AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಾಜ ಸೇವಕನಂತೆ ಬಿಲ್ಡಪ್: ಬೀದಿ ಬದಿ ವ್ಯಾಪಾರಿಗಳಿಗೆ ವಂಚಿಸಿದ್ದ ಆರೋಪಿ ಅಂದರ್

ಕೊಡಗು: ಆತ ಅಪ್ಪಟ ಸಮಾಜ ಸೇವಕನ ಥರ ಪೋಸ್​ ಕೊಡ್ತಿದ್ದ. ಮಾಡಿದ್ದೆಲ್ಲವನ್ನೂ ಫೋಟೋ ತೆಗೆಸಿಕೊಂಡು ಪೋಸ್​ ಕೊಡ್ತಿದ್ದ. ಆದ್ರೆ, ಆತನ ಅಸಲಿ ಬಣ್ಣ ಬೇರೆಯದೆ ಇತ್ತು. ಯಾಕಂದ್ರೆ, ಬೀದಿ ಬದಿಯ ವ್ಯಾಪಾರಿಗಳನ್ನೂ ಬಿಡದೆ, ಕಾಟ ಕೊಡ್ತಿದ್ದ. ಸಂಘಟನೆ ಹೆಸರಲ್ಲಿ ವ್ಯಾಪಾರಿಗಳಿಗೆ ವಂಚನೆ: ಒಬ್ಬೊಬ್ಬರ ಹತ್ರ ಹದಿನೈದು, ಹದಿನೈದು ಸಾವಿರ. ಆದ್ರೆ, ಲೋನೂ ಇಲ್ಲ, ಕೊಟ್ಟ ಕಾಸು ವಾಪಸ್​​​ ಬರಲಿಲ್ಲ. ಸಮಾಜ ಸೇವಕನ ಥರ ಬಿಲ್ಡಪ್​​​​​​​ ಕೊಡೋ ಬಾಬು ವಿರುದ್ಧ ಮಹಿಳೆಯರು ಮಾಡ್ತಿರೋ ಆರೋಪ ಇದು. ಬೆಂಗಳೂರು ಮೂಲದ […]

ಸಮಾಜ ಸೇವಕನಂತೆ ಬಿಲ್ಡಪ್: ಬೀದಿ ಬದಿ ವ್ಯಾಪಾರಿಗಳಿಗೆ ವಂಚಿಸಿದ್ದ ಆರೋಪಿ ಅಂದರ್
ಸಾಧು ಶ್ರೀನಾಥ್​
|

Updated on:Jan 14, 2020 | 7:57 AM

Share

ಕೊಡಗು: ಆತ ಅಪ್ಪಟ ಸಮಾಜ ಸೇವಕನ ಥರ ಪೋಸ್​ ಕೊಡ್ತಿದ್ದ. ಮಾಡಿದ್ದೆಲ್ಲವನ್ನೂ ಫೋಟೋ ತೆಗೆಸಿಕೊಂಡು ಪೋಸ್​ ಕೊಡ್ತಿದ್ದ. ಆದ್ರೆ, ಆತನ ಅಸಲಿ ಬಣ್ಣ ಬೇರೆಯದೆ ಇತ್ತು. ಯಾಕಂದ್ರೆ, ಬೀದಿ ಬದಿಯ ವ್ಯಾಪಾರಿಗಳನ್ನೂ ಬಿಡದೆ, ಕಾಟ ಕೊಡ್ತಿದ್ದ.

ಸಂಘಟನೆ ಹೆಸರಲ್ಲಿ ವ್ಯಾಪಾರಿಗಳಿಗೆ ವಂಚನೆ: ಒಬ್ಬೊಬ್ಬರ ಹತ್ರ ಹದಿನೈದು, ಹದಿನೈದು ಸಾವಿರ. ಆದ್ರೆ, ಲೋನೂ ಇಲ್ಲ, ಕೊಟ್ಟ ಕಾಸು ವಾಪಸ್​​​ ಬರಲಿಲ್ಲ. ಸಮಾಜ ಸೇವಕನ ಥರ ಬಿಲ್ಡಪ್​​​​​​​ ಕೊಡೋ ಬಾಬು ವಿರುದ್ಧ ಮಹಿಳೆಯರು ಮಾಡ್ತಿರೋ ಆರೋಪ ಇದು. ಬೆಂಗಳೂರು ಮೂಲದ ಈ ಬಾಬು, ಭಾರತ ಮಾನವ ಹಕ್ಕುಗಳ ಸಂಘದ ರಾಜ್ಯಾಧ್ಯಕ್ಷ. ಸಂಘಟನೆ ಹೆಸ್ರಲ್ಲಿ, ಸರ್ಕಾರಿ ಕಚೇರಿಗಳಿಗೆ ಅಲೆದಾಡ್ತಿದ್ದ. ಆದ್ರೆ, ಬೀದಿ ಬದಿ ವ್ಯಾಪಾರಿಗಳಿಗೆ, ಸಾಲ ಕೊಡಿಸ್ತೀನಿ ಅಂತ ವಂಚಿಸಿದ್ದಾನೆ. ಎಂಟತ್ತು ಮಹಿಳೆಯರಿಂದ 15 ಸಾವಿರ ರೂಪಾಯಿ ಹಣ ಪೀಕಿದ್ದಾನೆ.

ಆರೋಪಿ ಜೈಲು ಪಾಲು: ಅಂದಹಾಗೇ, ಈ ಬುಕಾಳಿ ಬಾಬು, ಮಡಿಕೇರಿಯ ಬೀದಿ ಬದಿ ವ್ಯಾಪಾರ ಮಾಡ್ತಿದ್ದ ಮಹಿಳೆಯರಿಗೆ ಬಿಟ್ಟಿರೋ ಪುಂಗಿ ಅಷ್ಟಿಷ್ಟಲ್ಲ. ದೊಡ್ಡದೊಂದು ಕಾರ್ಯಕ್ರಮ ಮಾಡಿ ನನ್ನನ್ನು ಮತ್ತಷ್ಟು ಜನ್ರಿಗೆ ಪರಿಚಯ ಮಾಡಿ. ನಿಮಗೆಲ್ಲ, ಲಕ್ಷ ಲಕ್ಷ ಲೋನ್​​ ಕೊಡಿಸ್ತೀನಿ ಅಂತೆಲ್ಲ ಕಥೆ ಕಟ್ಟಿದ್ದ. ಅದ್ರಂತೆ, ಮಡಿಕೇರಿ ನಗರದಲ್ಲಿ ಕಾರ್ಯಕ್ರಮ ಮಾಡಿ ಈ ಬಾಬುಗೆ ಮಹಿಳೆಯರೆಲ್ಲ ಸನ್ಮಾನ ಮಾಡಿದ್ರು. ನಂತರ, ಎಲ್ಲರ ಹತ್ರ 15 ಸಾವಿರ ತಕ್ಕೊಂಡು, ಆಮೇಲೆ ಈ ಬಾಬು ವರಸೆ ಬದಲಿಸಿದ್ನಂತೆ. ಹೀಗಾಗಿ, ಮಹಿಳೆಯರೆಲ್ಲ ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದು, ಆರೋಪಿಯನ್ನ ಜೈಲಿಗಟ್ಟಿದ್ದಾರಂತೆ.

Published On - 7:55 am, Tue, 14 January 20

ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ