AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್​ ಸಂಬಂಧಿತ ಅರ್ಜಿಗಳನ್ನ ಹಾಕಿದ್ರೆ ವಕೀಲರಿಂದಲೇ ವೆಚ್ಚ ವಸೂಲಿ ಮಾಡ್ತೇವೆ: ಕರ್ನಾಟಕ ಹೈಕೋರ್ಟ್ ಎಚ್ಚರಿಕೆ

ರಾಜ್ಯದಲ್ಲಿ ಮಹಾಸೋಂಕು ಅವತರಿಸಿದೆ. ಈ ಕಾಲ ಘಟ್ಟದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವವರಿಗಾಗಿ (BPL) ಆಹಾರ ಸಾಮಾಗ್ರಿ ನೀಡುವಂತೆ ಆದೇಶಿಸಬೇಕು ಎಂದು ಕೋರಿ ಅಡ್ವೊಕೇಟ್ ರಮೇಶ್​ ನಾಯ್ಕ್​ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಇದನ್ನು ಉಲ್ಲೇಖಿಸಿತು.

ಕೋವಿಡ್​ ಸಂಬಂಧಿತ ಅರ್ಜಿಗಳನ್ನ ಹಾಕಿದ್ರೆ ವಕೀಲರಿಂದಲೇ ವೆಚ್ಚ ವಸೂಲಿ ಮಾಡ್ತೇವೆ: ಕರ್ನಾಟಕ ಹೈಕೋರ್ಟ್ ಎಚ್ಚರಿಕೆ
ಕರ್ನಾಟಕ ಹೈಕೋರ್ಟ್
ಸಾಧು ಶ್ರೀನಾಥ್​
|

Updated on:May 14, 2021 | 3:43 PM

Share

ಬೆಂಗಳೂರು: ಕೋವಿಡ್ ​ಸಂಬಂಧಿತ ನಾನಾ ಅರ್ಜಿಗಳನ್ನ ಹಾಕಿದ್ರೆ ವಕೀಲರಿಂದಲೇ ವೆಚ್ಚ ವಸೂಲಿ ಮಾಡುತ್ತೇವೆ ಎಂದು ಕರ್ನಾಟಕ ಹೈಕೋರ್ಟ್ ವಕೀಲರಿಗೆ ಎಚ್ಚರಿಕೆ ನೀಡಿದೆ. ಕರ್ನಾಟಕ ವಕೀಲರ ಒಕ್ಕೂಟದ ಸದಸ್ಯರು ಕೋವಿಡ್ ಸಂಬಂಧಿತ ಆದೇಶಗಳನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳುತ್ತಿಲ್ಲ ಎಂದು ವಿಷಾದಿಸಿರುವ ಹೈಕೋರ್ಟ್ ಕೋವಿಡ್ ​ಸಂಬಂಧಿತ ನಾನಾ ಅರ್ಜಿಗಳನ್ನ ಸಲ್ಲಿಸುವುದರ ವಿರುದ್ಧ ಗರಂ ಆಗಿದೆ. ಅಂತಹ ವಕೀಲರ ವಿರುದ್ಧ 25 ಸಾವಿರ ರೂಪಾಯಿ ಜುಲ್ಮಾನೆ ವಿಧಿಸುವ ಬಗ್ಗೆ ಎಚ್ಚರಿಕೆ ನೀಡಿದ ಪ್ರಸಂಗ ಇತ್ತೀಚೆಗೆ ನಡೆದಿದೆ.

ಕೋವಿಡ್ ​ಸಂಬಂಧ ಅನೇಕ ಅರ್ಜಿಗಳನ್ನ ಹಾಕಲಾಗಿದೆ. ಅಂತಹವರನ್ನು ಎಚ್ಚರಿಸಲು ಕೋವಿಡ್ 19 ಪರಿಹಾರಕ್ಕಾಗಿ ಇರುವ ಸಿಎಂ ಕೇರ್ ಫಂಡ್ ಗೆ ಸಲ್ಲಿಕೆಯಾಗುವಂತೆ ಠೇವಣಿ ಹಣ ನೀಡುವಂತೆ ಅರ್ಜಿದಾರರಿಗೆ ಆದೇಶಿಸುವುದಾಗಿ ಚೀಫ್ ಜಸ್ಟೀಸ್ ಶ್ರೀನಿವಾಸ ಓಕಾ ಮತ್ತು ಜಸ್ಟೀಸ್ ಅರವಿಂದ್​ ಕುಮಾರ್​ ಅವರ ನ್ಯಾಯಪೀಠವು ಎಚ್ಚರಿಸಿದೆ.

ರಾಜ್ಯದಲ್ಲಿ ಮಹಾಸೋಂಕು ಅವತರಿಸಿದೆ. ಈ ಕಾಲ ಘಟ್ಟದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವವರಿಗಾಗಿ (BPL) ಆಹಾರ ಸಾಮಾಗ್ರಿ ನೀಡುವಂತೆ ಆದೇಶಿಸಬೇಕು ಎಂದು ಕೋರಿ ಅಡ್ವೊಕೇಟ್ ರಮೇಶ್​ ನಾಯ್ಕ್​ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಇದನ್ನು ಉಲ್ಲೇಖಿಸಿತು. ರಾಜ್ಯದಲ್ಲಿ ಕೋವಿಡ್​ 19 ಪರಿಸ್ಥಿತಿ ಬಗ್ಗೆ ಹೈಕೋರ್ಟ್ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದು, ಅದರಲ್ಲಿ ತಾನು ಪ್ರವೇಶಿಸುವುದಕ್ಕೆ ಅಡ್ವೊಕೇಟ್ ರಮೇಶ್​ ನಾಯ್ಕ್​ ಮನನಿ ಮಾಡಿದ್ದರು.

ಚೀಫ್ ಜಸ್ಟೀಸ್ ಶ್ರೀನಿವಾಸ ಓಕಾ ಅವರ ನ್ಯಾಯಪೀಠವು ಹೈಕೋರ್ಟ್ ಸ್ವಯಂ ದಾಖಲಿಸಿಕೊಂಡಿರುವ ಪ್ರಕರಣದ ಬಗ್ಗೆ ಗುರುವಾರ ಬೆಳಗ್ಗೆ ವಿಚಾರಣೆ ನಡೆಸುತ್ತಿದ್ದಾಗ ತತ್ಸಂಬಂಧಿತ ಅನೇಕ ಪ್ರಕರಣಗಳು ವಿಚಾರಣೆಗೆ ಲಿಸ್ಟ್​ ಆಗಿರುವುದನ್ನು ಗಮನಿಸಿ, ಅಸಮಾಧಾನ ವ್ಯಕ್ತಪಡಿಸಿತು. ತಕ್ಷಣ, ಅಡ್ವೊಕೇಟ್​ಗಳೆಲ್ಲಾ ಅರ್ಜಿ ಸಲ್ಲಿಸುವ ಮುನ್ನ, ನ್ಯಾಯಾಲಯ ನೀಡಿರುವ ಆದೇಶಗಳನ್ನು ಪರಾಮರ್ಷಿಸಬೇಕು. ಇತ್ತೀಚೆಗೆ ಎಲ್ಲರಿಗೂ ಆಟವಾಗಿಬಿಟ್ಟಿದೆ. ಎಲ್ಲರೂ ಕೋವಿಡ್​ ಸಂಬಂಧಿತ ವಿಷಯಗಳನ್ನು ತೆಗೆದುಕೊಂಡು ಅರ್ಜಿಗಳನ್ನು ಹಾಕುವುದು ಸಾಮಾನ್ಯವಾಗಿಬಿಟ್ಟಿದೆ ಎಂದು ಎಚ್ಚರಿಸಿದರು.

ಕೋವಿಡ್​ ಸಂಬಂಧಿತ ವಿಷಯದಲ್ಲಿ ಹೈಕೋರ್ಟ್ ಸ್ವಯಂ ದಾಖಲಿಸಿಕೊಂಡಿರುವ ಪ್ರಕರಣದ ಆಲಿಕೆ ವೇಳೆ, ಕೊರೊನಾ ಸೋಂಕು ಹರಡುವಿಕೆಯ ವಿರುದ್ಧದ ಹೋರಾಟದಲ್ಲಿ ನಾನಾ ಸಲಹೆಗಳನ್ನು ನೀಡುತ್ತಾ ಅನೇಕ ಅಡ್ವೊಕೇಟ್​ಗಳು ಕೋರ್ಟ್​ಗೆ ಅರ್ಜಿಗಳನ್ನು ಹಾಕುತ್ತಿದ್ದಾರೆ ಎಂದು ಅಮಿಕಸ್​ ಕ್ಯೂರಿ ವಿಕ್ರಂ ಹುಯಿಲಗೋಳ ಕೋರ್ಟ್​ ಗಮನಕ್ಕೆ ತಂದರು.

(Karnataka High Court warns to impose costs on lawyers who file multiple coronavirus petitions)

Published On - 3:40 pm, Fri, 14 May 21

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್