AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್​ ಸಂಬಂಧಿತ ಅರ್ಜಿಗಳನ್ನ ಹಾಕಿದ್ರೆ ವಕೀಲರಿಂದಲೇ ವೆಚ್ಚ ವಸೂಲಿ ಮಾಡ್ತೇವೆ: ಕರ್ನಾಟಕ ಹೈಕೋರ್ಟ್ ಎಚ್ಚರಿಕೆ

ರಾಜ್ಯದಲ್ಲಿ ಮಹಾಸೋಂಕು ಅವತರಿಸಿದೆ. ಈ ಕಾಲ ಘಟ್ಟದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವವರಿಗಾಗಿ (BPL) ಆಹಾರ ಸಾಮಾಗ್ರಿ ನೀಡುವಂತೆ ಆದೇಶಿಸಬೇಕು ಎಂದು ಕೋರಿ ಅಡ್ವೊಕೇಟ್ ರಮೇಶ್​ ನಾಯ್ಕ್​ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಇದನ್ನು ಉಲ್ಲೇಖಿಸಿತು.

ಕೋವಿಡ್​ ಸಂಬಂಧಿತ ಅರ್ಜಿಗಳನ್ನ ಹಾಕಿದ್ರೆ ವಕೀಲರಿಂದಲೇ ವೆಚ್ಚ ವಸೂಲಿ ಮಾಡ್ತೇವೆ: ಕರ್ನಾಟಕ ಹೈಕೋರ್ಟ್ ಎಚ್ಚರಿಕೆ
ಕರ್ನಾಟಕ ಹೈಕೋರ್ಟ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 14, 2021 | 3:43 PM

Share

ಬೆಂಗಳೂರು: ಕೋವಿಡ್ ​ಸಂಬಂಧಿತ ನಾನಾ ಅರ್ಜಿಗಳನ್ನ ಹಾಕಿದ್ರೆ ವಕೀಲರಿಂದಲೇ ವೆಚ್ಚ ವಸೂಲಿ ಮಾಡುತ್ತೇವೆ ಎಂದು ಕರ್ನಾಟಕ ಹೈಕೋರ್ಟ್ ವಕೀಲರಿಗೆ ಎಚ್ಚರಿಕೆ ನೀಡಿದೆ. ಕರ್ನಾಟಕ ವಕೀಲರ ಒಕ್ಕೂಟದ ಸದಸ್ಯರು ಕೋವಿಡ್ ಸಂಬಂಧಿತ ಆದೇಶಗಳನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳುತ್ತಿಲ್ಲ ಎಂದು ವಿಷಾದಿಸಿರುವ ಹೈಕೋರ್ಟ್ ಕೋವಿಡ್ ​ಸಂಬಂಧಿತ ನಾನಾ ಅರ್ಜಿಗಳನ್ನ ಸಲ್ಲಿಸುವುದರ ವಿರುದ್ಧ ಗರಂ ಆಗಿದೆ. ಅಂತಹ ವಕೀಲರ ವಿರುದ್ಧ 25 ಸಾವಿರ ರೂಪಾಯಿ ಜುಲ್ಮಾನೆ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಿದ ಪ್ರಸಂಗ ಇತ್ತೀಚೆಗೆ ನಡೆದಿದೆ.

ಕೋವಿಡ್ ​ಸಂಬಂಧ ಅನೇಕ ಅರ್ಜಿಗಳನ್ನ ಹಾಕಲಾಗಿದೆ. ಅಂತಹವರನ್ನು ಎಚ್ಚರಿಸಲು ಕೋವಿಡ್ 19 ಪರಿಹಾರಕ್ಕಾಗಿ ಇರುವ ಸಿಎಂ ಕೇರ್ ಫಂಡ್ ಗೆ ಸಲ್ಲಿಕೆಯಾಗುವಂತೆ ಠೇವಣಿ ಹಣ ನೀಡುವಂತೆ ಅರ್ಜಿದಾರರಿಗೆ ಆದೇಶಿಸುವುದಾಗಿ ಚೀಫ್ ಜಸ್ಟೀಸ್ ಶ್ರೀನಿವಾಸ ಓಕಾ ಮತ್ತು ಜಸ್ಟೀಸ್ ಅರವಿಂದ್​ ಕುಮಾರ್​ ಅವರ ನ್ಯಾಯಪೀಠವು ಎಚ್ಚರಿಸಿದೆ.

ರಾಜ್ಯದಲ್ಲಿ ಮಹಾಸೋಂಕು ಅವತರಿಸಿದೆ. ಈ ಕಾಲ ಘಟ್ಟದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವವರಿಗಾಗಿ (BPL) ಆಹಾರ ಸಾಮಾಗ್ರಿ ನೀಡುವಂತೆ ಆದೇಶಿಸಬೇಕು ಎಂದು ಕೋರಿ ಅಡ್ವೊಕೇಟ್ ರಮೇಶ್​ ನಾಯ್ಕ್​ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಇದನ್ನು ಉಲ್ಲೇಖಿಸಿತು. ರಾಜ್ಯದಲ್ಲಿ ಕೋವಿಡ್​ 19 ಪರಿಸ್ಥಿತಿ ಬಗ್ಗೆ ಹೈಕೋರ್ಟ್ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದು, ಅದರಲ್ಲಿ ತಾನು ಪ್ರವೇಶಿಸುವುದಕ್ಕೆ ಅಡ್ವೊಕೇಟ್ ರಮೇಶ್​ ನಾಯ್ಕ್​ ಮನನಿ ಮಾಡಿದ್ದರು.

ಚೀಫ್ ಜಸ್ಟೀಸ್ ಶ್ರೀನಿವಾಸ ಓಕಾ ಅವರ ನ್ಯಾಯಪೀಠವು ಹೈಕೋರ್ಟ್ ಸ್ವಯಂ ದಾಖಲಿಸಿಕೊಂಡಿರುವ ಪ್ರಕರಣದ ಬಗ್ಗೆ ಗುರುವಾರ ಬೆಳಗ್ಗೆ ವಿಚಾರಣೆ ನಡೆಸುತ್ತಿದ್ದಾಗ ತತ್ಸಂಬಂಧಿತ ಅನೇಕ ಪ್ರಕರಣಗಳು ವಿಚಾರಣೆಗೆ ಲಿಸ್ಟ್​ ಆಗಿರುವುದನ್ನು ಗಮನಿಸಿ, ಅಸಮಾಧಾನ ವ್ಯಕ್ತಪಡಿಸಿತು. ತಕ್ಷಣ, ಅಡ್ವೊಕೇಟ್​ಗಳೆಲ್ಲಾ ಅರ್ಜಿ ಸಲ್ಲಿಸುವ ಮುನ್ನ, ನ್ಯಾಯಾಲಯ ನೀಡಿರುವ ಆದೇಶಗಳನ್ನು ಪರಾಮರ್ಷಿಸಬೇಕು. ಇತ್ತೀಚೆಗೆ ಎಲ್ಲರಿಗೂ ಆಟವಾಗಿಬಿಟ್ಟಿದೆ. ಎಲ್ಲರೂ ಕೋವಿಡ್​ ಸಂಬಂಧಿತ ವಿಷಯಗಳನ್ನು ತೆಗೆದುಕೊಂಡು ಅರ್ಜಿಗಳನ್ನು ಹಾಕುವುದು ಸಾಮಾನ್ಯವಾಗಿಬಿಟ್ಟಿದೆ ಎಂದು ಎಚ್ಚರಿಸಿದರು.

ಕೋವಿಡ್​ ಸಂಬಂಧಿತ ವಿಷಯದಲ್ಲಿ ಹೈಕೋರ್ಟ್ ಸ್ವಯಂ ದಾಖಲಿಸಿಕೊಂಡಿರುವ ಪ್ರಕರಣದ ಆಲಿಕೆ ವೇಳೆ, ಕೊರೊನಾ ಸೋಂಕು ಹರಡುವಿಕೆಯ ವಿರುದ್ಧದ ಹೋರಾಟದಲ್ಲಿ ನಾನಾ ಸಲಹೆಗಳನ್ನು ನೀಡುತ್ತಾ ಅನೇಕ ಅಡ್ವೊಕೇಟ್​ಗಳು ಕೋರ್ಟ್​ಗೆ ಅರ್ಜಿಗಳನ್ನು ಹಾಕುತ್ತಿದ್ದಾರೆ ಎಂದು ಅಮಿಕಸ್​ ಕ್ಯೂರಿ ವಿಕ್ರಂ ಹುಯಿಲಗೋಳ ಕೋರ್ಟ್​ ಗಮನಕ್ಕೆ ತಂದರು.

(Karnataka High Court warns to impose costs on lawyers who file multiple coronavirus petitions)

Published On - 3:40 pm, Fri, 14 May 21

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ