AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಾಜ ಸೇವಕನಂತೆ ಬಿಲ್ಡಪ್: ಬೀದಿ ಬದಿ ವ್ಯಾಪಾರಿಗಳಿಗೆ ವಂಚಿಸಿದ್ದ ಆರೋಪಿ ಅಂದರ್

ಕೊಡಗು: ಆತ ಅಪ್ಪಟ ಸಮಾಜ ಸೇವಕನ ಥರ ಪೋಸ್​ ಕೊಡ್ತಿದ್ದ. ಮಾಡಿದ್ದೆಲ್ಲವನ್ನೂ ಫೋಟೋ ತೆಗೆಸಿಕೊಂಡು ಪೋಸ್​ ಕೊಡ್ತಿದ್ದ. ಆದ್ರೆ, ಆತನ ಅಸಲಿ ಬಣ್ಣ ಬೇರೆಯದೆ ಇತ್ತು. ಯಾಕಂದ್ರೆ, ಬೀದಿ ಬದಿಯ ವ್ಯಾಪಾರಿಗಳನ್ನೂ ಬಿಡದೆ, ಕಾಟ ಕೊಡ್ತಿದ್ದ. ಸಂಘಟನೆ ಹೆಸರಲ್ಲಿ ವ್ಯಾಪಾರಿಗಳಿಗೆ ವಂಚನೆ: ಒಬ್ಬೊಬ್ಬರ ಹತ್ರ ಹದಿನೈದು, ಹದಿನೈದು ಸಾವಿರ. ಆದ್ರೆ, ಲೋನೂ ಇಲ್ಲ, ಕೊಟ್ಟ ಕಾಸು ವಾಪಸ್​​​ ಬರಲಿಲ್ಲ. ಸಮಾಜ ಸೇವಕನ ಥರ ಬಿಲ್ಡಪ್​​​​​​​ ಕೊಡೋ ಬಾಬು ವಿರುದ್ಧ ಮಹಿಳೆಯರು ಮಾಡ್ತಿರೋ ಆರೋಪ ಇದು. ಬೆಂಗಳೂರು ಮೂಲದ […]

ಸಮಾಜ ಸೇವಕನಂತೆ ಬಿಲ್ಡಪ್: ಬೀದಿ ಬದಿ ವ್ಯಾಪಾರಿಗಳಿಗೆ ವಂಚಿಸಿದ್ದ ಆರೋಪಿ ಅಂದರ್
ಸಾಧು ಶ್ರೀನಾಥ್​
|

Updated on:Jan 14, 2020 | 7:57 AM

Share

ಕೊಡಗು: ಆತ ಅಪ್ಪಟ ಸಮಾಜ ಸೇವಕನ ಥರ ಪೋಸ್​ ಕೊಡ್ತಿದ್ದ. ಮಾಡಿದ್ದೆಲ್ಲವನ್ನೂ ಫೋಟೋ ತೆಗೆಸಿಕೊಂಡು ಪೋಸ್​ ಕೊಡ್ತಿದ್ದ. ಆದ್ರೆ, ಆತನ ಅಸಲಿ ಬಣ್ಣ ಬೇರೆಯದೆ ಇತ್ತು. ಯಾಕಂದ್ರೆ, ಬೀದಿ ಬದಿಯ ವ್ಯಾಪಾರಿಗಳನ್ನೂ ಬಿಡದೆ, ಕಾಟ ಕೊಡ್ತಿದ್ದ.

ಸಂಘಟನೆ ಹೆಸರಲ್ಲಿ ವ್ಯಾಪಾರಿಗಳಿಗೆ ವಂಚನೆ: ಒಬ್ಬೊಬ್ಬರ ಹತ್ರ ಹದಿನೈದು, ಹದಿನೈದು ಸಾವಿರ. ಆದ್ರೆ, ಲೋನೂ ಇಲ್ಲ, ಕೊಟ್ಟ ಕಾಸು ವಾಪಸ್​​​ ಬರಲಿಲ್ಲ. ಸಮಾಜ ಸೇವಕನ ಥರ ಬಿಲ್ಡಪ್​​​​​​​ ಕೊಡೋ ಬಾಬು ವಿರುದ್ಧ ಮಹಿಳೆಯರು ಮಾಡ್ತಿರೋ ಆರೋಪ ಇದು. ಬೆಂಗಳೂರು ಮೂಲದ ಈ ಬಾಬು, ಭಾರತ ಮಾನವ ಹಕ್ಕುಗಳ ಸಂಘದ ರಾಜ್ಯಾಧ್ಯಕ್ಷ. ಸಂಘಟನೆ ಹೆಸ್ರಲ್ಲಿ, ಸರ್ಕಾರಿ ಕಚೇರಿಗಳಿಗೆ ಅಲೆದಾಡ್ತಿದ್ದ. ಆದ್ರೆ, ಬೀದಿ ಬದಿ ವ್ಯಾಪಾರಿಗಳಿಗೆ, ಸಾಲ ಕೊಡಿಸ್ತೀನಿ ಅಂತ ವಂಚಿಸಿದ್ದಾನೆ. ಎಂಟತ್ತು ಮಹಿಳೆಯರಿಂದ 15 ಸಾವಿರ ರೂಪಾಯಿ ಹಣ ಪೀಕಿದ್ದಾನೆ.

ಆರೋಪಿ ಜೈಲು ಪಾಲು: ಅಂದಹಾಗೇ, ಈ ಬುಕಾಳಿ ಬಾಬು, ಮಡಿಕೇರಿಯ ಬೀದಿ ಬದಿ ವ್ಯಾಪಾರ ಮಾಡ್ತಿದ್ದ ಮಹಿಳೆಯರಿಗೆ ಬಿಟ್ಟಿರೋ ಪುಂಗಿ ಅಷ್ಟಿಷ್ಟಲ್ಲ. ದೊಡ್ಡದೊಂದು ಕಾರ್ಯಕ್ರಮ ಮಾಡಿ ನನ್ನನ್ನು ಮತ್ತಷ್ಟು ಜನ್ರಿಗೆ ಪರಿಚಯ ಮಾಡಿ. ನಿಮಗೆಲ್ಲ, ಲಕ್ಷ ಲಕ್ಷ ಲೋನ್​​ ಕೊಡಿಸ್ತೀನಿ ಅಂತೆಲ್ಲ ಕಥೆ ಕಟ್ಟಿದ್ದ. ಅದ್ರಂತೆ, ಮಡಿಕೇರಿ ನಗರದಲ್ಲಿ ಕಾರ್ಯಕ್ರಮ ಮಾಡಿ ಈ ಬಾಬುಗೆ ಮಹಿಳೆಯರೆಲ್ಲ ಸನ್ಮಾನ ಮಾಡಿದ್ರು. ನಂತರ, ಎಲ್ಲರ ಹತ್ರ 15 ಸಾವಿರ ತಕ್ಕೊಂಡು, ಆಮೇಲೆ ಈ ಬಾಬು ವರಸೆ ಬದಲಿಸಿದ್ನಂತೆ. ಹೀಗಾಗಿ, ಮಹಿಳೆಯರೆಲ್ಲ ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದು, ಆರೋಪಿಯನ್ನ ಜೈಲಿಗಟ್ಟಿದ್ದಾರಂತೆ.

Published On - 7:55 am, Tue, 14 January 20

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ