಗಿ ಕೋರಣೇಶ್ವರ ಮಠಕ್ಕೆ ಮಹಿಳಾ ಉತ್ತರಾಧಿಕಾರಿ; ಹೊಸ ಪರಂಪರೆಗೆ ನಾಂದಿ ಹಾಡಿದ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ

ಉತ್ತರಾಯಣ ನಂತರ ಶಿರೂರು ಮಠಕ್ಕೆ ಉತ್ತರಾಧಿಕಾರಿ ಘೋಷಣೆ -ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ

Published On - 11:04 am, Wed, 14 July 21

ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್