AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕರನಿಗೂ ಇಲ್ಲ, ಈಶ್ವರಪ್ಪ ಪುತ್ರನಿಗೂ ಇಲ್ಲ: ಹಳೇ ಅಭ್ಯರ್ಥಿ ಪಾಲಾದ BJP ಟಿಕೆಟ್

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಅರುಣ್‌ ಕುಮಾರ್‌ ಪೂಜಾರ ಪಾಲಾಗಿದೆ. ಅರುಣ್‌ ಕುಮಾರ್‌ ಪೂಜಾರಗೆ ಬಿಜೆಪಿ ಟಿಕೆಟ್ ನೀಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಯಾರು ಅರುಣ್ ಕುಮಾರ್ ಪೂಜಾರ? ಬಿಜೆಪಿ ಮುಖಂಡರಾಗಿರುವ ಅರುಣ್ ಕುಮಾರ್ ಪೂಜಾರ 2013ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕಳೆದ ಬಾರಿಯೂ ಸಹ ಬಿಜೆಪಿಯಿಂದ ಟಿಕೆಟ್​ಗಾಗಿ ಪ್ರಯತ್ನಿಸಿದ್ರೂ ಕೈತಪ್ಪಿತ್ತು. ಅರುಣ್ ಕುಮಾರ್ ಪೂಜಾರ ಪತ್ನಿ ಮಂಗಳಗೌರಿ ಪೂಜಾರಿ ಹಾವೇರಿ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿದ್ದಾರೆ. ಸಿಎಂ ಯಡಿಯೂರಪ್ಪ […]

ಶಂಕರನಿಗೂ ಇಲ್ಲ, ಈಶ್ವರಪ್ಪ ಪುತ್ರನಿಗೂ ಇಲ್ಲ: ಹಳೇ ಅಭ್ಯರ್ಥಿ ಪಾಲಾದ BJP ಟಿಕೆಟ್
ಸಾಧು ಶ್ರೀನಾಥ್​
|

Updated on:Nov 15, 2019 | 12:11 PM

Share

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಅರುಣ್‌ ಕುಮಾರ್‌ ಪೂಜಾರ ಪಾಲಾಗಿದೆ. ಅರುಣ್‌ ಕುಮಾರ್‌ ಪೂಜಾರಗೆ ಬಿಜೆಪಿ ಟಿಕೆಟ್ ನೀಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಯಾರು ಅರುಣ್ ಕುಮಾರ್ ಪೂಜಾರ? ಬಿಜೆಪಿ ಮುಖಂಡರಾಗಿರುವ ಅರುಣ್ ಕುಮಾರ್ ಪೂಜಾರ 2013ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕಳೆದ ಬಾರಿಯೂ ಸಹ ಬಿಜೆಪಿಯಿಂದ ಟಿಕೆಟ್​ಗಾಗಿ ಪ್ರಯತ್ನಿಸಿದ್ರೂ ಕೈತಪ್ಪಿತ್ತು. ಅರುಣ್ ಕುಮಾರ್ ಪೂಜಾರ ಪತ್ನಿ ಮಂಗಳಗೌರಿ ಪೂಜಾರಿ ಹಾವೇರಿ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿದ್ದಾರೆ.

ಸಿಎಂ ಯಡಿಯೂರಪ್ಪ ಟಿಕೆಟ್ ಘೋಷಿಸುತ್ತಿದ್ದಂತೆ, ಸಿಎಂ ಮನೆಯಿಂದ ನೇರವಾಗಿ ಬಿಜೆಪಿ ಕಚೇರಿಗೆ ಅರುಣ್ ಕುಮಾರ್ ತೆರಳಿ ಬಿ ಫಾರಂ ಪಡೆಯಲಿದ್ದಾರೆ. ನಾಳೆ ಅರುಣ್ ಕುಮಾರ್ ಪೂಜಾರ ನಾಮಪತ್ರ ಸಲ್ಲಿಸಲಿದ್ದಾರೆ.

ಆರ್.ಶಂಕರ್ ನಿರೀಕ್ಷೆ ಹುಸಿ: ರಾಣೆಬೆನ್ನೂರು ಕ್ಷೇತ್ರದಿಂದ ಸ್ವತಂತ್ರವಾಗಿ ಗೆದ್ದು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿ ಆರ್.ಶಂಕರ್ ಸಚಿವರಾಗಿದ್ದರು. ಬಳಿಕ ಬಿಜೆಪಿಗೆ ಬೆಂಬಲಿಸುವ ಸಲುವಾಗಿ ರಾಜೀನಾಮೆ ನೀಡಿ ಅನರ್ಹಗೊಂಡಿದ್ದರು. ನಿನ್ನೆಯಷ್ಟೇ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದ್ರೆ ಅದೇ ಕ್ಷೇತ್ರದ ಅರುಣ್‌ ಕುಮಾರ್‌ ಪೂಜಾರಗೆ ಬಿಜೆಪಿ ಟಿಕೆಟ್ ನೀಡಿದೆ.

ಪುತ್ರನಿಗಾಗಿ ಈಶ್ವರಪ್ಪ ಲಾಬಿ: ರಾಣೆಬೆನ್ನೂರು ಕ್ಷೇತ್ರದ ಟಿಕೆಟ್​ಗಾಗಿ ಸಚಿವ ಕೆ.ಎಸ್.ಈಶ್ವರಪ್ಪ ಸಹ ಲಾಬಿ ನಡೆಸಿದ್ದರು. ಉಪಚುನಾವಣೆಯಲ್ಲಿ ಪುತ್ರ ಕೆ.ಇ.ಕಾಂತೇಶ್​ಗೆ ಟಿಕೆಟ್ ನೀಡುವಂತೆ ಈಶ್ವರಪ್ಪ ಲಾಬಿ ನಡೆಸಿದ್ದರು. ಅತ್ತ ಅನರ್ಹ ಶಾಸಕ ಆರ್.ಶಂಕರ್​ಗೂ ಟಿಕೆಟ್ ನೀಡದೆ, ಇತ್ತ ಈಶ್ವರಪ್ಪ ಪುತ್ರ ಕಾಂತೇಶ್​ಗೂ ಟಿಕೆಟ್ ನೀಡದೆ ಅರುಣ್ ಕುಮಾರ್ ಪೂಜಾರಾಗೆ ಬಿಜೆಪಿ ಮಣೆ ಹಾಕಿದೆ.

Published On - 12:02 pm, Fri, 15 November 19