AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡು ಪ್ರಾಣಿಗಳ ಭಾಗಗಳನ್ನ ಹಿಂದಿರುಗಿಸಲು ಗಡುವು ನೀಡಿದ ಸರ್ಕಾರ; ಕೊಡಗಿನವರಲ್ಲಿ ಸೃಷ್ಟಿಯಾದ ಆತಂಕ

ಹುಲಿ ಉಗುರು ಕೊಂಬುಗಳ ಸೇರಿದಂತೆ ಕಾಡು ಪ್ರಾಣಿಗಳ ದೇಹದ ವಿವಿಧ ಭಾಗಗಳನ್ನ ಅರಣ್ಯ ಇಲಾಖೆಗೆ ಹಿಂದಿರುಗಿಸಲು ಸರ್ಕಾರ ಈಗಾಗಲೆ ಮೂರು ತಿಂಗಳ ಗಡುವು ನೀಡಿದೆ. ಆದ್ರೆ ಈ ಗಡುವು ಕೊಡಗು ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದೆ. ಯಾಕಂದ್ರೆ ಜಿಲ್ಲೆಯ ನೂರಾರು ದೇವಸ್ಥಾನಗಳಲ್ಲಿ ನೂರಾರು ವರ್ಷಗಳಿಂದ ಜಿಂಕೆ, ಕಡವೆ ಕೊಂಬುಗಳು, ಚಮರಿ ಮೃಗದ ಬಾಲ ನವಿಲು ಗರಿಗಳನ್ನ ಧಾರ್ಮಿಕ ಉತ್ಸವದಲ್ಲಿ ಬಳಸಲಾಗುತ್ತಿದೆ. ಇವುಗಳನ್ನ ಹಿಂದಿರುಗಿಸಲು ಆಗುವುದಿಲ್ಲ. ಹಾಗಾಗಿ ಸರ್ಕಾರ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಕಾಡು ಪ್ರಾಣಿಗಳ ಭಾಗಗಳನ್ನ ಹಿಂದಿರುಗಿಸಲು ಗಡುವು ನೀಡಿದ ಸರ್ಕಾರ; ಕೊಡಗಿನವರಲ್ಲಿ ಸೃಷ್ಟಿಯಾದ ಆತಂಕ
ಕಾಡು ಪ್ರಾಣಿಗಳ ಭಾಗಗಳನ್ನ ಹಿಂದಿರುಗಿಸಲು ಗಡುವು ನೀಡಿದ ಸರ್ಕಾರ; ಕೊಡಗಿನವರಲ್ಲಿ ಸೃಷ್ಟಿಯಾದ ಆತಂಕ
Gopal AS
| Edited By: |

Updated on: Feb 17, 2024 | 9:50 PM

Share

ಕೊಡಗು, ಫೆ.17: ಕೊಡಗು(Kodagu) ಜಿಲ್ಲೆಯ ಹಬ್ಬ ಹರಿದಿನಗಳು ಕೂಡ ಪ್ರಕೃತಿಯನ್ನೇ ಆಧಾರಿಸಿವೆ. ಇಲ್ಲಿನ ಬಹುತೇಕ ದೇವಸ್ಥಾನಗಳಲ್ಲಿ ವಾರ್ಷಿಕ ಉತ್ಸವ ನಡೆಯುವಾಗ ಜಿಂಕೆ, ಕಡವೆಯ ಕೊಂಬುಗಳನ್ನ ಹಾಗೆಯೇ ನವಿಲುಗರಿಗಳ ಗೊಂಚಲನ್ನು ಹಿಡಿದು ನೃತ್ಯ ಮಾಡಲಾಗುತ್ತದೆ. ಇದು ಇಲ್ಲಿ ನೂರಾರು ವರ್ಷಗಳಿಂದ ನಡೆದು ಬಂದಿದೆ. ಇಲ್ಲಿರುವ ಕೊಂಬುಗಳ ಕೂಡ ನೂರಾರು ವರ್ಷಗಳಷ್ಟು ಹಳೆಯದಾಗಿವೆ. ಆದ್ರೆ, ಇದೀಗ ರಾಜ್ಯದಲ್ಲಿ ಕಾಡು ಪ್ರಾಣಿಗಳ ದೇಹದ ಯಾವುದೇ ಭಾಗವನ್ನ ಸರ್ಕಾರಕ್ಕೆ ಹಿಂದಿರುಗಿಸಲು ಜನವರಿ 16ರಿಂದ ಮೂರು ತಿಂಗಳ ಗಡುವು ನೀಡಲಾಗಿದೆ. ಈ ಗಡುವು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ.

ಇದೀಗ ಜಿಲ್ಲೆಯಲ್ಲಿ ಹಬ್ಬಗಳ ಸೀಸನ್. ದೇವಸ್ಥಾನಗಳಲ್ಲಿ ವಾರ್ಷಿಕ ಉತ್ಸವಗಳು ನಡೆಯುತ್ತವೆ. ದೇವರುಗಳನ್ನು ನೃತ್ಯ ಮಾಡಿ ಸಂತೃಪ್ತಿಗೊಳಿಸಲು ಈ ಕೊಂಬು ಗರಿಗಳನ್ನು ಬಳಸಲಾಗುತ್ತದೆ. ಆದ್ರೆ, ಈ ಕೊಂಬುಗಳನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಿದ್ರೆ, ದೇವರ ಹಬ್ಬಗಳಿಗೆ ಮಹತ್ವ ಇರುವುದಿಲ್ಲ ಎಂದು ಭಕ್ತರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕಾಡು ಪ್ರಾಣಿಗಳ ಹಾವಳಿಯಿಂದ ಬೇಸೆತ್ತ ಕಾಡಿಂಚಿನ ಜನರು: ಬೆಳೆ ನಾಶ, ಸೂಕ್ತ ಪರಿಹಾರಕ್ಕೆ ರೈತರು ಮನವಿ

ಜಿಲ್ಲೆಯ ಬಹಳಷ್ಟು ದೇವಸ್ಥಾನಗಳಲ್ಲಿ ಇಂದಿಗೂ ಕೊಂಬಾಟ್, ಪೀಲಿಯಾಟ್​ ಎಂಬ ನೃತ್ಯಪ್ರಕಾರಗಳಲ್ಲಿ ಜಿಂಕೆ, ಕಡವೆಯ ಕೊಂಬುಗಳನ್ನ ಹಾಗೂ ನವಿಲುಗರಿಗಳನ್ನ ಹಿಡಿದು ನೃತ್ಯ ಮಾಡಲಾಗಿದೆ. ಆದ್ರೆ, ಇದೀಗ ಈ ದೇವಸ್ಥಾನಗಳ ಆಡಳಿತ ಮಂಡಳಿ ಹಾಗೂ ಭಕ್ತರಲ್ಲಿ ಗೊಂದಲ ತಲೆದೋರಿದೆ. ತಮ್ಮ ಉತ್ಸವಗಳಲ್ಲಿ ಈ ಕೊಂಬುಗಳನ್ನ ಬಳಕೆ ಮಾಡಿದ್ರೆ ಅರಣ್ಯ ಇಲಾಖೆ ಕ್ರಮಕ್ಕೆ ಮುಮದಾಗುತ್ತದೆಯೇ ಎಂಬ ಆತಂಕ ಮೂಡಿದೆ. ಹಾಗಾಗಿ ನೂರಾರು ವರ್ಷಗಳಿಂದ ಆಚರಣೆಯಲ್ಲಿರುವ ತಮ್ಮ ಪದ್ಧತಿ ಪಾಲನೆಗೆ ಅವಕಾಶ ನೀಡುವಂತೆ ಕೋರಿದ್ದಾರೆ. ಇವು ಯಾವುದು ಕೂಡ ಇತ್ತೀಚೆಗೆ ಪ್ರಾಣಿ ಹತ್ಯೆ ಮಾಡಿರುವಂತಹದ್ದಲ್ಲ. ಎಲ್ಲವೂ ನೂರಾರು ವರ್ಷಗಹಳಷ್ಟು ಹಳೆಯದ್ದು.

ಸಧ್ಯ ಕೊಡಗು ಜನರ ಬೇಡಿಕೆಗೆ ರಾಜ್ಯ ಸರ್ಕಾರ ಯಾವ ಪ್ರತಿಕ್ರಿಯೆ ನೀಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಈ ಹಿಂದೆ ದೇವಸ್ಥಾನ ಹಾಗೂ ಐನ್​ಮನೆಗಳಲ್ಲಿ ಇರುವಂತಹ ಕೊಂಬುಗಳನ್ನು ನೋಂದಾವಣಿ ಮಾಡಿ ಇಟ್ಟುಕೊಳ್ಳುವಂತೆ ಅರಣ್ಯ ಇಲಾಖೆ ಸೂಚಿಸಿತ್ತು. ಆದ್ರೆ ಆ ಸಂದರ್ಭ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ ಇದೀಗ ಕಾನೂನು ಜಾರಿಗೆ ಅರಣ್ಯ ಇಲಾಖೆ ಮುಮದಾಗಿರುವುದು ಎಲ್ಲರ ನಿದ್ದೆಗೆಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?